
Nirmala Sitharaman
ನಿರ್ಮಲಾ ಸೀತಾರಾಮನ್ ತಮಿಳುನಾಡು ಮೂಲದವರು. ಹುಟ್ಟೂರು ತಮಿಳುನಾಡಿನ ಮದುರೈ. ಅಯ್ಯಂಗಾರಿ ಕುಟುಂಬಕ್ಕೆ ಸೆರಿದವರು. ವಿಲಿಪ್ಪುರಂ, ತಿರುಚ್ಚಿಯಲ್ಲಿ ಇವರು ಬಿಎವರೆಗೆ ಓದಿ ಬಳಿಕ ದೆಹಲಿಯ ಜೆಎನ್ಯುನಲ್ಲಿ ಎಂಎ ಮಾಡಿದರು. ಬಳಿಕ ಲಂಡನ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ರಾಜಕೀಯಕ್ಕೆ ಬಹಳ ತಡವಾಗಿ ಬಂದವರಾದರೂ ಉನ್ನತ ಹುದ್ದೆಗಳನ್ನು ಬಹಳ ಬೇಗ ಗಳಿಸಿ ತಮ್ಮ ಕ್ಷಮತೆಯನ್ನೂ ನಿರೂಪಿಸಿದವರು. ರಕ್ಷಣಾ ಖಾತೆ, ಹಣಕಾಸು ಖಾತೆ, ಕಾರ್ಪೊರೇಟ್ ವ್ಯವಹಾರಗಳ ಖಾತೆ, ವಾಣಿಜ್ಯ ಮತ್ತು ಉದ್ಯಮ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ನಂತರ ರಕ್ಷಣಾ ಖಾತೆ ನಿಭಾಯಿಸಿದ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್. 2008ರಲ್ಲಿ ಬಿಜೆಪಿ ಸೇರಿದ ಅವರು 2014ರವರೆಗೂ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಇವರು ಕಿರಿಯ ಸಚಿವೆಯಾದರು. ಮೋದಿ 2.0 ಸರ್ಕಾರದಲ್ಲಿ ಹಣಕಾಸು ಖಾತೆ ಪಡೆದು ಸತತ ಆರು ಬಾರಿ ಬಜೆಟ್ ಮಂಡನೆ ಮಾಡಿ ಮೊರಾರ್ಜಿ ದೇಸಾಯಿ ದಾಖಲೆ ಸರಿಗಟ್ಟಿದ್ದಾರೆ.
ಗೂಗಲ್ ಟ್ಯಾಕ್ಸ್ ರದ್ದು ಮಾಡಲಿರುವ ಭಾರತ; ತಣ್ಣಗಾಗುವುದೇ ಟ್ರಂಪ್ ತಾಪ?
India removes 6% Google tax: ವಿದೇಶೀ ಟೆಕ್ ಕಂಪನಿಗಳ ಆನ್ಲೈನ್ ಜಾಹೀರಾತು ಸೇವೆಗಳಿಗೆ ವಿಧಿಸಲಾಗುವ ಶೇ. 6ರ ಈಕ್ವಲೈಸೇಶನ್ ಟ್ಯಾಕ್ಸ್ ಅನ್ನು ಭಾರತ ರದ್ದು ಮಾಡುತ್ತಿದೆ. ಹಣಕಾಸು ತಿದ್ದುಪಡಿ ಕಾಯ್ದೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಏಪ್ರಿಲ್ 1ರಿಂದ ಈಕ್ವಲೈಸೇಶನ್ ಟ್ಯಾಕ್ಸ್ ಇರುವುದಿಲ್ಲ. ಪ್ರತಿಸುಂಕದ ಭರಾಟೆಯಲ್ಲಿರುವ ಅಮೆರಿಕ ಭಾರತದ ಬಗ್ಗೆ ಮೃದುಧೋರಣೆ ತಾಳುತ್ತಾ ನೋಡಬೇಕು.
