AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyber Fraud: ಸೈಬರ್ ವಂಚಕರು ಸುಲಭವಾಗಿ ಬ್ಯಾಂಕ್ ಖಾತೆಗೆ ಕಣ್ಣ ಹಾಕುವುದು ಹೇಗೆ? ವಂಚನೆಯಿಂದ ಪಾರಾಗಲು ಇಲ್ಲಿದೆ ಉಪಾಯ

ಜಗತ್ತು ಡಿಜಿಟಲ್​ ಆಗಿ ಪರಿವರ್ತೆಯಾದ ನಂತರ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಯುಪಿಐ ಪಿನ್ ಹಾಗೂ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಬ್ಯಾಂಕ್​ಗಳು ಸಂದೇಶ ರವಾನಿಸುತ್ತಲೇ ಇವೆ. ಇವುಗಳ ಕಡೆ ಗಮನಹರಿಸಿ.

Cyber Fraud: ಸೈಬರ್ ವಂಚಕರು ಸುಲಭವಾಗಿ ಬ್ಯಾಂಕ್ ಖಾತೆಗೆ ಕಣ್ಣ ಹಾಕುವುದು ಹೇಗೆ? ವಂಚನೆಯಿಂದ ಪಾರಾಗಲು ಇಲ್ಲಿದೆ ಉಪಾಯ
ಸಾಂದರ್ಭಿಕ ಚಿತ್ರ
TV9 Web
| Updated By: Rakesh Nayak Manchi|

Updated on: May 17, 2022 | 11:38 AM

Share

ಜಗತ್ತು ಡಿಜಿಟಲ್​ ಆಗಿ ಪರಿವರ್ತೆಯಾದ ನಂತರ ಸೈಬರ್(Cyber) ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಬ್ಯಾಂಕಿನ ಗ್ರಾಹಕರ ಖಾತೆಗೆ ಸೈಬರ್ ಕಳ್ಳರ ಕಣ್ಣ ಎಂಬ ಸುದ್ದಿಗಳನ್ನು ಓದುತ್ತಿದ್ದೇವೆ. ಹೀಗಾಗಿ ಪ್ರತಿಯೊಂದು ಬ್ಯಾಂಕ್​ಗಳು ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಓಟಿಪಿ ಶೇರ್ ಮಾಡದಿರಿ, ಪಾಸ್ವರ್ಡ್ ನೀಡಬೇಡಿ ಎಂದು ಸಂದೇಶಗಳನ್ನು ರವಾನಿಸುತ್ತಿರುತ್ತದೆ. ಹೀಗಿದ್ದಾಗ ಸೈಬರ್ ವಂಚಕ(Fraud)ರ ಹಾವಳಿಯಿಂದ ತಪ್ಪಿಸಿಕೊಳ್ಳಲು ನಾವು ಕೂಡ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳು ಈ ಕೆಳಗಿನಂತಿವೆ.

ಸಾಮಾನ್ಯವಾಗಿ ಇಂಥ ವಂಚನೆಯನ್ನು ಮೂರು ಹಂತದಲ್ಲಿ ಮಾಡಲಾಗುತ್ತದೆ. ಸೈಬರ್ ವಂಚಕರು ಜನರಿಗೆ ಮೊದಲು ಪಾವತಿ ಸ್ವೀಕಾರ ವಿನಂತಿಯನ್ನು ಒಪ್ಪಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ನಿಮಗೆ 2 ಫ್ಯಾಕ್ಟರ್ ಅಥೆಂಟಿಕೇಷನ್ ( 2FA) ಅಥವಾ ಯುಪಿಐ ಪಿನ್ ಹೇಳುವಂತೆ ಕೇಳಲಾಗುತ್ತದೆ. ಇನ್ನೊಂದೆಡೆ ನೀವು ಪಾವತಿ ಸ್ವೀಕಾರ ವಿನಂತಿಯನ್ನು ಒಪ್ಪಿಕೊಂಡಾಗ ಯುಪಿಐ ಆಪ್ , ವ್ಯವಹಾರದ ಕಡೆ ಹಂತದಲ್ಲಿ ನಿಮ್ಮ ಪಿನ್ ನಂಬರ್ ಕೇಳುತ್ತದೆ. ಅಂದರೆ ನೀವು ಯುಪಿಐ ಪಿನ್ ನಮೂದಿಸಿದ ಕೂಡಲೇ ನಿಮ್ಮ ಹಣ ಕಡಿತವಾಗುತ್ತದೆ.

