Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ಭಾರತದ ಪ್ರಾಧಿಕಾರದ ಶಕ್ತಿ ಪ್ರದರ್ಶನ; 1,337 ಕೋಟಿ ದಂಡ ಕಟ್ಟಿ ಕೈಕಟ್ಟಿಕೊಂಡ ಐಟಿ ದೈತ್ಯ ಗೂಗಲ್

CCI Imposed Penalty: ಆಂಡ್ರಾಯ್ಡ್ ಮಾರುಕಟ್ಟೆಯ ತನ್ನ ಪ್ರಾಬಲ್ಯ ಸ್ಥಿತಿ ದುರುಪಯೋಗಸಿಕೊಂಡ ಕಾರಣಕ್ಕೆ ಗೂಗಲ್​ಗೆ ಸಿಸಿಐ 1,337.76 ಕೋಟಿ ರೂ ದಂಡ ವಿಧಿಸಿತ್ತು. ಇದೀಗ ಗೂಗಲ್ ಈ ದಂಡದ ಪೂರ್ಣಮೊತ್ತವನ್ನು ಪಾವತಿಸಿದೆ.

Google: ಭಾರತದ ಪ್ರಾಧಿಕಾರದ ಶಕ್ತಿ ಪ್ರದರ್ಶನ; 1,337 ಕೋಟಿ ದಂಡ ಕಟ್ಟಿ ಕೈಕಟ್ಟಿಕೊಂಡ ಐಟಿ ದೈತ್ಯ ಗೂಗಲ್
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2023 | 1:06 PM

ನವದೆಹಲಿ: ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ತನಗಿರುವ ಪ್ರಾಬಲ್ಯ ಸ್ಥಿತಿಯನ್ನು ದುರುಪಯೋಗಿಸಿಕೊಂಡು ಸ್ಪರ್ಧಾತ್ಮತೆಗೆ ಧಕ್ಕೆ ತರಲಾಗುತ್ತಿದೆ ಎನ್ನುವ ಆರೋಪದ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾ ಆಯೋಗ (CCI- Competition Commission of India) ವಿಧಿಸಿದ ದಂಡದ ಪೂರ್ಣ ಮೊತ್ತವನ್ನು ಗೂಗಲ್ ಪಾವತಿಸಿದೆ. ಈ ಪ್ರಕರಣದಲ್ಲಿ ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ 2022ರ ಅಕ್ಟೋಬರ್​ನಲ್ಲಿ ಗೂಗಲ್​ಗೆ 1,337.76 ಕೋಟಿ ರೂ ದಂಡ ವಿಧಿಸಿತ್ತು. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಈ ತೀರ್ಪನ್ನು ಎತ್ತಿಹಿಡಿದಿತ್ತು. ಸುಪ್ರೀಂಕೋರ್ಟ್ ಕೂಡ ಈ ತೀರ್ಪಿನ ಪರವಾಗಿಯೇ ಅಭಿಪ್ರಾಯಪಟ್ಟಿತ್ತು. ಸಿಸಿಐ ಆದೇಶಿಸಿದ ದಂಡ ಮೊತ್ತವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಎನ್​ಸಿಎಲ್​ಎಟಿ ನಿರ್ದೇಶಿಸಿತ್ತು. ಈ ಗಡುವಿನ ಒಳಗೆ ಗೂಗಲ್ ದಂಡದ ಪೂರ್ಣಮೊತ್ತವಾದ 1,337.76 ಕೋಟಿ ರೂ ಅನ್ನು ಕಾನ್ಸಾಲಿಡೇಟ್ ಫಂಡ್ ಆಫ್ ಇಂಡಿಯಾಗೆ (Consolidated Fund of India) ಪಾವತಿಸಿದೆ.

ಒಂದು ಜಾಗತಿಕ ದೈತ್ಯ ಟೆಕ್ ಸಂಸ್ಥೆಯೊಂದು ಭಾರತದ ಆಡಳಿತ ಪ್ರಾಧಿಕಾರದ ಆದೇಶಕ್ಕೆ ತಲೆಬಾಗಿ ದಂಡ ಕಟ್ಟಿದ್ದು ಇದೇ ಮೊದಲ ಪ್ರಕರಣ ಇರಬಹುದು. ಭಾರತದಲ್ಲಿ ಹೊಸ ಡಿಜಿಟಲ್ ಇಂಡಿಯಾ ಕಾಯ್ದೆ ತರಲಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಪ್ರಾಧಿಕಾರಗಳಿಗೆ ಗೂಗಲ್​ದಂಥ ಪ್ರಕರಣಗಳು ಬಲಪ್ರದರ್ಶನದಂತೆಯೂ ಆಗಬಹುದು. ಒಂದು ಸಮರ್ಕವಾದ ಡಿಜಿಟಲ್ ನೀತಿ ರೂಪಿಸಲು ಇಂತಹ ಕ್ರಮಗಳು ಅಗತ್ಯವೂ ಹೌದು.

ಇದನ್ನೂ ಓದಿHindenburg Research: ಅದಾನಿ ಆಯ್ತು, ಹಿಂಡನ್ಬರ್ಗ್​ಗೆ ಈಗ ಟಾರ್ಗೆಟ್ ಆದ್ರು ಟ್ರಂಪ್ ಬೆಂಬಲಿಗ ಉದ್ಯಮಿ ಕಾರ್ಲ್ ಐಕಾನ್

ಗೂಗಲ್​ಗೆ 1,337.76 ಕೋಟಿ ರೂ ದಂಡ ಹಾಕಿದ್ದು ಯಾಕೆ?

ಆಂಡ್ರಾಯ್ಡ್ ತಂತ್ರಾಂಶದ ಹಕ್ಕು ಈಗ ಗೂಗಲ್ ಕೈಯಲ್ಲಿದೆ. ಆ್ಯಪಲ್ ಫೋನ್ ಬಿಟ್ಟರೆ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ಮೊಬೈಲ್​ಗಳು ಆಂಡ್ರಾಯ್ಡ್ ಸೆಟ್​ಗಳೇ ಆಗಿವೆ. ಹೀಗಾಗಿ, ಗೂಗಲ್ ಪ್ರಾಬಲ್ಯದ ಸ್ಥಿತಿಯಲ್ಲಿದೆ. ಸ್ಮಾರ್ಟ್​ಫೋನ್ ತಯಾರಕರು ಗೂಗಲ್ ಹೇಳಿದ ಆ್ಯಪ್​ಗಳನ್ನು ತಮ್ಮ ಫೋನ್​ನಲ್ಲಿ ಪ್ರೀ ಇನ್ಸ್​ಟಾಲ್ ಮಾಡಬೇಕಾಗುತ್ತದೆ. ಪ್ಲೇ ಸ್ಟೋರ್ ಇತ್ಯಾದಿ ಎಲ್ಲವೂ ಗೂಗಲ್​ನದ್ದೇ ಆಗಿದೆ. ಹೀಗಾಗಿ, ಪ್ರತಿಸ್ಪರ್ಧಿ ಆ್ಯಪ್​ಗಳಿಗೆ ಹೆಚ್ಚು ಅವಕಾಶ ಕೊಡದ ರೀತಿಯಲ್ಲಿ ಗೂಗಲ್ ತನ್ನ ಅ್ಯಪ್​ಗಳನ್ನು ಮುನ್ನೆಲೆಗೆ ತರುತ್ತಿದೆ. ಪ್ಲೇ ಸ್ಟೋರ್ ಸರ್ಚ್​ನಲ್ಲಿ ಗೂಗಲ್​ಗೆ ನಿರ್ದಿಷ್ಟ ಹಣ ಪಾವತಿಸಿದ ಆ್ಯಪ್​ಗಳು ಮೊದಲಿಗೆ ಕಾಣುವ ರೀತಿಯಲ್ಲಿ ಮಾಡಲಾಗಿದೆ. ಈ ಮೇಲಿನ ಆರೋಪಗಳನ್ನು ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ಎತ್ತಿಹಿಡಿದು ಗೂಗಲ್ ಅನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು. 2022ರ ಅಕ್ಟೋಬರ್ 20ರಂದು ಗೂಗಲ್​ಗೆ 1,337.76 ಕೋಟಿ ರೂ ದಂಡ ಕಟ್ಟುವಂತೆ ಆದೇಶಿಸಿತು.

