Aadhaar

Aadhaar

ಆಧಾರ್ ಎಂಬುದು ಭಾರತ ಸರ್ಕಾರ ರೂಪಿಸಿರುವ ನಾಗರಿಕರ ಗುರುತಿನ ವ್ಯವಸ್ಥೆಯಾಗಿದೆ. ಬಯೋಮೆಟ್ರಿಕ್ ಆಧಾರಿತವಾಗಿರುವ ಯೋಜನೆ ಇದು. ವ್ಯಕ್ತಿಯ ಎಲ್ಲಾ ಬೆರಳ ಗುರುತು, ಎರಡು ಕಣ್ಣಿನ ಗುರುತು (ಐರಿಸ್ ಪ್ರಿಂಟ್) ಮತ್ತು ಚಹರೆಯ ಫೋಟೋ, ಇವಿಷ್ಟೂ ವ್ಯಕ್ತಿಯ ದತ್ತಾಂಶವು ಆಧಾರ್ ಕಾರ್ಡ್​ನಲ್ಲಿ ದಾಖಲಾಗಿರುತ್ತದೆ. ಈ ಆಧಾರ್ ಕಾರ್ಡ್​ನಲ್ಲಿ 12 ಅಂಕಿಗಳ ವಿಶೇಷ ಸಂಖ್ಯೆ ಇರುತ್ತದೆ. ಆಧಾರ್ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಆಧಾರಿತ ಐಡಿ ವ್ಯವಸ್ಥೆ ಎಂಬ ದಾಖಲೆ ಪಡೆದಿದೆ. 2009ರಲ್ಲಿ ಭಾರತದಲ್ಲಿ ಆಧಾರ್ ಯೋಜನೆ ಆರಂಭವಾಯಿತು. ಯುಐಡಿಎಐ ಪ್ರಾಧಿಕಾರವನ್ನು ರಚಿಸಿ ಯೋಜನೆಗೆ ಚಾಲನೆ ಕೊಡಲಾಯಿತು. ಇನ್ಫೋಸಿಸ್​ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಈ ಯೋಜನೆಯ ರೂವಾರಿ. ವ್ಯಕ್ತಿಯ ಗುರುತಿಗಾಗಿ ಮೊದಲು ಬಳಕೆ ಆಗುತ್ತಿದ್ದ ಆಧಾರ್ ಈಗ ಬಹೂಪಯೋಗಿ ಆಗಿದೆ. ಸರ್ಕಾರದ ಯೋಜನೆಗಳ ಹಣ ನಿರ್ದಿಷ್ಟ ಫಲಾನುಭವಿಗಳನ್ನು ತಲುಪಿಸಲು ಆಧಾರ್ ಬಹಳ ಉಪಯುಕ್ತ ಎನಿಸಿದೆ. ಇದರಿಂದ ಹಣ ಪೋಲಾಗುವುದು ತಪ್ಪಿದೆ. ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವಲ್ಲವಾದರೂ ಅದು ಬಹಳ ಅಗತ್ಯವಾಗಿರುವ ದಾಖಲೆಯಾಗಿದೆ.

ಇನ್ನೂ ಹೆಚ್ಚು ಓದಿ

ಆಧಾರ್ ಕಾರ್ಡ್ ಉಚಿತವಾಗಿ ಅಪ್​ಡೇಟ್ ಮಾಡುವ ಡೆಡ್​ಲೈನ್, ಸೆ. 14ರಿಂದ ಡಿ. 14ಕ್ಕೆ ವಿಸ್ತರಣೆ

Aadhaar card free document update: ಹತ್ತು ವರ್ಷಗಳಿಂದ ಯಾವುದೇ ಅಪ್​ಡೇಟ್ ಮಾಡದೇ ಇರುವ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್​ನ ಇತ್ತೀಚಿನ ದಾಖಲೆಗಳಿದ್ದರೆ ಅದನ್ನು ಆಧಾರ್ ಡಾಟಾಬೇಸ್​ಗೆ ಅಪ್​ಲೋಡ್ ಮಾಡಬೇಕು. ಆನ್​ಲೈನ್​ನಲ್ಲಿ ಉಚಿತವಾಗಿ ಈ ಕೆಲಸ ಮಾಡಬಹುದು. ಇದಕ್ಕೆ ಇರುವ ಗಡುವನ್ನು ಸೆ. 14ರಿಂದ ಡಿ. 14ಕ್ಕೆ ವಿಸ್ತರಿಸಲಾಗಿದೆ.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ

Free Aadhaar update online till Sep 14: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಗುರುತು ಮತ್ತು ವಿಳಾಸ ಸಂಬಂಧಿತ ದಾಖಲೆಗಳನ್ನು ಅಪ್​ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ ಇತ್ಯಾದಿ ಬದಲಾವಣೆ ಕೂಡ ಮಾಡಬಹುದು. ಆದರೆ, ಆನ್​ಲೈನ್​ನಲ್ಲಿ ಸೆ. 14ರವರೆಗೆ ಉಚಿತವಾಗಿ ಡಾಕ್ಯುಮೆಂಟ್ ಅಪ್​ಡೇಟ್ ಮಾಡಬಹುದು. ಹೇಗೆ ಮಾಡಬಹುದು ಎನ್ನುವ ಹಂತ ಹಂತದ ಕ್ರಮಗಳ ವಿವರ ಇಲ್ಲಿದೆ...

ಪ್ಯಾನ್ ಕಾರ್ಡ್ ಮಾಡಿಸಬೇಕೆ? ಆಧಾರ್ ಮೂಲಕ ಸುಲಭವಾಗಿ ಉಚಿತವಾಗಿ ಇ-ಪ್ಯಾನ್ ಪಡೆಯುವ ಕ್ರಮ

Steps to get e-PAN using Aadhaar: ಪ್ಯಾನ್ ನಂಬರ್ ಹೊಂದಿಲ್ಲದವರು ತ್ವರಿತವಾಗಿ ಪ್ಯಾನ್ ಬೇಕೆಂದಿದ್ದರೆ ಇ-ಪ್ಯಾನ್ ಪಡೆಯಬಹುದು. ಪಿಡಿಎಫ್ ರೂಪದಲ್ಲಿ ನಿಮಗೆ ಇನ್ಸ್​ಟೆಂಟ್ ಆಗಿ ಇ-ಪ್ಯಾನ್ ಸಿಗುತ್ತದೆ. ಇದನ್ನು ಮಾಡಿಸಲು ಮೂಲಭೂತವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಆಧಾರ್​​ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದಿರಬೇಕು.

Rule Change from 1 September 2024: ಸೆಪ್ಟಂಬರ್ ತಿಂಗಳಲ್ಲಿ ಹಣಕಾಸು ವ್ಯತ್ಯಯಕ್ಕೆ ಕಾರಣವಾಗುವ ಆಧಾರ್, ಎಲ್​ಪಿಜಿ, ಡಿಎ ಇತ್ಯಾದಿಯಲ್ಲಿ ಆಗುವ ಬದಲಾವಣೆಗಳು

LPG Cylinder Rate hike to credit card rules, here are few changes: ಪ್ರತೀ ತಿಂಗಳ ಆರಂಭದಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆಗಳ ಪರಿಷ್ಕರಣೆ ಆಗುತ್ತದೆ. ಈ ಬಾರಿ ಸಿಎನ್​ಜಿ, ಎಟಿಎಫ್ ಇಂಧನಗಳ ಬೆಲೆಗಳಲ್ಲಿ ಬದಲಾವಣೆ ಆಗಬಹುದು. ಸೆಪ್ಟಂಬರ್ ತಿಂಗಳಲ್ಲಿ ಡಿಎ ಹೆಚ್ಚಳ ಆಗುವ ನಿರೀಕ್ಷೆ ಇದೆ. ಕೆಲ ಕ್ರೆಡಿಟ್ ಕಾರ್ಡ್ ಕಂಪನಿಗಳು ನಿಯಮ ಬದಲಾಯಿಸುತ್ತಿವೆ. ಈ ಬಗ್ಗೆ ಒಂದು ವರದಿ.

