AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ದೊಡ್ಡ ಸ್ಟಾರ್ಟಪ್​ಗಳ ಮಾಲೀಕ ಸುಪಮ್ ಮಹೇಶ್ವರಿ ಮೇಲೆ ತೆರಿಗೆಗಳ್ಳತನ ಆರೋಪ; ಐಟಿಯಿಂದ ನೋಟೀಸ್

FirstCry Founder Faces IT Probe: ಫಸ್ಟ್ ಕ್ರೈ ಕಂಪನಿಯೊಳಗೆ ನಡೆದ ಷೇರು ವಹಿವಾಟಿನ ವೇಳೆ ನೂರಾರು ಕೋಟಿ ರೂಗಳಷ್ಟು ಮೊತ್ತದ ತೆರಿಗೆ ಪಾವತಿ ಆಗಿಲ್ಲ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಫಸ್ಟ್ ಕ್ರೈ ಸಂಸ್ಥೆಯ ಮಾಲೀಕ ಸುಪಮ್ ಮಹೇಶ್ವರಿ ಅವರಿಗೆ ನೋಟೀಸ್ ಜಾರಿ ಮಾಡಿದೆ. ಸುಪಮ್ ಮಹೇಶ್ವರಿ ಅವರು ಫಸ್ಟ್ ಕ್ರೈ ಡಾಟ್ ಕಾಮ್ ಅಲ್ಲದೇ ಗ್ಲೋಬಲ್ ಬೀಸ್ ಬ್ರ್ಯಾಂಡ್ಸ್ ಲಿ ಮತ್ತು ಎಕ್ಸ್​ಪ್ರೆಸ್​ಬೀಸ್ ಎಂಬ ಕಂಪನಿಗಳ ಸಂಸ್ಥಾಪಕರೂ ಹೌದು.

ಮೂರು ದೊಡ್ಡ ಸ್ಟಾರ್ಟಪ್​ಗಳ ಮಾಲೀಕ ಸುಪಮ್ ಮಹೇಶ್ವರಿ ಮೇಲೆ ತೆರಿಗೆಗಳ್ಳತನ ಆರೋಪ; ಐಟಿಯಿಂದ ನೋಟೀಸ್
ಸುಪಮ್ ಮಹೇಶ್ವರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 29, 2023 | 12:56 PM

Share

ನವದೆಹಲಿ, ಆಗಸ್ಟ್ 29: ಫಸ್ಟ್​ಕ್ರೈ ಡಾಟ್ ಕಾಮ್ (FirstCry.Com) ಸೇರಿದಂತೆ ಮೂವರು ಸ್ಟಾರ್ಟಪ್​ಗಳ ಸಂಸ್ಥಾಪಕ ಸುಪಮ್ ಮಹೇಶ್ವರಿ (Supam Maheshwari) ವಿರುದ್ಧ ತೆರಿಗೆ ವಂಚನೆಯ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆಯಿಂದ ತನಿಖೆ ನಡೆಯುತ್ತಿದ್ದು, ಸುಪಮ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಬ್ಲೂಮ್​ಬರ್ಗ್ ಮಾಧ್ಯಮ ಸಂಸ್ಥೆ ಈ ಬಗ್ಗೆ ಮೂಲಗಳ ಮಾಹಿತಿ ಆಧರಿಸಿ ವರದಿ ಮಾಡಿದೆ. ಸುಪಮ್ ಮಹೇಶ್ವರಿ ಅವರು ಫಸ್ಟ್ ಕ್ರೈ ಡಾಟ್ ಕಾಮ್ ಅಲ್ಲದೇ ಗ್ಲೋಬಲ್ ಬೀಸ್ ಬ್ರ್ಯಾಂಡ್ಸ್ ಲಿ (Globalbees Brands Ltd) ಮತ್ತು ಎಕ್ಸ್​ಪ್ರೆಸ್​ಬೀಸ್ (xPressbees) ಎಂಬ ಕಂಪನಿಗಳ ಸಂಸ್ಥಾಪಕರೂ ಹೌದು. ಈ ಮೂರೂ ಕಂಪನಿಗಳು ಯೂನಿಕಾರ್ನ್ ಸಂಸ್ಥೆಗಳೆನಿಸಿವೆ.

