AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಡಿಎಫ್​ಸಿ ಬ್ಯಾಂಕ್​ ಶೇ 17.5ರಷ್ಟು ಏರಿಕೆಯಾಗಿ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 8834 ಕೋಟಿ ನಿವ್ವಳ ಲಾಭ

ಎಚ್​ಡಿಎಫ್​ಸಿ ಬ್ಯಾಂಕ್​ನ 2021-22ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಲಾಭವು ಶೇ 17.5ಯಷ್ಟು ಏರಿಕೆ ಆಗಿದ್ದು, ರೂ. 8834 ಕೋಟಿ ರೂಪಾಯಿಯನ್ನು ತಲುಪಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ ಶೇ 17.5ರಷ್ಟು ಏರಿಕೆಯಾಗಿ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 8834 ಕೋಟಿ ನಿವ್ವಳ ಲಾಭ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 16, 2021 | 8:20 PM

Share

ಹಣಕಾಸು ವರ್ಷ 2022ರ ಎರಡನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್) ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 17.5ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 7,513.11 ಕೋಟಿ ರೂಪಾಯಿಗೆ ಹೋಲಿಸಿದರೆ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಬ್ಯಾಂಕ್​ನ ನಿವ್ವಳ ಲಾಭ 8,834.31 ಕೋಟಿ ರೂಪಾಯಿಯಷ್ಟಿದೆ. ನಿವ್ವಳ ಬಡ್ಡಿ ಆದಾಯ, ಅಥವಾ ಮೂಲ ಆದಾಯ ವರ್ಷದಿಂದ ವರ್ಷಕ್ಕೆ ಶೇ 12ರಷ್ಟು ಏರಿಕೆಯಾಗಿದ್ದು, 17,684 ಕೋಟಿಗೆ ತಲುಪಿದೆ. ಇತರ ಆದಾಯವು ಕೂಡ ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಶೇ 21.5ರಷ್ಟು ಹೆಚ್ಚಳವಾಗಿ, 7,401 ಕೋಟಿ ರೂಪಾಯಿಗೆ ಮುಟ್ಟಿದೆ. ಬ್ಯಾಂಕ್​ನ ಆಸ್ತಿಯ ಗುಣಮಟ್ಟವು ಅನುಕ್ರಮವಾಗಿ ಸುಧಾರಿಸಿದೆ. ಒಟ್ಟಾರೆ ಅನುತ್ಪಾದಕ ಆಸ್ತಿ ಅನುಪಾತವು ಜೂನ್ 30ರ ವೇಳೆಗೆ ಶೇ 1.47 ರೊಂದಿಗೆ ಹೋಲಿಸಿದರೆ ಈಗ ಶೇ 1.35 ಇದೆ. ನಿವ್ವಳ ಎನ್​ಪಿಎ ಅನುಪಾತವು ಸಹ 8 ಬೇಸಿಸ್​ ಪಾಯಿಂಟ್ ಕಡಿಮೆಯಾಗಿ, ತ್ರೈಮಾಸಿಕದಿಂದ ತ್ರೈಮಾಸಿಕದಿಂದ ಶೇ 0.4ಕ್ಕೆ ಇಳಿದಿದೆ.

ಬ್ಯಾಂಕಿನ ಒಟ್ಟು ಪ್ರಾವಿಷನ್​ಗಳು ವರ್ಷದಿಂದ ವರ್ಷಕ್ಕೆ ಶೇ. 6 ರಷ್ಟು ಏರಿಕೆಯಾಗಿ, ರೂ. 3,925 ಕೋಟಿಗೆ ತಲುಪಿದೆ. ಬ್ಯಾಂಕ್ ಹಂಚಿಕೊಂಡ ತ್ರೈಮಾಸಿಕ ಮಾಹಿತಿಯ ಪ್ರಕಾರ, ಕೊವಿಡ್ ಪೀಡಿತ ಸಾಲಗಾರರಿಗಾಗಿ ರಿಸರ್ವ್ ಬ್ಯಾಂಕ್ ಚೌಕಟ್ಟಿನ ಅಡಿಯಲ್ಲಿ ಪುನರ್​ರಚಿಸಿದ, 5,647.5 ಕೋಟಿ ಮೌಲ್ಯದ ಚಿಲ್ಲರೆ ಸಾಲಗಳಲ್ಲಿ, ಸೆಪ್ಟೆಂಬರ್ 30ರ ವೇಳೆಗೆ ಸುಮಾರು ಶೇ 25ರಷ್ಟು ಅಥವಾ 1,283 ಕೋಟಿ ರೂಪಾಯಿ ನಾನ್​ ಪರ್ಫಾರ್ಮಿಂಗ್ ಆಗಿದೆ. ಎರಡನೇ ತ್ರೈಮಾಸಿಕದಲ್ಲಿ 808.5 ಕೋಟಿ ರೂಪಾಯಿ ಮೌಲ್ಯದ ಚಿಲ್ಲರೆ ಸಾಲಗಳನ್ನು ಸಹ ಎಚ್​ಡಿಎಫ್​ಸಿ ಬ್ಯಾಂಕ್ ರೈಟ್ ಆಫ್ ಮಾಡಿದೆ. ಆರ್‌ಬಿಐನ ವಿಶೇಷ ವಿಂಡೋದ ಅಡಿಯಲ್ಲಿ ಒಟ್ಟು ಪುನರ್​ರಚಿಸಲಾದ ಸಾಲಗಳು 7,829.48 ಕೋಟಿ ರೂಪಾಯಿಗಳಷ್ಟಿದ್ದು, ಅದರಲ್ಲಿ 1,687 ಕೋಟಿ ರೂಪಾಯಿಗಳು ಎನ್‌ಪಿಎ ಆಗಿ ಮಾರ್ಪಟ್ಟಿವೆ ಮತ್ತು 856.7 ಕೋಟಿ ರೂಪಾಯಿಗಳನ್ನು ರೈಟ್ ಆಫ್ ಮಾಡಲಾಗಿದೆ.