ಈ ಆದೇಶದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸ್ಪರ್ಧಾತ್ಮಕತೆಗೆ ಧಕ್ಕೆ ತರುವ ಕೆಲಸ ತಮ್ಮಿಂದ ಆಗಿಲ್ಲ. ಯೂರೋಪ್​ನ ಪ್ರಕರಣವೊಂದರಲ್ಲಿ ನೀಡಲಾಗಿದ್ದ ಅದೇಶದ ಅಂಶವನ್ನೇ ನಕಲು ಮಾಡಿ ಇಲ್ಲಿ ನೀಡಲಾಗಿದೆ ಎಂದು ಗೂಗಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಇದಾದ ಬಳಿಕ ಎನ್​ಸಿಎಲ್​ಎಟಿ ಕೂಡ ಸಿಸಿಐ ಅದೇಶವನ್ನು ಎತ್ತಿಹಿಡಿದು, 30 ದಿನದೊಳಗೆ ದಂಡ ಪಾವತಿಸುವಂತೆ 2023 ಮಾರ್ಚ್ 31ರಂದು ಗೂಗಲ್​ಗೆ ತಿಳಿಸಿತು. ಈ ತೀರ್ಪಿಗೆ ಸುಪ್ರೀಂಕೋರ್ಟ್​ನಿಂದ ತಡೆ ತರುವ ಪ್ರಯತ್ನವೂ ವಿಫಲವಾಯಿತು.

ಇದನ್ನೂ ಓದಿGo First: ಎಂಜಿನ್ ವೈಫಲ್ಯಕ್ಕೆ ದಿವಾಳಿ ಆಯಿತಾ ಗೋ ಫಸ್ಟ್ ಏರ್​ಲೈನ್ಸ್?; ಏನಿದು ಕರ್ಮಕಾಂಡ? ದಿಢೀರ್ ಟಿಕೆಟ್ ರದ್ದಾಗಿದ್ದಕ್ಕೆ ಪ್ರಯಾಣಿಕರು ಶಾಕ್..!

ಈ ಹಿನ್ನೆಲೆಯಲ್ಲಿ ಗೂಗಲ್ ಕಂಪನಿಗೆ 1,337.76 ಕೋಟಿ ರೂ ದಂಡ ಕಟ್ಟುವುದು ಅನಿವಾರ್ಯವೇ ಆಗಿತ್ತು. ಭಾರತದಲ್ಲಿ ಗೂಗಲ್ ವಿರುದ್ಧ ಇದ್ದದ್ದು ಇದೊಂದೇ ಪ್ರಕರಣವಲ್ಲ. ಪ್ಲೇ ಸ್ಟೋರ್​ನಲ್ಲಿ ತನಗಿರುವ ಪ್ರಾಬಲ್ಯ ಸ್ಥಿತಿಯನ್ನು ದುರುಪಯೋಗಿಸಿಕೊಳ್ಳುತ್ತಿರುವ ಆರೋಪದ ಇನ್ನೊಂದು ಪ್ರಕರಣದಲ್ಲಿ ಗೂಗಲ್ ವಿರುದ್ದ ಸಿಸಿಐ 936.44 ಕೋಟಿ ರೂ ಪೆನಾಲ್ಟಿ ವಿಧಿಸಿದೆ. ಈ ದಂಡವನ್ನೂ ಗೂಗಲ್ ಕಟ್ಟುವುದು ಅನಿವಾರ್ಯವಾಗಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್