ಸುಪಮ್ ಮಹೇಶ್ವರಿ ಮೇಲೆ ತೆರಿಗೆ ಕಳ್ಳತನದ ಆರೋಪ ಇರುವುದು ತಿಳಿದುಬಂದಿದೆ. ಖಾಸಗಿ ಒಡೆತನದ ಫಸ್ಟ್​ಕ್ರೈ ಸಂಸ್ಥೆಯಲ್ಲಿ ನಡೆದ ಷೇರು ವಹಿವಾಟಿನ ವೇಳೆ 50 ಮಿಲಿಯನ್ ಡಾಲರ್​ನಷ್ಟು (ಸುಮಾರು 400 ಕೋಟಿ ರೂ) ತೆರಿಗೆ ಪಾವತಿಯನ್ನು ತಪ್ಪಿಸಲಾಗಿದೆ. ಅಷ್ಟು ತೆರಿಗೆ ಯಾಕೆ ಪಾವತಿಸಿಲ್ಲ ಎಂದು ಪ್ರಶ್ನಿಸಿ ಸುಪಮ್ ಮಹೇಶ್ವರಿ ಅವರಿಗೆ ಐಟಿ ಇಲಾಖೆ ನೋಟೀಸ್ ನೀಡಿದೆ ಎಂದು ಬ್ಲೂಮ್​ಬರ್ಗ್ ವರದಿ ಹೇಳುತ್ತದೆ.

ಇದನ್ನೂ ಓದಿ: ಸೆಬಿಯಿಂದ ಅದಾನಿ-ಹಿಂಡನ್ಬರ್ಗ್ ತನಿಖೆ ಕೊನೆಯ ಹಂತದಲ್ಲಿ; ಅದಾನಿ ಗ್ರೂಪ್​ನಿಂದ ತಪ್ಪಾಗಿದೆಯಾ? ಏನು ಕ್ರಮ ಸಾಧ್ಯತೆ? ಇಲ್ಲಿದೆ ಡೀಟೇಲ್ಸ್

ಸುಪಮ್ ಮಹೇಶ್ವರಿ ಮಾತ್ರವಲ್ಲ, ಫಸ್ಟ್ ಕ್ರೈ ಸಂಸ್ಥೆಯ ಆರಕ್ಕೂ ಹೆಚ್ಚು ಹೂಡಿಕೆದಾರರಿಗೂ ಇಲಾಖೆಯಿಂದ ನೋಟೀಸ್ ಹೋಗಿದೆಯಂತೆ. ಇದರಲ್ಲಿ ಕ್ರಿಸ್​ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಕೋ, ಸುನೀಲ್ ಭಾರ್ತಿ ಮಿತ್ತಲ್​ರ ಕುಟುಂಬ ಕಚೇರಿಯೂ ಇದೆ ಎನ್ನಲಾಗಿದೆ. ತನಿಖೆ ಸಂಬಂಧ ಇವರೆಲ್ಲರಿಗೂ ಐಟಿ ನೋಟೀಸ್ ಹೋಗಿದೆ.

ಬ್ಲೂಮ್​ಬರ್ಗ್ ವರದಿ ಪ್ರಕಾರ ಫಸ್ಟ್ ಕ್ರೈ ಸಂಸ್ಥಾಪಕ ಸುಪಮ್ ಮಹೇಶ್ವರಿ ಅವರು ಆದಾಯ ತೆರಿಗೆ ಇಲಾಖೆಯ ಸಂಪರ್ಕದಲ್ಲಿದ್ದು, ಸ್ಪಷ್ಟನೆ ಒದಗಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಜಿಯೋ ಭಾರತ್, ಏರ್​ಫೈಬರ್, ಸ್ಮಾರ್ಟ್ ಹೋಮ್, ಇನ್ಷೂರೆನ್ಸ್, ಅನಿಲ ಉತ್ಪಾದನೆ; ರಿಲಾಯನ್ಸ್ ಮಹಾಸಭೆಯ ಮುಖ್ಯಾಂಶಗಳು

ನವಜಾತ ಶಿಶುಗಳಿಗೆ ಅಗತ್ಯವಾಗಿರುವ ಬಟ್ಟೆ ಮತ್ತಿತರ ವಸ್ತುಗಳಿಗೆ ಆನ್​ಲೈನ್ ಮಾರುಕಟ್ಟೆ ಸ್ಥಳವಾಗಿರುವ ಫಸ್ಟ್ ಕ್ರೈ ಆರಂಭದ ಕೆಲ ವರ್ಷಗಳ ಕಾಲ ಸತತವಾಗಿ ನಷ್ಟ ಅನುಭವಿಸಿತ್ತು. 2021ರ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಲಾಭ ಮಾಡಿತ್ತು. ಈಗ ಅದು ಐಪಿಒ ಮಾರುಕಟ್ಟೆಗೆ ಲಗ್ಗೆ ಇಡಲು ಯತ್ನಿಸುತ್ತಿದೆ. ಲಾಭದ ಹಳಿಗೆ ಬಂದು ಐಪಿಒಗೆ ಹೋಗುತ್ತಿರುವ ಕೆಲವೇ ಸ್ಟಾರ್ಟಪ್​ಗಳಲ್ಲಿ ಫಸ್ಟ್ ಕ್ರೈ ಒಂದು.

ಇದೀಗ, ಫಸ್ಟ್ ಕ್ರೈ ಮಾಲೀಕರ ವಿರುದ್ಧ ತೆರಿಗೆ ವಂಚನೆ ಆರೋಪ ಬಂದಿರುವುದು ಅದರ ಐಪಿಒ ನಡೆಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