AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಆಧಾರ್ ಆ್ಯಪ್​ಗೂ ಹಿಂದಿನ ಎಂ ಆಧಾರ್ ಆ್ಯಪ್​ಗೂ ಏನು ವ್ಯತ್ಯಾಸ? ಇಲ್ಲಿದೆ ಡೀಟೇಲ್ಸ್

Aadhaar app and mAadhaar App: ಯುಐಡಿಎಐ ಇದೀಗ ಹೊಸ ಆಧಾರ್ ಆ್ಯಪ್ ಅನ್ನು ಹೊರತಂದಿದೆ. ಈಗಾಗಲೇ ಎಂಆಧಾರ್ ಎನ್ನುವ ಆ್ಯಪ್ ಕೂಡ ಇದೆ. ಆದರೆ, ಈ ಎರಡೂ ಆ್ಯಪ್​ಗಳು ಬೇರೆ ಬೇರೆ ಉದ್ದೇಶ ಮತ್ತು ಫೀಚರ್​ಗಳನ್ನು ಹೊಂದಿವೆ. ಹೊಸ ಆಧಾರ್ ಆ್ಯಪ್​ನಲ್ಲಿ ಒಂದಕ್ಕಿಂತ ಹೆಚ್ಚು ಆಧಾರ್​ಗಳನ್ನು ನಿರ್ವಹಿಸಬಹುದು. ಆಧಾರ್ ಪ್ರೈವಸಿ ಡಾಟಾ ನಿಯಂತ್ರಣ ಇತ್ಯಾದಿ ಇರುತ್ತವೆ.

ಹೊಸ ಆಧಾರ್ ಆ್ಯಪ್​ಗೂ ಹಿಂದಿನ ಎಂ ಆಧಾರ್ ಆ್ಯಪ್​ಗೂ ಏನು ವ್ಯತ್ಯಾಸ? ಇಲ್ಲಿದೆ ಡೀಟೇಲ್ಸ್
ಆಧಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2025 | 3:26 PM

Share

ಯುಐಡಿಎಐ ಸಂಸ್ಥೆ ಹೊಸ ಆಧಾರ್ ಆ್ಯಪ್ (Aadhaar) ಅನ್ನು ಕೆಲ ದಿನಗಳ ಹಿಂದೆ (2025ರ ನ. 10) ಬಿಡುಗಡೆ ಮಾಡಿದೆ. ಗೂಗಲ್​ನ ಪ್ಲೇಸ್ಟೋರ್ ಹಾಗು ಆ್ಯಪಲ್​ನ ಆ್ಯಪ್ ಸ್ಟೋರ್​ನಲ್ಲಿ ಆಧಾರ್ ಆ್ಯಪ್ ಲಭ್ಯ ಇದ್ದು, ಡೌನ್​ಲೋಡ್ ಮಾಡಿಕೊಳ್ಳಬಹುದು. ಗುರುತು ದಾಖಲೆ ಪರಿಶೀಲನೆಯ ಅವಶ್ಯಕತೆ ಇದ್ದಾಗ ಈ ಆ್ಯಪ್ ಅನ್ನು ಬಳಸಬಹುದು. ಇದೂ ಸೇರಿದಂತೆ ಇನ್ನೂ ಹಲವು ಕಾರ್ಯಗಳಿಗೆ ಹೊಸ ಆಧಾರ್ ಆ್ಯಪ್ ಪ್ರಯೋಜನಕಾರಿ ಎನಿಸಬಲ್ಲುದು. ಈಗಾಗಲೇ ಎಂಆಧಾರ್ (mAadhaar – My Aadhaar) ಎನ್ನುವ ಆ್ಯಪ್ ಕೂಡ ಅಸ್ತಿತ್ವದಲ್ಲಿದ್ದು, ಈ ಹೊಸ ಆ್ಯಪ್ ಯಾಕೆ ಎಂದನಿಸಬಹುದು. ಈ ಎರಡೂ ಆ್ಯಪ್​ಗಳ ಮಧ್ಯೆ ವ್ಯತ್ಯಾಸಗಳಿವೆ. ಸದ್ಯಕ್ಕೆ ಎರಡೂ ಕೂಡ ಪ್ರತ್ಯೇಕವಾಗಿ ಲಭ್ಯ ಇವೆ. ಈ ಎರಡೂ ಆ್ಯಪ್​ಗಳ ನಡುವಿನ ವ್ಯತ್ಯಾಸ ಗುರುತಿಸುವ ಮೊದಲು ಹೊಸ ಆಧಾರ್ ಆ್ಯಪ್​ನ ಕೆಲ ಮುಖ್ಯ ಫೀಚರ್​ಗಳೇನು ಎನ್ನುವ ವಿವರ ಈ ಕೆಳಕಂಡಂತಿವೆ:

ಹೊಸ ಆಧಾರ್ ಆ್ಯಪ್​ನ ಫೀಚರ್​ಗಳು

  • ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್​ಗಳನ್ನು ಒಂದೇ ಆ್ಯಪ್​ನಲ್ಲಿ ಇಟ್ಟುಕೊಂಡು ನಿರ್ವಹಿಸಬಹುದು.
  • ಆಧಾರ್ ಡಾಟಾ ಲಾಕ್ ಮಾಡಲು ಮತ್ತು ಅನ್​ಲಾಕ್ ಮಾಡಲು ಬಯೋಮೆಟ್ರಿಕ್ ಅಥೆಂಟಿಕೇಶನ್​ನ ನಿಯಂತ್ರಣ ಹೊಸ ಆಧಾರ್ ಆ್ಯಪ್​ನಲ್ಲಿ ಇರುತ್ತದೆ. ಅಂದರೆ, ಆಧಾರ್ ದೃಢೀಕರಣಕ್ಕಾಗಿ ಆಧಾರ್ ಅನ್ನು ಅನ್​ಲಾಕ್ ಮಾಡಿದ ನಂತರ ಮತ್ತೆ ಅದನ್ನು ಲಾಕ್ ಮಾಡಬಹುದು.
  • ಆಧಾರ್ ಡಾಟಾದಲ್ಲಿ ಯಾವುದನ್ನು ತೋರಿಸಬೇಕು, ತೋರಿಸಬಾರದು ಎನ್ನುವ ನಿಯಂತ್ರಣ ನಿಮ್ಮ ಕೈಲಿರುತ್ತದೆ. ಅಂದರೆ, ಆಧಾರ್​ನಲ್ಲಿ ನಿಮ್ಮ ಹೆಸರು ಮತ್ತು ಫೋಟೋ ಮಾತ್ರ ಕಾಣಬೇಕು. ವಿಳಾಸ, ಜನ್ಮದಿನಾಂಕ ವಿವರ ಕಾಣಬಾರದು ಎಂದಿದ್ದರೆ ಅದರ ನಿಯಂತ್ರಣ ನಿಮಗಿರುತ್ತದೆ.
  • ಬ್ಯಾಂಕು, ಸರ್ಕಾರಿ ಕಚೇರಿ, ಸರ್ವಿಸ್ ಸೆಂಟರ್ ಇತ್ಯಾದಿ ಕಡೆಗಳಲ್ಲಿ ಆಧಾರ್ ವೆರಿಫಿಕೇಶನ್​ಗೆ ಆಧಾರ್ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಸೌಲಭ್ಯವನ್ನು ಈ ಆ್ಯಪ್ ಒದಗಿಸುತ್ತದೆ.
  • ಇಂಟರ್ನೆಟ್ ಇಲ್ಲದಿದ್ದರೂ ಆಧಾರ್ ವಿವರವನ್ನು ವೀಕ್ಷಿಸಲು ಅವಕಾಶ ಇರುತ್ತದೆ.
  • ಆಧಾರ್ ಅನ್ನು ಯಾವಾಗ್ಯಾವಾಗ ಮತ್ತು ಯಾವ ಉದ್ದೇಶಕ್ಕೆ ಬಳಸಲಾಯಿತು ಎನ್ನುವುದನ್ನು ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ: ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್​ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ

ಹೊಸ ಆಧಾರ್ ಆ್ಯಪ್ ಸೆಟಪ್ ಪ್ರಕ್ರಿಯೆ

  • ಫೋನ್​ಗೆ ಆಧಾರ್ ಆ್ಯಪ್ ಡೌನ್​ಲೋಡ್ ಮಾಡಿ, ಇನ್ಸ್​ಟಾಲ್ ಮಾಡಿಕೊಂಡ ಬಳಿಕ ಅದನ್ನು ತೆರೆಯಿರಿ.
  • ಆಧಾರ್ ನಂಬರ್ ಅನ್ನು ನಮೂದಿಸಿ
  • ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಮೂಲಕ ವೆರಿಫೈ ಮಾಡಿ
  • ಫೇಸ್ ಅಥೆಂಟಿಕೇಶನ್ ಮಾಡಬೇಕು.
  • ನಂತರ, ನಿಮ್ಮ ಆಧಾರ್ ಪ್ರೊಫೈಲ್ ರಕ್ಷಣೆಗೆ 5 ಅಂಕಿಗಳ ಸೆಕ್ಯೂರಿಟಿ ಪಿನ್ ರಚಿಸಬೇಕು.

ಹಳೆಯ ಎಂ ಆಧಾರ್ ಆ್ಯಪ್ ಬಳಕೆ ಯಾತಕ್ಕೆ?

  • ಎಂ ಆಧಾರ್ ಆ್ಯಪ್​ನಲ್ಲಿ ನೀವು ಆಧಾರ್ ದಾಖಲೆಯನ್ನು ಪಿಡಿಎಫ್ ಫೈಲ್​ನಲ್ಲಿ ಪಡೆದು ಸಲ್ಲಿಸಬಹುದು.
  • ಭೌತಿಕವಾದ ಪಿವಿಸಿ ಆಧಾರ್ ಕಾರ್ಡ್​ಗಳನ್ನು ಪೋಸ್ಟ್ ಮೂಲಕ ತರಿಸಿಕೊಳ್ಳಬಹುದು.
  • ಆನ್​ಲೈನ್ ಟ್ರಾನ್ಸಾಕ್ಷನ್ ವೇಳೆ, 16 ಅಂಕಿಗಳ ತಾತ್ಕಾಲಿಕ ಐಡಿ ಸೃಷ್ಟಿಸಿ ನೀಡಬಹುದು. ಇದರಿಂದ ನಿಜವಾದ ಆಧಾರ್ ನಂಬರ್ ಅನ್ನು ಮರೆಮಾಚಬಹುದು.
  • ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ಪರಿಶೀಲಿಸಬಹುದು ಅಥವಾ ಬದಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು
ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು
ಸ್ಕೂಟರ್​​ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ವಿಡಿಯೋ ವೈರಲ್
ಸ್ಕೂಟರ್​​ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ವಿಡಿಯೋ ವೈರಲ್
ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್!
ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್!
ಶೋಗಾಗಿ ಮತ್ತೆ ಒಂದಾದ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ
ಶೋಗಾಗಿ ಮತ್ತೆ ಒಂದಾದ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ
ಒಪ್ಪಂದ ಆಗಿದೆ, ನಾವು ಡಿಕೆಶಿಗಾಗಿ ಪ್ರಾಣ ಕೊಡಲೂ ಸಿದ್ಧ: ಬಸವರಾಜ ಶಿವಗಂಗಾ
ಒಪ್ಪಂದ ಆಗಿದೆ, ನಾವು ಡಿಕೆಶಿಗಾಗಿ ಪ್ರಾಣ ಕೊಡಲೂ ಸಿದ್ಧ: ಬಸವರಾಜ ಶಿವಗಂಗಾ
T20 World Cup 2026: ಇಟಲಿ ಮುಂದೆ ಯುಎಇ ಪಲ್ಟಿ!
T20 World Cup 2026: ಇಟಲಿ ಮುಂದೆ ಯುಎಇ ಪಲ್ಟಿ!
ಶಾಸಕರು, ರಾಜ್ಯದ ಜನರಿಗೆ ನಾನೇ ಸಿಎಂ ಆಗಬೇಕೆಂದಿದೆ: ಡಿಕೆ ಶಿವಕುಮಾರ್
ಶಾಸಕರು, ರಾಜ್ಯದ ಜನರಿಗೆ ನಾನೇ ಸಿಎಂ ಆಗಬೇಕೆಂದಿದೆ: ಡಿಕೆ ಶಿವಕುಮಾರ್
ಎರಡಂಕಿ ಮೊತ್ತಕ್ಕೆ ನಮೀಬಿಯ ಆಲೌಟ್: ಭಾರತಕ್ಕೆ ಭರ್ಜರಿ ಜಯ
ಎರಡಂಕಿ ಮೊತ್ತಕ್ಕೆ ನಮೀಬಿಯ ಆಲೌಟ್: ಭಾರತಕ್ಕೆ ಭರ್ಜರಿ ಜಯ