AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar

Aadhaar

ಆಧಾರ್ ಎಂಬುದು ಭಾರತ ಸರ್ಕಾರ ರೂಪಿಸಿರುವ ನಾಗರಿಕರ ಗುರುತಿನ ವ್ಯವಸ್ಥೆಯಾಗಿದೆ. ಬಯೋಮೆಟ್ರಿಕ್ ಆಧಾರಿತವಾಗಿರುವ ಯೋಜನೆ ಇದು. ವ್ಯಕ್ತಿಯ ಎಲ್ಲಾ ಬೆರಳ ಗುರುತು, ಎರಡು ಕಣ್ಣಿನ ಗುರುತು (ಐರಿಸ್ ಪ್ರಿಂಟ್) ಮತ್ತು ಚಹರೆಯ ಫೋಟೋ, ಇವಿಷ್ಟೂ ವ್ಯಕ್ತಿಯ ದತ್ತಾಂಶವು ಆಧಾರ್ ಕಾರ್ಡ್​ನಲ್ಲಿ ದಾಖಲಾಗಿರುತ್ತದೆ. ಈ ಆಧಾರ್ ಕಾರ್ಡ್​ನಲ್ಲಿ 12 ಅಂಕಿಗಳ ವಿಶೇಷ ಸಂಖ್ಯೆ ಇರುತ್ತದೆ. ಆಧಾರ್ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಆಧಾರಿತ ಐಡಿ ವ್ಯವಸ್ಥೆ ಎಂಬ ದಾಖಲೆ ಪಡೆದಿದೆ. 2009ರಲ್ಲಿ ಭಾರತದಲ್ಲಿ ಆಧಾರ್ ಯೋಜನೆ ಆರಂಭವಾಯಿತು. ಯುಐಡಿಎಐ ಪ್ರಾಧಿಕಾರವನ್ನು ರಚಿಸಿ ಯೋಜನೆಗೆ ಚಾಲನೆ ಕೊಡಲಾಯಿತು. ಇನ್ಫೋಸಿಸ್​ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಈ ಯೋಜನೆಯ ರೂವಾರಿ. ವ್ಯಕ್ತಿಯ ಗುರುತಿಗಾಗಿ ಮೊದಲು ಬಳಕೆ ಆಗುತ್ತಿದ್ದ ಆಧಾರ್ ಈಗ ಬಹೂಪಯೋಗಿ ಆಗಿದೆ. ಸರ್ಕಾರದ ಯೋಜನೆಗಳ ಹಣ ನಿರ್ದಿಷ್ಟ ಫಲಾನುಭವಿಗಳನ್ನು ತಲುಪಿಸಲು ಆಧಾರ್ ಬಹಳ ಉಪಯುಕ್ತ ಎನಿಸಿದೆ. ಇದರಿಂದ ಹಣ ಪೋಲಾಗುವುದು ತಪ್ಪಿದೆ. ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವಲ್ಲವಾದರೂ ಅದು ಬಹಳ ಅಗತ್ಯವಾಗಿರುವ ದಾಖಲೆಯಾಗಿದೆ.

ಇನ್ನೂ ಹೆಚ್ಚು ಓದಿ

‘ಆಧಾರ್ ಪೌರತ್ವದ ದಾಖಲೆಯಲ್ಲ’; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಬೆಂಬಲ

ಆಧಾರ್ ಅನ್ನು ಪೌರತ್ವದ ನಿರ್ಣಾಯಕ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಭಾರತದ ಚುನಾವಣಾ ಆಯೋಗದ (ECI) ನಿಲುವನ್ನು ಸುಪ್ರೀಂ ಕೋರ್ಟ್ ಇಂದು ಅನುಮೋದಿಸಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಅನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ

Aadhaar and PAN card, steps to update details online: ಬಹಳ ಮಹತ್ವದ ದಾಖಲೆ ಎನಿಸಿರುವ ಆಧಾರ್ ಕಾರ್​ಡ್ ಮತ್ತು ಪ್ಯಾನ್ ಕಾರ್ಡ್​ಗಳಲ್ಲಿರುವ ಮಾಹಿತಿ ಸರಿಹೊಂದಿಕೆಯಾಗಿರುವುದು ಮುಖ್ಯ. ನಿಮ್ಮ ಹೆಸರು, ತಂದೆಯ ಹೆಸರು, ಜನ್ಮದಿನಾಂಕ ಇತ್ಯಾದಿ ವಿವರ ತಪ್ಪಿದ್ದರೆ ತಿದ್ದಲು ಅವಕಾಶ ಇದೆ. ಆನ್​ಲೈನ್​ನಲ್ಲಿ ಆಧಾರ್ ಮತ್ತು ಪ್ಯಾನ್ ದಾಖಲೆಗಳ ಮಾಹಿತಿಯನ್ನು ಪರಿಷ್ಕರಿಸುವ ವಿಧಾನ ಈ ಲೇಖನದಲ್ಲಿದೆ.

ನಿಮ್ಮ ಪ್ಯಾನ್ ನಂಬರ್ ಬಳಸಿ ಯಾರಾದರೂ ಸಾಲ ತೆಗೆದುಕೊಂಡಿದ್ದಾರಾ? ಪತ್ತೆ ಮಾಡುವುದು ಹೇಗೆ?

Ways to find misuse of your PAN: ಆಧಾರ್ ಮತ್ತು ಪ್ಯಾನ್ ಇವತ್ತು ಬಹಳ ಮುಖ್ಯವಾದ ದಾಖಲೆಗಳಾಗಿವೆ. ಇವುಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು. ನಿಮ್ಮ ಪ್ಯಾನ್ ನಂಬರ್​ನಲ್ಲಿ ವಂಚಕರು ಸಾಲ ಪಡೆಯುವ ಸಾಧ್ಯತೆ ಇಲ್ಲದಿಲ್ಲ. ಈ ರೀತಿ ದುರ್ಬಳಕೆ ಆಗಿದ್ದರೆ ಹೇಗೆ ಪತ್ತೆ ಮಾಡುವುದು? ಇದಕ್ಕೆ ಒಂದಷ್ಟು ಮಾರ್ಗೋಪಾಯಗಳಿವೆ. ಈ ಬಗ್ಗೆ ಲೇಖನದಲ್ಲಿ ಮಾಹಿತಿ ಇದೆ.

ಆಧಾರ್ ಮೊದಲ ಐಡೆಂಟಿಟಿಯಲ್ಲ, ಪೌರತ್ವಕ್ಕೆ ಸಾಕ್ಷಿಯಲ್ಲ; ಯುಐಡಿಎಐ ಸಿಇಒ ಮಹತ್ವದ ಹೇಳಿಕೆ

ಚುನಾವಣಾ ಆಯೋಗವು ಬಿಹಾರದಿಂದ ಪ್ರಾರಂಭಿಸಿ ಭಾರತದಾದ್ಯಂತ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆಯನ್ನು ನಡೆಸುತ್ತಿದೆ. ಮತದಾರರ ಪಟ್ಟಿಗಳನ್ನು ನವೀಕರಿಸಲು ಮತ್ತು ನಾಗರಿಕರಲ್ಲದವರನ್ನು ಹೊರಗಿಡಲು ಈ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ, ಭಾರತವು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಏಕೆ ಅವಕಾಶ ಮಾಡಿಕೊಟ್ಟಿತು? ಇದೀಗ ಯುಐಡಿಎಐ ಆಧಾರ್ ಕಾರ್ಡ್ ಭಾರತೀಯ ಪೌರತ್ವಕ್ಕೆ ಪುರಾವೆಯಲ್ಲ ಎಂದು ಹೇಳಿದೆ.

ಇ-ಆಧಾರ್ ಇದ್ರೆ ಸಾಕು, ಮನೆಯಲ್ಲೇ ಕೂತು ಎಲ್ಲಾ ಮಾಡಲು ಸಾಧ್ಯ; ಏನಂತಾರೆ ಯುಐಡಿಎಐ ಸಿಇಒ?

Aadhaar rules simplified: ಹೋಟೆಕ್ ಚೆಕ್ ಇನ್​ಗೆ ಹೋದಾಗ, ಅಥವಾ ಹೊಸ ಗ್ಯಾಸ್ ಕನೆಕ್ಷನ್ ಪಡೆಯುವಾಗ, ಅಥವಾ ಸಿಮ್ ಪಡೆಯುವಾಗ ನೀವು ಆಧಾರ್ ಫೋಟೋಕಾಪಿ ಕೊಡುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ ಆ್ಯಪ್ ಮೂಲಕ ನೀವು ಇ-ಆಧಾರ್ ದಾಖಲೆ ಒದಗಿಸಬಹುದು. ಕ್ಯುಆರ್ ಕೋಡ್ ಆಧಾರಿತ ಆ್ಯಪ್ ಅನ್ನು ಯುಐಎಡಿಐ ಅಭಿವೃದ್ಧಿಪಡಿಸಿದ್ದು ನವೆಂಬರ್​​ನಲ್ಲಿ ಅದು ಬಿಡುಗಡೆ ಆಗಬಹುದು.

RBI KYC rule: ಹೊಸ ಕೆವೈಸಿ ನಿಯಮಗಳು ಇಂದಿನಿಂದ; ಅನುಕೂಲಗಳೇನು, ನಿಮ್ಮ ಗಮನಕ್ಕಿರಲಿ

RBI simplifies KYC rules: ಗ್ರಾಹಕರು ಬ್ಯಾಂಕ್ ಖಾತೆ ಆರಂಭಿಸಲು ಸುಲಭವಾಗುವ ರೀತಿಯಲ್ಲಿ ಆರ್​​ಬಿಐ ಕೆಲ ಕೆವೈಸಿ ನಿಯಮಗಳನ್ನು ಬದಲಾವಣೆ ಮಾಡಿದೆ. ಆಧಾರ್ ಬಯೋಮೆಟ್ರಿಕ್ ಮುಖಾಂತರ ಕೆವೈಸಿ ಅಪ್​ಡೇಟ್ ಮಾಡುವುದು, ವಿಡಿಯೋ ಕಾಲ್ ಮೂಲಕ ಕೆವೈಸಿ ಅಪ್​ಡೇಟ್ ಮಾಡುವುದು, ಆಧಾರ್ ಒಟಿಪಿ ಮೂಲಕ ಇಕೆವೈಸಿ ನಡೆಸುವುದು ಇವೇ ಮುಂತಾದ ನಿಯಮ ಬದಲಾವಣೆಗಳನ್ನು ಆರ್​​ಬಿಐ ತಂದಿದೆ.

Financial Changes: ಇಪಿಎಫ್​​ಒ 3.0 ಸೇರಿದಂತೆ ಜೂನ್ ತಿಂಗಳಲ್ಲಿ ಹಣಕಾಸು ಪ್ರಭಾವಿಸುವ ಪ್ರಮುಖ ಬದಲಾವಣೆಗಳು

Important financial changes in June: ಜೂನ್ ತಿಂಗಳಲ್ಲಿ ಕೆಲ ಪ್ರಮುಖ ಹಣಕಾಸು ಬದಲಾವಣೆಗಳಿವೆ. ಇಪಿಎಫ್​​ಒದಿಂದ ಸುಧಾರಿತ ವ್ಯವಸ್ಥೆ ಜಾರಿಗೆ ಬರಲಿದೆ. ಆಧಾರ್ ಅನ್ನು ಆನ್​ಲೈನ್​​ನಲ್ಲಿ ಉಚಿತವಾಗಿ ಅಪ್​ಡೇಟ್ ಮಾಡುವ ಗಡುವು ಜೂನ್​​ನಲ್ಲಿ ಇದೆ. ಹಾಗೆಯೇ, ಟಿಡಿಎಸ್ ಸರ್ಟಿಫಿಕೇಟ್​​ಗಳು ನಿಮಗೆ ಇದೇ ಜೂನ್ 15ರೊಳಗೆ ಸಿಗಲಿದೆ.

Aadhaar biometric: ಐಡಿ ಬೇಕಿಲ್ಲ, ಫಿಂಗರ್ ಒತ್ತಂಗಿಲ್ಲ… ಆಧಾರ್ ಫೇಸ್ ಅಥೆಂಟಿಕೇಶನ್ ಪ್ರಯೋಗ ಯಶಸ್ವಿ

Aadhaar Face authentication system in NEET UG examination centre: ಭಾನುವಾರ ನವದೆಹಲಿಯಲ್ಲಿ ನಡೆದ ನೀಟ್ ಪರೀಕ್ಷೆ ವೇಳೆ ಕೆಲ ಎಕ್ಸಾಮಿನೇಶನ್ ಸೆಂಟರ್​​​ಗಳಲ್ಲಿ ಆಧಾರ್ ಫೇಸ್ ಅಥೆಂಟಿಕೇಶನ್ ಪ್ರಯೋಗ ಮಾಡಲಾಯಿತು. ವಿದ್ಯಾರ್ಥಿಗಳ ಮುಖದ ಚಹರೆಯನ್ನು ನಿಖರವಾಗಿ ಗುರುತಿಸಲಾಯಿತು. ಈ ಪ್ರಯೋಗ ಯಶಸ್ವಿಯಾಯಿತು ಎಂದೆನ್ನಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಈ ಸಿಸ್ಟಂ ಅನ್ನು ಅಳವಡಿಸುವ ಸಾಧ್ಯತೆ ಇದೆ.

ಈ ಪೋಸ್ಟ್ ಆಫೀಸ್ ಸ್ಕೀಮ್​​​ಗಳಿಗೆ ಆಧಾರ್ ಬಯೋಮೆಟ್ರಿಕ್; ಡೆಪಾಸಿಟ್ ಸ್ಲಿಪ್ ಬೇಕಾಗಿಲ್ಲ, ಪೂರ್ತಿ ಪೇಪರ್​​ಲೆಸ್ ಪ್ರಕ್ರಿಯೆ

Post Office scheme: ಮಂತ್ಲಿ ಇನ್ಕಮ್ ಸ್ಕೀಮ್, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಕೆಲ ಆಯ್ದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಅಕೌಂಟ್ ತೆರೆಯುವ ಪ್ರಕ್ರಿಯೆ ಸರಳಗೊಂಡಿದೆ. ಡೆಪಾಸಿಟ್ ಸ್ಲಿಪ್ ತುಂಬಿಸುವುದು ಇತ್ಯಾದಿ ಪೇಪರ್​ವರ್ಕ್ ನಿಂತು ಆನ್​​ಲೈನ್​​ನಲ್ಲಿ ಕೆಲಸಗಳಾಗುತ್ತವೆ. ಈಗ ಅಂಚೆ ಕಚೇರಿಗಳಲ್ಲಿ ಇ-ಕೆವೈಸಿ ಸೌಲಭ್ಯವನ್ನು ಒದಗಿಸಲಾಗಿದೆ.

Aadhaar: 2024-25ರಲ್ಲಿ ದಾಖಲೆಯ 2,707 ಕೋಟಿ ಆಧಾರ್ ದೃಢೀಕರಣ; ಯುಐಡಿಎಐಗೆ ಪ್ರಧಾನಿ ಪ್ರಶಸ್ತಿ

Aadhaar usage increases drastically: 2024-25ರಲ್ಲಿ ಭಾರತದಲ್ಲಿ ಆಧಾರ್ ಅಥೆಂಟಿಕೇಶನ್ ಸಂಖ್ಯೆ 2,707 ಕೋಟಿಗಿಂತಲೂ ಹೆಚ್ಚು. 2025ರ ಮಾರ್ಚ್ ತಿಂಗಳಲ್ಲಿ 247 ಆಧಾರ್ ವಹಿವಾಟುಗಳಾಗಿವೆ. ಮಾರ್ಚ್ ತಿಂಗಳಲ್ಲಿ 15 ಕೋಟಿಗೂ ಅಧಿಕ ಆಧಾರ್ ಫೇಸ್ ಅಥೆಂಟಿಕೇಶನ್ ನಡೆದಿದೆ. ಸಮರ್ಪಕವಾಗಿ ಫೇಸ್ ಅಥೆಂಟಿಕೇಶನ್ ರಚಿಸಿದ ಯುಐಡಿಎಐಗೆ ಪ್ರಧಾನಿ ಎಕ್ಸಲೆನ್ಸ್ ಅವಾರ್ಡ್ ಸಿಕ್ಕಿದೆ.

ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು
ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