Girl’s Emotional Post: ದಿಢೀರ್ ಕೆಲಸ ಹೋಯ್ತು, ಏನ್ ಮಾಡ್ಲಿ..! ಬೆಂಗಳೂರಿನ ಈ ಟೆಕ್ಕಿ ಹುಡುಗಿಯ ಸಂಕಟ ನೋಡಿ

Layoff Effect: ಅಮೇಜಾನ್​ನಿಂದ ಎರಡನೇ ಸುತ್ತಿನಲ್ಲಿ ಲೇಆಫ್ ಆದ 500 ಭಾರತೀಯ ಉದ್ಯೋಗಿಗಳ ಪೈಕಿ ಬೆಂಗಳೂರಿನ ಒಬ್ಬ ಯುವತಿ ಲಿಂಕ್ಡ್​ಇನ್​ನಲ್ಲಿ ಭಾವನಾತ್ಮಕವಾದ ಪೋಸ್ಟ್ ಬರೆದಿದ್ದಾರೆ.

Girl's Emotional Post: ದಿಢೀರ್ ಕೆಲಸ ಹೋಯ್ತು, ಏನ್ ಮಾಡ್ಲಿ..! ಬೆಂಗಳೂರಿನ ಈ ಟೆಕ್ಕಿ ಹುಡುಗಿಯ ಸಂಕಟ ನೋಡಿ
ಸಾಂದರ್ಭಿಕ ಚಿತ್ರ
Follow us
|

Updated on: May 16, 2023 | 4:06 PM

ಬೆಂಗಳೂರು: ಕೆಲವೇ ತಿಂಗಳ ಹಿಂದೆ 18,000 ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೇಜಾನ್ ಸಂಸ್ಥೆ (Amazon) ಇತ್ತೀಚೆಗೆ ಎರಡನೇ ಸುತ್ತಿನಲ್ಲಿ 11,000 ಮಂದಿಯನ್ನು ಕೆಲಸದಿಂದ ತೆಗೆದಿದೆ (Layoff). ಅದರಲ್ಲಿ 500 ಮಂದಿ ಭಾರತೀಯ ಉದ್ಯೋಗಿಗಳಿಗೆ ಏಪ್ರಿಲ್ ತಿಂಗಳಲ್ಲಿ ಕೆಲಸ ಹೋಗಿದೆ. ಬೆಂಗಳೂರಿನ ಅಮೇಜಾನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳಾ ಉದ್ಯೋಗಿಯೂ ಇದರಲ್ಲಿ ಇದ್ದಾರೆ. ಈಕೆ ಕೆಲಸಕ್ಕೆ ಸೇರಿ ಒಂದು ವರ್ಷ ಮಾತ್ರವೇ ಆಗಿದ್ದುದು. ಸೀನಿಯರ್ ಪ್ರಾಡಕ್ಟ್ ಕಾಂಪ್ಲಿಯನ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಇವರನ್ನು ಏಕಾಏಕಿ ಲೇ ಆಫ್ ಮಾಡಲಾಗಿದೆ. ಕಾಲೇಜು ಮುಗಿಸಿ ಈಕೆ ಸೇರಿದ ಮೊದಲ ಕೆಲಸ ಇದು. ದಿಢೀರ್ ವಿದ್ಯಮಾನದಿಂದ ಈ ಹುಡುಗಿ ಕಂಗೆಟ್ಟು ಹೋಗಿ ತನ್ನ ಮನದ ವ್ಯಾಕುಲವನ್ನು ಲಿಂಕ್ಡ್​ಇನ್​ನಲ್ಲಿ ಹಾಕಿಕೊಂಡಿದ್ದಾರೆ.

ಕೆಲಸ ಹೋಯ್ತೆಂಬುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ಯುವತಿ ಅಳಲು

ಅಮೇಜಾನ್​ನ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ದಿಢೀರ್ ಕೆಲಸ ಹೋಗಿದ್ದು ಭಾವೋದ್ವೇಗಗೊಳ್ಳುವಂತೆ ಮಾಡಿದೆ. ಸಂಕಟ, ಕೋಪ, ಅನಿಶ್ಚಿತತೆ ಇತ್ಯಾದಿ ಭಾವಾವೇಶಗಳಿಂದ ಆವರಿಸಿರುವ ಈ ಯುವತಿ, ತಾನು ನಿರುದ್ಯೋಗಿಯಾಗಿರುವ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಲಿಂಕ್ಡ್​ಇನ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿAmazon Layoff: ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ

‘ನನ್ನ ಕೆಲಸ ಹೋಯಿತು. ನನ್ನ ಸಹೋದ್ಯೋಗಿಗಳ ಜೊತೆ ನಾನು ರೂಪಿಸಿಕೊಂಡ ಸಂಬಂಧ ಕಡಿತುಹೋಯಿತು. ನನ್ನ ಕೆಲಸದಲ್ಲಿ ನನಗಿದ್ದ ಅಭಿಲಾಷೆಯೂ ಹೋಯಿತು…. ಈ ಪರಿಸ್ಥಿತಿ ಬಗ್ಗೆ ನನಗೆ ಕೋಪ ಇದೆ. ಜೊತೆಗೆ ಭವಿಷ್ಯ ಏನಿದೆಯೋ ಎಂಬ ಅನಿಶ್ಚಿತತೆ ಕಾಡುತ್ತಿದೆ’ ಎಂದು ಈ ಮಾಜಿ ಅಮೇಜಾನ್ ಉದ್ಯೋಗಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

‘ಈ ಅನುಭವ ಆಗಿರುವುದು ನನಗೊಬ್ಬಳಿಗೆ ಮಾತ್ರ ಅಲ್ಲ ಎಂಬುದು ಗೊತ್ತು. ಪ್ರತೀ ವರ್ಷವೂ ಹಲವು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದು ಬಹಳ ಕಷ್ಟಕರ ಸಮಯ. ನನ್ನ ಸ್ನೇಹಿತರು ಮತ್ತು ಕುಟುಂಬ ವರ್ಗದವರ ಬೆಂಬಲಕ್ಕೆ ನಾನು ಋಣಿ. ಈ ಪರಿಸ್ಥಿತಿಯಿಂದ ಹೊರಬರುತ್ತೇನೆ ಎನ್ನುವ ವಿಶ್ವಾಸ ನನಗಿದೆ’ ಎಂದು ತನ್ನ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಯೂನಿವರ್ಸಿಟಿಯಲ್ಲಿ ಓದಿದ ಈ ಯುವತಿ ಇದೀಗ ಬೇರೆ ಕೆಲಸಕ್ಕೆ ಹುಡುಕುತ್ತಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್