Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ದಿಮೆಗಾಗಿ ಸಾಲ ಮಾಡಲಿದ್ದೀರಾ? ಅಲ್ಪಾವಧಿ ಉದ್ಯಮ ಸಾಲದ ಸಾಧಕ-ಬಾಧಕಗಳ ವಿವರ ಇಲ್ಲಿದೆ

ಬಂಡವಾಳ ಸಂಗ್ರಹಣೆಗೆ ಅಲ್ಪಾವಧಿ ಉದ್ಯಮ ಸಾಲ ಅಥವಾ ಶಾರ್ಟ್ ಟರ್ಮ್ ಬ್ಯುಸಿನೆಸ್ ಲೋನ್ ಒಂದು ಆಯ್ಕೆ. ಈ ಸಾಲ ಕೆಲವು ಸಾಧಕ-ಬಾಧಕಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಉದ್ದಿಮೆಗಾಗಿ ಸಾಲ ಮಾಡಲಿದ್ದೀರಾ? ಅಲ್ಪಾವಧಿ ಉದ್ಯಮ ಸಾಲದ ಸಾಧಕ-ಬಾಧಕಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 15, 2022 | 6:06 PM

ಉದ್ಯಮಕ್ಕಾಗಿ ಸಾಲ (Business Loan) ಪಡೆಯಬೇಕಾದ ಸಂದರ್ಭಗಳು ಹಲವು ಬಾರಿ ಎದುರಾಗುತ್ತವೆ. ಉದ್ಯಮ ವಿಸ್ತರಣೆಗಾಗಿಯೋ ಅಥವಾ ವೆಚ್ಚಗಳನ್ನು ಸರಿಹೊಂದಿಸುವುದಕ್ಕಾಗಿಯೋ ಸಾಲ (Loan) ಮಾಡಬೇಕಾದ ಅನಿವಾರ್ಯತೆಗೆ ವಾಣಿಜ್ಯೋದ್ಯಮಿಗಳು (Entrepreneurs) ಸಿಲುಕಿಕೊಳ್ಳುವುದು ಸಹಜ. ಎಲ್ಲದಕ್ಕಿಂತ ಮುಖ್ಯವಾಗಿ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗಲು ಅವರಿಗೆ ಮುಖ್ಯವಾಗಿ ಬೇಕಾಗುವುದು ಬಂಡವಾಳ. ವಿವಿಧ ವ್ಯಾಪಾರ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಹಣವನ್ನು ಸಂಗ್ರಹಿಸಲು ವಾಣಿಜ್ಯೋದ್ಯಮಿಗೆ ಎರಡು ಮೂಲಗಳಿವೆ. ಮೊದಲನೆಯದು ಅವರ ಉಳಿತಾಯದಿಂದ ಮತ್ತು ಇನ್ನೊಂದು ಬಾಹ್ಯ ಮೂಲಗಳು. ಬಂಡವಾಳದ ಅಗತ್ಯಕ್ಕಾಗಿ ಉಳಿತಾಯವನ್ನು ಬಳಸುವುದು ಉತ್ತಮ ಆಯ್ಕೆ ಎಂದಿಗೂ ಅಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ, ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಬಯಸುವ ಉದ್ಯಮಿಗಳು ಹೊರಗಿನಿಂದ ಬಂಡವಾಳ ಸಂಗ್ರಹಣೆಗೆ ಒತ್ತು ನೀಡುತ್ತಾರೆ.

ಬಂಡವಾಳ ಸಂಗ್ರಹಣೆಗೆ ಅಲ್ಪಾವಧಿ ಉದ್ಯಮ ಸಾಲ ಅಥವಾ ಶಾರ್ಟ್ ಟರ್ಮ್ ಬ್ಯುಸಿನೆಸ್ ಲೋನ್ ಒಂದು ಆಯ್ಕೆ. ಈ ಸಾಲ ಕೆಲವು ಸಾಧಕ-ಬಾಧಕಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಅಲ್ಪಾವಧಿ ಉದ್ಯಮ ಸಾಲದ ಲಾಭಗಳು

