Nirmala Sitharaman
ನಿರ್ಮಲಾ ಸೀತಾರಾಮನ್ ತಮಿಳುನಾಡು ಮೂಲದವರು. ಹುಟ್ಟೂರು ತಮಿಳುನಾಡಿನ ಮದುರೈ. ಅಯ್ಯಂಗಾರಿ ಕುಟುಂಬಕ್ಕೆ ಸೆರಿದವರು. ವಿಲಿಪ್ಪುರಂ, ತಿರುಚ್ಚಿಯಲ್ಲಿ ಇವರು ಬಿಎವರೆಗೆ ಓದಿ ಬಳಿಕ ದೆಹಲಿಯ ಜೆಎನ್ಯುನಲ್ಲಿ ಎಂಎ ಮಾಡಿದರು. ಬಳಿಕ ಲಂಡನ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ರಾಜಕೀಯಕ್ಕೆ ಬಹಳ ತಡವಾಗಿ ಬಂದವರಾದರೂ ಉನ್ನತ ಹುದ್ದೆಗಳನ್ನು ಬಹಳ ಬೇಗ ಗಳಿಸಿ ತಮ್ಮ ಕ್ಷಮತೆಯನ್ನೂ ನಿರೂಪಿಸಿದವರು. ರಕ್ಷಣಾ ಖಾತೆ, ಹಣಕಾಸು ಖಾತೆ, ಕಾರ್ಪೊರೇಟ್ ವ್ಯವಹಾರಗಳ ಖಾತೆ, ವಾಣಿಜ್ಯ ಮತ್ತು ಉದ್ಯಮ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ನಂತರ ರಕ್ಷಣಾ ಖಾತೆ ನಿಭಾಯಿಸಿದ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್. 2008ರಲ್ಲಿ ಬಿಜೆಪಿ ಸೇರಿದ ಅವರು 2014ರವರೆಗೂ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಇವರು ಕಿರಿಯ ಸಚಿವೆಯಾದರು. ಮೋದಿ 2.0 ಸರ್ಕಾರದಲ್ಲಿ ಹಣಕಾಸು ಖಾತೆ ಪಡೆದು ಸತತ ಆರು ಬಾರಿ ಬಜೆಟ್ ಮಂಡನೆ ಮಾಡಿ ಮೊರಾರ್ಜಿ ದೇಸಾಯಿ ದಾಖಲೆ ಸರಿಗಟ್ಟಿದ್ದಾರೆ.
ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು; ರಾಜ್ಯಗಳಿಗೂ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್
Parliament approves Central Excise Amendment Bill: ಅಬಕಾರಿ ತಿದ್ದುಪಡಿ ಮಸೂದೆಗೆ ಲೋಕಸಭೆ ಬಳಿಕ ರಾಜ್ಯಸಭೆಯೂ ಅನುಮೋದನೆ ನೀಡಿದೆ. ಇದರೊಂದಿಗೆ ಈ ಮಸೂದೆಗೆ ಸಂಸತ್ನ ಅಂಗೀಕಾರ ಸಿಕ್ಕಂತಾಗಿದೆ. ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆಯನ್ನೂ ಇದೇ ವೇಳೆ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸದ್ಯ ಇರುವ ಕಾಂಪೆನ್ಸೇಶನ್ ಸೆಸ್ ಅವಧಿ ಮುಗಿಯುತ್ತಾ ಬಂದಿದ್ದು ಇದರಿಂದ ಬರಲಿರುವ ಆದಾಯ ಕೊರತೆ ನೀಗಿಸಲು ಅಬಕಾರಿ ಸುಂಕ ನೆರವಿಗೆ ಬರಲಿದೆ.
- Vijaya Sarathy SN
- Updated on: Dec 4, 2025
- 8:01 pm
ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು
Pune Woman lost Rs 99 lakh to scammers: ದುಷ್ಕರ್ಮಿಗಳ ನಕಲಿ ದಾಖಲೆಗಳ ಸುಳಿಗೆ ಸಿಲುಕಿದ ಪುಣೆಯ ಮಹಿಳೆಯೊಬ್ಬರು 99 ಲಕ್ಷ ರೂ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. 62 ವರ್ಷದ ನಿವೃತ್ತ ಐಎಎಸ್ ಅಧಿಕಾರಿಯಾದ ಈ ಮಹಿಳೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ಅರೆಸ್ಟ್ ವಾರಂಟ್, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಖದೀಮರು ಮಹಿಳೆಯ ಬ್ಯಾಂಕ್ ಅಕೌಂಟ್ಗಳಿಂದ ಎಲ್ಲಾ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.
