AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ

Free Aadhaar update online till Sep 14: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಗುರುತು ಮತ್ತು ವಿಳಾಸ ಸಂಬಂಧಿತ ದಾಖಲೆಗಳನ್ನು ಅಪ್​ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ ಇತ್ಯಾದಿ ಬದಲಾವಣೆ ಕೂಡ ಮಾಡಬಹುದು. ಆದರೆ, ಆನ್​ಲೈನ್​ನಲ್ಲಿ ಸೆ. 14ರವರೆಗೆ ಉಚಿತವಾಗಿ ಡಾಕ್ಯುಮೆಂಟ್ ಅಪ್​ಡೇಟ್ ಮಾಡಬಹುದು. ಹೇಗೆ ಮಾಡಬಹುದು ಎನ್ನುವ ಹಂತ ಹಂತದ ಕ್ರಮಗಳ ವಿವರ ಇಲ್ಲಿದೆ...

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ
ಆಧಾರ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2024 | 2:22 PM

Share

ಹತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್ ಪಡೆದಿದ್ದರೆ ಅದನ್ನು ಅಪ್​ಡೇಟ್ ಮಾಡುವುದು ಅವಶ್ಯಕ. ಮನೆ ಬದಲಾವಣೆ, ಹೆಸರು ಬದಲಾವಣೆ ಯಾವುದೇ ಇದ್ದರೂ ಯಾವಾಗ ಬೇಕಾದರೂ ಅಪ್​ಡೇಟ್ ಮಾಡಬಹುದು. ಆಧಾರ್ ಸೆಂಟರ್​ಗೆ ಹೋಗಿ ನಿಗದಿತ ಶುಲ್ಕ ನೀಡಿ ಅಪ್​ಡೇಟ್ ಮಾಡಲು ಸಾಧ್ಯ. ಆನ್​ಲೈನ್​ನಲ್ಲಿ ಉಚಿತವಾಗಿ ಮಾಡುವ ಅವಕಾಶ ಇದೆ. ಈ ಉಚಿತ ಫೀಚರ್ ಸೆಪ್ಟೆಂಬರ್ 14ರವರೆಗೂ ಲಭ್ಯ ಇರುತ್ತದೆ. ಅದಾದ ಬಳಿಕ ಆನ್​ಲೈನ್​ನಲ್ಲೂ ಕೂಡ ಆಧಾರ್ ಅಪ್​ಡೇಟ್ ಮಾಡಬೇಕಾದರೆ 50 ರೂ ಶುಲ್ಕ ನೀಡಬೇಕಾಗುತ್ತದೆ.

ಆನ್​ಲೈನ್​ನಲ್ಲಿ ನಿಮ್ಮ ಐಡೆಂಟಿಟಿ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಮಾತ್ರ ಅಪ್​ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ ಇತ್ಯಾದಿ ಡೆಮಗ್ರಾಫಿಕ್ ಮಾಹಿತಿಯನ್ನು ಬದಲಿಸುವುದಿದ್ದರೆ ಆಧಾರ್ ಸೆಂಟರ್​ಗೆ ಹೋಗಿಯೇ ಮಾಡಿಸಬೇಕು.

ಆಧಾರ್ ಅನ್ನು ಆನ್​ಲೈನ್​ನಲ್ಲಿ ಅಪ್​​ಡೇಟ್ ಮಾಡುವ ಕ್ರಮ

  • ಮೊದಲಿಗೆ ಮೈ ಆಧಾರ್ ವೆಬ್​​ಸೈಟ್​ಗೆ ಹೋಗಿರಿ. ಅದರ ವಿಳಾಸ ಇಂತಿದೆ: myaadhaar.uidai.gov.in
  • ಈ ಪೋರ್ಟಲ್​ನಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿ.
  • ಲಾಗಿನ್ ಆದ ಬಳಿಕ ನಿಮ್ಮ ಪ್ರೊಫೈಲ್​ನಲ್ಲಿ ಇರುವ ವಿವರವನ್ನು ಗಮನಿಸಿ.
  • ನಿಮ್ಮ ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ವಿವರವನ್ನು ನೀವು ವೆರಿಫೈ ಮಾಡಬೇಕು. ಆ ವಿವರ ಸರಿ ಇದ್ದರೆ ‘ಐ ವೆರಿಫೈ ದಟ್ ದಿ ಅಬೋವ್ ಡೀಟೇಲ್ಸ್ ಆರ್ ಕರೆಕ್ಟ್’ ಎಂಬ ಆಯ್ಕೆಯನ್ನು ಆರಿಸಬೇಕು.
  • ಡ್ರಾಪ್​ಡೌನ್ ಮೆನುನಲ್ಲಿ ಇರುವ ದಾಖಲೆಗಳ ಪಟ್ಟಿಯಲ್ಲಿ ನೀವು ಅಪ್​ಡೇಟ್ ಮಾಡಬೇಕೆಂದಿರುವ ದಾಖಲೆ ಆಯ್ದುಕೊಂಡು ಸಂಬಂಧಿತ ದಾಖಲೆಯನ್ನು ಅಪ್​ಲೋಡ್ ಮಾಡಬೇಕಾಗುತ್ತದೆ. ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ಎರಡಕ್ಕೂ ನೀವು ಒಂದೊಂದು ದಾಖಲೆಯ ಫೋಟೋ ತೆಗೆದು ಹಾಕಬೇಕು.