Baal Aadhaar: ಮಕ್ಕಳಿಗೆ ಆಧಾರ್ ಕಾರ್ಡ್; ಯಾವ ವಯಸ್ಸಿನ ಮಕ್ಕಳಿಂದ ಬಯೋಮೆಟ್ರಿಕ್ಸ್ ಪಡೆಯಲಾಗುತ್ತೆ? ಏನಿವೆ ಕ್ರಮ, ಇತ್ಯಾದಿ ಡೀಟೇಲ್ಸ್

Baal Aadhaar details: ಐದು ವರ್ಷದೊಳಗಿನ ವಯಸ್ಸಿನ ಮಕ್ಕಳಿಗೂ ಆಧಾರ್ ಕಾರ್ಡ್ ಮಾಡಿಸಬಹುದು. ಬಾಲ್ ಆಧಾರ್ ಕಾರ್ಡ್ ನೀಡಲಾಗುತ್ತದೆ. ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಅನ್ನು ಆ ವೇಳೆ ಪಡೆಯಲಾಗುವುದಿಲ್ಲ. ಐದು ವರ್ಷ ದಾಟಿದ ಬಳಿಕ ಅಪ್​ಡೇಟ್ ಮಾಡಬೇಕಾಗುತ್ತದೆ. ಬಾಲ್ ಆಧಾರ್ ಕಾರ್ಡ್ ಮಾಡುವ ಕ್ರಮದ ಬಗ್ಗೆ ಮಾಹಿತಿ ಇಲ್ಲಿದೆ.

ಲಿಂಕ್ ಆಗದ ಪ್ಯಾನ್-ಆಧಾರ್; ಇಂಥ ತೆರಿಗೆ ಪಾವತಿದಾರರಿಗೆ ಹೆಚ್ಚುವರಿ ಟಿಡಿಎಸ್ ಅನ್ವಯ ಆಗದು; ಹೊಸ ನಿಯಮ ಗಮನಿಸಿ…

Non linking of PAN and Aadhaar: ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ಅನ್ನು ಬಳಸಿದರೆ ಶೇ. 20ರಷ್ಟು ತೆರಿಗೆಯ ಹೊರೆ ಬೀಳುತ್ತದೆ. ಡಿಡಕ್ಟಿಯು ಮೇ 31ರೊಳಗೆ ಆಧಾರ್ ಪ್ಯಾನ್ ಲಿಂಕ್ ಮಾಡದೇ ಮೃತಪಟ್ಟರೆ ಡಿಡಕ್ಟರ್​ಗೆ ಆ ಹೆಚ್ಚುವರಿ ತೆರಿಗೆ ಬಾಧ್ಯತೆ ಇರುವುದಿಲ್ಲ ಎಂದು ಹೊಸ ನಿಯಮದಲ್ಲಿ ತಿಳಿಸಲಾಗಿದೆ. ಇಲ್ಲಿ ತೆರಿಗೆ ಕಡಿತಗೊಳಿಸಿ ಹಣ ಪಾವತಿಸುವ ವ್ಯಕ್ತಿ ಅಥವಾ ಸಂಸ್ಥೆ ಡಿಡಕ್ಟರ್ ಆಗಿರುತ್ತಾರೆ. ಹಣ ಸ್ವೀಕರಿಸುವ ವ್ಯಕ್ತಿ ಅಥವಾ ಸಂಸ್ಥೆ ಡಿಡಕ್ಟೀ ಎನಿಸುತ್ತಾರೆ.

ಆಧಾರ್, ಪ್ಯಾನ್ ಲಿಂಕ್ ಮಾಡದಿರುವವರಿಗೆ ದುಬಾರಿ ತೆರಿಗೆ; ಬರಲಿದೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್

