AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSP: ರಾಗಿ, ಜೋಳ ಇತ್ಯಾದಿ ಮುಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ ಸಾಧ್ಯತೆ; ಈ ವರ್ಷ ಗೋಧಿ ಖರೀದಿಯಲ್ಲಿ ಸರ್ಕಾರ ದಾಖಲೆ

Kharif Crops May Get Higher MSP From Government: ರೈತರ ಮುಂಗಾರು ಬೆಳೆಗಳಿಗೆ ಇರುವ ಎಂಎಸ್​ಪಿಯನ್ನು ಶೇ. 3ರಿಂದ 8ರಷ್ಟು ಏರಿಸುವ ಸಾಧ್ಯತೆ ಇದೆ. ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಸರ್ಕಾರ ಹೆಚ್ಚು ದರ ಕೊಟ್ಟು ಖರೀದಿಸಬಹುದು ಎನ್ನಲಾಗಿದೆ. ಕ್ವಿಂಟಾಲ್ ರಾಗಿಗೆ ಬೆಂಬಲ ಬೆಲೆ 4,000 ರೂಗೆ ಏರುವ ನಿರೀಕ್ಷೆ ಇದೆ.

MSP: ರಾಗಿ, ಜೋಳ ಇತ್ಯಾದಿ ಮುಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ ಸಾಧ್ಯತೆ; ಈ ವರ್ಷ ಗೋಧಿ ಖರೀದಿಯಲ್ಲಿ ಸರ್ಕಾರ ದಾಖಲೆ
ಖಾರಿಫ್ ಬೆಳೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2023 | 12:25 PM

ನವದೆಹಲಿ: ಈ ವರ್ಷದ ಮುಂಗಾರು ಬೆಳೆ ಅಥವಾ ಖಾರಿಫ್ ಬೆಳೆಗಳಿಗೆ (Kharif Crops) ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ದೊರೆತಿದೆ. ಅದರ ಪ್ರಕಾರ ವಿವಿಧ ಬೆಳೆಗಳಿಗೆ ಇರುವ ಎಂಎಸ್​ಪಿಯನ್ನು (Minimum Support Price) ಶೇ. 3ರಿಂದ 8ರಷ್ಟು ಏರಿಸುವ ಸಾಧ್ಯತೆ ಇದೆ. ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಸರ್ಕಾರ ಹೆಚ್ಚು ದರ ಕೊಟ್ಟು ಖರೀದಿಸಬಹುದು ಎನ್ನಲಾಗಿದೆ. 2040 ರೂ ಇರುವ ಭತ್ತದ ಎಂಎಸ್​ಪಿ ದರವನ್ನು 2,200 ರೂವರೆಗೂ ಏರಿಸುವ ಸಾಧ್ಯತೆ ಇದೆ. ಕ್ವಿಂಟಾಲ್ ರಾಗಿಗೆ ಇರುವ 3,578 ರೂ ಬೆಂಬಲ ಬೆಲೆಯನ್ನು 4,000 ರೂಗೆ ಏರಿಸಬಹುದು ಎನ್ನಲಾಗುತ್ತಿದೆ.

ಗೋಧಿ ಇತ್ಯಾದಿ ಹಿಂಗಾರು ಬೆಳೆಗಳಿಗೆ ಸರ್ಕಾರ ಇತ್ತೀಚೆಗೆ ಎಂಎಸ್​ಪಿ ದರ ಹೆಚ್ಚಿಸಿತ್ತು. ಈಗ ಮುಂಗಾರು ಬೆಳೆಗೂ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಬಹುದು.

