Aadhaar

Aadhaar

ಆಧಾರ್ ಎಂಬುದು ಭಾರತ ಸರ್ಕಾರ ರೂಪಿಸಿರುವ ನಾಗರಿಕರ ಗುರುತಿನ ವ್ಯವಸ್ಥೆಯಾಗಿದೆ. ಬಯೋಮೆಟ್ರಿಕ್ ಆಧಾರಿತವಾಗಿರುವ ಯೋಜನೆ ಇದು. ವ್ಯಕ್ತಿಯ ಎಲ್ಲಾ ಬೆರಳ ಗುರುತು, ಎರಡು ಕಣ್ಣಿನ ಗುರುತು (ಐರಿಸ್ ಪ್ರಿಂಟ್) ಮತ್ತು ಚಹರೆಯ ಫೋಟೋ, ಇವಿಷ್ಟೂ ವ್ಯಕ್ತಿಯ ದತ್ತಾಂಶವು ಆಧಾರ್ ಕಾರ್ಡ್​ನಲ್ಲಿ ದಾಖಲಾಗಿರುತ್ತದೆ. ಈ ಆಧಾರ್ ಕಾರ್ಡ್​ನಲ್ಲಿ 12 ಅಂಕಿಗಳ ವಿಶೇಷ ಸಂಖ್ಯೆ ಇರುತ್ತದೆ. ಆಧಾರ್ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಆಧಾರಿತ ಐಡಿ ವ್ಯವಸ್ಥೆ ಎಂಬ ದಾಖಲೆ ಪಡೆದಿದೆ. 2009ರಲ್ಲಿ ಭಾರತದಲ್ಲಿ ಆಧಾರ್ ಯೋಜನೆ ಆರಂಭವಾಯಿತು. ಯುಐಡಿಎಐ ಪ್ರಾಧಿಕಾರವನ್ನು ರಚಿಸಿ ಯೋಜನೆಗೆ ಚಾಲನೆ ಕೊಡಲಾಯಿತು. ಇನ್ಫೋಸಿಸ್​ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಈ ಯೋಜನೆಯ ರೂವಾರಿ. ವ್ಯಕ್ತಿಯ ಗುರುತಿಗಾಗಿ ಮೊದಲು ಬಳಕೆ ಆಗುತ್ತಿದ್ದ ಆಧಾರ್ ಈಗ ಬಹೂಪಯೋಗಿ ಆಗಿದೆ. ಸರ್ಕಾರದ ಯೋಜನೆಗಳ ಹಣ ನಿರ್ದಿಷ್ಟ ಫಲಾನುಭವಿಗಳನ್ನು ತಲುಪಿಸಲು ಆಧಾರ್ ಬಹಳ ಉಪಯುಕ್ತ ಎನಿಸಿದೆ. ಇದರಿಂದ ಹಣ ಪೋಲಾಗುವುದು ತಪ್ಪಿದೆ. ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವಲ್ಲವಾದರೂ ಅದು ಬಹಳ ಅಗತ್ಯವಾಗಿರುವ ದಾಖಲೆಯಾಗಿದೆ.

ಇನ್ನೂ ಹೆಚ್ಚು ಓದಿ

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಸೆಪ್ಟಂಬರ್ 14ರವರೆಗೆ ಗಡುವು ವಿಸ್ತರಣೆ; ಅಪ್​ಡೇಟ್ ಮಾಡುವ ಕ್ರಮ, ಬೇಕಾದ ದಾಖಲೆ ಮತ್ತಿತರ ವಿವರ ಇಲ್ಲಿದೆ

Aadhaar Card Free Update: ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಮಾಹಿತಿಯನ್ನು ಅಪ್​ಡೇಟ್ ಮಾಡಲು ಜೂನ್ 14ರವರೆಗೆ ಇದ್ದ ಗಡುವನ್ನು ಯುಐಡಿಎಐ ಸೆಪ್ಟಂಬರ್ 14ರವರೆಗೂ ವಿಸ್ತರಿಸಿದೆ. ಆ ಬಳಿಕವೂ ಆಧಾರ್ ಅಪ್​ಡೇಟ್ ಮಾಡಬಹುದಾದರೂ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ ಇತ್ಯಾದಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಹೊಸದಾಗಿ ಅಡ್ರೆಸ್ ಪ್ರೂಫ್ ಮತ್ತು ಐಡಿ ಪ್ರೂಫ್ ದಾಖಲೆಗಳನ್ನು ಅಪ್​ಲೋಡ್ ಮಾಡಬಹುದು.

ಗೃಹಜ್ಯೋತಿ ಸ್ಕೀಮ್: ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?

How to delink Aadhaar from Griha jyoti scheme: ಗೃಹಜ್ಯೋತಿ ಸ್ಕೀಮ್ ರಾಜ್ಯಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ಬಹುತೇಕ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ. ಇನ್ನೂರು ಯುನಿಟ್​ಗಳೊಳಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತವಾಗಿ ವಿದ್ಯುತ್ ಒದಗಿಸುವ ಈ ಯೋಜನೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗುತ್ತದೆ. ಒಂದು ಕಡೆ ಲಿಂಕ್ ಆಗಿರುವ ಆಧಾರ್ ಅನ್ನು ಇನ್ನೊಂದು ಕನೆಕ್ಷನ್​ಗೆ ಲಿಂಕ್ ಮಾಡಲು ಆಗುವುದಿಲ್ಲ. ಮನೆ ಬದಲಾಯಿಸುವ ಬಾಡಿಗೆದಾರರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಸರ್ಕಾರ ಇದನ್ನು ಪರಿಗಣಿಸಿ, ಬಿದ್ಯುತ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವ ಅವಕಾಶ ಕೊಟ್ಟಿದೆ.

Rules Changing From June 1: ಜೂನ್​ನಲ್ಲಿ ಆರ್​ಟಿಒದಿಂದ ಹಿಡಿದು ಆಧಾರ್​ವರೆಗೆ ಈ ಪ್ರಮುಖ ಬದಲಾವಣೆಗಳಿವೆ, ಗಮನಿಸಿ

June 2024 financial rule changes: ನಮ್ಮ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರುವಂತಹ ಕೆಲ ಪ್ರಮುಖ ಘಟನೆಗಳು, ನಿಯಮಗಳು ಜೂನ್ ತಿಂಗಳಲ್ಲಿ ಇವೆ. ಜೂನ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್​ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್​ಡೇಟ್ ಮಾಡಲು ಜೂನ್ 14ರವರೆಗೆ ಅವಕಾಶ ಇದೆ. ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ ಎಂಟು ದಿನ ಇದೆ. ಪೂರ್ಣ ವಿವರ ಈ ಸುದ್ದಿಯಲ್ಲಿದೆ ಓದಿ....

ಪ್ಯಾನ್ ಕಾರ್ಡ್​ಗೆ ಆಧಾರ್ ಲಿಂಕ್; ಮೇ 31ಕ್ಕೆ ಡೆಡ್​ಲೈನ್; ಮೀರಿದರೆ ಕಷ್ಟಕಷ್ಟ; ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಸಂದೇಶ

Effects of non-linking of PAN-Aadhaar by May 31st: ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಮೇ 31ಕ್ಕೆ ಡೆಡ್​ಲೈನ್ ಇದೆ. ಆಧಾರ್ ಜೊತೆ ಜೋಡಣೆ ಆಗದ ಪ್ಯಾನ್ ನಂಬರ್ ನಿಷ್ಕ್ರಿಯವಾಗಿರುತ್ತದೆ. ಇಂಥ ಇನಾಪರೇಟಿವ್ ಪ್ಯಾನ್​ನ ನಂಬರ್ ಅನ್ನು ಬಳಸಿದರೂ ಒಂದೇ ಬಳಸದಿದ್ದರೂ ಒಂದೇ. ಪ್ಯಾನ್ ನಂಬರ್ ಇಲ್ಲದೇ ನೀವು ಆದಾಯ ಪಡೆಯುತ್ತಿದ್ದಲ್ಲಿ ಅದಕ್ಕೆ ಶೇ. 20ರಷ್ಟು ಟಿಡಿಎಸ್ ತೆರಿಗೆ ಕಡಿತವಾಗುತ್ತದೆ.

ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯವಾಗುತ್ತಾ? ಯುಐಡಿಎಐ ಕೊಟ್ಟ ಮಾಹಿತಿ ಇದು

Aadhaar card not updated for 10 years: ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್​ಗಳು ಜೂನ್ 14 ರ ಬಳಿಕ ನಿಷ್ಕ್ರಿಯಗೊಳ್ಳಲಿವೆ ಎನ್ನುವಂತಹ ವದಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಯುಐಡಿಎಐ ಇದು ಸುಳ್ಳು ಸುದ್ದಿ ಎಂದು ಹೇಳಿ ಸ್ಪಷ್ಟಪಡಿಸಿದೆ. ಜೂನ್ 14ರ ಬಳಿಕ ಆನ್ಲೈನ್​ನಲ್ಲಿ ಆಧಾರ್ ಕಾರ್ಡ್ ವಿವರವನ್ನು ಉಚಿತವಾಗಿ ಅಪ್​ಡೇಟ್ ಮಾಡಲು ಆಗುವುದಿಲ್ಲ. ಅದನ್ನೇ ತಿರುಚಿ ಸುಳ್ಳು ಹಬ್ಬಿಸಲಾಗುತ್ತಿದೆ.

ಆಧಾರ್ ದುರ್ಬಳಕೆ; ಕಾದಿದೆ ಕಠಿಣ ಶಿಕ್ಷೆ; ಯಾವ್ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಇಲ್ಲಿದೆ ಪಟ್ಟಿ

Punishment for various Aadhaar related offences: ಆಧಾರ್ ಕಾರ್ಡ್ ದುರ್ಬಳಕೆ ನಿಯಂತ್ರಿಸಲು ಹಲವು ಕಾನೂನುಗಳಿವೆ. ಆಧಾರ್ ಸಂಬಂಧಿಸಿದ ಬೇರೆ ಬೇರೆ ಅಪರಾಧಗಳಿಗೆ ಬೇರೆ ಶಿಕ್ಷೆಗಳನ್ನು ನಿಗದಿ ಮಾಡಲಾಗಿದೆ. ಬಯೊಮೆಟ್ರಿಕ್ ಇತ್ಯಾದಿ ವ್ಯಕ್ತಿಯ ಆಧಾರ್ ಮಾಹಿತಿಯನ್ನು ದುರ್ಬಳಕೆ ಮಾಡಿದರೆ ಮೂರು ವರ್ಷದವರೆಗೂ ಜೈಲುಶಿಕ್ಷೆ ಇರುತ್ತದೆ. ಆಧಾರ್ ಎನ್ರೋಲ್ಮೆಂಟ್ ಮಾಡಿಕೊಳ್ಳುವ ಏಜೆನ್ಸಿಗಳಿಂದ ದುರ್ಬಳಕೆ ಆದರೆ ಕಠಿಣ ಕಾನೂನು ಇರುತ್ತದೆ.

ನಿಮಗೆ ಆಧಾರ್ ನಂಬರ್ ಮರೆತೇಹೋಯ್ತಾ? ತುರ್ತಾಗಿ ಮಾಹಿತಿ ಬೇಕೆಂದರೆ ಹೀಗೆ ಮಾಡಿ

Know How to retrieve lost Aadhaar number in online: ಆಧಾರ್ ನಂಬರ್ ಮರೆತುಹೋಗಿದ್ದರೆ ಅದನ್ನು ಪಡೆಯುವುದು ಕಷ್ಟವೇನಲ್ಲ. ಆನ್​ಲೈನ್​ನಲ್ಲೇ ಸುಲಭವಾಗಿ ಪತ್ತೆ ಮಾಡಬಹುದು. ಅದಕ್ಕೆ ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಆಧಾರ್​ನಲ್ಲಿರುವ ನಿಮ್ಮ ಪೂರ್ಣ ಹೆಸರು ಗೊತ್ತಿದ್ದರೆ ಸಾಕು. ಒಂದು ವೇಳೆ ಮೊಬೈಲ್ ನಂಬರ್ ಕೂಡ ಇಲ್ಲದಿದ್ದಲ್ಲಿ ಆಗಲೂ ಕೂಡ ಆಧಾರ್ ಸಂಖ್ಯೆ ಪತ್ತೆ ಮಾಡುವ ಅವಕಾಶಗಳುಂಟು. ಈ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

