AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC Bank Credit Card: ಕ್ರೆಡಿಟ್​ ಕಾರ್ಡ್ ವಿತರಣೆಗೆ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಇದ್ದ ನಿರ್ಬಂಧ ತೆಗೆದ ಆರ್​ಬಿಐ

ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಕ್ರೆಡಿಟ್ ಕಾರ್ಡ್ ವಿತರಣೆಗೆ ಇದ್ದ ನಿರ್ಬಂಧವನ್ನು ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ ತೆಗೆದಿರುವುದಾಗಿ ಬ್ಯಾಂಕ್​ ಮೂಲಗಳು ತಿಳಿಸಿವೆ.

HDFC Bank Credit Card: ಕ್ರೆಡಿಟ್​ ಕಾರ್ಡ್ ವಿತರಣೆಗೆ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಇದ್ದ ನಿರ್ಬಂಧ ತೆಗೆದ ಆರ್​ಬಿಐ
ಎಚ್‌ಡಿಎಫ್‌ಸಿ ಬ್ಯಾಂಕ್‌
TV9 Web
| Updated By: Srinivas Mata|

Updated on:Aug 17, 2021 | 11:11 PM

Share

ದೇಶದ ಅತಿದೊಡ್ಡ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾಗಶಃ ನಿರಾಳ ಆಗುವಂಥ ಸುದ್ದಿ ಬಂದಿದೆ. ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಣೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್‌ಬಿಐ) ಅನುಮತಿ ನೀಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್​ನಿಂದ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡದಂತೆ ಮತ್ತು ಡಿಜಿಟಲ್ 2.0 ಕಾರ್ಯಕ್ರಮದ ಅಡಿಯಲ್ಲಿ ತನ್ನ ಡಿಜಿಟಲ್ ವ್ಯವಹಾರ ಚಟುವಟಿಕೆಗಳು ಎಲ್ಲ ಆರಂಭಗಳನ್ನು ನಿಲ್ಲಿಸುವಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆಯಾದ ಆರ್​ಬಿಐ ನಿರ್ದೇಶನ ನೀಡಿತು. ಎಚ್‌ಡಿಎಫ್‌ಸಿ ಬ್ಯಾಂಕ್​ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ ಹಲವು ಬಾರಿ ಸ್ಥಗಿತಗೊಂಡಿದ್ದರಿಂದ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ಹೇರುವುದಕ್ಕೆ ಆರ್‌ಬಿಐ ನಿರ್ಧಾರಕ್ಕೆ ಬಂದಿತು.

“ಹೊಸ ಕಾರ್ಡ್‌ಗಳನ್ನು ನೀಡುವುದಕ್ಕೆ ಇದ್ದ ನಿರ್ಬಂಧಗಳನ್ನು ಕೊನೆಗೊಳಿಸಲಾಗಿದೆ ಮತ್ತು ಹೊಸ ಕ್ರೆಡಿಟ್ ಕಾರ್ಡ್‌ಗಳ ಸೋರ್ಸಿಂಗ್ ಅನ್ನು ಕೈಗೊಳ್ಳಲು ಆರ್‌ಬಿಐ ಈಗ ಬ್ಯಾಂಕ್‌ಗೆ ಅನುಮತಿ ನೀಡಿದೆ,” ಎಂದು ಮೂಲಗಳು ತಿಳಿಸಿವೆ. ಕ್ರೆಡಿಟ್​ ಕಾರ್ಡ್ ವಿತರಣೆಯ ಮೇಲಿನ ನಿಷೇಧವು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರಿ ಹೊಡೆತ ನೀಡಿತು. ಏಕೆಂದರೆ ಅದರ ಒಟ್ಟು ಕಾರ್ಡ್ ಬೇಸ್ ಕಳೆದ ಡಿಸೆಂಬರ್‌ನಲ್ಲಿ 1.54 ಕೋಟಿ ಇದ್ದದ್ದು, ಈ ವರ್ಷದ ಜೂನ್ ಹೊತ್ತಿಗೆ​ 1.48 ಕೋಟಿಗೆ ಇಳಿದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ದೇಶದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ನೀಡುವ ಸಂಸ್ಥೆಯಾಗಿದೆ ಮತ್ತು ನಿಷೇಧದ ನಂತರವೂ ಅದೇ ಸ್ಥಾನದಲ್ಲಿಯೇ ಉಳಿದಿದೆ. ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಈ ನಿಷೇಧವು ಎಚ್​ಡಿಎಫ್​ಸಿ ಬ್ಯಾಂಕ್ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವಂತೆ ಮಾಡಿತು. ಏಕೆಂದರೆ ಅದರ ಕೆಲವು ಪ್ರತಿಸ್ಪರ್ಧಿಗಳು ಮುಂಚೂಣಿಗೆ ಬಂದವು.

