AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಡಿಎಫ್​ಸಿ ಖಾತೆ ಬಳಸಿ ನಡೆಯುವ ಅಲ್ಪ ಮೊತ್ತದ ಯುಪಿಐ ವಹಿವಾಟಿಗೆ ಎಸ್ಸೆಮ್ಮೆಸ್ ಬರಲ್ಲ

HDFC Bank alert messages for UPI transactions: ಎಚ್​ಡಿಎಫ್​ಸಿ ಬ್ಯಾಂಕ್​ನ ಖಾತೆ ಬಳಸಿ ನಡೆಯುವ ಅಲ್ಪಮೊತ್ತದ ಯುಪಿಐ ವಹಿವಾಟಿನಲ್ಲಿ ಗ್ರಾಹಕರಿಗೆ ಅಲರ್ಟ್ ಮೆಸೇಜ್ ಸಿಗುವುದಿಲ್ಲ. ಯುಪಿಐ ವಹಿವಾಟಿನಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯಿಂದ 100 ರೂ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಹಣ ಪಾವತಿಯಾದರೆ ಅದರ ಗ್ರಾಹಕರಿಗೆ ಬ್ಯಾಂಕ್​ನಿಂದ ಎಸ್ಸೆಮ್ಮೆಸ್ ಮೆಸೇಜ್ ಬರಲ್ಲ. ಹಾಗೆಯೇ, ಖಾತೆಗೆ 500 ರೂ ಒಳಗಿನ ಮೊತ್ತದ ಹಣ ಜಮೆ ಆದರೂ ಕೂಡ ಎಸ್ಸೆಮ್ಮೆಸ್ ಅಲರ್ಟ್ ಬರಲ್ಲ. ಯುಪಿಐ ವಹಿವಾಟು ಬಹಳ ಹೆಚ್ಚು ನಡೆಯುತ್ತಿರುವುದರಿಂದ ಎಸ್ಸೆಮ್ಮೆಸ್ ವೆಚ್ಚ ಹೆಚ್ಚುತ್ತಿದ್ದು, ಅದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಎಚ್​ಡಿಎಫ್​ಸಿ ಖಾತೆ ಬಳಸಿ ನಡೆಯುವ ಅಲ್ಪ ಮೊತ್ತದ ಯುಪಿಐ ವಹಿವಾಟಿಗೆ ಎಸ್ಸೆಮ್ಮೆಸ್ ಬರಲ್ಲ
ಯುಪಿಐ ವಹಿವಾಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2024 | 6:07 PM

Share

ನವದೆಹಲಿ, ಮೇ 29: ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯಲ್ಲಿ ಅಲ್ಪ ಮೊತ್ತದ ವಹಿವಾಟಿಗೆ (low value UPI transactions) ನಡೆದಲ್ಲಿ ಅದರ ಅಲರ್ಟ್ ಮೆಸೇಜ್ ಖಾತೆದಾರರ ಮೊಬೈಲ್​ಗೆ ಬರುವುದಿಲ್ಲ. ಎಚ್​ಡಿಎಫ್​ಸಿ ಬ್ಯಾಂಕ್ ಈ ವಿಚಾರವನ್ನು ತಿಳಿಸಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯಿಂದ ನೂರು ರೂ ಪಾವತಿಯಾದಲ್ಲಿ, ಮತ್ತು ಖಾತೆಗೆ ಐನ್ನೂರು ರೂ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಹಣ ಜಮೆ ಆದಲ್ಲಿ ಅಲರ್ಟ್ ಮೆಸೇಜ್ ಬರುವುದಿಲ್ಲ. ಜೂನ್ 25ರಿಂದ ಇದು ಜಾರಿಗೆ ಬರಲಿದೆ.