ಇದನ್ನೂ ಓದಿ: ಜಿಎಸ್​ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ

  • ಐಡಿ ಪ್ರೂಫ್​ಗೆ ಬೇಕಾಗುವ ದಾಖಲೆಗಳ ಪಟ್ಟಿ
  • ಇಎಸ್​ಐ, ಮೆಡಿಕ್ಲೈಮ್ ಇತ್ಯಾದಿ ಸರ್ಕಾರದಿಂದ ನೀಡುವ ಹೆಲ್ತ್ ಇನ್ಷೂರೆನ್ಸ್ ಕಾರ್ಡ್
  • ವಿಶೇಷ ಚೇತನರಿಗೆ ಸರ್ಕಾರದಿಂದ ನೀಡುವ ಸರ್ಟಿಫಿಕೇಟ್
  • ಡ್ರೈವಿಂಗ್ ಲೈಸೆನ್ಸ್
  • ಪಾಸ್​ಪೋರ್ಟ್
  • ಕಿಸಾನ್ ಫೋಟೋ ಪಾಸ್​ಪುಕ್
  • ನರೇಗಾ ಕಾರ್ಡ್
  • ಮಾರ್ಕ್ಸ್ ಕಾರ್ಡ್
  • ವಿವಾಹ ನೊಂದಣಿ ಪ್ರಮಾಣಪತ್ರ
  • ಪ್ಯಾನ್ ಕಾರ್ಡ್
  • ಸರ್ಕಾರಿ ಬ್ಯಾಂಕೊಂದರ ಪಾಸ್​ಬುಕ್
  • ಪಡಿತರ ಚೀಟಿ
  • ಎಸ್​ಸಿ ಎಸ್​ಟಿ ಒಬಿಸಿ ಪ್ರಮಾಣಪತ್ರ
  • ವೋಟರ್ ಐಡಿ

ವಿಳಾಸ ಸಾಕ್ಷ್ಯಕ್ಕೆ ಬೇಕಾಗುವ ಅಡ್ರೆಸ್ ಪ್ರೂಫ್ ದಾಖಲೆಗಳು

  • ವಿದ್ಯುತ್ ಬಿಲ್
  • ಗ್ಯಾಸ್ ಬಿಲ್
  • ನೀರಿನ ಬಿಲ್
  • ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
  • ಪಾಸ್​ಪೋರ್ಟ್
  • ಇನ್ಷೂರೆನ್ಸ್ ಪಾಲಿಸಿ
  • ಪ್ರಾಪರ್ಟಿ ಟ್ಯಾಕ್ಸ್ ರಸೀದಿ
  • ಸರ್ಕಾರಿ ಬ್ಯಾಂಕ್​ನ ಪಾಸ್​ಬುಕ್
  • ಮ್ಯಾರೇಜ್ ಸರ್ಟಿಫಿಕೇಟ್
  • ತಹಶೀಲ್ದಾರರಿಂದ ಪ್ರಮಾಣಪತ್ರ
  • ಮನ್​ರೇಗಾ ಕಾರ್ಡ್
  • ವೋಟರ್ ಐಡಿ

ನೀವು ಯಾವುದಾದರೂ ಒಂದು ದಾಖಲೆಯ ಫೋಟೋ ತೆಗೆದಿಟ್ಟುಕೊಳ್ಳಬೇಕು. ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಾದರೂ ದಾಖಲೆ ಇರಬೇಕು. ಇದು ಎರಡು ಎಂಬಿ ಗಾತ್ರಕ್ಕಿಂತ ಕಡಿಮೆ ಇರಬೇಕು. ಸೆಪ್ಟೆಂಬರ್ 14ರ ಬಳಿಕವೂ ನೀವು ಆಧಾರ್​​ನಲ್ಲಿ ನಿಮ್ಮ ಡಾಕ್ಯುಮೆಂಟ್ ಅಪ್​ಡೇಟ್ ಮಾಡಬಹುದಾದರೂ ಅದಕ್ಕೆ ಶುಲ್ಕ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