ಇದನ್ನೂ ಓದಿ
Image
ಎಸ್​ಬಿಐ ವೆಬ್​​ಸೈಟ್, ಮೊಬೈಲ್ ಆ್ಯಪ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ
Image
World Diabetes Day 2022: ಮಧುಮೇಹಿಗಳ ಆರೋಗ್ಯ ವಿಮೆಗಿರುವ ಷರತ್ತುಗಳು, ಪ್ರೀಮಿಯಂ ಬಗ್ಗೆ ಇಲ್ಲಿದೆ ವಿವರ
Image
ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ, ಆ್ಯಕ್ಸಿಸ್; ಎಫ್​ಡಿಗೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಬಗ್ಗೆ ಇಲ್ಲಿದೆ ವಿವರ
Image
RD Account: ಆರ್​ಡಿ ಉಳಿತಾಯ ಖಾತೆ ತೆರೆಯುವ ಮುನ್ನ ಈ ವಿಷಯಗಳನ್ನು ತಿಳಿದಿರಿ

ತಕ್ಷಣದ ಬಂಡವಾಳ: ತ್ವತರಿತವಾಗಿ ಬಂಡವಾಳ ಒದಗಿಸುವುದಕ್ಕೆ ಈ ಸಾಲ ಉತ್ತಮ ಆಯ್ಕೆ. ಸಾಲ ಮಂಜೂರಾತಿ ಪ್ರಕ್ರಿಯೆ ಸಹ ಅಷ್ಟೆ ತ್ವರಿತವಾಗಿ ನಡೆಯುವುದರಿಂದ 48 ಗಂಟೆಗಳ ಒಳಗೆ ಹಣ ದೊರೆಯುತ್ತದೆ.

ಯಾವುದೇ ಕ್ರೆಡಿಟ್ ಚೆಕ್‌ಗಳಿಲ್ಲ: ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರದವರಿಗೆ ಸಾಲ ಸಿಗುವ ಸಾಧ್ಯತೆಗಳು ಕಡಿಮೆಯೇ. ಆದರೆ ಕೆಲವು ಹಣಕಾಸು ಸಂಸ್ಥೆಗಳು ವ್ಯಾಪಕವಾದ ಕ್ರೆಡಿಟ್ ಸ್ಕೋರ್ ಪರಿಶೀಲನೆಗಳಿಲ್ಲದೆಯೇ ಅಲ್ಪಾವಧಿಯ ಸಾಲ ಒದಗಿಸುತ್ತವೆ. ಅರ್ಜಿದಾರರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಅವರು ತಕ್ಷಣವೇ ಸಾಲದ ಮೊತ್ತ ಪಡೆದುಕೊಳ್ಳುತ್ತಾರೆ.

ಉತ್ತಮ ನಿಯಂತ್ರಣ: ನಿಧಿ ಸಂಗ್ರಹಿಸಲು ವಾಣಿಜ್ಯೋದ್ಯಮಿಗಳಿಗೆ ಎರಡು ಆಯ್ಕೆಗಳಿವೆ. ವಿಸಿ ಫಂಡಿಂಗ್ ಅಥವಾ ಉದ್ಯಮ ಸಾಲಗಳು ಮೊದಲ ಆಯ್ಕೆ. ತಮ್ಮ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ಫಂಡ್ ಸಂಗ್ರಹಿಸಬಹುದು. ಆದರೆ ಇದರಿಂದ ಕಂಪನಿ ಮೇಲಿನ ಹಿಡಿತ ಕಡಿಮೆಯಾಗಬಹುದು. ಇದಕ್ಕೆ ಬದಲಾಗಿ ಸಣ್ಣ ಉದ್ಯಮ ಸಾಲ ಪಡೆದುಕೊಂಡರೆ ಕಂಪನಿ ಮೇಲಿನ ಹಿಡಿತ ತಪ್ಪುವುದಿಲ್ಲ. ಆದರೆ ಸಾಲದ ಕಂತುಗಳನ್ನು ಸರಿಯಾದ ಸಮಯಕ್ಕೆ ತುಂಬಬೇಕಾಗುತ್ತದೆ ಎಂಬುದು ನೆನಪಿರಲಿ.

