AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ

Free Aadhaar update online till Sep 14: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಗುರುತು ಮತ್ತು ವಿಳಾಸ ಸಂಬಂಧಿತ ದಾಖಲೆಗಳನ್ನು ಅಪ್​ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ ಇತ್ಯಾದಿ ಬದಲಾವಣೆ ಕೂಡ ಮಾಡಬಹುದು. ಆದರೆ, ಆನ್​ಲೈನ್​ನಲ್ಲಿ ಸೆ. 14ರವರೆಗೆ ಉಚಿತವಾಗಿ ಡಾಕ್ಯುಮೆಂಟ್ ಅಪ್​ಡೇಟ್ ಮಾಡಬಹುದು. ಹೇಗೆ ಮಾಡಬಹುದು ಎನ್ನುವ ಹಂತ ಹಂತದ ಕ್ರಮಗಳ ವಿವರ ಇಲ್ಲಿದೆ...

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ
ಆಧಾರ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2024 | 2:22 PM

Share

ಹತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್ ಪಡೆದಿದ್ದರೆ ಅದನ್ನು ಅಪ್​ಡೇಟ್ ಮಾಡುವುದು ಅವಶ್ಯಕ. ಮನೆ ಬದಲಾವಣೆ, ಹೆಸರು ಬದಲಾವಣೆ ಯಾವುದೇ ಇದ್ದರೂ ಯಾವಾಗ ಬೇಕಾದರೂ ಅಪ್​ಡೇಟ್ ಮಾಡಬಹುದು. ಆಧಾರ್ ಸೆಂಟರ್​ಗೆ ಹೋಗಿ ನಿಗದಿತ ಶುಲ್ಕ ನೀಡಿ ಅಪ್​ಡೇಟ್ ಮಾಡಲು ಸಾಧ್ಯ. ಆನ್​ಲೈನ್​ನಲ್ಲಿ ಉಚಿತವಾಗಿ ಮಾಡುವ ಅವಕಾಶ ಇದೆ. ಈ ಉಚಿತ ಫೀಚರ್ ಸೆಪ್ಟೆಂಬರ್ 14ರವರೆಗೂ ಲಭ್ಯ ಇರುತ್ತದೆ. ಅದಾದ ಬಳಿಕ ಆನ್​ಲೈನ್​ನಲ್ಲೂ ಕೂಡ ಆಧಾರ್ ಅಪ್​ಡೇಟ್ ಮಾಡಬೇಕಾದರೆ 50 ರೂ ಶುಲ್ಕ ನೀಡಬೇಕಾಗುತ್ತದೆ.

ಆನ್​ಲೈನ್​ನಲ್ಲಿ ನಿಮ್ಮ ಐಡೆಂಟಿಟಿ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಮಾತ್ರ ಅಪ್​ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ ಇತ್ಯಾದಿ ಡೆಮಗ್ರಾಫಿಕ್ ಮಾಹಿತಿಯನ್ನು ಬದಲಿಸುವುದಿದ್ದರೆ ಆಧಾರ್ ಸೆಂಟರ್​ಗೆ ಹೋಗಿಯೇ ಮಾಡಿಸಬೇಕು.

ಆಧಾರ್ ಅನ್ನು ಆನ್​ಲೈನ್​ನಲ್ಲಿ ಅಪ್​​ಡೇಟ್ ಮಾಡುವ ಕ್ರಮ

  • ಮೊದಲಿಗೆ ಮೈ ಆಧಾರ್ ವೆಬ್​​ಸೈಟ್​ಗೆ ಹೋಗಿರಿ. ಅದರ ವಿಳಾಸ ಇಂತಿದೆ: myaadhaar.uidai.gov.in
  • ಈ ಪೋರ್ಟಲ್​ನಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿ.
  • ಲಾಗಿನ್ ಆದ ಬಳಿಕ ನಿಮ್ಮ ಪ್ರೊಫೈಲ್​ನಲ್ಲಿ ಇರುವ ವಿವರವನ್ನು ಗಮನಿಸಿ.
  • ನಿಮ್ಮ ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ವಿವರವನ್ನು ನೀವು ವೆರಿಫೈ ಮಾಡಬೇಕು. ಆ ವಿವರ ಸರಿ ಇದ್ದರೆ ‘ಐ ವೆರಿಫೈ ದಟ್ ದಿ ಅಬೋವ್ ಡೀಟೇಲ್ಸ್ ಆರ್ ಕರೆಕ್ಟ್’ ಎಂಬ ಆಯ್ಕೆಯನ್ನು ಆರಿಸಬೇಕು.
  • ಡ್ರಾಪ್​ಡೌನ್ ಮೆನುನಲ್ಲಿ ಇರುವ ದಾಖಲೆಗಳ ಪಟ್ಟಿಯಲ್ಲಿ ನೀವು ಅಪ್​ಡೇಟ್ ಮಾಡಬೇಕೆಂದಿರುವ ದಾಖಲೆ ಆಯ್ದುಕೊಂಡು ಸಂಬಂಧಿತ ದಾಖಲೆಯನ್ನು ಅಪ್​ಲೋಡ್ ಮಾಡಬೇಕಾಗುತ್ತದೆ. ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ಎರಡಕ್ಕೂ ನೀವು ಒಂದೊಂದು ದಾಖಲೆಯ ಫೋಟೋ ತೆಗೆದು ಹಾಕಬೇಕು.

