AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Avenue Supermarts: ಅವೆನ್ಯೂ ಸೂಪರ್​ಮಾರ್ಟ್ಸ್ ಲಾಭ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 110ರಷ್ಟು ಏರಿಕೆ

ಡಿಮಾರ್ಟ್ ರೀಟೇಲ್ ಸ್ಟೋರ್ ಸರಣಿ ನಡೆಸುವ ಅವೆನ್ಯೂ ಸೂಪರ್​ಮಾರ್ಟ್ಸ್​ನ ಸೆಪ್ಟೆಂಬರ್ ತ್ರೈಮಾಸಿಕದ ಲಾಭ ಶೇ 110ರಷ್ಟು ಹೆಚ್ಚಾಗಿದೆ. ಆ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

Avenue Supermarts: ಅವೆನ್ಯೂ ಸೂಪರ್​ಮಾರ್ಟ್ಸ್ ಲಾಭ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 110ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 16, 2021 | 4:26 PM

Share

ಡಿಮಾರ್ಟ್ (DMart) ರೀಟೇಲ್ ಸ್ಟೋರ್​ಗಳ ಸರಣಿಯನ್ನು ನಿರ್ವಹಣೆ ಮಾಡುವ ಅವೆನ್ಯೂ ಸೂಪರ್​ಮಾರ್ಟ್ಸ್ ತೆರಿಗೆ ನಂತರದ ಕ್ರೋಡೀಕೃತವಾದ ಲಾಭ ಎಂದು 417.76 ಕೋಟಿ ರೂಪಾಯಿಯನ್ನು 2021ರ ಸೆಪ್ಟೆಂಬರ್​ಗೆ ಕೊನೆಯಾದ ತ್ರೈಮಾಸಿಕದದಲ್ಲಿ ದಾಖಲು ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ 198.55 ಕೋಟಿ ರೂಪಾಯಿಗೆ ಹೋಲಿಸಿದಲ್ಲಿ, 2020ರ ಸೆಪ್ಟೆಂಬರ್ ತ್ರೈಮಾಸಿಕಕ್ಕಿಂತ ಶೇ 110.4ರಷ್ಟು ಹೆಚ್ಚು ಲಾಭ ದಾಖಲಿಸಿದೆ. ಕ್ರೋಡೀಕೃತ ಆದಾಯವು ಶೇ 46.8ರಷ್ಟು ಮೇಲೇರಿ, 7789 ಕೋಟಿ ರೂಪಾಯಿ ಈ ತ್ರೈಮಾಸಿಕದಲ್ಲಿ ಬಂದಿದೆ. 2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 5306.20 ಕೋಟಿ ರೂಪಾಯಿ ಲಾಭ ಬಂದಿತ್ತು.

“ಡಿಮಾರ್ಟ್ ಸ್ಟೋರ್​ನ ಆದಾತ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ ಶೇ 46.6ರಷ್ಟು ಹೆಚ್ಚಾಗಿದೆ ಎರಡು ವರ್ಷ ಮತ್ತು ಅದಕ್ಕಿಂತ ಹಳೆಯ ಡಿಮಾರ್ಟ್ ಸ್ಟೋರ್​ಗಳು 2021ರ ಸೆಪ್ಟೆಂಬರ್​ನಲ್ಲಿ ಶೇ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 23.7ರಷ್ಟು ಬೆಳವಣಿಗೆ ದಾಖಲಿಸಿವೆ. ನಾವು 187 ಸ್ಟೋರ್​ಗಳನನ್ನು ಹೊಂದಿದ್ದು, ಅವು 2 ವರ್ಷ ಅಥವಾ ಅದಕ್ಕಿಂತ ಹಳೆಯವು,” ಎಂದು ಅವೆನ್ಯೂ ಸೂಪರ್​ಮಾರ್ಟ್ಸ್​ನ ನೆವಿಲ್ಲೆ ನರೋನ್ಹಾ ಹೇಳಿದ್ದಾರೆ.

ಅಕ್ಟೋಬರ್ 14ನೇ ತಾರೀಕಿನ ಗುರುವಾರದಂದು ಮಾರುಕಟ್ಟೆಯ ಮುಕ್ತಾಯದ ವೇಳೆಗೆ 206.60 ರೂಪಾಯಿ ಅಥವಾ ಶೇ 4.04ರಷ್ಟು ಮೇಲೇರಿ 5323.75 ರೂಪಾಯಿಗೆ ಈ ಸ್ಟಾಕ್ ವಹಿವಾಟು ಮುಗಿಸಿದೆ. ಕಳೆದ ಒಂದು ವರ್ಷದಲ್ಲಿ ಈ ಷೇರು ಶೇ 16ರಷ್ಟು ರಿಟರ್ನ್ಸ್ ನೀಡಿದೆ. ಇನ್ನು ಕಳೆದ ಮೂರು ತಿಂಗಲ್ಲಿ ಶೇ 60ರಷ್ಟು ಹಾಗೂ ಕಳೆದ ಒಂದು ತಿಂಗಳಲ್ಲಿ ಶೇ 33.77ರಷ್ಟು ರಿಟರ್ನ್ಸ್ ನೀಡಿದೆ.

ಇದನ್ನೂ ಓದಿ: HCL Technologies: ಎಚ್​ಸಿಎಲ್​ ಟೆಕ್ನಾಲಜೀಸ್ ಎರಡನೇ ತ್ರೈಮಾಸಿಕದ ಲಾಭ ರೂ. 3259 ಕೋಟಿ, ಡಿವಿಡೆಂಡ್ ರೂ. 10

Infosys: ಇನ್ಫೋಸಿಸ್​ಗೆ ಎರಡನೇ ತ್ರೈಮಾಸಿಕದಲ್ಲಿ ರೂ. 5421 ಕೋಟಿ ಲಾಭ; 15 ರೂ. ಡಿವಿಡೆಂಡ್ ಘೋಷಣೆ

Follow Us
Web contact
Web contact

TV9 Kannada

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್