ಏಪ್ರಿಲ್ 1ರಿಂದ ಆದಾಯ ತೆರಿಗೆ ಹಾಗೂ ಹಣಕಾಸು ನಿಯಮಗಳಲ್ಲಿ ಈ ಪ್ರಮುಖ ಬದಲಾವಣೆಗಳಿವೆ, ಗಮನಿಸಿ

Financial Rules Change from 2024 April 1st: 2024-25ರ ಹಣಕಾಸು ವರ್ಷ ಏಪ್ರಿಲ್ 1ರಿಂದ ಚಾಲನೆಗೆ ಬರಲಿದೆ. ಅಂತೆಯೇ ಕೆಲ ಹೊಸ ಹಣಕಾಸು ನಿಯಮಗಳೂ ಬರಲಿವೆ. ಇಪಿಎಫ್ ಸದಸ್ಯರು ಕೆಲಸ ಬದಲಾಯಿಸಿದಾಗ ಅವರ ಪಿಎಫ್ ಹಣವೂ ಹೊಸ ಕಂಪನಿಯ ಖಾತೆಗೆ ವರ್ಗಾವಣೆ ಆಗುತ್ತದೆ. ನ್ಯಾಷನಲ್ ಪೆನ್ಷನ್ ಸ್ಕೀಮ್​ನ ಖಾತೆಗೆ ಯೂಸರ್ ಐಡಿ ಪಾಸ್ವರ್ಡ್ ಜೊತೆಗೆ ಆಧಾರ್ ಅಥೆಂಟಿಕೇಶನ್ ಕೂಡ ಪಡೆದು ಲಾಗಿನ್ ಆಗಬೇಕಾಗುತ್ತದೆ. ಐಟಿ ರಿಟರ್ನ್ ಫೈಲ್ ಮಾಡುವಾಗ ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರುತ್ತದೆ.

Tech Tips: ನೀಲಿ ಆಧಾರ್ ಕಾರ್ಡ್ ಎಂದರೇನು?, ಇದನ್ನು ಯಾರು ಪಡೆಯಬಹುದು?

What is Blue Aadhaar Card: ನೀಲಿ ಆಧಾರ್ ಕಾರ್ಡ್ ಅಥವಾ ಬಾಲ್ ಆಧಾರ್ ಕಾರ್ಡ್ ಅನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. ಅಂದರೆ ಎಲ್ಲರೂ ನೀಲಿ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ಮಗುವಿನ ಪೋಷಕರು ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್ ಮೂಲಕ ನವಜಾತ ಶಿಶುವಿಗೆ ಬಾಲ್ ಆಧಾರ್‌ಗೆ ಅರ್ಜಿ ಸಲ್ಲಿಸಬಹುದು.

Aadhaar Update: ಆಧಾರ್ ಕಾರ್ಡ್​ಗೆ ಮೊಬೈಲ್ ಲಿಂಕ್ ಮಾಡುವುದು; ನಂಬರ್ ಬದಲಿಸುವುದು ಹೇಗೆ? ಇಲ್ಲಿದೆ ಕ್ರಮಗಳು

How to update mobile number to Aadhaar Card: ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದ್ದರೆ ಸಾಕಷ್ಟು ಕಾರ್ಯಗಳಿಗೆ ಉಪಯೋಗವಾಗುತ್ತದೆ. ಆಧಾರ್ ಎನ್ರೋಲ್ಮೆಂಟ್ ಸೆಂಟರ್​ಗೆ ಹೋಗಿ ಅಲ್ಲಿ ಬಯೋಮೆಟ್ರಿಕ್ ದತ್ತಾಂಶ ನೀಡಿ ನಿಮ್ಮ ಆಧಾರ್​ಗೆ ಮೊಬೈಲ್ ನಂಬರ್ ಜೋಡಿಸಬಹುದು. ಇದೇ ಆಧಾರ್ ಸೆಂಟರ್​ನಲ್ಲಿ ಆಧಾರ್​ಗೆ ಜೋಡಿಸಿದ್ದ ಮೊಬೈಲ್ ನಂಬರ್ ಅನ್ನೂ ಬದಲಿಸಬಹುದು. ಅದಕ್ಕೆ 50 ರೂ ಶುಲ್ಕ ಇರುತ್ತದೆ.

ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!