ನೂರು ರೂ ಮೇಲ್ಪಟ್ಟ ಪಾವತಿ ಹಾಗೂ 500 ರೂ ಮೇಲ್ಪಟ್ಟ ಸ್ವೀಕೃತಿಗೆ ಮಾತ್ರವೇ ಮೆಸೇಜ್ ಬರುತ್ತದೆ. ಒಟ್ಟಿಗೆ ಮಸೇಜ್​ಗಳನ್ನು ಕಳುಹಿಸಲು ಸಾಕಷ್ಟು ವೆಚ್ಚವಾಗುವುದರಿಂದ ಬ್ಯಂಕ್ ಈ ನಿರ್ಧಾರ ಕೈಗೊಂಡಿದೆ. ಅದು ಮಾಹಿತಿ ನೀಡಿರುವ ಪ್ರಕಾರ, ಈ ರೀತಿಯ ಎಸ್ಸೆಮ್ಮೆಸ್​ಗಾಗಿ ನಿತ್ಯವೂ ಕೋಟ್ಯಂತರ ರೂ ವೆಚ್ಚವಾಗುತ್ತದೆ. ಯುಪಿಐ ವಹಿವಾಟು ಬಹಳ ಅಧಿಕ ಇರುವುದರಿಂದ ಅಲರ್ಟ್ ಮೆಸೇಜ್​ಗಳಿಗಾಗಿ ಎಚ್​ಡಿಎಫ್​ಸಿ ಬ್ಯಾಂಕ್ ದಿನಕ್ಕೆ ಸುಮಾರು 40 ಕೋಟಿ ರೂ ವ್ಯಯಿಸುತ್ತದೆ.

ಇದನ್ನೂ ಓದಿ: ಪೇಟಿಎಂ ಖರೀದಿಸಲು ಮುಂದಾದ್ರಾ ಅದಾನಿ? ಇಲ್ಲ ಎನ್ನುತ್ತಿವೆ ಎರಡೂ ಸಂಸ್ಥೆಗಳು

ಕಡಿಮೆ ಮೊತ್ತದ ವಹಿವಾಟಿಗೆ ಎಚ್​ಡಿಎಫ್​ಸಿಯಿಂದ ಎಸ್ಸೆಮ್ಮೆಸ್ ಬರದೇ ಹೋದರೂ ಇಮೇಲ್ ಅಲರ್ಟ್ ಮುಂದುವರಿಯುತ್ತದೆ. ಹಾಗೆಯೇ, ಯುಪಿಐ ವಹಿವಾಟು ನಡೆಯುವ ಪ್ಲಾಟ್​ಫಾರ್ಮ್​ಗಳೂ ಕೂಡ ಅಲರ್ಟ್ ಮೆಸೇಜ್ ಕಳುಹಿಸುತ್ತವೆ. ಉದಾಹರಣೆಗೆ, ಫೋನ್ ಪೆ ವ್ಯಾಲಟ್​ನಿಂದ ಹಣ ಪಾವತಿಯಾದರೆ ಅದರ ಅಲರ್ಟ್ ಮೆಸೇಜ್ ಯುಪಿಐ ಬಳಕೆದಾರರಿಗೆ ಹೋಗುತ್ತದೆ.

ಯುಪಿಐ ವಹಿವಾಟು ಬಳಕೆ ಆಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 2016ರಲ್ಲಿ ಮೊದಲ ಬಾರಿಗೆ ಯುಪಿಐ ಚಾಲನೆಗೆ ಬಂದಿತ್ತು. ಕೋವಿಡ್ ಕಾಲಘಟ್ಟದಲ್ಲಿ ಯುಪಿಐ ವಹಿವಾಟು ಬಹಳ ವ್ಯಾಪಕ ಬಳಕೆಗೆ ಬಂದಿತ್ತು. 2023ರಲ್ಲಿ 11,768 ಕೋಟಿ ರೂ ಮೊತ್ತದ ವಹಿವಾಟು ಯುಪಿಐನಲ್ಲಿ ಆಗಿರುವುದು ಗೊತ್ತಾಗಿದೆ. ಒಟ್ಟಾರೆ ನಡೆಯುವ ಹಣ ವಹಿವಾಟಿನಲ್ಲಿ ಯುಪಿಐನದ್ದು ಸಿಂಹಪಾಲು.

ಇದನ್ನೂ ಓದಿ: ಗೃಹಜ್ಯೋತಿ ಸ್ಕೀಮ್: ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?

ಯುಪಿಐ ಸೇವೆ ಒದಗಿಸುವ ಪ್ರಮುಖ ಆ್ಯಪ್​ಗಳಲ್ಲಿ ಫೋನ್​ಪೆ ಅಗ್ರಸ್ಥಾನ ಇದೆ. ಗೂಗಲ್ ಪೇ ಮತ್ತು ಪೇಟಿಎಂ ನಂತರದ ಸ್ಥಾನದಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!