AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2022-23ನೇ ಸಾಲಿನಲ್ಲಿ ಹೆಚ್​​ಎಎಲ್​ಗೆ ಅತ್ಯಧಿಕ ಆದಾಯ: ಶೇ 8 ರಷ್ಟು ಏರಿಕೆ

ಹಿಂದೂಸ್ಥಾನ ಏರೋನಾಟಿಕ್ಸ್​ ಲಿಮಿಟೆಡ್​ (HAL)ನ 2022-23ನೇ ಹಣಕಾಸು ಸಾಲಿನ ಆದಾಯವು, ಕಳೆದ 2021-22ರ ಹಣಕಾಸು ವರ್ಷಕ್ಕಿಂತ ಶೇ 8ರಷ್ಟು ಜಾಸ್ತಿಯಾಗಿದೆ ಎಂದು ಹೆಚ್​ಎಎಲ್​ ಮಾದ್ಯಮ ಪ್ರಕಟಣೆ ಹೊರಡಿಸಿದೆ.

2022-23ನೇ ಸಾಲಿನಲ್ಲಿ ಹೆಚ್​​ಎಎಲ್​ಗೆ ಅತ್ಯಧಿಕ ಆದಾಯ: ಶೇ 8 ರಷ್ಟು ಏರಿಕೆ
ಹೆಚ್​ಎಎಲ್​​
Follow us
ವಿವೇಕ ಬಿರಾದಾರ
|

Updated on:Mar 31, 2023 | 10:35 PM

ಬೆಂಗಳೂರು: ಹಿಂದೂಸ್ಥಾನ ಏರೋನಾಟಿಕ್ಸ್​ ಲಿಮಿಟೆಡ್​ (HAL)ನ 2022-23ನೇ ಹಣಕಾಸು ಸಾಲಿನ ಆದಾಯವು, ಕಳೆದ 2021-22ರ ಹಣಕಾಸು ವರ್ಷಕ್ಕಿಂತ ಶೇ 8ರಷ್ಟು ಜಾಸ್ತಿಯಾಗಿದೆ. ಈ ಬಗ್ಗೆ ಶುಕ್ರವಾರ (ಮಾ.31) ಮಾಧ್ಯಮ ಪ್ರಕಟಣೆ ಹೊರಡಿಸಿದ ಹೆಚ್ಎಎಲ್​​​ 2021-22ರ ಸಾಲಿನಲ್ಲಿ 26,500 ಕೋಟಿ ಆದಾಯವಾಗಿದ್ದು, 2022-23ರಲ್ಲಿ 26,620 ಕೋಟಿ ಹೆಚ್ಚಿಗೆ ಆದಾಯವಾಗಿದೆ ಎಂದು ತಿಳಿಸಿದೆ. ಸ್ಥಳೀಯ ರಾಜಕೀಯ ಅಡೆತಡೆಗಳ ಹೊರತಾಗಿಯೂ, ಕಂಪನಿಗೆ ಹೆಚ್ಚಿನ ಆದಾಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಸ್ವದೇಶಿ ನಿರ್ಮಾಣಕ್ಕೆ ಹೆಚ್ಚಿಗೆ ಒತ್ತು ನೀಡುತ್ತಿರುವುದು ಮತ್ತು ತಯಾರಿಕೆಗೆ ಬೇಕಾದ ವಸ್ತುಗಳು ಸಮರ್ಪಕವಾಗಿ ದೊರೆಯುತ್ತಿರುವುದು ಎಂದು ಹೆಚ್‌ಎಎಲ್ ಸಿಎಂಡಿ, ಸಿ ಬಿ ಅನಂತಕೃಷ್ಣನ್ ಹೇಳಿದ್ದಾರೆ.

ಅನೇಕ ಅಡೆತಡೆಗಳ ನಂತರವೂ ಮಾರ್ಚ್​ 2023 ಅಂತ್ಯದ ವೇಳೆಗೆ ಕಂಪನಿಗೆ ಸುಮಾರು 82 ಸಾವಿರ ಕೋಟಿಗಳಷ್ಟು ರೂ. ಆರ್ಡರ್​​ ಬಂದಿವೆ. ವರ್ಷದಲ್ಲಿ, ಕಂಪನಿಯು 70 HTT -40, 6 Do-228 ಏರ್‌ಕ್ರಾಫ್ಟ್ ಮತ್ತು PSLV ಉಡಾವಣಾ ವಾಹನಗಳ ಉತ್ಪಾದನಾ ಒಪ್ಪಂದಗಳನ್ನು ಒಳಗೊಂಡಂತೆ ಸುಮಾರು 26 ಸಾವಿರ ಕೋಟಿ ರೂ. ಅಷ್ಟು ಹೊಸ ಒಪ್ಪಂದಗಳನ್ನು ಮಾಡಿಕೊಂಡಿದೆ.

2022-23ರ ಹಣಕಾಸು ವರ್ಷದಲ್ಲಿ ವಿವಿಧ ರಕ್ಷಣಾ ಗ್ರಾಹಕರಿಂದ ಸುಮಾರು 25 ಸಾವಿರ ಕೋಟಿಗಳಷ್ಟು ರೂ. ಹಣ ಹರಿದು ಬಂದಿದೆ. ಈ ವರ್ಷದಲ್ಲಿ, ಐಟಿ ಎಟಿನಿಂದ 542 ಕೋಟಿ ರೂ. ಬಡ್ಡಿ ಸೇರಿದಂತೆ 1,798 ಕೋಟಿ ರೂ. ಆದಾಯ ತೆರಿಗೆ ಮರುಪಾವತಿಯಾಗಿದೆ ಎಂದು ಹೆಚ್​ಎಎಲ್​ ಹೇಳಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Fri, 31 March 23

ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