AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC: ‘ಪ್ರತೀ 4 ವರ್ಷಕ್ಕೆ ಹೊಸ ಎಚ್​ಡಿಎಫ್​ಸಿ ಬ್ಯಾಂಕ್’- ವಿಲೀನದ ಬಳಿಕ ಮಹತ್ವಾಕಾಂಕ್ಷೆ ಬಿಚ್ಚಿಟ್ಟ ಸಿಇಒ

HDFC Bank Aims For Superfast Growth: ಮುಂಬರುವ ವರ್ಷಗಳಲ್ಲಿ ತಮ್ಮ ಬ್ಯಾಂಕ್ ಅದ್ವಿತೀಯ ವೇಗದಲ್ಲಿ ಬೆಳೆಯಲಿದೆ. ಪ್ರತೀ ವರ್ಷವೂ 1,500ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ಸೇರಿಸುತ್ತಾ ಹೋಗುತ್ತೇವೆ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ಶಶಿಧರ್ ಜಗದೀಶನ್ ಹೇಳಿದ್ದಾರೆ.

HDFC: ‘ಪ್ರತೀ 4 ವರ್ಷಕ್ಕೆ ಹೊಸ ಎಚ್​ಡಿಎಫ್​ಸಿ ಬ್ಯಾಂಕ್’- ವಿಲೀನದ ಬಳಿಕ ಮಹತ್ವಾಕಾಂಕ್ಷೆ ಬಿಚ್ಚಿಟ್ಟ ಸಿಇಒ
ಎಚ್​ಡಿಎಫ್​ಸಿ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 02, 2023 | 12:43 PM

Share

ನವದೆಹಲಿ: ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ನಿನ್ನೆ (ಜುಲೈ 1) ವಿಲೀನಗೊಂಡ (HDFC merger) ಬೆನ್ನಲ್ಲೇ ಜಾಗತಿಕ ಬ್ಯಾಂಕಿಂಗ್ ದೈತ್ಯವೊಂದು ಭಾರತದಿಂದ ಸಿದ್ಧಗೊಂಡಿದೆ. ವಿಲೀನದ ಬಳಿಕ ಮಾತನಾಡಿದ ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ಶಶಿಧರ್ ಜಗದೀಶನ್, ಮುಂಬರುವ ವರ್ಷಗಳಲ್ಲಿ ತಮ್ಮ ಬ್ಯಾಂಕ್ ಅದ್ವಿತೀಯ ವೇಗದಲ್ಲಿ ಬೆಳೆಯಲಿದೆ ಎಂದು ಹೇಳಿಕೊಂಡಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಸೇವೆಗಳು ತಲುಪುವ ನಿಟ್ಟಿನಲ್ಲಿ ಪ್ರತೀ ವರ್ಷವೂ 1,500ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ಸೇರಿಸುತ್ತಾ ಹೋಗುತ್ತೇವೆ. ಪ್ರತೀ ನಾಲ್ಕು ವರ್ಷಕ್ಕೆ ಹೊಸ ಎಚ್​ಡಿಎಫ್​ಸಿ ಬ್ಯಾಂಕ್ ಸೃಷ್ಟಿಯಾಗುತ್ತಿರುತ್ತದೆ ಎಂದು ಅವರು ತಮ್ಮ ಸಂಸ್ಥೆಯ ವಿಚಾರದಲ್ಲಿ ಮಹತ್ವಾಕಾಂಕ್ಷೆಗಳನ್ನು ತೋಡಿಕೊಂಡಿದ್ದಾರೆ.

‘ಹಣಕಾಸು ಸೇವೆ ಮತ್ತು ಅಡಮಾನ ಸಾಲಗಳಿಗೆ ಬಹಳ ದೊಡ್ಡ ಅವಕಾಶ ಇದೆ. ಎರಡೂ ಸಂಸ್ಥೆಗಳು ಸೇರಿರುವ ಎಚ್​ಡಿಎಫ್​ಸಿ ಬ್ಯಾಂಕ್​ಗೆ ದೊಡ್ಡ ಗ್ರಾಹಕ ಸಮೂಹ ಇದೆ. ಸಾಕಷ್ಟು ಬಂಡವಾಳ ಇದೆ. ಒಳ್ಳೆಯ ಸಾಲಗಳಿವೆ. ಲಾಭ ಕೂಡ ಇದೆ. ಬೆಳವಣಿಗೆ ಸಾಧಿಸಲು ಎಚ್​ಡಿಎಫ್​ಸಿ ಬ್ಯಾಂಕ್ ಸಮರ್ಥವಾಗಿದೆ. ನಾವು ಅಂದುಕೊಂಡಿರುವ ಗುರಿ ಪ್ರಕಾರ ಬೆಳವಣಿಗೆ ಸಾಧಿಸುತ್ತಾ ಹೋದರೆ ಪ್ರತೀ 4 ವರ್ಷಗಳಿಗೆ ಹೊಸ ಎಚ್​ಡಿಎಫ್​ಸಿ ಬ್ಯಾಂಕ್​ವೊಂದನ್ನೇ ತಯಾರಿಸುತ್ತಾ ಹೋಗುತ್ತೇವೆ’ ಎಂದು ಬ್ಯಾಂಕ್​ನ ಎಂಡಿ ಮತ್ತು ಸಿಇಒ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿMost Valuable Banks: ಎಚ್​ಡಿಎಫ್​ಸಿಗಳ ವಿಲೀನದ ಬಳಿಕ ಸೃಷ್ಟಿಯಾಗಲಿದೆ ವಿಶ್ವದ ಅಗ್ರಗಣ್ಯ ಬ್ಯಾಂಕ್; ಜರ್ಮನಿ ಜನಸಂಖ್ಯೆಗಿಂತಲೂ ಹೆಚ್ಚಿನ ಗ್ರಾಹಕರು, ಅಗಾಧ ಷೇರುಸಂಪತ್ತು

ಮುಂದಿನ ದಿನಗಳಲ್ಲಿ ನಾವು ಮಾಡುವ ವ್ಯವಹಾರದ ಸ್ವರೂಪವೇ ಗಮನಾರ್ಹವಾಗಿ ಬದಲಾಗಲಿದೆ. ಸೇಲ್ಸ್ ಮ್ಯಾನೇಜ್ಮೆಂಟ್​ನಿಂದ ನಾವು ರಿಲೇಶನ್​ಶಿಪ್ ಮ್ಯಾನೇಜ್ಮೆಂಟ್ ಕಡೆಗೆ ಹೋಗಲಿದ್ದೇವೆ. ಗ್ರಾಹಕರಿಗೆ ಸೇವೆ ನೀಡುವ ಕ್ರಮದಲ್ಲಿ ಕ್ಷಿಪ್ರತೆ ಇತ್ಯಾದಿ ಅಂಶಗಳು ಗೇಮ್ ಚೇಂಜರ್ ಆಗಲಿವೆ ಎಂದು ಶಶಿಧರ್ ಜಗದೀಶನ್ ವಿವರಿಸಿದ್ದಾರೆ.

ಗೃಹಸಾಲ ವೃದ್ಧಿಗೆ ಎಚ್​ಡಿಎಫ್​ಸಿ ಬ್ಯಾಂಕ್ ಕಣ್ಣು

ವಿಲೀನಗೊಳ್ಳುವ ಮುನ್ನ ಎಚ್​ಡಿಎಫ್​ಸಿ ಗೃಹ ಸಾಲ ಕೊಡುವ ಹಣಕಾಸು ಸಂಸ್ಥೆಯಾಗಿತ್ತು. ಆದರೆ, ಅದರ ಗ್ರಾಹಕರ ಸಂಖ್ಯೆ ತೀರಾ ಹೆಚ್ಚೇನೂ ಇಲ್ಲ. ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಗೃಹಸಾಲಗಳನ್ನು ಹೆಚ್ಚಿಸುವ ಅವಕಾಶ ಇದೆ. ಈ ನಿಟ್ಟಿನಲ್ಲಿ ಗಮನ ವಹಿಸಲಾಗುತ್ತದೆ ಎಂದೂ ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿApple Card: ಭಾರತಕ್ಕೆ ಬರಲಿದೆಯೇ ಆ್ಯಪಲ್ ಕ್ರೆಡಿಟ್ ಕಾರ್ಡ್? ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಆ್ಯಪಲ್ ಸಿಇಒ ಮಾತುಕತೆ?

ಎಚ್​ಡಿಎಫ್​ಸಿ ವಿಲೀನದ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್ ವಿಶ್ವದ ಟಾಪ್-5 ಬ್ಯಾಂಕುಗಳಲ್ಲಿ ಒಂದೆನಿಸಿದೆ. ಹಲವು ಅಮೆರಿಕನ್ ಮತ್ತು ಚೀನೀ ಬ್ಯಾಂಕಿಂಗ್ ದೈತ್ಯರಿಗಿಂತ ಎಚ್​ಡಿಎಫ್​ಸಿ ಮೇಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