ಜಿಎಸ್​ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ

54th GST council recommendations: ದೆಹಲಿಯಲ್ಲಿ ಸೆಪ್ಟೆಂಬರ್ 9ರಂದು 54ನೇ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಿತು. ವಿವಿಧ ವಸ್ತು ಮತ್ತು ಸೇವೆಗಳಿಗೆ ಜಿಎಸ್​ಟಿ ದರದಲ್ಲಿ ಬದಲಾವಣೆ ಮಾಡಲು ಸಭೆಯಲ್ಲಿ ಶಿಫಾರಸು ಮಾಡಲಾಗಿದೆ. ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್​ಗಳಿಗೆ ಜಿಎಸ್​ಟಿ ದರ ಪರಿಷ್ಕರಣೆ ಸಂಬಂಧ ನಿರ್ಧಾರಕ್ಕಾಗಿ ಗ್ರೂಪ್ ಆಫ್ ಮಿನಿಸ್ಟರ್ಸ್ ರಚಿಸಿ ಜವಾಬ್ದಾರಿ ಕೊಡಲಾಗಿದೆ.

ಜಿಎಸ್​ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ
ಜಿಎಸ್​ಟಿ
Follow us
|

Updated on: Sep 10, 2024 | 12:47 PM

ನವದೆಹಲಿ, ಸೆಪ್ಟೆಂಬರ್ 10: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಿನ್ನೆ 54ನೇ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಿತು. ಜಿಎಸ್​ಟಿ ತೆರಿಗೆ ದರಗಳಲ್ಲಿ ಬದಲಾವಣೆ ಮಾಡಲು ಸಭೆ ಒಂದಷ್ಟು ಶಿಫಾರಸು ಮಾಡಿದೆ. ಕ್ಯಾನ್ಸರ್​ನ ಕೆಲ ಔಷಧಗಳು ಸೇರಿದಂತೆ ಕೆಲ ವಸ್ತುಗಳಿಗೆ ತೆರಿಗೆ ಇಳಿಕೆ ಮಾಡಲಾಗಿದೆ. ಕೆಲವಕ್ಕೆ ಜಿಎಸ್​​ಟಿಯಿಂದ ವಿನಾಯಿತಿ ನೀಡಲಾಗಿದೆ. ಇನ್ನೂ ಕೆಲವಕ್ಕೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಇನ್ಷೂರೆನ್ಸ್​ಗೆ ಜಿಎಸ್​ಟಿ ಹೇಗಿರಬೇಕು ಎಂದು ಶಿಫಾರಸು ಮಾಡಲು ಗ್ರೂಪ್ ಆಫ್ ಮಿನಿಸ್ಟರ್ಸ್​ಗೆ ಜವಾಬ್ದಾರಿ ಕೊಡಲಾಗಿದೆ. ಸೋಮವಾರ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು, ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಭಾಗವಹಿಸಿದ್ದರು.

54ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಶಿಫಾರಸು ಮಾಡಲಾದ ತೆರಿಗೆ ಬದಲಾವಣೆ

  • ಪ್ಯಾಕೇಜ್ಡ್ ತಿಂಡಿ ಪದಾರ್ಥಗಳು: ಜಿಎಸ್​ಟಿ ಶೇ. 18ರಿಂದ ಶೇ. 12ಕ್ಕೆ ಇಳಿಕೆ
  • ಫ್ರೈ ಮಾಡದ, ಬೇಯಿಸದ ತಿಂಡಿಗಳು: ಶೇ. 5 ಜಿಎಸ್​ಟಿ
  • ಕ್ಯಾನ್ಸರ್ ಔಷಧಗಳಾದ Trastuzumab Deruxtecan, Osimertinib ಮತ್ತು Durvalumab: ಜಿಎಸ್​ಟಿ ಶೇ. 12ರಿಂದ ಶೇ. 5ಕ್ಕೆ ಇಳಿಕೆ
  • ಮೆಟಲ್ ಸ್ಕ್ರಾಪ್: ಜಿಎಸ್​ಟಿ ನೊಂದಾಯಿತವಾಗದ ವ್ಯಕ್ತಿಯಿಂದ ನೊಂದಾಯಿತ ವ್ಯಕ್ತಿಗೆ ಮೆಟಲ್ ಸ್ಕ್ರಾಪ್ ಸರಬರಾಜು ಆದಲ್ಲಿ, ನೊಂದಾಯಿತ ವ್ಯಕ್ತಿಯೇ ರಿವರ್ಸ್ ಚಾರ್ಜ್ ಮೆಕ್ಯಾನಿಂ (ಎಂಸಿಎಂ) ಅನುಸಾರ ತೆರಿಗೆ ಪಾವತಿಸಬೇಕಾಗುತ್ತದೆ.
  • ಇನ್ನು, ನೊಂದಾಯಿತ ವ್ಯಕ್ತಿ ಮೆಟಲ್ ಸ್ಕ್ರಾಪ್ ಸರಬರಾಜು ಮಾಡಿದಲ್ಲಿ ಶೇ. 2ರಷ್ಟು ಟಿಡಿಎಸ್ ತೆರಬೇಕಾಗುತ್ತದೆ.
  • ರೈಲ್ವೆ ಆರ್​ಎಂಪಿಯು ಎಸಿ ಮೆಷೀನ್​ಗಳಿಗೆ ಶೇ. 28ರಷ್ಟು ಜಿಎಸ್​ಟಿ ಇರುತ್ತದೆ.
  • ಕಾರಿನ ಸೀಟುಗಳಿಗೆ ಜಿಎಸ್​ಟಿ ದರ ಶೇ. 28ಕ್ಕೆ ಹೆಚ್ಚಳ
  • ಹೆಲಿಕಾಪ್ಟರ್ ಚಾರ್ಟರ್​ಗೆ ಶೇ. 18ರಷ್ಟು ಜಿಎಸ್​ಟಿ
  • ಡಿಜಿಸಿಎ ಅನುಮೋದಿತ ಫ್ಲೈಯಿಂಗ್ ತರಬೇತಿ ಸಂಸ್ಥೆಗಳಿಂದ ನಡೆಸಲಾಗುವ ತರಬೇತಿಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದೆ.
  • ಸರ್ಕಾರಿ ಸಂಸ್ಥೆ, ಸಂಶೋಧನಾ ಸಂಸ್ಥೆ, ಯೂನಿವರ್ಸಿಟಿ, ಕಾಲೇಜು ಇತ್ಯಾದಿಗಳಿಂದ ನೀಡಲಾಗುವ ಆರ್ ಅಂಡ್ ಡಿ ಸೇವೆಗಳಿಗೆ ಜಿಎಸ್​ಟಿಯಿಂದ ವಿನಾಯಿತಿ.
  • ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಪಾವತಿಸಲಾಗುವ ಆದ್ಯತಾ ಸ್ಥಳ ಶುಲ್ಕ ಅಥವಾ ಪ್ರಿಫರೆನ್ಷಿಯಲ್ ಲೊಕೇಶನ್ ಚಾರ್ಜ್​ಗೆ (ಪಿಎಲ್​ಸಿ) ಜಿಎಸ್​ಟಿ ವಿಧಿಸಲಾಗುವುದು.
  • ಸರ್ಕಾರದ ಶಿಕ್ಷಣ ಮಂಡಳಿ, ಎಜುಕೇಶನಲ್ ಕೌನ್ಸಿಲ್ ಮೊದಲಾದ ಸಂಸ್ಥೆಗಳ ಅಫಿಲಿಯೇಶನ್ ಸರ್ವಿಸ್​ಗೆ ಜಿಎಸ್​ಟಿ ಇರುವುದಿಲ್ಲ. ಆದರೆ, ಸಿಬಿಎಸ್​ಇ ಇತ್ಯಾದಿ ಎಜುಕೇಶನ್ ಬೋರ್ಡ್​ಗಳು ನೀಡುವ ಅಫಿಲಿಯೇಶನ್ ಸರ್ವಿಸ್​ಗಳಿಗೆ ಜಿಎಸ್​ಟಿ ಇರುತ್ತದೆ.