- Vijaya Sarathy SN
- Updated on: Mar 25, 2025
- 5:20 pm
ಪಿಎಂ ಇಂಟರ್ನ್ಶಿಪ್ ಯೋಜನೆ ಆ್ಯಪ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಸ್ಕೀಮ್ ಆ್ಯಪ್' ಅನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರ ದೂರದೃಷ್ಟಿಯ ವಿಧಾನವನ್ನು ಶ್ಲಾಘಿಸಿದ್ದಾರೆ. 'ಪಿಎಂ ಇಂಟರ್ನ್ಶಿಪ್ ಸ್ಕೀಮ್ ಆ್ಯಪ್' ಬಿಡುಗಡೆ ಸಂದರ್ಭದಲ್ಲಿ ಉದ್ಯೋಗದ ದಾಖಲಾತಿಗಳನ್ನು ಹೆಚ್ಚಿಸಲು, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರಿಗೆ ಬೆಂಬಲ ನೀಡಲು ಐದು ವಿಭಿನ್ನ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
- Sushma Chakre
- Updated on: Mar 17, 2025
- 7:15 pm
ವಿದೇಶೀ ಹೂಡಿಕೆಗಳು ಭಾರತದಿಂದ ಹೊರಹೋಗುತ್ತಿರುವುದು ಯಾಕೆ? ನಿರ್ಮಲಾ ಸೀತಾರಾಮನ್ ಅನಿಸಿಕೆ ಇದು
Nirmala Sitharaman on FII selling spree in Stock Market: ಭಾರತದ ಷೇರು ಮಾರುಕಟ್ಟೆ ಕಳೆದ ಐದಾರು ತಿಂಗಳಿಂದ ಹಿನ್ನಡೆಯಲ್ಲಿದೆ. ವಿದೇಶೀ ಹೂಡಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಹೊರಹೋಗಿವೆ. ನಿರ್ಮಲಾ ಸೀತಾರಾಮನ್ ಪ್ರಕಾರ ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ಎಫ್ಐಐಗಳು ಲಾಭ ಮಾಡಿವೆ. 2024ರ ಅಕ್ಟೋಬರ್ ತಿಂಗಳಿಂದ ಎಫ್ಪಿಐಗಳು ಭಾರತದ ಈಕ್ವಿಟಿಯಲ್ಲಿ 2 ಲಕ್ಷ ಕೋಟಿ ರೂನಷ್ಟು ಹೂಡಿಕೆಗಳನ್ನು ಹಿಂಪಡೆದಿವೆ.
- Vijaya Sarathy SN
- Updated on: Feb 18, 2025
- 11:08 am
ಒಂದು ವರ್ಷದೊಳಗೆ ಇನ್ಷೂರೆನ್ಸ್ ಪಾಲಿಸಿ ರದ್ದುಗೊಳಿಸಲು ಸಾಧ್ಯವಾ? ಫ್ರೀಲುಕ್ ಅವಧಿ ವಿಸ್ತರಿಸಲು ಸರ್ಕಾರದ ಯೋಜನೆ
Nirmala Sitharaman speaks at post-budget consultation: ಇನ್ಷೂರೆನ್ಸ್ ಪಾಲಿಸಿ ಖರೀದಿಸಿದ ಬಳಿಕ ಫ್ರೀ ಲುಕ್ ಅವಧಿಯ ಅವಕಾಶ ನೀಡಲಾಗಿರುತ್ತದೆ. ಪಾಲಿಸಿ ಬೇಡವೆನಿಸಿದಲ್ಲಿ ಈ ಅವಧಿಯೊಳಗೆ ನೀವು ರದ್ದು ಮಾಡಿದರೆ ದಂಡ ಇಲ್ಲದೆಯೇ ಪ್ರೀಮಿಯಮ್ ಹಣ ಪೂರ್ಣವಾಗಿ ರೀಫಂಡ್ ಆಗುತ್ತದೆ. ಸದ್ಯ ಒಂದು ತಿಂಗಳ ಫ್ರೀ ಲುಕ್ ಪೀರಿಯಡ್ ಇದೆ. ಇದನ್ನು ಒಂದು ವರ್ಷಕ್ಕೆ ಏರಿಸಬೇಕೆಂದು ವಿಮಾ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
- Vijaya Sarathy SN
- Updated on: Feb 17, 2025
- 7:20 pm
New I-T Bill: ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ; ಏನಿದೆ ಈ ಹೊಸ ಐಟಿ ಬಿಲ್ನಲ್ಲಿ?
New Income Tax Bill tabled in Parliament: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 13, ಗುರುವಾರದಂದು ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಬಜೆಟ್ನಲ್ಲಿ ಘೋಷಣೆ ಮಾಡಲಾಗಿದ್ದ ಈ ಮಸೂದೆಗೆ ಫೆ. 7ರಂದು ಕೇಂದ್ರ ಸಂಪುಟದಿಂದ ಅನುಮೋದನೆ ಸಿಕ್ಕಿತ್ತು. ಸಂಸತ್ನ ಹಣಕಾಸು ಸ್ಥಾಯಿ ಸಮಿತಿಯಿಂದ ಪರಿಶೀಲನೆಯಾಗಿ, ಸಂಸತ್ನಲ್ಲಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕ ಇದು ಕಾಯ್ದೆಯಾಗಿ ಬದಲಾಗುತ್ತದೆ.
