ನಾಲ್ಕು ಸರ್ಕಾರಿ ಬ್ಯಾಂಕುಗಳಲ್ಲಿ ಕೆಲ ಪಾಲನ್ನು ಮಾರಲಿರುವ ಸರ್ಕಾರ; ಸೆಬಿ ನಿಯಮ ಕಾರಣ

Govt stakes to sold through OFS: ನಾಲ್ಕು ಸರ್ಕಾರಿ ಬ್ಯಾಂಕುಗಳಲ್ಲಿ ತಾನು ಹೊಂದಿರುವ ಕೆಲ ಷೇರುಪಾಲನ್ನು ಸರ್ಕಾರ ಮಾರುತ್ತಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಮತ್ತು ಪಂಜಾಬ್ ಅಂಡ್ ಸಿಂದ್ ಬ್ಯಾಂಕುಗಳಲ್ಲಿ ಸರ್ಕಾರದ ಸಾಕಷ್ಟು ಷೇರುಗಳು ಬಿಕರಿಯಾಗಲಿವೆ. ಲಿಸ್ಟೆಡ್ ಕಂಪನಿಗಳು ಕನಿಷ್ಠ ಶೇ. 25ರಷ್ಟಾದರೂ ಪಬ್ಲಿಕ್ ಶೇರ್​ಹೋಲ್ಡಿಂಗ್ ಹೊಂದಿರಬೇಕು ಎನ್ನುವ ಸೆಬಿ ನಿಯಮ ಇದಕ್ಕೆ ಕಾರಣವಾಗಿದೆ.

ನಾಲ್ಕು ಸರ್ಕಾರಿ ಬ್ಯಾಂಕುಗಳಲ್ಲಿ ಕೆಲ ಪಾಲನ್ನು ಮಾರಲಿರುವ ಸರ್ಕಾರ; ಸೆಬಿ ನಿಯಮ ಕಾರಣ
ಷೇರು

Updated on: Nov 19, 2024 | 6:03 PM

ನವದೆಹಲಿ, ನವೆಂಬರ್ 19: ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕುಗಳಲ್ಲಿ ಸರ್ಕಾರ ಹೊಂದಿರುವ ಕೆಲ ಷೇರುಪಾಲನ್ನು ಮಾರಲಾಗುತ್ತಿದೆ. ಸೆಬಿ ರೂಪಿಸಿರುವ ಪಬ್ಲಿಕ್ ಷೇರ್​ಹೋಲ್ಡಿಂಗ್ ನಿಯಮದಿಂದಾಗಿ ಸರ್ಕಾರವು ಈ ನಾಲ್ಕು ಬ್ಯಾಂಕುಗಳಲ್ಲಿರುವ ತನ್ನ ಪಾಲಿನ ಕೆಲ ಷೇರುಗಳನ್ನು ಮಾರುವುದು ಅನಿವಾರ್ಯ ಎನ್ನಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್​ಸೀಸ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಪಂಜಾಬ್ ಅಂಡ್ ಸಿಂದ್ ಬ್ಯಾಂಕ್​ನಲ್ಲಿ ಸರ್ಕಾರ ತನ್ನ ಕೆಲ ಷೇರುಗಳನ್ನು ಸಾರ್ವಜನಿಕರಿಗೆ ಆಫರ್ ಫಾರ್ ಸೇಲ್ (ಒಎಫ್​ಎಸ್) ಮೂಲಕ ಮಾರಲಿದೆ.

ಏನಿದು ಸೆಬಿಯ ಪಬ್ಲಿಕ್ ಶೇರ್​ಹೋಲ್ಡಿಂಗ್ ನಿಯಮ?

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಕನಿಷ್ಠ ಶೇ. 25ರಷ್ಟು ಪಬ್ಲಿಕ್ ಶೇರ್​ಹೋಲ್ಡಿಂಗ್ ಹೊಂದಿರಬೇಕು. ಅಂದರೆ, ಕಂಪನಿಯ ಶೇ. 25ರಷ್ಟಾದರೂ ಷೇರುಗಳನ್ನು ಸಾರ್ವಜನಿಕರು (ಮಾಲೀಕರಲ್ಲದವರು) ಹೊಂದಿರಬೇಕು ಎನ್ನುತ್ತದೆ ಈ ಸೆಬಿ ನಿಯಮ.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್ 2024: ನಿಪುಣ ಕರ್ನಾಟಕ ಯೋಜನೆಗೆ ಕೈಜೋಡಿಸಿದ ಟೆಕ್ ಕಂಪನಿಗಳು; ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂನಿಂದ 1 ಲಕ್ಷ ಯುವಕರಿಗೆ ತರಬೇತಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸರ್ಕಾರ ಶೇ. 93ರಷ್ಟು ಷೇರುಪಾಲು ಹೊಂದಿದೆ. ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನಲ್ಲಿ ಶೇ. 96.4, ಯುಕೋ ಬ್ಯಾಂಕ್​ನಲ್ಲಿ ಶೇ. 95.4, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್​ನಲ್ಲಿ ಶೇ. 98.3ರಷ್ಟು ಷೇರುಪಾಲು ಸರ್ಕಾರದ್ದಾಗಿದೆ.

ಷೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾದ ಸೆಬಿ ಈ ಪಬ್ಲಿಕ್ ಶೇರ್​ಹೋಲ್ಡಿಂಗ್ ನಿಯಮದಲ್ಲಿ ಸರ್ಕಾರಕ್ಕೆ 2026ರ ಆಗಸ್ಟ್​ವರೆಗೂ ವಿನಾಯಿತಿ ಕೊಟ್ಟಿದೆ. ಅಂದರೆ, 2026ರ ಆಗಸ್ಟ್ ನಂತರ ಯಾವ ಲಿಸ್ಟೆಡ್ ಸರ್ಕಾರಿ ಕಂಪನಿಗಳಲ್ಲಿ ಸರ್ಕಾರ ಶೇ. 75ಕ್ಕಿಂತ ಹೆಚ್ಚು ಷೇರುಪಾಲು ಹೊಂದಿರಲು ಆಗುವುದಿಲ್ಲ.

ಇದನ್ನೂ ಓದಿ: ಕೆನಡಾದಲ್ಲಿ ಭಾರತ ಹಾಗೂ ಇತರ ವಿದೇಶೀ ವಿದ್ಯಾರ್ಥಿಗಳಿಗೆ ಕೆಲಸದ ಮಿತಿ 24 ಗಂಟೆಗಳಿಗೆ ಏರಿಕೆ

ಈ ಪ್ರಕ್ರಿಯೆ ಆರಂಭಿಸಲು ಹಣಕಾಸು ಸಚಿವಾಲಯವು ಮುಂಬರುವ ದಿನಗಳಲ್ಲಿ ಸಂಪುಟದ ಅನುಮೋದನೆಗೆ ಪ್ರಯತ್ನಿಸಬಹುದು ಎಂದು ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us