ನೀವು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಅಥವಾ ಪೇಮೆಂಟ್ ರಿಸೀವ್ ಮಾಡುವ ವಿನಂತಿಯನ್ನು ಒಪ್ಪಿಕೊಳ್ಳುವ ಯಾವುದೇ ಅಗತ್ಯವಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಒಟಿಪಿ, ಪಾಸ್​ವರ್ಡ್ , ಎಂಪಿಐಎನ್ ಮತ್ತು ಯುಪಿಐ ಪಿನ್ ಇವುಗಳು ನೀವು ಬೇರೆಯವರಿಗೆ ವರ್ಗಾವಣೆ ಮಾಡಲು ಮಾತ್ರ ಅಗತ್ಯವಿದೆ. ಆದರೆ ನಿಮ್ಮ ಖಾತೆಗೆ ಹಣ ತುಂಬಲು ಅಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಕೌಂಟ್ ನಂಬರ್ ಮತ್ತು ಉಳಿದ ಮಾಹಿತಿಗಳಿದ್ದರೆ ಯಾರೂ ಸಹ ವರ್ಗಾವಣೆ ಮಾಡಬಹುದು.

ಸೈಬರ್ ವಂಚಕರು ನಕಲಿ ಯುಆರ್​ಎಲ್ ಅಥವಾ ಪೇಮೆಂಟ್ ಲಿಂಕ್​ಗಳನ್ನು ಎಸ್ಎಂಎಸ್ ಮೂಲಕ ಕಳುಹಿಸುತ್ತಾರೆ. ಅದನ್ನು ಕ್ಲಿಕ್ ಮಾಡಿದರೆ ಅವರು ನಿಮ್ಮ ಫೋನ್​ನ ಯುಪಿಐ ಆಪ್ ನೋಡಲು ಅವರಿಗೆ ಸಾಧ್ಯವಾಗುತ್ತದೆ. ಅದೇ ವೇಳೆ, ಆಟೋ ಡೆಬಿಟ್ ಮಾಡಲು ನಿಮ್ಮ ಫೋನ್​ನಿಂದ ಯುಪಿಐ ಆಪ್ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕೇಳಲಾಗುತ್ತದೆ. ಅದನ್ನು ನೀವು ಅಪ್ರೂವ್ ಮಾಡಿದ ಕೂಡಲೇ ನಿಮ್ಮ ಯುಪಿಐ ಆಪ್ ಮೂಲಕ ಹಣ ಕಡಿತವಾಗುತ್ತದೆ. ಇದಲ್ಲದೆ, ನಕಲಿ ಯುಆರ್​ಎಲ್ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಫೋನ್, ವೈರಸ್ ಅಥವಾ ಫೋನ್ ಸಿಸ್ಟಮ್ ಹಾಳುಗೆಡುವಂತಹ ಕೆಲಸವನ್ನು ಮಾಡಬಲ್ಲರು. ಈ ರೀತಿಯ ಮಾಲ್ ವೇರ್ ಗಳನ್ನು ನಿಮ್ಮ ಫೋನ್​ನಿಂದ ಹಣಕಾಸು ಮಾಹಿತಿ ಕದಿಯಲು ಬಳಸಲಾಗುತ್ತದೆ.

ಯುಪಿಐ ವಂಚನೆ ತಪ್ಪಿಸುವುದು ಹೇಗೆ?

ಯುಪಿಐ ವ್ಯವಹಾರಗಳು ನಿರಂತರವಾಗಿ ಏರಿಕೆಯಾಗುತ್ತಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಇಂಡಿಯಾ ಪ್ರಕಾರ, ಫೆಬ್ರವರಿ 2021ರಿಂದ ಜನವರಿ 2022ರವರೆಗೆ 75.6 ಲಕ್ಷ ಕೋಟಿ ರೂಪಾಯಿ ಮೊತ್ತದ ವ್ಯವಹಾರವನ್ನು ಯುಪಿಐ ಮೂಲಕ ಮಾಡಲಾಗಿದೆ. ಈ ಅವಧಿಯಲ್ಲಿ ತಿಂಗಳ ಸರಾಸರಿ ವ್ಯವಹಾರದ ಪ್ರಮಾಣ 6.3 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ನೀವು ಸಹ ಯುಪಿಐ ನಿರಂತರವಾಗಿ ಬಳಸುತ್ತಿದ್ದರೆ ಸೈಬರ್ ವಂಚನೆ ತಡೆಯುವುದು ಹೇಗೆ ಎಂಬುದನ್ನು ತಿಳಿಯಬೇಕು.

ಮೊದಲಿಗೆ ನಿಮ್ಮ ಯುಪಿಐ ಪಿನ್ ಹಾಗೂ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯಾಂಕುಗಳು ತಾವು ಅಂತಹ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂಬ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಲೇ ಇರುತ್ತವೆ. ಬ್ಯಾಂಕುಗಳ ಇಂತಹ ಸಲಹೆಗೆ ನೀವು ಗಮನಕೊಡಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?