- Vijaya Sarathy SN
- Updated on: Feb 13, 2025
- 2:56 pm
ಡಾಲರ್ ಎದುರು 2 ವರ್ಷದಲ್ಲಿ ಅತಿದೊಡ್ಡ ಜಿಗಿತ ಕಂಡ ರುಪಾಯಿ; ಇತ್ತೀಚಿನ ಕರೆನ್ಸಿ ಹಿನ್ನಡೆಗೆ ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
Dollar vs Rupee: ನಿನ್ನೆ ಡಾಲರ್ ಎದುರು 87.47 ಇದ್ದ ರುಪಾಯಿ ಮೌಲ್ಯ ಇವತ್ತು 86.63ಕ್ಕೆ ಏರಿದೆ. ಒಂದು ಪ್ರತಿಶತದಷ್ಟು ಮೌಲ್ಯ ವೃದ್ಧಿ ಕಂಡಿದೆ. ಕಳೆದ ಎರಡು ವರ್ಷದಲ್ಲೇ ಒಂದು ದಿನದಲ್ಲಿ ರುಪಾಯಿ ಕಂಡ ಅತಿದೊಡ್ಡ ಜಿಗಿತ ಇದಾಗಿದೆ. ಡಾಲರ್ಗಳನ್ನು ಮಾರಾಟ ಮಾಡುವ ಮೂಲಕ ರುಪಾಯಿ ಮೌಲ್ಯ ಕುಸಿತವನ್ನು ತಡೆಯುವಲ್ಲಿ ಆರ್ಬಿಐ ಯಶಸ್ವಿಯಾಗಿದೆ.
- Vijaya Sarathy SN
- Updated on: Feb 11, 2025
- 7:16 pm
Kisan Credit Card Loan: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 5 ಲಕ್ಷ ರೂ.ಗೆ ಹೆಚ್ಚಳ, ಯಾರು ಅರ್ಹರು? ಇಲ್ಲಿದೆ ವಿವರ
Union Budget 2025: ಕೇಂದ್ರ ಬಜೆಟ್ನಲ್ಲಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ನಲ್ಲಿ ತೆಗೆದುಕೊಳ್ಳಬಹುದಾದ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಏನು, ಇದರಿಂದ ರೈತರಿಗೇನು ಪ್ರಯೋಜನ ಮತ್ತು ಯಾವ ರೈತರಿಗೆ ಇದರ ಲಾಭ ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ.
- Ganapathi Sharma
- Updated on: Feb 1, 2025
- 4:53 pm
ಪಿಎಂ ರಿಸರ್ಚ್ ಫೆಲೋಶಿಪ್ ಸಂಖ್ಯೆ ಹೆಚ್ಚಳ: ಅರ್ಜಿ ಸಲ್ಲಿಸೋದು ಹೇಗೆ? ಎಷ್ಟು ಹಣ ಸಿಗುತ್ತೆ? ಇಲ್ಲಿದೆ ಮಾಹಿತಿ
PM Research Fellowship Scheme: ಪ್ರಧಾನಮಂತ್ರಿ ಸಂಶೋಧನಾ ಫೆಲೋಶಿಪ್ಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದರು. ಮುಂದಿನ 5 ವರ್ಷಗಳಲ್ಲಿ 10,000 ಫೆಲೋಶಿಪ್ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಈ ಫೆಲೋಶಿಪ್ಗೆ ಯಾರು ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ ಇತ್ಯಾದಿ ವಿವರ ಇಲ್ಲಿದೆ.
- Ganapathi Sharma
- Updated on: Feb 1, 2025
- 3:48 pm
Budget Highlights: ಚುನಾವಣಾ ಹೊಸ್ತಿಲಲ್ಲಿರುವ ಬಿಹಾರಕ್ಕೆ ಬಜೆಟ್ನಲ್ಲಿ ಬಂಪರ್ ಕೊಡುಗೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಮಧ್ಯಮವರ್ಗದ ಜನರಿಗೆ ಹಲವು ಯೋಜನೆಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ ಈ ಬಾರಿ ಚುನಾವಣೆ ಎದುರಿಸಲಿರುವ ಬಿಹಾರ ರಾಜ್ಯಕ್ಕೂ ಬಂಪರ್ ಕೊಡುಗೆ ನೀಡಿದೆ. ಚುನಾವಣಾ ವರ್ಷವಾದ ಈ ಬಾರಿ ನಿರ್ಮಲಾ ಸೀತಾರಾಮನ್ ಅವರ 2025ರ ಬಜೆಟ್ನಲ್ಲಿ ಬಿಹಾರಕ್ಕೆ ಸಿಕ್ಕಿದ್ದೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
- Sushma Chakre
- Updated on: Feb 1, 2025
- 3:38 pm
ಸೇನಾ ಪಡೆಗಳ ಆಧುನೀಕರಣಕ್ಕೆ ಕ್ರಮ: ರಕ್ಷಣಾ ಕ್ಷೇತ್ರದ ಅನುದಾನ ಹೆಚ್ಚಿಸಿದ ನಿರ್ಮಲಾ ಬಜೆಟ್
ಭಾರತದ 2024-25ನೇ ಸಾಲಿನ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.81 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೊಸ ಉಪಕರಣಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಅನುದಾನ ನೀಡಲಾಗಿದೆಯಾದರೂ, ನೆರೆಯ ಚೀನಾಕ್ಕಿಂತ ಭಾರತದ ರಕ್ಷಣಾ ಬಜೆಟ್ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು.
- Ganapathi Sharma
- Updated on: Feb 1, 2025
- 2:53 pm