Gold Purchase Tips: ಚಿನ್ನ ಖರೀದಿಸುವಾಗ ಈ ವಿಚಾರಗಳು ತಿಳಿದಿರಲಿ

ಚಿನ್ನ ಖರೀದಿಸಲು ಹೋದಾಗ ಮೊದಲು ನೀವು ಅಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟಿದೆ ಎಂದು ಆನ್​ಲೈನ್​ನಲ್ಲೇ ಪರಿಶೀಲಿಸಿಕೊಂಡಿರಿ. ಆಭರಣ ಚಿನ್ನಗಳಿಗೆ ಮೇಕಿಂಗ್ ಚಾರ್ಜಸ್ ಹಾಕಲಾಗುತ್ತದೆ. ಇದು ಆಭರಣಕ್ಕೆ ಬೇಕಾದ ಕುಸುರಿ ಕೆಲಸಕ್ಕೆ ವಿಧಿಸಲಾಗುವ ಶುಲ್ಕ. ನೀವು ಈ ದರವನ್ನು ಕಡಿಮೆ ಮಾಡಲು ಕೇಳಬಹುದು. ಬೇರೆ ಒಡವೆ ವ್ಯಾಪಾರಿಗಳು ಎಷ್ಟು ಮೇಕಿಂಗ್ ಚಾರ್ಜ್ ಹಾಕುತ್ತಾರೆ ಅದನ್ನೂ ತುಲನೆ ಮಾಡಿರಿ.

Gold Purchase Tips: ಚಿನ್ನ ಖರೀದಿಸುವಾಗ ಈ ವಿಚಾರಗಳು ತಿಳಿದಿರಲಿ
ಚಿನ್ನ ಖರೀದಿ
Follow us
|

Updated on: Oct 22, 2023 | 7:20 PM

ಭಾರತೀಯರಿಗೂ ಚಿನ್ನಕ್ಕೂ ಭಾವನಾತ್ಮಕ ನಂಟು ಹೆಚ್ಚಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಚಿನ್ನವನ್ನು ಹೂಡಿಕೆಯ ವಸ್ತುವಾಗಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಚಿನ್ನಕ್ಕೆ ಸಾಂಪ್ರದಾಯಿಕ ಸ್ಥಾನವೂ ಇದೆ. ಹೀಗಾಗಿ, ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಚಿನ್ನದ ಆಭರಣವನ್ನು ಹೆಚ್ಚೆಚ್ಚು ಖರೀದಿಸಲಾಗುತ್ತದೆ. ಚಿನ್ನದ ಶುದ್ಧತೆಯ (gold purity) ಆಧಾರದ ಮೇಲೆ ವಿವಿಧ ರೀತಿಯ ಚಿನ್ನಗಳಿವೆ. 24 ಕ್ಯಾರಟ್ ಚಿನ್ನವು ಪರಿಶುದ್ಧ ಅಥವಾ ಅಪರಂಜಿ ಚಿನ್ನವೆನಿಸಿದೆ. ಆಭರಣಗಳಲ್ಲಿ ಚಿನ್ನದ ಶುದ್ಧತೆ ತುಸು ಕಡಿಮೆ ಇರುತ್ತದೆ. ಶುದ್ಧ ಚಿನ್ನದಿಂದ ಆಭರಣ ತಯಾರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಬೇರೆ ಲೋಹಗಳನ್ನು ಮಿಶ್ರ ಮಾಡಲಾಗುತ್ತದೆ. ಸಾಮಾನ್ಯವಾಗಿ ಆಭರಣಗಳು 22 ಕ್ಯಾರಟ್ ಚಿನ್ನವನ್ನು ಒಳಗೊಂಡಿರುತ್ತವೆ. 18 ಕ್ಯಾರಟ್, 16 ಕ್ಯಾರಟ್ ಚಿನ್ನಗಳೂ ತಯಾರಾಗುತ್ತವೆ.

ಚಿನ್ನ ಖರೀದಿಸುವಾಗ ನೀವು ಗಮನಿಸಬೇಕಾದ ಸಂಗತಿಗಳು…

  • ಚಿನ್ನ ಖರೀದಿಸಲು ಹೋದಾಗ ಮೊದಲು ನೀವು ಅಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟಿದೆ ಎಂದು ಆನ್​ಲೈನ್​ನಲ್ಲೇ ಪರಿಶೀಲಿಸಿಕೊಂಡಿರಿ.
  • ಆಭರಣ ಚಿನ್ನಗಳಿಗೆ ಮೇಕಿಂಗ್ ಚಾರ್ಜಸ್ ಹಾಕಲಾಗುತ್ತದೆ. ಇದು ಆಭರಣಕ್ಕೆ ಬೇಕಾದ ಕುಸುರಿ ಕೆಲಸಕ್ಕೆ ವಿಧಿಸಲಾಗುವ ಶುಲ್ಕ. ನೀವು ಈ ದರವನ್ನು ಕಡಿಮೆ ಮಾಡಲು ಕೇಳಬಹುದು. ಬೇರೆ ಒಡವೆ ವ್ಯಾಪಾರಿಗಳು ಎಷ್ಟು ಮೇಕಿಂಗ್ ಚಾರ್ಜ್ ಹಾಕುತ್ತಾರೆ ಅದನ್ನೂ ತುಲನೆ ಮಾಡಿರಿ.

ಇದನ್ನೂ ಓದಿ: ಹಬ್ಬಕ್ಕೆ ಎಷ್ಟು ಖರ್ಚು ಮಾಡಬೇಕು? ಇನ್ನೂ ದೀಪಾವಳಿ ಇದೆ… ನಿಮ್ಮ ಬಜೆಟ್ ನಿಗದಿ ಮಾಡಲು ಇಲ್ಲಿದೆ ಟಿಪ್ಸ್

  • ಚಿನ್ನ ಖರೀದಿಸಿದಾಗ ರಸೀದಿ ಮತ್ತು ಬಿಲ್ ಅನ್ನು ತಪ್ಪದೇ ಪಡೆಯಿರಿ. ಖರೀದಿ ದಿನಾಂಕ, ಚಿನ್ನದ ತೂಕ, ಶುದ್ಧತೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರಗಳು ಬಿಲ್​ನಲ್ಲಿ ಇರಬೇಕು.
  • ಚಿನ್ನವನ್ನು ಮರುಖರೀದಿ ಮಾಡಲು ಏನು ಮಾನದಂಡ ಇತ್ಯಾದಿ ತಿಳಿಯಿತಿ.
  • ಚಿನ್ನದ ಮೇಲೆ ಬಿಐಎಸ್ ಹಾಲ್ಮಾರ್ಕ್ ಗುರುತು ಇದೆಯಾ ಪರಿಶೀಲಿಸಿ. ಆ ಹಾಲ್ಮಾರ್ಕ್​ನಲ್ಲಿ ಚಿನ್ನದ ಶುದ್ಧತೆಯನ್ನೂ ನಮೂದಿಸಲಾಗಿರುತ್ತದೆ.
  • ದೊಡ್ಡ ಪ್ರಮಾಣದ ಚಿನ್ನಕ್ಕೆ ನಗದಿನಲ್ಲಿ ಹಣಪಾವತಿ ಮಾಡುವ ಬದಲು ಡಿಜಿಟಲ್ ಆಗಿ ಹಣ ವರ್ಗಾವಣೆ ಮಾಡಲು ಅವಕಾಶ ಇದೆಯಾ ನೋಡಿ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸ್ವೀಕರಿಸುವುದಿದ್ದರೆ ಅದರಲ್ಲೇ ಹಣ ಪಾವತಿ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು