AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HCL Technologies FY21 Q4 Results; ಎಚ್​ಸಿಎಲ್ ವಿಶೇಷ ಮಧ್ಯಂತರ ಡಿವಿಡೆಂಡ್ ತಲಾ 10 ರೂ. ಘೋಷಣೆ

ಎಚ್​ಸಿಎಲ್ ಟೆಕ್ನಾಲಜೀಸ್​ನಿಂದ 2020-21ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಫಲಿತಾಂಶವನ್ನು ಘೋಷಿಸಲಾಗಿದೆ. ಒಟ್ಟಾರೆ ನಿವ್ವಳ ಲಾಭ ಶೇ 6.1ರಷ್ಟು ಇಳಿಕೆಯಾಗಿ, ರೂ. 2,962 ಕೋಟಿಯನ್ನು ಮುಟ್ಟಿದೆ.

HCL Technologies FY21 Q4 Results; ಎಚ್​ಸಿಎಲ್ ವಿಶೇಷ ಮಧ್ಯಂತರ ಡಿವಿಡೆಂಡ್ ತಲಾ 10 ರೂ. ಘೋಷಣೆ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 23, 2021 | 11:34 PM

ಎಚ್​ಸಿಎಲ್ ಟೆಕ್ನಾಲಜೀಸ್​ನಿಂದ ಶುಕ್ರವಾರದಂದು 2021ರ ಜನವರಿಯಿಂದ- ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಒಟ್ಟಾರೆ ನಿವ್ವಳ ಲಾಭ ಶೇ 6.1ರಷ್ಟು ಇಳಿಕೆಯಾಗಿ, ರೂ. 2,962 ಕೋಟಿಯನ್ನು ಮುಟ್ಟಿದೆ. ಇನ್ನು ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಶೇ 25.6ರಷ್ಟು ಲಾಭ ಇಳಿಕೆ ಆಗಿದೆ. ಅಂದಹಾಗೆ 2020- 21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಏನು ಲಾಭ ಬಂದಿದೆಯೋ, ಅದು ಬಹಳ ಮಹತ್ವದ್ದು ಎನಿಸಿಕೊಂಡಿದೆ.

ಏಕೆಂದರೆ, ಒಂದು ಸಲದ ಬೋನಸ್ 728 ಕೋಟಿ ರೂಪಾಯಿ ಅಥವಾ ರೂ. 575 ಕೋಟಿ ರೂಪಾಯಿ ನಿವ್ವಳ ತೆರಿಗೆಯನ್ನು ಮಾರ್ಚ್​ ತಿಂಗಳಲ್ಲಿ ಪಾವತಿಸಲಾಗಿದೆ ಎಂದು ಎಚ್​ಸಿಎಲ್ ಟೆಕ್ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ಬೋನಸ್ ಸೇರಿಸಿಕೊಂಡಿದ್ದರೆ ಕಂಪೆನಿಯ ಲಾಭ ರೂ. 2,387 ಕೋಟಿ ಆಗಿರುತ್ತಿತ್ತು.

ಎಚ್​ಸಿಎಲ್​ ಕಂಪೆನಿಯ ಆದಾಯ ಕಳೆದ ವರ್ಷಕ್ಕಿಂತ ಶೇ 5.7ರಷ್ಟು ಹೆ್ಚ್ಚಳವಾಗಿ ರೂ. 19,642 ಕೋಟಿ ಆಗಿದೆ. ಇನ್ನು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಶೇ 1.8ರಷ್ಟು ಜಾಸ್ತಿ ಆಗಿದೆ. FY21 ಹಣಕಾಸು ವರ್ಷದಲ್ಲಿ ಎಚ್​ಸಿಎಲ್ ಟೆಕ್​ ನಿವ್ವಳ ಲಾಭ ಅದರ ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇಕಡಾ 17.6ರಷ್ಟು ಹೆಚ್ಚಾಗಿದೆ. ಇನ್ನು ಆದಾಯ ಶೇ 6.7ರಷ್ಟು ಮೇಲೇರಿ ರೂ. 75,379 ಕೋಟಿಯಾಗಿದೆ. FY22ರಲ್ಲಿ ಆದಾಯ ಬೆಳವಣಿಗೆ ಎರಡಂಕಿ ದಾಟಬಹುದು ಎಂಬ ನಿರೀಕ್ಷೆ ಎಚ್​ಸಿಎಲ್​ಗೆ ಇದೆ.

“ಜಾಗತಿಕ ಆರ್ಥಿಕತೆ ಚೇತರಿಕೆ ಕಾಣಿಸಿಕೊಳ್ಳುತ್ತಿದ್ದಂತೆ ನಾವೆಲ್ಲ ಈ ಬಿಕ್ಕಟ್ಟಿನಿಂದ ಮೇಲೇಳುತ್ತೇವೆ. ಭವಿಷ್ಯದ ಸವಾಲುಗಳನ್ನು ಮುಟ್ಟಲು ಎಚ್​ಸಿಎಲ್ ಇನ್ನಷ್ಟು ಉತ್ತಮವಾಗಿ ಸಜ್ಜಾಗಿದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಆವಿಷ್ಕಾರ ಮತ್ತು ಹೊಸ ಅನ್ವೇಷಣೆಗಳ ಜತೆಜತೆಗೆ ಮಾನವೀಯ ಮೌಲ್ಯಗಳೊಂದಿಗೆ ನಾವು ಸಜ್ಜಾಗಿದ್ದೇವೆ. ನಮ್ಮ ಉದ್ಯಮ ಗುರಿಯನ್ನು ತಲುಪುತ್ತೇವೆ. ನಾವು ಎಲ್ಲಿ ಕೆಲಸ ಮಾಡುತ್ತೇವೋ ಅಲ್ಲಿನ ಸಾಮಾಜಿಕ- ಆರ್ಥಿಕ ಬೆಳವಣಿಗೆ ಜತೆಗೆ ಅದು ಹೊಂದಿಕೊಂಡಿದೆ,” ಎಂದು ಎಚ್​ಸಿಎಲ್​ ಟೆಕ್ ಅಧ್ಯಕ್ಷ ಮತ್ತು ಚೀಫ್ ಸ್ಟ್ರಾಟೆಜಿ ಆಫೀಸರ್ ಶಿವ್ ನಾಡಾರ್ ಹೇಳಿದ್ದಾರೆ.

ಈ ತ್ರೈಮಾಸಿಕದಲ್ಲಿ ಕಂಪೆನಿಗೆ ಅತಿ ಹೆಚ್ಚು ಹೊಸ ವ್ಯವಹಾರಗಳು, ಅಂದರೆ 3.1 ಬಿಲಿಯನ್ (310 ಕೋಟಿ) ಅಮೆರಿಕನ್ ಡಾಲರ್​ನಷ್ಟು ಬಂದಿವೆ. ಇದರ ಜತೆಗೆ ಅತಿ ದೊಡ್ಡ ಪ್ರಮಾಣದಲ್ಲಿ ಕೆಲಸಗಳು ಬರುವುದು ಅಂತಿಮವಾಗಬೇಕಿದೆ ಎಂದು ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಸಿ. ವಿಜಯ್​ಕುಮಾರ್ ಹೇಳಿದ್ದಾರೆ. ಎಚ್​ಸಿಎಲ್​ ಟೆಕ್​ನಿಂದ ಮೊದಲ ಮಧ್ಯಂತರ ಲಾಭಾಂಶ ಪ್ರತಿ ಷೇರಿಗೆ 6 ರೂಪಾಯಿ ಘೋಷಣೆ ಮಾಡಲಾಗಿದೆ. ಮತ್ತು FY22ಕ್ಕೆ ವಿಶೇಷ ಮಧ್ಯಂತರ ಡಿವಿಡೆಂಡ್ ಪ್ರತಿ ಷೇರಿಗೆ 10 ರೂಪಾಯಿ ಘೋಷಿಸಲಾಗಿದೆ. ಶುಕ್ರವಾರದ ದಿನಾಂತ್ಯಕ್ಕೆ ಬಿಎಸ್​ಇಯಲ್ಲಿ ಎಚ್​ಸಿಎಲ್​ ಟೆಕ್ ಕಂಪೆನಿ ಷೇರಿನ ಬೆಲೆ ರೂ. 955.80 ಇತ್ತು.

ಇದನ್ನೂ ಓದಿ: ಇನ್ಫೋಸಿಸ್ ಲಾಭದಲ್ಲಿ ಶೇ 17ರಷ್ಟು ಏರಿಕೆ; ಪ್ರತಿ ಷೇರಿಗೆ 15 ರೂ. ಡಿವಿಡೆಂಡ್, 9,200 ಕೋಟಿ ತನಕ ಷೇರು ಬೈಬ್ಯಾಕ್

ಇದನ್ನೂ ಓದಿ: TCS FY21 Q4 results: ಟಿಸಿಎಸ್ ಲಾಭ ರೂ. 9246 ಕೋಟಿ; ಪ್ರತಿ ಷೇರಿಗೆ ತಲಾ 15 ರೂ. ಡಿವಿಡೆಂಡ್

(HCL Technologies announced FY21 Q4 results consolidated net profit of Rs 2962 crore)

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