ಜೂನ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ, ಬ್ಯಾಂಕ್​ನ ಪೇಮೆಂಟ್ ವ್ಯವಹಾರದ ದೇಶದ ಮುಖ್ಯಸ್ಥ ಮತ್ತು ತಂತ್ರಜ್ಞಾನ ಪರಿವರ್ತನೆಯ ಉಸ್ತುವಾರಿ ವಹಿಸಿದ ಪರಾಗ್ ರಾವ್ ಮಾತನಾಡಿ, ಕ್ರೆಡಿಟ್ ಕಾರ್ಡ್ ವ್ಯವಹಾರದ ನಿರ್ಬಂಧ ತೆಗೆದರೆ ಆಕ್ರಮಣಕಾರಿಯಾಗಿ ಮರಳಲು ಬ್ಯಾಂಕ್ ಯೋಜನೆಯನ್ನು ಸಿದ್ಧಪಡಿಸಿದೆ. “ನಾವು ಮಾರುಕಟ್ಟೆಯಲ್ಲಿ ಹಿಡಿತವನ್ನು ಹೆಚ್ಚಿಸಿಕೊಳ್ಳಲಿದ್ದೇವೆ,” ಎಂದು ಹೇಳಿದ್ದರು. ಎಚ್‌ಡಿಎಫ್‌ಸಿ ಬ್ಯಾಂಕ್ ಕಳೆದ ಕೆಲವು ತಿಂಗಳಿಂದ ಲಯಾಬಿಲಿಟಿ ಗ್ರಾಹಕರನ್ನು ಆಕ್ರಮಣಕಾರಿಯಾಗಿ ಪಡೆಯುತ್ತಿದೆ, ನಿಷೇಧವನ್ನು ತೆಗೆದುಹಾಕಿದ ನಂತರ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಬಹುದು.

ನಿಷೇಧವನ್ನು ಜಾರಿಗೊಳಿಸುವಾಗಲೇ ಆರ್​ಬಿಐ ತಿಳಿಸಿದ್ದಂತೆ, ನಿಯಮಾವಳಿಗಳನ್ನು ಸಮಾಧಾನಕರ ಎನಿಸುವಂತೆ ಅನುಸರಿಸುತ್ತಿದ್ದಲ್ಲಿ ಮಾತ್ರ ಅವಲೋಕನದ ನಂತರ ನಿರ್ಬಂಧ ತೆಗೆಯಲಾಗುವುದು ಎಂದು ಆರ್​ಬಿಐ ತಿಳಿಸಿತ್ತು. ನಿಷೇಧದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ತಕ್ಷಣದ, ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿಯ ಮೇಲೆ ಕೇಂದ್ರೀಕರಿಸುವ ಯೋಜನೆಯನ್ನು ಕೆಲವು ತಿಂಗಳ ಹಿಂದೆ ಆರ್​ಬಿಐಗೆ ಸಲ್ಲಿಸಿತ್ತು. “ಸುಧಾರಣೆಗಾಗಿ ಗುರುತಿಸಲಾದ ಸಂಗತಿಗಳನ್ನು ಬಲಪಡಿಸಲು ನಾವು ತಜ್ಞರು ಮತ್ತು ನಿಯಂತ್ರಕರೊಂದಿಗೆ ಕೆಲಸ ಮಾಡುತ್ತೇವೆ. ಆಂತರಿಕವಾಗಿ ನಮ್ಮನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಮತ್ತು ಬಲಶಾಲಿಯಾಗಿ ಹೊರಹೊಮ್ಮಲು ಇದೊಂದು ಅವಕಾಶ ಎಂದು ನಾವು ನೋಡುತ್ತಿದ್ದೇವೆ,” ಎಂದು 2020ರ ಡಿಸೆಂಬರ್​ನಲ್ಲಿ ನಿಷೇಧ ಹೇರಿದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಂ.ಡಿ. ಮತ್ತು ಸಿಇಒ ಶಶಿ ಜಗದೀಶನ್ ಹೇಳಿದ್ದರು.

ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ತಾಂತ್ರಿಕ ಮೂಲಸೌಕರ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಬ್ಯಾಂಕ್ ತಂತ್ರಜ್ಞಾನ ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡುತ್ತಿದೆ, ಹೊಸ ಪ್ರತಿಭೆಗಳನ್ನು ತರುತ್ತಿದೆ, ಕ್ಲೌಡ್-ನೇಟಿವ್ ಸ್ಟಾಕ್‌ಗಳಿಗೆ ಪ್ರವೇಶಿಸುತ್ತಿದೆ. ಸಾಂಪ್ರದಾಯಿಕ ಏಕರೀತಿಯ ಐಟಿ ಮೂಲಸೌಕರ್ಯಗಳಿಂದ ಬದಲಾಗಿದ್ದು, ಉತ್ತಮ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಸ್ಟ್ರಾಟೆಜಿಕ್ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಎಚ್​ಡಿಎಫ್​ಸಿ ಬ್ಯಾಂಕ್​ನ ಹೊಸ ಡಿಜಿಟಲ್ ಕೊಡುಗೆಗಳು, ಕ್ರೆಡಿಟ್​ ಕಾರ್ಡ್​ ಗ್ರಾಹಕರ ನೋಂದಣಿಗೆ ಆರ್​ಬಿಐ ನಿರ್ಬಂಧ

Penalty to HDFC Bank: ಎಚ್​ಡಿಎಫ್​ಸಿ ಬ್ಯಾಂಕ್​ಗೆ ರೂ. 10 ಕೋಟಿ ದಂಡ ಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

(Now HDFC Bank Can Start To Issue Credit Card As RBI Eases Curb According To Sources)

Published On - 11:05 pm, Tue, 17 August 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?