ಅಲ್ಪಾವಧಿಯ ಹೊಣೆಗಾರಿಕೆ: ಅಲ್ಪಾವಧಿಯ ಉದ್ಯಮ ಸಾಲಗಳು ಮರುಪಾವತಿಗೆ ಕಡಿಮೆ ಅವಧಿ ಹೊಂದಿರುತ್ತವೆ. ಇಎಂಐ ಮಾದರಿಯಲ್ಲಿ ಸಾಲವನ್ನು ಮರುಪಾವತಿ ಮಾಡಿಕೊಳ್ಳುತ್ತಾ ಬರಬಹುದು.

ಅಲ್ಪಾವಧಿ ಉದ್ಯಮ ಸಾಲದ ಸವಾಲುಗಳು

ಹೆಚ್ಚಿನ ಇಎಂಐ: ದೀರ್ಘಾವಧಿ ಉದ್ಯಮ ಸಾಲಕ್ಕೆ ಸಾಮಾನ್ಯವಾಗಿ ಬಡ್ಡಿ ದರ ಕಡಿಮೆ ಇದ್ದರೆ ಅಲ್ಪಾವಧಿ ಸಾಲಕ್ಕೆ ಜಾಸ್ತಿ ಇರುತ್ತದೆ. ಹೀಗಾಗಿ, ಅಲ್ಪಾವಧಿಯ ವ್ಯಾಪಾರ ಸಾಲಗಳ ಇಎಂಐ ಮೊತ್ತ (EMI)ಹೆಚ್ಚಿರುತ್ತವೆ. ಇವುಗಳು ಅಸಲು ಮೊತ್ತ ಮತ್ತು ಬಡ್ಡಿಯ ಒಂದು ಭಾಗವನ್ನು ಒಳಗೊಂಡಿರುತ್ತವೆ. ಇದು ಮಾಸಿಕವಾಗಿ ಹೆಚ್ಚಿನ ಮೊತ್ತ ಪಾವತಿ ಮಾಡಬೇಕಾದ ಒತ್ತಡಕ್ಕೆ ನಿಮ್ಮನ್ನು ಸಿಲುಕಿಸಬಹುದು.

ಅಧಿಕ-ಬಡ್ಡಿ ದರಗಳು: ಮೊದಲೇ ಹೇಳಿದಂತೆ ಅಲ್ಪಾವಧಿ ಸಾಲದ ಬಡ್ಡಿ ದರ ದೀರ್ಘಾವಧಿ ಸಾಲದ ಬಡ್ಡಿ ದರಕ್ಕಿಂತ ಅಧಿಕ. ಈ ಸಾಲ ಮಾಡಿದಾಗ ಹೆಚ್ಚಿನ ಬಡ್ಡಿ ದರ ಪಾವತಿ ಮಾಡಬೇಕಾಗಿರುವುದು ಅನಿವಾರ್ಯ.

ಹಣಕಾಸಿನ ಬಾಧ್ಯತೆಗಳು: ಅಲ್ಪಾವಧಿಯ ಉದ್ಯಮ ಸಾಲಗಳು ಹಣಕಾಸಿನ ಹೊಣೆಗಾರಿಕೆಯನ್ನು ಸೃಷ್ಟಿಸುತ್ತವೆ. ನಿಮ್ಮ ಬಳಿ ಸಾಕಷ್ಟು ನಗದು ಇಲ್ಲವಾದ ಸಂದರ್ಭ ಎದುರಾದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಬಹುದು.

ಅರ್ಹತೆಯ ಮಾನದಂಡ: ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸುವ ಉದ್ಯಮಿಗಳಿಗೆ ಮಾತ್ರ ಸಾಲದಾತರು ಉದ್ಯಮ ಸಾಲ ನೀಡುತ್ತಾರೆ. ಎಲ್ಲ ಸಂದರ್ಭಗಳಲ್ಲಿ ಸಣ್ಣ ಉದ್ಯಮಿಗಳಿಗೆ ಈ ಅರ್ಹತಾ ಮಾನದಂಡಗಳನ್ನು ಸಮರ್ಥವಾಗಿ ಪೂರೈಸಲು ಸಾಧ್ಯವಾಗದೆ ಇರಬಹುದು.

ಇದನ್ನೂ ಓದಿ: Entrepreneurs Day 2022: ಇಂದು ವಾಣಿಜ್ಯೋದ್ಯಮಿಗಳ ದಿನ; ಭಾರತದ ಟಾಪ್ 10 ಉದ್ಯಮಿಗಳಿವರು

ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು