AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಐಸಿ ಏಜೆಂಟ್ಸ್​ಗೆ ಸರ್ಕಾರದಿಂದ ಸಖತ್ ಕೊಡುಗೆ; ಗ್ರಾಜುಟಿ ಮಿತಿ, ಕುಟುಂಬ ಪಿಂಚಣಿ ಇತ್ಯಾದಿಗಳ ಹೆಚ್ಚಳ

Happy News For LIC Employees and Agents: ಎಲ್​ಐಸಿ ಏಜೆಂಟ್​ಗಳಿಗೆ ಸಿಗುವ ಗ್ರಾಚುಟಿಯ ಮಿತಿಯನ್ನು 3 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಕೆ; ಏಜೆಂಟ್ ಆಗಿ ಮರು ನೇಮಕವಾದವರಿಗೆ ಅವರ ಹಿಂದಿನ ಏಜೆನ್ಸಿ ವೇಳೆ ಮಾಡಿಸಿದ್ದ ಪಾಲಿಸಿ ವ್ಯವಹಾರದಲ್ಲಿ ರಿನಿವಲ್ ಕಮಿಷನ್ ಅನ್ನು ಪಡೆಯುವ ಅವಕಾಶ; ಟರ್ಮ್ ಇನ್ಷೂರೆನ್ಸ್ ಮೊತ್ತವನ್ನು 1.50 ಲಕ್ಷ ರೂವರೆಗೂ ಏರಿಕೆ ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಎಲ್​ಐಸಿ ಉದ್ಯೋಗಿಗಳ ಕುಟುಂಬ ಪಿಂಚಣಿಯನ್ನೂ ಹೆಚ್ಚಿಸಲಾಗಿದೆ.

ಎಲ್​ಐಸಿ ಏಜೆಂಟ್ಸ್​ಗೆ ಸರ್ಕಾರದಿಂದ ಸಖತ್ ಕೊಡುಗೆ; ಗ್ರಾಜುಟಿ ಮಿತಿ, ಕುಟುಂಬ ಪಿಂಚಣಿ ಇತ್ಯಾದಿಗಳ ಹೆಚ್ಚಳ
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2023 | 4:32 PM

Share

ನವದೆಹಲಿ, ಸೆಪ್ಟೆಂಬರ್ 18: ಭಾರತೀಯ ಜೀವ ವಿಮಾ ನಿಗಮದ (LIC) ಏಜೆಂಟ್ಸ್ ಮತ್ತು ಉದ್ಯೋಗಿಗಳಿಗೆ ಸಂತಸ ತರುವ ಸುದ್ದಿ ಇದು. ಎಲ್​ಐಸಿಯ ಉದ್ಯೋಗಿಗಳು ಮತ್ತು ಏಜೆಂಟ್​ಗಳಿಗೆ ಸರ್ಕಾರ ವಿವಿಧ ಕೊಡುಗೆಗಳನ್ನು ಪ್ರಕಟಿಸಿದೆ. ಗ್ರಾಚ್ಯುಟಿ ಮಿತಿ, ಮರುನೇಮಿತ ಏಜೆಂಟ್​ಗಳ (Reappointed Agents) ರಿನಿವಲ್ ಕಮಿಷನ್, ಅವಧಿ ವಿಮಾ ವ್ಯಾಪ್ತಿ, ಕುಟುಂಬ ಪಿಂಚಣಿ ಹೆಚ್ಚಳ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್​ಐಸಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. 13 ಲಕ್ಷಕ್ಕೂ ಹೆಚ್ಚು ಏಜೆಂಟ್​ಗಳಿದ್ದಾರೆ. ಇವರೆಲ್ಲರ ಉತ್ಸಾಹ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಹಣಕಾಸು ಸಚಿವಾಲಯದಿಂದ ಘೋಷಣೆ ಆಗಿರುವ ಕ್ರಮಗಳು

  • ಎಲ್​ಐಸಿ ಏಜೆಂಟ್​ಗಳಿಗೆ ಸಿಗುವ ಗ್ರಾಚುಟಿಯ ಮಿತಿ 3 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ. ಇದು 13 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಏಜೆಂಟ್​ಗಳಿಗೆ ಲಾಭವಾಗಲಿದೆ.
  • ಮರುನೇಮಕವಾದ ಏಜೆಂಟ್​ಗಳಿಗೆ ಅವರ ಹಳೆಯ ಪಾಲಿಸಿ ವ್ಯವಹಾರಗಳ ರಿನಿವಲ್ ಕಮಿಷನ್ ನೀಡಲಾಗುವುದು. ಹಿಂದಿನ ಏಜೆನ್ಸಿಯಲ್ಲಿ ಎಲ್​ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾಗ ಗ್ರಾಹಕರಿಂದ ಮಾಡಿಸಿದ್ದ ಪಾಲಿಸಿಗಳ ರಿನಿವಲ್​ಗೆ ಸಂಬಂಧಿಸಿದ್ದು ಇದು.
  • ಏಜೆಂಟ್​ಗಳಿಗೆ ಟರ್ಮ್ ಇನ್ಷೂರೆನ್ಸ್ ಕವರ್ 3,000 ರೂನಿಂದ 10,000 ರೂವರೆಗಿನ ಶ್ರೇಣಿಯಲ್ಲಿ ಇದೆ. ಇದನ್ನು 25,000ದಿಂದ 1,50,000 ರೂಗೆ ಏರಿಸಲಾಗಿದೆ.
  • ಎಲ್​ಐಸಿ ಉದ್ಯೋಗಿಗಳ ಕುಟುಂಬಗಳ ಯೋಗಕ್ಷೇಮಕ್ಕಾಗಿ ಶೇ. 30ರ ಸಮಾನ ದರದಲ್ಲಿ ಫ್ಯಾಮಿಲಿ ಪೆನ್ಷನ್ ನೀಡಲಾಗುವುದು.

ಇದನ್ನೂ ಓದಿ: ಇಎಂಐ ಕಟ್ಟಲು ಹಿಂದೇಟು ಹಾಕುತ್ತಿದ್ದೀರಾ? ಮನೆಬಾಗಿಲಿಗೆ ಬರಲಿದೆ ಚಾಕೊಲೇಟ್; ಎಸ್​ಬಿಐ ಹೊಸ ಪ್ರಯೋಗ

ಸರ್ಕಾರಿ ಸ್ವಾಮ್ಯದ ಎಲ್​ಐಸಿ ಭಾರತದ ಅತಿದೊಡ್ಡ ಜೀವ ವಿಮಾ ಸಂಸ್ಥೆ ಎಂಬ ದಾಖಲೆಯನ್ನು ಈಗಲೂ ಉಳಿಸಿಕೊಂಡು ಬರುತ್ತಿದೆ. ಹಲವು ಖಾಸಗಿ ವಿಮಾ ಸಂಸ್ಥೆಗಳ ಪೈಪೋಟಿ ನಡುವೆಯೂ ಎಲ್​ಐಸಿ ಪ್ರಾಬಲ್ಯ ಹಾಗೇ ಉಳಿದಿದೆ. ಅದರ ಆದಾಯ ಹೆಚ್ಚಳದ ವೇಗವೂ ವೃದ್ಧಿಸುತ್ತಾ ಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