ರೆಸಲ್ಯೂಶನ್ ಫ್ರೇಮ್‌ವರ್ಕ್ 2.0 ಅಡಿಯಲ್ಲಿ ಪುನರ್​ರಚನೆಯು 14,100 ಕೋಟಿ ರೂಪಾಯಿ ವೈಯಕ್ತಿಕ ಸಾಲಗಳು, 1500 ಕೋಟಿ ವೈಯಕ್ತಿಕ uದ್ಯಮ ಸಾಲಗಳು ಮತ್ತು 1,780 ಕೋಟಿ ರೂಪಾಯಿಗಳು ಸಣ್ಣ ಉದ್ಯಮ ಸಾಲಗಳಿಗೆ ಬಂದಿತು. ಒಟ್ಟಾಗಿ ಬ್ಯಾಂಕ್ ಈ ಚೌಕಟ್ಟಿನ ಅಡಿಯಲ್ಲಿ ಶೇ 1.45ರಷ್ಟು ಅಡ್ವಾನ್ಸಸ್ ಪುನರ್​ರಚಿಸಿತು ಮತ್ತು ಈ ನಿಟ್ಟಿನಲ್ಲಿ 2000 ಕೋಟಿ ರೂಪಾಯಿ ಪ್ರಾವಿಷನ್ಸ್ ಸೃಷ್ಟಿಸಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಒಟ್ಟು ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ 15.4ರಷ್ಟು ಏರಿಕೆಯಾಗಿ, 11.98 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದರಲ್ಲಿ ರೀಟೇಲ್ ಮುಂಗಡಗಳು ಶೇ 12.9, ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್ ಸಾಲಗಳು ಶೇ 27.6ರಷ್ಟು ಏರಿಕೆಯಾಗಿದ್ದು, ಸಗಟು ಸಾಲಗಳು ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಶೇ 6ರಷ್ಟು ಹೆಚ್ಚಾಗಿದೆ. ಒಟ್ಟು ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇ 14.4ರಷ್ಟು ಏರಿಕೆಯಾಗಿದ್ದು, 14.06 ಲಕ್ಷ ಕೋಟಿ ರೂಪಾಯಿಯಾಗಿದೆ.

ಕರೆಂಟ್​ ಅಕೌಂಟ್ (ಚಾಲ್ತಿ ಖಾತೆ) ಸೇವಿಂಗ್ಸ್ ಅಕೌಂಟ್ (ಉಳಿತಾಯ ಖಾತೆ) ಠೇವಣಿಗಳು ಒಂದು ವರ್ಷದ ಹಿಂದಿನದಕ್ಕಿಂತ ಶೇ 28.7ರಷ್ಟು ಹೆಚ್ಚಾಗಿದೆ. CASA (ಕರೆಂಟ್ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್) ಠೇವಣಿಗಳು ಈಗ ಒಟ್ಟು ಠೇವಣಿಗಳಲ್ಲಿ ಶೇ 46.8ರಷ್ಟಿದೆ.

ಇದನ್ನೂ ಓದಿ: HDFC Bank Credit Card: ಕ್ರೆಡಿಟ್​ ಕಾರ್ಡ್ ವಿತರಣೆಗೆ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಇದ್ದ ನಿರ್ಬಂಧ ತೆಗೆದ ಆರ್​ಬಿಐ

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?