ಮುಂಗಾರು ಬೆಳೆಗಳಿಗೆ ಸದ್ಯ ಇರುವ ಎಂಎಸ್​ಪಿ ದರಗಳ ಪಟ್ಟಿ (2022-23)

  • ಭತ್ತ: ಕ್ವಿಂಟಾಲ್​ಗೆ 2040 ರೂ
  • ಜೋಳ (ಹೈಬ್ರಿಡ್): ಕ್ವಿಂಟಾಲ್​ಗೆ 2970 ರೂ
  • ಮೆಕ್ಕೆ ಜೋಳ: ಕ್ವಿಂಟಾಲ್​ಗೆ 1,962 ರೂ
  • ಬಿಳಿ ಜೋಳ: 2,350 ರೂ
  • ರಾಗಿ: ಕ್ವಿಂಟಾಲ್​ಗೆ 3578 ರೂ
  • ತೊಗರಿಬೇಳೆ: 6,600 ರೂ
  • ಹೆಸರುಕಾಳು: 7,755 ರೂ
  • ಶೇಂಗಾ: 5,850 ರೂ
  • ಉದ್ದಿನಬೇಳೆ: 6,600 ರೂ
  • ಸೋಯಾ: 4,300 ರೂ

ಇದನ್ನೂ ಓದಿUPI: ಪೇಟಿಎಂ, ಫೋನ್​ಪೇ ಇತ್ಯಾದಿ ಬಳಸಿ ಜನರು ಮೇ ತಿಂಗಳಲ್ಲಿ ನಡೆಸಿದ ವಹಿವಾಟು 14 ಲಕ್ಷ ಕೋಟಿ ರೂ

ಐದು ತಿಂಗಳಲ್ಲಿ 262 ಲಕ್ಷ ಟನ್ ಗೋಧಿ ಖರೀದಿಸಿದ ಸರ್ಕಾರ

ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಈ ವರ್ಷ ಇದೂವರೆಗೂ ಕೇಂದ್ರ ಸರ್ಕಾರ ರೈತರಿಂದ 262 ಲಕ್ಷ ಟನ್​ಗಳಷ್ಟು ಗೋಧಿ ಖರೀದಿ ಮಾಡಿದೆ. ಒಟ್ಟು 47,000 ಕೋಟಿ ರೂ ಹಣವನ್ನು ಈ ಗೋಧಿ ಬೆಳೆದ ರೈತರಿಗೆ ತಲುಪಿಸಲಾಗಿದೆ. 21.27 ಲಕ್ಷ ರೈತರಿಗೆ ಅನುಕೂಲವಾಗಿದೆ.

ಕಳೆದ ವರ್ಷ (2022) ಕೇಂದ್ರ ಸರ್ಕಾರ ಎಂಎಸ್​ಪಿ ದರದಲ್ಲಿ ರೈತರಿಂದ 188 ಲಕ್ಷ ಟನ್​ಗಳಷ್ಟು ಗೋಧಿ ಖರೀದಿ ಮಾಡಿತ್ತು. ಈ ವರ್ಷ ಕೇವಲ 5 ತಿಂಗಳಲ್ಲಿ ಆ ಮೊತ್ತವನ್ನು ಮೀರಿಸಿ ಖರೀದಿ ಡೆದಿದೆ. ಹಿಂಗಾರು ಋತು ಅಥವಾ ರಾಬಿ ಋತುವಿನ ಬೆಳೆಯಾದ ಗೋಧಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್​ಗೆ 2,125 ರೂಗೆ ನಿಗದಿ ಮಾಡಿದೆ.

ಇದನ್ನೂ ಓದಿArecanut Price 01 ಜೂನ್: ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಹಿಂಗಾರು ಬೆಳೆಗಳಿಗೆ ಇರುವ ಎಂಎಸ್​ಪಿ ದರ (2023-24)

  • ಗೋಧಿ: ಕ್ವಿಂಟಾಲ್​ಗೆ 2,125 ರೂ
  • ಬಾರ್ಲಿ: 1,634 ರೂ
  • ಸಾಸಿವೆ: 5,450 ರೂ
  • ಅವರೆ: 6,000 ರೂ
  • ಕಡಲೆ: 5,335 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