- Vijaya Sarathy SN
- Updated on: Nov 12, 2025
- 2:04 pm
ಜಿಎಸ್ಟಿ ಕಡಿತದ ಪ್ರಯೋಜನ ಜನಸಾಮಾನ್ಯರನ್ನು ತಲುಪುತ್ತಿವೆ; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ದೀಪಾವಳಿಗೂ ಮುನ್ನ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅಶ್ವಿನಿ ವೈಷ್ಣವ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜಿಎಸ್ಟಿ ದರ ಕಡಿತವು ಕಾರುಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬಂಪರ್ ಮಾರಾಟಕ್ಕೆ ಕಾರಣವಾಗಿದೆ ಎಂದು ಹೇಳಿದರು. ಜಿಎಸ್ಟಿ 2.0 ಸುಧಾರಣೆಗಳ ನಂತರ ಪ್ರಮುಖ ಗ್ರಾಹಕ ವಲಯಗಳಲ್ಲಿ ಭಾರತದ ದೀಪಾವಳಿ ಹಬ್ಬದ ಬೇಡಿಕೆ ಹೆಚ್ಚಾಗಿದೆ. ಜನರು ಸಂತೋಷದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ ಎಂದರು.
- Sushma Chakre
- Updated on: Oct 18, 2025
- 7:20 pm
ಭಾರತದಲ್ಲಿ ಗೂಗಲ್ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ
Google to build massive AI hub at Vishakhapatnam: ಆಂಧ್ರದ ವೈಜಾಗ್ನಲ್ಲಿ ಗೂಗಲ್ ಸಂಸ್ಥೆ ಬೃಹತ್ ಎಐ ಕೇಂದ್ರ ನಿರ್ಮಿಸಲಿದೆ. ಮುಂದಿನ 5 ವರ್ಷದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಇದು ಗೂಗಲ್ನ ಅತಿದೊಡ್ಡ ಎಐ ಹಬ್ ಆಗಿರಲಿದೆ. ಅಮೆರಿಕದ ಹೊರಗೆ ನಿರ್ಮಾಣವಾದ ಬೃಹತ್ ಎಐ ಹಬ್ ಎನಿಸಲಿದೆ. ಭಾರತ್ ಏರ್ಟೆಲ್ ಮತ್ತು ಗೂಗಲ್ ಜಂಟಿಯಾಗಿ ಇದನ್ನು ನಿರ್ಮಿಸಲಿದ್ದು, ಇದರಲ್ಲಿ ಡಾಟಾ ಸೆಂಟರ್ ಕೂಡ ಇರುತ್ತದೆ.
- Vijaya Sarathy SN
- Updated on: Oct 14, 2025
- 3:37 pm
ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಬದ್ಧ: ರೈತರಿಗಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲಿರುವ ನಿರ್ಮಲಾ ಸೀತಾರಾಮನ್
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಕಲ್ಯಾಣ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳು, ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ಗಳಿಗೆ ಭೇಟಿ ನೀಡಿ, ಘಟಕಗಳ ಉದ್ಘಾಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ವ್ಯಂಗ್ಯ ಮಾತುಗಳನ್ನಾಡಿದ್ದಾರೆ.
- Bhavana Hegde
- Updated on: Oct 14, 2025
- 2:27 pm
ಮ್ಯೂಚುವಲ್ ಫಂಡ್ಗಿಂತಲೂ ಹೆಚ್ಚು ಲಾಭ ತಂದಿದೆ ಸರ್ಕಾರದ ಎನ್ಪಿಎಸ್ ಸ್ಕೀಮ್
National Pension Scheme gives great returns: ನ್ಯಾಷನಲ್ ಪೆನ್ಷನ್ ಸ್ಕೀಮ್ ಆರಂಭವಾದಾಗಿನಿಂದ ಹೂಡಿಕೆದಾರರಿಗೆ ಶೇ. 13ರಷ್ಟು ಸರಾಸರಿ ವಾರ್ಷಿಕ ರಿಟರ್ನ್ಸ್ ಕೊಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಎನ್ಪಿಎಸ್ ಮಾತ್ರವಲ್ಲ, ಸರ್ಕಾರಿ ಬಾಂಡ್ ಮತ್ತು ಕಾರ್ಪೊರೇಟ್ ಬಾಂಡ್, ಡೆಟ್ ಬಾಂಡ್ಗಳೂ ಕೂಡ ಶೇ. 9ರಷ್ಟು ರಿಟರ್ನ್ ಕೊಟ್ಟಿವೆ.
