Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar

Aadhaar

ಆಧಾರ್ ಎಂಬುದು ಭಾರತ ಸರ್ಕಾರ ರೂಪಿಸಿರುವ ನಾಗರಿಕರ ಗುರುತಿನ ವ್ಯವಸ್ಥೆಯಾಗಿದೆ. ಬಯೋಮೆಟ್ರಿಕ್ ಆಧಾರಿತವಾಗಿರುವ ಯೋಜನೆ ಇದು. ವ್ಯಕ್ತಿಯ ಎಲ್ಲಾ ಬೆರಳ ಗುರುತು, ಎರಡು ಕಣ್ಣಿನ ಗುರುತು (ಐರಿಸ್ ಪ್ರಿಂಟ್) ಮತ್ತು ಚಹರೆಯ ಫೋಟೋ, ಇವಿಷ್ಟೂ ವ್ಯಕ್ತಿಯ ದತ್ತಾಂಶವು ಆಧಾರ್ ಕಾರ್ಡ್​ನಲ್ಲಿ ದಾಖಲಾಗಿರುತ್ತದೆ. ಈ ಆಧಾರ್ ಕಾರ್ಡ್​ನಲ್ಲಿ 12 ಅಂಕಿಗಳ ವಿಶೇಷ ಸಂಖ್ಯೆ ಇರುತ್ತದೆ. ಆಧಾರ್ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಆಧಾರಿತ ಐಡಿ ವ್ಯವಸ್ಥೆ ಎಂಬ ದಾಖಲೆ ಪಡೆದಿದೆ. 2009ರಲ್ಲಿ ಭಾರತದಲ್ಲಿ ಆಧಾರ್ ಯೋಜನೆ ಆರಂಭವಾಯಿತು. ಯುಐಡಿಎಐ ಪ್ರಾಧಿಕಾರವನ್ನು ರಚಿಸಿ ಯೋಜನೆಗೆ ಚಾಲನೆ ಕೊಡಲಾಯಿತು. ಇನ್ಫೋಸಿಸ್​ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಈ ಯೋಜನೆಯ ರೂವಾರಿ. ವ್ಯಕ್ತಿಯ ಗುರುತಿಗಾಗಿ ಮೊದಲು ಬಳಕೆ ಆಗುತ್ತಿದ್ದ ಆಧಾರ್ ಈಗ ಬಹೂಪಯೋಗಿ ಆಗಿದೆ. ಸರ್ಕಾರದ ಯೋಜನೆಗಳ ಹಣ ನಿರ್ದಿಷ್ಟ ಫಲಾನುಭವಿಗಳನ್ನು ತಲುಪಿಸಲು ಆಧಾರ್ ಬಹಳ ಉಪಯುಕ್ತ ಎನಿಸಿದೆ. ಇದರಿಂದ ಹಣ ಪೋಲಾಗುವುದು ತಪ್ಪಿದೆ. ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವಲ್ಲವಾದರೂ ಅದು ಬಹಳ ಅಗತ್ಯವಾಗಿರುವ ದಾಖಲೆಯಾಗಿದೆ.

ಇನ್ನೂ ಹೆಚ್ಚು ಓದಿ

ಡಿಪಿಡಿಪಿ ಕಾಯ್ದೆಯೊಂದಿಗೆ ತಾಳೆಯಾಗುವ ಹೊಸ ಆಧಾರ್ ಕಾನೂನು ತಯಾರಿಯಲ್ಲಿ ಸರ್ಕಾರ

Harmonising new Aadhaar law with DPDP act: ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಕಾಯ್ದೆಗೆ ತಾಳೆಯಾಗುವ ರೀತಿಯಲ್ಲಿ ಹೊಸ ಆಧಾರ್ ಕಾನೂನು ರೂಪಿಸಲಸು ಸರ್ಕಾರ ಮುಂದಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆಧಾರ್ ದತ್ತಾಂಶ ದುರುಪಯೋಗವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.

ಇನ್ಮುಂದೆ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ; ಕೇಂದ್ರ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

ಆಧಾರ್ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಈಗ ಕೇವಲ ಒಂದು ಟ್ಯಾಪ್ ಮೂಲಕ, ಬಳಕೆದಾರರು ಅಗತ್ಯ ಡೇಟಾವನ್ನು ಮಾತ್ರ ಹಂಚಿಕೊಳ್ಳಬಹುದು. ಈ ಮೂಲಕ ಅವರ ವೈಯಕ್ತಿಕ ಮಾಹಿತಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡಬಹುದು. ಆಧಾರ್ ಪರಿಶೀಲನೆಯು UPI ಪಾವತಿ ಮಾಡುವಷ್ಟು ಸರಳವಾಗುತ್ತಿದೆ. ಬಳಕೆದಾರರು ಈಗ ತಮ್ಮ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ಆಗಿಯೇ ಪರಿಶೀಲಿಸಬಹುದು ಮತ್ತು ಹಂಚಿಕೊಳ್ಳಬಹುದು.

AI Aadhaar card: AI ಯಿಂದ ನಕಲಿ ಆಧಾರ್ ಕಾರ್ಡ್‌ ತಯಾರಿಸಬಹುದು: ಡುಪ್ಲಿಕೇಟ್ ಅನ್ನು ಗುರುತಿಸುವುದು ಹೇಗೆ?

ಆಧಾರ್ ಎಂಬುದು 12-ಅಂಕಿಯ ವಿಶಿಷ್ಟ ಐಡಿಯಾಗಿದ್ದು, ಆತ ಮಗುವಾಗಿರಲಿ ಅಥವಾ ವಯಸ್ಕನಾಗಿರಲಿ ಇದನ್ನು ಭಾರತ ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೆ ನೀಡುತ್ತದೆ. ಆದರೆ, ಕೃತಕ ಬುದ್ಧಿಮತ್ತೆ (AI) ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುತ್ತದೆ ಎಂಬ ವಿಚಾರ ಬಹಿರಂಗವಾಗಿದೆ. ಇದು ಸೈಬರ್ ಸುರಕ್ಷತೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ.

ರೇಷನ್ ಕಾರ್ಡ್​​ಗೆ ಇ-ಕೆವೈಸಿ ಸಲ್ಲಿಸಲು ಮಾರ್ಚ್ 31 ಡೆಡ್​ಲೈನ್; ತಪ್ಪಿದರೆ ಕೈತಪ್ಪಬಹುದು ಸಬ್ಸಿಡಿ

2025 March 31st deadline to link Ration Card and Aadhaar: ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ರೇಷನ್​ ಕಾರ್ಡ್ದದಾರರು ಆಧಾರ್ ದಾಖಲೆಯ ಮೂಲಕ ಇ ಕೆವೈಸಿ ಮಾಡಬೇಕು. 2025ರ ಮಾರ್ಚ್ 26ರವರೆಗೆ ಕಾಲಾವಕಾಶ ಕೊಡಲಾಗಿದೆ. ಜನರು ತಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ಮೂಲಕ ಇಕೆವೈಸಿ ಸಲ್ಲಿಸಬಹುದು.

ಭಾರತದ ಆಧಾರ್ ಪ್ರಾಜೆಕ್ಟ್ ಟ್ರೋಲ್ ಮಾಡಿದ ಹಾಟ್​ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ

Sabeer Bhatia with Prakhar ke pravachan: ಭಾರತದ ತಂತ್ರಜ್ಞಾನ ಸಾಧನೆಯ ಹೆಗ್ಗುರುತುಗಳೆನಿಸಿದ ಆಧಾರ್ ಮತ್ತು ಯುಪಿಐ ಸಿಸ್ಟಂಗಳನ್ನು ಉದ್ಯಮಿ ಸಬೀರ್ ಭಾಟಿಯಾ ಟ್ರೋಲ್ ಮಾಡಿದ್ದಾರೆ. 1.3 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿತವಾದ ಆಧಾರ್ ಸಿಸ್ಟಂ ಅನ್ನು ಕೇವಲ 20 ಮಿಲಿಯನ್ ಡಾಲರ್​ನಲ್ಲಿ ಕಟ್ಟಬಹುದಿತ್ತು ಎಂಬುದು ಅವರ ಅನಿಸಿಕೆ. ಯುಪಿಐ ಎಂಬುದು ಅಮೆರಿಕದ ವೆನ್​ಮೋ ಪೇಮೆಂಟ್ ಸಿಸ್ಟಂಗಿಂತ ದೊಡ್ಡದೇನಲ್ಲ ಎಂದಿದ್ದಾರೆ ಹಾಟ್​ಮೇಲ್ ಸಹ-ಸಂಸ್ಥಾಪಕರು.

ಬಿಎಂಟಿಸಿ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಂಡಕ್ಟರ್ ಜತೆಗಿನ ಕಿರಿಕ್​ಗೆ ಬೀಳಲಿದೆ ಬ್ರೇಕ್

ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಸಾಕಷ್ಟು ಕಿರಿಕ್ ಆಗುತ್ತಿತ್ತು. ಅದಕ್ಕೆ ಕಾರಣ, ಆಧಾರ್ ಕಾರ್ಡ್​​ನಲ್ಲಿ ಬೇರೆ ಭಾಷೆಯಲ್ಲಿ ವಿಳಾಸ ಇದೆ ಎಂಬುದು. ಅದಕ್ಕೀಗ ಬಿಎಂಟಿಸಿ ಬ್ರೇಕ್ ಹಾಕಿದ್ದು, ಆಧಾರ್ ಕಾರ್ಡ್ ಯಾವ ಭಾಷೆಯಲ್ಲಿದ್ದರೂ ಪರವಾಗಿಲ್ಲ, ವಿಳಾಸ ಕರ್ನಾಟಕದಾಗಿದ್ದರೆ ಸಾಕು ಎಂದು ಆದೇಶ ಹೊರಡಿಸಿದೆ.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಡಿಸೆಂಬರ್​ನಲ್ಲಿ ಗಡುವು; ಅದಾದ ಬಳಿಕ ಮುಂದೆ ಹೇಗೆ? ಇಲ್ಲಿದೆ ವಿವರ

Free Aadhaar update period: ಹತ್ತು ವರ್ಷಗಳಿಗೂ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಒಮ್ಮೆಯಾದರೂ ಅಪ್​ಡೇಟ್ ಮಾಡಬೇಕು. ಇದು ಆಧಾರ್​ನಲ್ಲಿರುವ ಮಾಹಿತಿ ಅಪ್​ಟುಡೇಟ್ ಆಗಿರಲು ಯುಐಡಿಎಐ ತೆಗೆದುಕೊಂಡಿರುವ ಕ್ರಮ. ಆನ್​ಲೈನ್​ನಲ್ಲಿ ಆಧಾರ್​ನ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡಬಹುದು. ಉಚಿತವಾಗಿ ಮಾಡಲು ಡಿಸೆಂಬರ್ 14ರವರೆಗೆ ಕಾಲಾವಕಾಶ ಇದೆ.

ಆಧಾರ್ ಕಾರ್ಡ್ ಇದ್ರೆ ಸಾಕು, ವೃದ್ಧರಿಗೆ 15 ನಿಮಿಷದಲ್ಲಿ ಆಯುಷ್ಮಾನ್ ಕಾರ್ಡ್ ಸುಲಭವಾಗಿ ಲಭ್ಯ

Ayushman Bharat insurance scheme: 70 ವರ್ಷ ವಯಸ್ಸು ದಾಟಿದ ವಯೋವೃದ್ಧರಿಗೆ ನೀಡಲಾಗುವ ಆಯುಷ್ಮಾನ್ ಭಾರತ್ ವಯ ವಂದನಾ ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದು. ಆಧಾರ್ ಕಾರ್ಡ್, ಮೊಬೈಲ್ ನಂಬರ್, ಇಮೇಲ್ ಇದ್ದರೆ ಸುಲಭವಾಗಿ ಕೇವಲ 15 ನಿಮಿಷದಲ್ಲಿ ಆಯುಷ್ಮಾನ್ ಕಾರ್ಡ್ ಅನ್ನು ಡೌನ್​ಲೋಡ್ ಮಾಡಬಹುದು. ಹಿರಿಯ ನಾಗರಿಕರಿಗೆ ಈ ಸ್ಕೀಮ್ ಅಡಿಯಲ್ಲಿ 5 ಲಕ್ಷ ರೂ ವಿಮಾ ಕವರೇಜ್ ಇರುತ್ತದೆ.

ಆಧಾರ್ ಕಾರ್ಡ್ ಉಚಿತವಾಗಿ ಅಪ್​ಡೇಟ್ ಮಾಡುವ ಡೆಡ್​ಲೈನ್, ಸೆ. 14ರಿಂದ ಡಿ. 14ಕ್ಕೆ ವಿಸ್ತರಣೆ

Aadhaar card free document update: ಹತ್ತು ವರ್ಷಗಳಿಂದ ಯಾವುದೇ ಅಪ್​ಡೇಟ್ ಮಾಡದೇ ಇರುವ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್​ನ ಇತ್ತೀಚಿನ ದಾಖಲೆಗಳಿದ್ದರೆ ಅದನ್ನು ಆಧಾರ್ ಡಾಟಾಬೇಸ್​ಗೆ ಅಪ್​ಲೋಡ್ ಮಾಡಬೇಕು. ಆನ್​ಲೈನ್​ನಲ್ಲಿ ಉಚಿತವಾಗಿ ಈ ಕೆಲಸ ಮಾಡಬಹುದು. ಇದಕ್ಕೆ ಇರುವ ಗಡುವನ್ನು ಸೆ. 14ರಿಂದ ಡಿ. 14ಕ್ಕೆ ವಿಸ್ತರಿಸಲಾಗಿದೆ.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ

Free Aadhaar update online till Sep 14: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಗುರುತು ಮತ್ತು ವಿಳಾಸ ಸಂಬಂಧಿತ ದಾಖಲೆಗಳನ್ನು ಅಪ್​ಡೇಟ್ ಮಾಡಬಹುದು. ಹೆಸರು, ಲಿಂಗ, ಜನ್ಮದಿನಾಂಕ ಇತ್ಯಾದಿ ಬದಲಾವಣೆ ಕೂಡ ಮಾಡಬಹುದು. ಆದರೆ, ಆನ್​ಲೈನ್​ನಲ್ಲಿ ಸೆ. 14ರವರೆಗೆ ಉಚಿತವಾಗಿ ಡಾಕ್ಯುಮೆಂಟ್ ಅಪ್​ಡೇಟ್ ಮಾಡಬಹುದು. ಹೇಗೆ ಮಾಡಬಹುದು ಎನ್ನುವ ಹಂತ ಹಂತದ ಕ್ರಮಗಳ ವಿವರ ಇಲ್ಲಿದೆ...

ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