PAN-Aadhaar link and tax demand: ಪ್ಯಾನ್ ಹೊಂದಿರುವವರು ಆಧಾರ್​ಗೆ ಲಿಂಕ್​ಗೆ ಮಾಡಬೇಕೆಂದು ಸರ್ಕಾರ ಸಾಕಷ್ಟು ಕಾಲಾವಕಾಶ ಕೊಟ್ಟಿತ್ತು. ಆದಾಗ್ಯೂ ಲಿಂಕ್ ಮಾಡದವರು ಈಗ ಆದಾಯ ತೆರಿಗೆ ಇಲಾಖೆಯಿಂದ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಪಡೆಯಬೇಕಾಗಬಹುದು. ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಇನಾಪರೇಟಿವ್ ಪ್ಯಾನ್ ಹೊಂದಿದ್ದರೆ ಶೇ. 20ರಷ್ಟು ಟಿಡಿಎಸ್ ಕಡಿತ ಕಾಣಬೇಕಾಗುತ್ತದೆ.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಸೆಪ್ಟಂಬರ್ 14ರವರೆಗೆ ಗಡುವು ವಿಸ್ತರಣೆ; ಅಪ್​ಡೇಟ್ ಮಾಡುವ ಕ್ರಮ, ಬೇಕಾದ ದಾಖಲೆ ಮತ್ತಿತರ ವಿವರ ಇಲ್ಲಿದೆ

Aadhaar Card Free Update: ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಮಾಹಿತಿಯನ್ನು ಅಪ್​ಡೇಟ್ ಮಾಡಲು ಜೂನ್ 14ರವರೆಗೆ ಇದ್ದ ಗಡುವನ್ನು ಯುಐಡಿಎಐ ಸೆಪ್ಟಂಬರ್ 14ರವರೆಗೂ ವಿಸ್ತರಿಸಿದೆ. ಆ ಬಳಿಕವೂ ಆಧಾರ್ ಅಪ್​ಡೇಟ್ ಮಾಡಬಹುದಾದರೂ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ ಇತ್ಯಾದಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಹೊಸದಾಗಿ ಅಡ್ರೆಸ್ ಪ್ರೂಫ್ ಮತ್ತು ಐಡಿ ಪ್ರೂಫ್ ದಾಖಲೆಗಳನ್ನು ಅಪ್​ಲೋಡ್ ಮಾಡಬಹುದು.

ಗೃಹಜ್ಯೋತಿ ಸ್ಕೀಮ್: ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?

How to delink Aadhaar from Griha jyoti scheme: ಗೃಹಜ್ಯೋತಿ ಸ್ಕೀಮ್ ರಾಜ್ಯಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ಬಹುತೇಕ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ. ಇನ್ನೂರು ಯುನಿಟ್​ಗಳೊಳಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತವಾಗಿ ವಿದ್ಯುತ್ ಒದಗಿಸುವ ಈ ಯೋಜನೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗುತ್ತದೆ. ಒಂದು ಕಡೆ ಲಿಂಕ್ ಆಗಿರುವ ಆಧಾರ್ ಅನ್ನು ಇನ್ನೊಂದು ಕನೆಕ್ಷನ್​ಗೆ ಲಿಂಕ್ ಮಾಡಲು ಆಗುವುದಿಲ್ಲ. ಮನೆ ಬದಲಾಯಿಸುವ ಬಾಡಿಗೆದಾರರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಸರ್ಕಾರ ಇದನ್ನು ಪರಿಗಣಿಸಿ, ಬಿದ್ಯುತ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವ ಅವಕಾಶ ಕೊಟ್ಟಿದೆ.

Rules Changing From June 1: ಜೂನ್​ನಲ್ಲಿ ಆರ್​ಟಿಒದಿಂದ ಹಿಡಿದು ಆಧಾರ್​ವರೆಗೆ ಈ ಪ್ರಮುಖ ಬದಲಾವಣೆಗಳಿವೆ, ಗಮನಿಸಿ

June 2024 financial rule changes: ನಮ್ಮ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರುವಂತಹ ಕೆಲ ಪ್ರಮುಖ ಘಟನೆಗಳು, ನಿಯಮಗಳು ಜೂನ್ ತಿಂಗಳಲ್ಲಿ ಇವೆ. ಜೂನ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್​ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್​ಡೇಟ್ ಮಾಡಲು ಜೂನ್ 14ರವರೆಗೆ ಅವಕಾಶ ಇದೆ. ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ ಎಂಟು ದಿನ ಇದೆ. ಪೂರ್ಣ ವಿವರ ಈ ಸುದ್ದಿಯಲ್ಲಿದೆ ಓದಿ....

ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