- Vijaya Sarathy SN
- Updated on: Oct 3, 2025
- 6:24 pm
ಕರೂರಿನಲ್ಲಿ ಕಾಲ್ತುಳಿತ ನಡೆದ ಸ್ಥಳಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ; ಆಸ್ಪತ್ರೆಯಲ್ಲಿ ಸಂತ್ರಸ್ತರಿಗೆ ಸಾಂತ್ವನ
ತಮಿಳುನಾಡಿನ ಕರೂರಿನಲ್ಲಿ ಶನಿವಾರ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿ ವೇಳೆ ಕಾಲ್ತುಳಿತಕ್ಕೆ ಒಳಗಾಗಿ 41 ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರೆ ಬಿಜೆಪಿ ನಾಯಕರು ಕರೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನಿರ್ಮಲಾ ಸೀತಾರಾಮನ್ ಕರೂರಿನಲ್ಲಿ ಕಾಲ್ತುಳಿತ ನಡೆದ ಜಾಗ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕಾಲ್ತುಳಿತದ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
- Sushma Chakre
- Updated on: Sep 29, 2025
- 2:48 pm
ಕ್ವಾಂಟಂ ಎಐ ಪ್ರಾಜೆಕ್ಟ್; ತಿಂಗಳಿಗೆ 20 ಲಕ್ಷ ಗಳಿಸಿ ಅಂತ ಮೆಸೇಜ್ ಬಂದ್ರೆ ಮೋಸ ಹೋಗ್ಬೇಡಿ; ಅದು ಪಕ್ಕಾ ಫೇಕ್
Fake message on Quantum AI project: ನಿಮ್ಮ ಬ್ಯಾಂಕ್ ಅಕೌಂಟ್ಗೆ ಹಣ ಬರುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ ಎಂಬಂತಹ ಮೆಸೇಜ್ಗಳು ಸರ್ವೇ ಸಾಮಾನ್ಯ. ಇವುಗಳನ್ನು ಕ್ಲಿಕ್ ಮಾಡಿದರೆ ಹಣ ಬರೋದಿಲ್ಲ. ಬದಲಾಗಿ ನಿಮ್ಮ ಅಕೌಂಟ್ನಿಂದಲೇ ಹಣ ಮಾಯವಾಗುತ್ತದೆ. ಇತ್ತೀಚಿನ ದಿನಗಳಿಂದ ಕ್ವಾಂಟಂ ಎಐ ಪ್ರಾಜೆಕ್ಟ್ ಹೆಸರಲ್ಲಿ ನಕಲಿ ಮೆಸೇಜ್ಗಳು ಬರುತ್ತಿದೆ. ಪಿಐಬಿ ಫ್ಯಾಕ್ಟ್ ಚೆಕ್ ಇದನ್ನು ಫೇಕ್ ಎಂದು ಸ್ಪಷ್ಟಪಡಿಸಿದೆ.
- Vijaya Sarathy SN
- Updated on: Sep 8, 2025
- 4:50 pm
ಇಸ್ರೇಲ್ ಹಣಕಾಸು ಸಚಿವ ಸ್ಮಾಟ್ರಿಚ್ ಭಾರತಕ್ಕೆ ಭೇಟಿ; ಭಾರತ-ಇಸ್ರೇಲ್ ನಡುವೆ ಹೂಡಿಕೆ ಒಪ್ಪಂದ
India and Israel ink bilateral investment treaty: ಭಾರತ ಹಾಗೂ ಇಸ್ರೇಲ್ ಮಧ್ಯೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಏರ್ಪಟ್ಟಿದೆ. ಎರಡೂ ದೇಶಗಳ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಬೆಜಾಲೆಲ್ ಸ್ಮಾಟ್ರಿಚ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎರಡೂ ದೇಶಗಳ ನಡುವೆ ಹೂಡಿಕೆದಾರರ ಹೂಡಿಕೆಗಳನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಈ ಒಪ್ಪಂದದ ಆಶಯ.
- Vijaya Sarathy SN
- Updated on: Sep 8, 2025
- 3:59 pm
ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದವರಿಂದ ಈಗ ವರಸೆ ಬದಲು: ಜಿಎಸ್ಟಿ ವಿಚಾರದಲ್ಲಿ ವಿಪಕ್ಷಗಳಿಗೆ ನಿರ್ಮಲಾ ಲೇವಡಿ
Nirmala Sitharaman point by point answers to GST criticizers: ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ದ ಕೆಲವರು ಈಗ ಅದಕ್ಕೆ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಿಎಸ್ಟಿಯನ್ನು 20ನೇ ಶತಮಾನದ ಅರವತ್ತರ ದಶಕದಲ್ಲೇ ಜಾರಿ ಮಾಡಬಹುದಿತ್ತು. ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ ಎಂದಿದ್ದಾರೆ. ಜಿಎಸ್ಟಿ ಸುಧಾರಣೆಯಿಂದ ರಾಜ್ಯಗಳಂತೆ ಕೇಂದ್ರಕ್ಕೂ ಆದಾಯ ಕಡಿಮೆ ಆಗುತ್ತದೆ ಎಂದಿದ್ದಾರೆ.
- Vijaya Sarathy SN
- Updated on: Sep 5, 2025
- 4:37 pm