ಇದನ್ನೂ ಓದಿ: ಜಿಎಸ್​ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ

  • ಐಡಿ ಪ್ರೂಫ್​ಗೆ ಬೇಕಾಗುವ ದಾಖಲೆಗಳ ಪಟ್ಟಿ
  • ಇಎಸ್​ಐ, ಮೆಡಿಕ್ಲೈಮ್ ಇತ್ಯಾದಿ ಸರ್ಕಾರದಿಂದ ನೀಡುವ ಹೆಲ್ತ್ ಇನ್ಷೂರೆನ್ಸ್ ಕಾರ್ಡ್
  • ವಿಶೇಷ ಚೇತನರಿಗೆ ಸರ್ಕಾರದಿಂದ ನೀಡುವ ಸರ್ಟಿಫಿಕೇಟ್
  • ಡ್ರೈವಿಂಗ್ ಲೈಸೆನ್ಸ್
  • ಪಾಸ್​ಪೋರ್ಟ್
  • ಕಿಸಾನ್ ಫೋಟೋ ಪಾಸ್​ಪುಕ್
  • ನರೇಗಾ ಕಾರ್ಡ್
  • ಮಾರ್ಕ್ಸ್ ಕಾರ್ಡ್
  • ವಿವಾಹ ನೊಂದಣಿ ಪ್ರಮಾಣಪತ್ರ
  • ಪ್ಯಾನ್ ಕಾರ್ಡ್
  • ಸರ್ಕಾರಿ ಬ್ಯಾಂಕೊಂದರ ಪಾಸ್​ಬುಕ್
  • ಪಡಿತರ ಚೀಟಿ
  • ಎಸ್​ಸಿ ಎಸ್​ಟಿ ಒಬಿಸಿ ಪ್ರಮಾಣಪತ್ರ
  • ವೋಟರ್ ಐಡಿ

ವಿಳಾಸ ಸಾಕ್ಷ್ಯಕ್ಕೆ ಬೇಕಾಗುವ ಅಡ್ರೆಸ್ ಪ್ರೂಫ್ ದಾಖಲೆಗಳು

  • ವಿದ್ಯುತ್ ಬಿಲ್
  • ಗ್ಯಾಸ್ ಬಿಲ್
  • ನೀರಿನ ಬಿಲ್
  • ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
  • ಪಾಸ್​ಪೋರ್ಟ್
  • ಇನ್ಷೂರೆನ್ಸ್ ಪಾಲಿಸಿ
  • ಪ್ರಾಪರ್ಟಿ ಟ್ಯಾಕ್ಸ್ ರಸೀದಿ
  • ಸರ್ಕಾರಿ ಬ್ಯಾಂಕ್​ನ ಪಾಸ್​ಬುಕ್
  • ಮ್ಯಾರೇಜ್ ಸರ್ಟಿಫಿಕೇಟ್
  • ತಹಶೀಲ್ದಾರರಿಂದ ಪ್ರಮಾಣಪತ್ರ
  • ಮನ್​ರೇಗಾ ಕಾರ್ಡ್
  • ವೋಟರ್ ಐಡಿ

ನೀವು ಯಾವುದಾದರೂ ಒಂದು ದಾಖಲೆಯ ಫೋಟೋ ತೆಗೆದಿಟ್ಟುಕೊಳ್ಳಬೇಕು. ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಾದರೂ ದಾಖಲೆ ಇರಬೇಕು. ಇದು ಎರಡು ಎಂಬಿ ಗಾತ್ರಕ್ಕಿಂತ ಕಡಿಮೆ ಇರಬೇಕು. ಸೆಪ್ಟೆಂಬರ್ 14ರ ಬಳಿಕವೂ ನೀವು ಆಧಾರ್​​ನಲ್ಲಿ ನಿಮ್ಮ ಡಾಕ್ಯುಮೆಂಟ್ ಅಪ್​ಡೇಟ್ ಮಾಡಬಹುದಾದರೂ ಅದಕ್ಕೆ ಶುಲ್ಕ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್