ಇದನ್ನೂ ಓದಿ: ಸೆ. 11ರಿಂದ 13ರವರೆಗೆ ದೆಹಲಿ ಬಳಿ ಸೆಮಿಕಾನ್ ಇಂಡಿಯಾ 2024 ಸಮಾವೇಶ; ಪ್ರಧಾನಿಯಿಂದ ಉದ್ಘಾಟನೆ

  • ಯೂನಿವರ್ಸಿಟಿಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ನೀಡುವ ಅಫಿಲಿಯೇಶನ್ ಸರ್ವಿಸ್​ಗಳಿಗೆ ಶೇ. 18ರಷ್ಟು ಜಿಎಸ್​ಟಿ ಇರುತ್ತದೆ.
  • ವಿದೇಶೀ ಏರ್ಲೈನ್ಸ್ ಕಂಪನಿಯಿಂದ ಸ್ಥಾಪಿತವಾದ ಸಂಸ್ಥೆಯು ವಿದೇಶಗಳಲ್ಲಿರುವ ತನ್ನ ಅಂಗ ಸಂಸ್ಥೆ ಅಥವಾ ಸಂಬಂಧಿತ ವ್ಯಕ್ತಿಯಿಂದ ಸೇವೆಯನ್ನು ಆಮದು ಮಾಡಿಕೊಂಡರೆ ಅದಕ್ಕೆ ಜಿಎಸ್​ಟಿ ಇರಲ್ಲ.
  • ನೊಂದಾಯಿತ ವ್ಯಕ್ತಿಯಿಂದ ಕಮರ್ಷಿಯಲ್ ಪ್ರಾಪರ್ಟಿಯನ್ನು ನೊಂದಾಯಿತ ವ್ಯಕ್ತಿಗೆ ಬಾಡಿಗೆಗೆ ಕೊಟ್ಟಾಗ, ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಪ್ರಕಾರ ನೊಂದಾಯಿತ ವ್ಯಕ್ತಿಯೇ ತೆರಿಗೆ ಪಾವತಿಸಬೇಕು.
  • ಎಲೆಕ್ಟ್ರಿಸಿಟಿ ಕನೆಕ್ಷನ್ ಪಡೆಯಲು ನೀಡುವ ಅರ್ಜಿ ಶುಲ್ಕ, ವಿದ್ಯುತ್ ಮೀಟರ್​ನ ಬಾಡಿಗೆ ಶುಲ್ಕ, ಮೀಟರ್ಸ್, ಟ್ರಾನ್ಸ್​ಫಾರ್ಮರ್ಸ್, ಕೆಪಾಸಿಟರ್ಸ್​ಗಳ ಟೆಸ್ಟಿಂಗ್ ಫೀಸ್, ಮೀಟರ್ ಅಥವಾ ಸರ್ವಿಸ್ ಲೈನ್​ಗಳನ್ನು ಶಿಫ್ಟ್ ಮಾಡಲು ಗ್ರಾಹಕರು ನೀಡುವ ಶುಲ್ಕ ಇತ್ಯಾದಿ ಸೇವೆಗಳಿಗೆ ಜಿಎಸ್​ಟಿ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು