AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Freshworks Employees: ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು

ಚೆನ್ನೈನಲ್ಲಿ ಸ್ಥಾಪಿಸಲಾದ ಈ ಕಂಪೆನಿಯಲ್ಲಿ ಇರುವ 500ಕ್ಕೂ ಹೆಚ್ಚು ಸಿಬ್ಬಂದಿ ಕೋಟ್ಯಧಿಪತಿಗಳು. ಆ ಪೈಕಿ 69 ಮಂದಿ 30 ವರ್ಷದ ಒಳಗಿನವರು. ಅದು ಹೇಗೆ ಮತ್ತು ಯಾವ ಕಂಪೆನಿ ಎಂಬ ವಿವರ ಇಲ್ಲಿದೆ.

Freshworks Employees: ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು
ಗಿರೀಶ್​ ಮಾತೃಬೂತಮ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 23, 2021 | 12:28 PM

Share

ನಿಮಗೊಂದು ಸಕ್ಸಸ್ ಸ್ಟೋರಿ ಬಗ್ಗೆ ಹೇಳಬೇಕು. ಈ ಯಶಸ್ಸು ಯಾರದು ಅನ್ನೋದನ್ನು ಕೊನೆಯಲ್ಲಿ ನೀವೇ ನಿರ್ಧರಿಸಬೇಕು. ಗಿರೀಶ್​ ಮಾತೃಬೂತಮ್ಸ್​ ಅವರ ಸಾಫ್ಟ್​ವೇರ್​-ಆಸ್-ಸರ್ವೀಸ್ (SaaS) ಸಂಸ್ಥೆಯಾದ ಫ್ರೆಷ್​ವರ್ಕ್ಸ್​ (Freshworks) ನಾಸ್ಡಾಕ್ ಷೇರುಪೇಟೆ ಸೂಚ್ಯಂಕದಲ್ಲಿ ಪ್ರತಿ ಷೇರಿಗೆ 36 ಅಮೆರಿಕನ್ ಡಾಲರ್​ನಂತೆ ಬುಧವಾರ ಲಿಸ್ಟಿಂಗ್ ಮಾಡಿತು. ಅಮೆರಿಕದ ಮಾರುಕಟ್ಟೆಯಲ್ಲಿ ಹೀಗೆ ಪದಾರ್ಪಣೆ ಮಾಡುತ್ತಿರುವ ಮೊದಲ ಭಾರತೀಯ ಸ್ಟಾರ್ಟ್​ ಅಪ್ ಇದು. ಕಂಪೆನಿಯ ಈ ಸಾಧನೆ ಬಗ್ಗೆ ಗಿರೀಶ್ ಅವರು ಎಕನಾಮಿಕ್ ಟೈಮ್ಸ್​ ಜತೆಗೆ ಮಾತನಾಡಿದ್ದು, ಭಾರತದ ಇತರ SaaS ಕಂಪೆನಿಗಳಿಗೆ ಸಾರ್ವಜನಿಕ ಷೇರು ವಿತರಣೆಗೆ ನಮ್ಮ ಕಂಪೆನಿಯು ಒಂದು ದಾರಿಯನ್ನು ಹಾಕಿಕೊಟ್ಟಿವುದು ಮಾತ್ರವಲ್ಲ, ಇದೀಗ ಷೇರು ಮಾರ್ಕೆಟ್​ನಲ್ಲಿ ಲಿಸ್ಟ್​ ಆಗುವ ಮೂಲಕ ಸಿಬ್ಬಂದಿಯ ಸಾಕಷ್ಟು ಸಂಪತ್ತು ಹೆಚ್ಚಳಕ್ಕೂ ಕಾರಣ ಆಗಿದೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಇದೇ ಮಾಧ್ಯಮ ಸಂಸ್ಥೆಗೆ ಗಿರೀಶ್ ಸಂದರ್ಶನ ನೀಡಿದ್ದಾಗ, ನಾನು ಬಿಎಂಡಬ್ಲ್ಯು ಕಾರು ಖರೀದಿಸುವುದಕ್ಕೆ ಮಾತ್ರ ಈ ಸಂಸ್ಐಎ ಆರಂಭಿಸಿಲ್ಲ. ನಮ್ಮ ಎಲ್ಲ ಸಿಬ್ಬಂದಿ ಆ ಎತ್ತರಕ್ಕೆ ಏರಬೇಕು ಎಂದಿದ್ದರು.

ನಮ್ಮ ಕಂಪೆನಿಯ ಷೇರುಗಳು ಸೋಮವಾರ ಸಾರ್ವಜನಿಕ ವಿತರಣೆ ಆದ ಮೇಲೆ 500 ಸಿಬ್ಬಂದಿ ಕೋಟ್ಯಧಿಪತಿಗಳಾಗಿದ್ದಾರೆ. ಆ ಪೈಕಿ 69 ಮಂದಿ 30 ವರ್ಷದ ಒಳಗಿನವರು. ಫ್ರೆಷ್​ವರ್ಕ್ಸ್​ನಲ್ಲಿ ಕಾರ್ಯ ನಿರ್ವಹಿಸುವ ಮೂರನೇ ಎರಡರಷ್ಟು ಉದ್ಯೋಗಿಗಳು ಷೇರುದಾರರಾಗಿರುವವರು ಎಂದಿದ್ದಾರೆ. “ಈ ಕಂಪೆನಿಯನ್ನು ರೂಪಿಸುವುದಕ್ಕೆ ನಿಜವಾಗಲೂ ಭಾಗವಹಿಸಿದ ಎಲ್ಲ ಸಿಬ್ಬಂದಿಗೆ ಪ್ರತಿಫಲ ಹಂಚಿಕೊಳ್ಳಬೇಕು. ಭಾರತದಲ್ಲಿ ಇರುವ ನಮ್ಮ 500ಕ್ಕೂ ಹೆಚ್ಚು ಸಿಬ್ಬಂದಿ ಕೋಟ್ಯಧಿಪತಿಗಳು. ಮತ್ತು ಆ ಪೈಕಿ 69 ಮಂದಿ 30 ವರ್ಷದೊಳಗಿನವರು,” ಎಂದು ಫ್ರೆಷ್​ವರ್ಕ್ಸ್​ ಸಹಸಂಸ್ಥಾಪಕ ಮತ್ತು ಸಿಇಒ ಹೇಳಿದ್ದಾರೆ.

ಈ ಯಶಸ್ಸನ್ನು ತಮ್ಮ ಕಂಪೆನಿಯ ಸಿಬ್ಬಂದಿಗೆ ಅರ್ಪಿಸಿದ್ದಾರೆ. ಈ ವಲಯದಲ್ಲಿ 120 ಬಿಲಿಯನ್ ಡಾಲರ್ ಮಾರ್ಕೆಟ್​ ಅವಕಾಶ ಇದ್ದು, ನಮ್ಮ ಕಂಪೆನಿ ಈಗಿನ್ನೂ ತಳಮಟ್ಟದಲ್ಲಿ ನಮ್ಮ ಕಂಪೆನಿ ಇದೆ ಎಂದು ಅವರು ಹೇಳಿದ್ದಾರೆ. ನಮ್ಮ ಸಿಬ್ಬಂದಿ ನೀಡಿದ ಕೊಡುಗೆಯಿಂದ ನನಗೆ ಬಹಳ ಸಂತೋಷ ಆಗಿದೆ. ನಾನೊಬ್ಬನೇ ಫ್ರೆಷ್​​ವರ್ಕ್ಸ್​ ಕಟ್ಟುತ್ತಿಲ್ಲ, ನಾವೆಲ್ಲ ಸೇರಿ ಕಟ್ಟುತ್ತಿದ್ದೇವೆ ಎಂದು ನಿಜವಾಗಿಯೂ ನಂಬಿದವನು ನಾನು. ಯುಎಸ್​ ಲಿಸ್ಟಿಂಗ್​ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಗಿರೀಶ್, ಆರಂಭದಿಂದಲೂ ಫ್ರೆಷ್​ವರ್ಕ್ಸ್​ ಜಾಗತಿಕ ಕಂಪೆನಿ. ಇದರ ಗ್ರಾಹಕರು 120+ ದೇಶಗಳಲ್ಲಿ ಇದ್ದಾರೆ ಮತ್ತು ಎಲ್ಲ ಆದಾಯವನ್ನೂ ಅಮೆರಿಕದಲ್ಲಿ ತೆಗೆದುಕೊಳ್ಳಲಾಗುತ್ತದೆ. ರಚನೆ ದೃಷ್ಟಿಯಿಂದ ನಾವು ಅಮೆರಿಕ- ಕೇಂದ್ರಕಚೇರಿಯ ಕಂಪೆನಿ. ಮತ್ತು ಆ ಕಾರಣಕ್ಕೆ ಅಮೆರಿಕದಲ್ಲಿ ಲಿಸ್ಟಿಂಗ್ ಮಾಡುವುದು ವಿವೇಕಯುತವಾದ ನಿರ್ಧಾರಮ ಎಂದಿದ್ದಾರೆ.

ಈ ಸಾಫ್ಟ್​ವೇರ್​ ಉತ್ಪಾದಕ ಸಂಸ್ಥೆಯು ನಾಸ್ಡಾಕ್​ನಲ್ಲಿ ಪದಾರ್ಪಣೆ ಮಾಡಿದ ದಿನವೇ ಐಪಿಒಗಿಂತ ಶೇ 21ರಷ್ಟು ಹೆಚ್ಚು ಮೇಲೇರಿತು. ಈಗ ಕಂಪೆನಿಯ ಮೌಲ್ಯ 1220 ಕೋಟಿ ಅಮೆರಿಕನ್ ಡಾಲರ್. ಅಂದಹಾಗೆ ಈ ಕಂಪೆನಿಯು ಸ್ಥಾಪಿಸಿದ್ದು ಚೆನ್ನೈನಲ್ಲಿ. ಫ್ರೆಷ್​ವರ್ಕ್ಸ್​ ಮಾಡುವ ಸಾಫ್ಟ್​ವೇರ್ ಗ್ರಾಹಕರ ಮ್ಯಾನೇಜ್​ಮೆಂಟ್​ಗೆ ಉದ್ಯಮಕ್ಕೆ ಸಹಾಯ ಮಾಡುತ್ತದೆ. ಮೆಸೇಜಿಂಗ್ ಪ್ಲಾಟ್​ಫಾರ್ಮ್​ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮೂಲಕ ಚಾಟ್​ಬಾಟ್ ಕಸ್ಟಮರ್​ ಸಪೋರ್ಟ್​ ಆಗಿದೆ. ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಇರುವ ಫ್ರೆಷ್​ವರ್ಕ್ಸ್​ ಅನ್ನು ಸ್ಥಾಪಿಸಿದ್ದು ಗಿರೀಶ್​ ಮಾತೃಬೂತಮ್ ಹಾಗೂ ಶನ್ ಕೃಷ್ಣಸಾಮಿ. ಈ ಕಂಪೆನಿಯ ಬೆನ್ನಿಗೆ ಸೆಕೊಯಿಯ ಕ್ಯಾಪಿಟಲ್ ಮತ್ತು ಟೈಗರ್ ಗ್ಲೋಬಲ್ ಮ್ಯಾನೇಜ್​ಮೆಂಟ್​ ಇದ್ದು, 50 ಸಾವಿರಕ್ಕೂ ಹೆಚ್ಚು ಕಂಪೆನಿಗಳಿಗೆ ಫ್ರೆಷ್​​ವರ್ಕ್ಸ್​ ಸೇವೆ ಒದಗಿಸುತ್ತದೆ.

ಇದನ್ನೂ ಓದಿ: 30 Years Of Liberalisation: 2 ಕೋಟಿ ರೂ.ಗೆ ಖರೀದಿಸಲು ಬಂದಿದ್ದ ಇನ್ಫೋಸಿಸ್​​ ಬಂಡವಾಳ ಈಗ 6.5 ಲಕ್ಷಕೋಟಿ ಎಂದು ನೆನಪಿಸಿದ ಎನ್​ಆರ್​ಎನ್

(Freshworks Company’s More Than 500 Employees Are Now Crorepatis Know The Reason How And Why)

Published On - 11:34 am, Thu, 23 September 21

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