AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates: ಬೆಳ್ಳಿ ಬೆಲೆ ತುಸು ಏರಿಕೆ; ವಿವಿಧೆಡೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ದರಗಳೆಷ್ಟಿವೆ? ಇಲ್ಲಿದೆ ವಿವರ

March 4, 2023- Check Today's Gold and Silver Prices ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಆಭರಣ ಮತ್ತು ಅಪರಂಜಿ ಚಿನ್ನದ ಬೆಲೆಗಳು ಎಷ್ಟಿವೆ? ದುಬೈ, ಅಮೆರಿಕ ಇತ್ಯಾದಿ ವಿದೇಶಗಳಲ್ಲಿ ಬೆಲೆ ಎಷ್ಟಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.

Gold Rates: ಬೆಳ್ಳಿ ಬೆಲೆ ತುಸು ಏರಿಕೆ; ವಿವಿಧೆಡೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ದರಗಳೆಷ್ಟಿವೆ? ಇಲ್ಲಿದೆ ವಿವರ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2023 | 5:00 AM

Share

ಬೆಂಗಳೂರು: ಹಿಂದಿನ ದಿನ ಬೆಲೆ ಏರಿಕೆ ಕಂಡಿದ್ದ ಚಿನ್ನ (Gold Price) ಇದೀಗ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ತುಸು ವ್ಯತ್ಯಯವಾಗಿದೆ. ದೆಹಲಿ, ಮುಂಬೈ, ಜೈಪುರ ಮೊದಲಾದ ಕೆಲವೆಡೆ 100 ಗ್ರಾಮ್ ಬೆಳ್ಳಿ ಬೆಲೆ 40 ರೂಪಾಯಿಯಷ್ಟು ಹೆಚ್ಚಾಗಿದೆ. ಇಲ್ಲಿ 6,650 ರೂ ಇದ್ದ ಬೆಲೆ ಈಗ 6,690 ರೂಗೆ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ದಕ್ಷಿಣ ರಾಜ್ಯಗಳಲ್ಲಿ ಬೆಳ್ಳಿ ಬೆಲೆ 7,000 ರೂನಲ್ಲೇ ಮುಂದುವರಿದಿದೆ. ವಿದೇಶಗಳ ಮಾರುಕಟ್ಟೆ ಗಮನಿಸುವುದಾದರೆ ಮಲೇಷ್ಯಾ, ದುಬೈ, ಓಮನ್ ಇತ್ಯಾದಿ ಕಡೆ ಚಿನ್ನದ ಬೆಲೆ ತುಸು ಮಟ್ಟಿಗೆ ಏರಿಕೆ ಆಗಿದೆ. ಆದರೆ ಅಲ್ಲಿನ ಕರೆನ್ಸಿಗಳ ಮೌಲ್ಯ ಇಳಿದಿರುವ ಹಿನ್ನೆಲೆಯಲ್ಲಿ ರೂಪಾಯಿ ದರದಲ್ಲಿ ಬೆಲೆ ಇಳಿಕೆಯಾಗಿದೆ.

ಭಾರತದಲ್ಲಿ ನಿನ್ನೆ ಒಂದು ಗ್ರಾಮ್​ನ ಆಭರಣ ಚಿನ್ನದ (22 Carat Gold) ಬೆಲೆ 15 ರೂಗಳಷ್ಟು ಹೆಚ್ಚಾಗಿತ್ತು. ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆಯಷ್ಟು ಇಳಿಕೆಯಾಗಿತ್ತು. ಬೆಂಗಳೂರಿನಲ್ಲಿ ಇದೀಗ 10 ಗ್ರಾಮ್​ನ ಆಭರಣ ಚಿನ್ನದ (22 ಕ್ಯಾರಟ್) ಬೆಲೆ 51,800 ರೂ ಇದ್ದು, ಅಪರಂಜಿ ಚಿನ್ನ (24 Carat Gold) 56,500 ಆಗಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 10 ಗ್ರಾಮ್​ಗೆ 7 ಸಾವಿರ ರೂ ಇದೆ.

ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಆಭರಣ ಮತ್ತು ಅಪರಂಜಿ ಚಿನ್ನದ ಬೆಲೆಗಳು ಎಷ್ಟಿವೆ? ವಿದೇಶಗಳಲ್ಲಿ ಬೆಲೆ ಎಷ್ಟಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ. ಭಾರತೀಯರು ಹೆಚ್ಚಾಗಿ ನೆಲಸಿರುವ ದುಬೈ, ಸಿಂಗಾಪುರ, ಮಲೇಷ್ಯಾ, ಅಮೆರಿಕ ಮೊದಲಾದ ಕಡೆಯಲ್ಲಿ ಚಿನ್ನದ ಬೆಲೆ ಬಗ್ಗೆ ಮಾಹಿತಿ ಈ ಕೆಳಗೆ ಇದೆ.

ಭಾರತದಲ್ಲಿ ಚಿನ್ನದ ಬೆಲೆ

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ: 51,750 ರೂ

24 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ: 56,450 ರೂ

ಇದನ್ನೂ ಓದಿCitigroup Layoffs: ಜೆಪಿ ಮಾರ್ಗನ್, ಗೋಲ್ಡ್​ಮನ್ ಸ್ಯಾಕ್ಸ್ ಬಳಿಕ ಈಗ ಸಿಟಿಗ್ರೂಪ್​ನಿಂದಲೂ ನೂರಾರು ಉದ್ಯೋಗಿಗಳು ವಜಾ

ವಿವಿಧ ನಗರಗಳಲ್ಲಿರುವ ಚಿನ್ನದ ದರ (10 ಗ್ರಾಮ್ 22 ಕ್ಯಾರಟ್ ಮತ್ತು 24 ಕ್ಯಾರಟ್ ಗೋಲ್ಡ್)

ಬೆಂಗಳೂರು: 51,800 ರೂ ಮತ್ತು 56,500 ರೂ

ಚೆನ್ನೈ: 52,430 ರೂ ಮತ್ತು 57,200 ರೂ

ಮುಂಬೈ: 51,750 ರೂ ಮತ್ತು 56,450 ರೂ

ದೆಹಲಿ: 51,900 ರೂ ಮತ್ತು 56,600 ರೂ

ಕೋಲ್ಕತಾ: 51,750 ರೂ ಮತ್ತು 56,450 ರೂ

ಕೇರಳ: 51,750 ರೂ ಮತ್ತು 56,450 ರೂ

ಅಹ್ಮದಾಬಾದ್: 51,800 ರೂ ಮತ್ತು 56,500 ರೂ

ಜೈಪುರ್: 51,900 ರೂ ಮತ್ತು 56,600 ರೂ

ಲಕ್ನೋ: 51,900 ರೂ ಮತ್ತು 56,600 ರೂ

ಭುವನೇಶ್ವರ್: 51,750 ರೂ ಮತ್ತು 56,450 ರೂ

ಇದನ್ನೂ ಓದಿAmbani: ಅಂಬಾನಿಯಿಂದ ಆಗ ಜಿಯೋ ಕ್ರಾಂತಿ, ಈಗ ಜಿನೋಮ್ ಕ್ರಾಂತಿ; ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಜಿನೋಮ್ ಟೆಸ್ಟಿಂಗ್ ಕಿಟ್

ವಿದೇಶಗಳಲ್ಲಿ ಚಿನ್ನದ ದರ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಗೋಲ್ಡ್

ದುಬೈ: 2,072.50 ಡಿರಾಮ್ ಮತ್ತು 2,237.50 ಡಿರಾಮ್ (46,225 ರೂ ಮತ್ತು 49,905 ರೂ)

ಮಲೇಷ್ಯಾ: 2,630 ರಿಂಗಿಟ್ ಮತ್ತು 2,730 ರಿಂಗಿಟ್ (48,133 ಮತ್ತು 49,934 ರೂ)

ಸಿಂಗಾಪುರ: 770 ಸಿಂಗಾಪುರಿಯನ್ ಡಾಲರ್ ಮತ್ತು 857 ಸಿಂಗಾಪುರಿಯನ್ ಡಾಲರ್ (46,858 ರೂ ಮತ್ತು 52,152 ರೂ)

ಅಮೆರಿಕ: 565 ಡಾಲರ್ ಮತ್ತು 610 ಡಾಲರ್ (46,284 ರೂ ಮತ್ತು 49,970 ರೂ)

ಓಮನ್: 225.50 ಒಮಾನಿ ರಿಯಾಲ್ ಮತ್ತು 235.50 ಓಮಾನಿ ರಿಯಾಲ್ (46,982 ರೂ ಮತ್ತು 50,109 ರೂ)

ಇದನ್ನೂ ಓದಿEmployee Insurance; ಹಲವು ಅನುಕೂಲತೆಗಳು, ನೆಮ್ಮದಿಯ ಜೀವನ ಕೊಡುವ ಉದ್ಯೋಗಿ ವಿಮೆ

ಬೆಳ್ಳಿ ಬೆಲೆ (100 ಗ್ರಾಮ್):

ಬೆಂಗಳೂರು: 7,000 ರೂ

ಚೆನ್ನೈ: 7,000 ರೂ

ಮುಂಬೈ: 6,690 ರೂ

ದೆಹಲಿ: 6,690 ರೂ

ಕೋಲ್ಕತಾ: 6,690 ರೂ

ಕೇರಳ: 7,000 ರೂ

ಅಹ್ಮದಾಬಾದ್: 6,690 ರೂ

ಜೈಪುರ್: 6,690 ರೂ

ಲಕ್ನೋ: 6,690 ರೂ

ಭುವನೇಶ್ವರ್: 7,000 ರೂ

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!