G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ

Highlights of G RAM G: ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಗೆ ಸರ್ಕಾರ ಹೊಸ ಸ್ವರೂಪ ಕೊಟ್ಟಿದೆ. ಉದ್ಯೋಗ ಖಾತ್ರಿ ದಿನಗಳ ಸಂಖ್ಯೆಯನ್ನು 100ರಿಂದ 125ಕ್ಕೆ ಏರಿಸಿದೆ. ಕೃಷಿ ಸೀಸನ್​ಗೆ ಕೆಲಸಗಾರರ ಲಭ್ಯತೆ ಖಚಿತಪಡಿಸಲು 60 ದಿನಗಳ ಕಡ್ಡಾಯ ವಿರಾಮ ಅವಧಿ ಕೊಡಲಾಗಿದೆ. ಜಿ ರಾಮ್ ಜಿ ಯೋಜನೆಯಲ್ಲಿ ಇನ್ನೇನೇನು ಬದಲಾವಣೆಗಳಿವೆ ಎನ್ನುವ ಮಾಹಿತಿ ಇಲ್ಲಿದೆ.

G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ
ಗ್ರಾಮೀಣ ಭಾಗದ ಕಾರ್ಮಿಕರು

Updated on: Jan 09, 2026 | 5:27 PM

ಕಳೆದ ಕೆಲ ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ಕಾಯಿದೆಗಳಲ್ಲಿ ಒಂದು ಜಿ ರಾಮ್‌ ಜಿ. ಇದರ ಪೂರ್ತಿ ಹೆಸರು ವಿಬಿ-ಜಿ-ರಾಮ್‌-ಜಿ ಅಂದರೆ ವಿಕಸಿತ ಭಾರತ- ರೋಜಗಾರ ಮತ್ತು ಆಜೀವಿಕ ಮಿಷನ್‌ (ಗ್ರಾಮೀಣ) Viksit Bharat – Guaratee Rozgar Azeevika Mission (Gramin) (VB-G-RAM-G) ಎಂಬುದಾಗಿದೆ. ಈ ಕಾಯ್ದೆಯು ಗ್ರಾಮೀಣ ಉದ್ಯೋಗ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸುವ ಗುರಿ ಹೊಂದಿದೆ. ಇದು ರೈತರು ಹಾಗೂ ಕಾರ್ಮಿಕರ ಘನತೆಗೆ, ಪಾರದರ್ಶಕತೆ ಹಾಗೂ ನಿಜವಾದ ಗ್ರಾಮೀಣ ಸಬಲೀಕರಣಕ್ಕೆ ಒತ್ತು ನೀಡುತ್ತದೆ.

60 ದಿನಗಳ ವಿರಾಮ

ಕೃಷಿ ಋತುವಿನಲ್ಲಿ ಕಾರ್ಮಿಕರಿಗೆ 60 ದಿನಗಳ ವಿರಾಮ ಕಡ್ಡಾಯವಾಗಿದೆ. ಇದರಿಂದ ರೈತರು ತಮ್ಮ ವೈಯಕ್ತಿಕ ಕೃಷಿ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯವಾಗಲಿದೆ. ಈ 60 ದಿನದ ವಿರಾಮ ಅವಧಿ ಯಾವಾಗ ಇಡಬೇಕೆಂಬುದನ್ನು ಆಯಾ ಪ್ರದೇಶದ ಆಡಳಿತದ ರಾಜ್ಯ ಸರ್ಕಾರ ನಿರ್ಧರಿಸಬಹುದು. ಆಯಾ ಪ್ರದೇಶದ ಬಿತ್ತನೆ ಅಥವಾ ಕೊಯ್ಲು ಅವಧಿಗೆ ನೋಡಿ ಇದನ್ನು ನಿರ್ಧರಿಸಬಹುದು.

ಹಿಂದೆ ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದಾಗ, ವರ್ಷಕ್ಕೆ ಕನಿಷ್ಠ ಮೂರು ತಿಂಗಳಾದರೂ ವಿರಾಮ ಅವಧಿ ಕೊಡಬೇಕು ಎಂದು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಹೀಗಾಗಿ, ಹೊಸ ಕಾಯ್ದೆಯಲ್ಲಿ 60 ದಿನಗಳ ವಿರಾಮ ಅವಧಿ ನಿಗದಿ ಮಾಡಿರುವುದು ಅಚ್ಚರಿ ಅನಿಸುವುದಿಲ್ಲ.

ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಬಾಧ್ಯತೆ

ಹಿಂದೆ ಪಿ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ, ಮನ್ರೇಗಾ ಯೋಜನೆಯ ವೆಚ್ಚದಲ್ಲಿ ರಾಜ್ಯಗಳೂ ನಿರ್ದಿಷ್ಟ ಪ್ರಮಾಣದ ವೆಚ್ಚವನ್ನು ಭರಿಸಬೇಕೆಂದು ಬಯಸಿದ್ದರು. ಆಗ ಸಾಮಗ್ರಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.75 ಮತ್ತು ರಾಜ್ಯಗಳು ಶೇ. 25 ಹೊತ್ತುಕೊಂಡಿದ್ದವು. ಯೋಜನೆಗಳನ್ನು ಜವಾಬ್ದಾರಿಯಾಗಿ ನಿರ್ವಹಿಸುವುದು ರಾಜ್ಯಗಳ ಕೆಲಸ. ರಾಜ್ಯಗಳ ಹಣದ ಪಾಲುದಾರಿಕೆ ಹೆಚ್ಚಾದಂತೆ, ಯೋಜನೆಗಳ ಮಾಲೀಕತ್ವ ಕೂಡ ಬಲವಾಗುತ್ತದೆ. ಆಸ್ತಿ ಯೋಜನೆ, ನಿರ್ವಹಣೆ ಹಾಗು ಅನುಷ್ಠಾನದಲ್ಲಿ ಹೆಚ್ಚಿನ ಜವಾಬ್ದಾರಿ ಬರುತ್ತದೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

ಬೇಡಿಕೆ ಬದಲು ಪೂರೈಕೆ ಆಧಾರಿತ ಕೆಲಸ ಹಂಚಿಕೆ

ಬೇಡಿಕೆ ಆಧಾರದ ಮೇಲೆ ಕೆಲಸ ಹಂಚಿಕೆ ಮುಕ್ತವಾಗಿತ್ತು, ಆದರೆ, ಅದು ಸರ್ಕಾರದ ಬಜೆಟ್‌ನ ಮಿತಿಯಲ್ಲೇ ಇರಬೇಕಿತ್ತು. ಈಗ ಪೂರೈಕೆ ಆಧಾರಿತ ವ್ಯವಸ್ಥೆ ಹೆಚ್ಚು ಯೋಜಿತವಾಗಿದೆ. ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ಗಳ ಮೂಲಕ ಕೆಲಸವನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಯೋಜನೆ ಮಾಡಿ ವಿಕಸಿತ ಭಾರತ್ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟಾಕ್‌ಗೆ ಸೇರಿಸಲಾಗುತ್ತದೆ. ಈಗ, ನಿರ್ದಿಷ್ಟ, ಅನುಮೋದಿತ ಕಾರ್ಯಭಾರ ಇದ್ದಾಗ ಮಾತ್ರ ಕೆಲಸ ನೀಡುತ್ತಾರೆ. ರಾಜ್ಯಗಳು ಕನಿಷ್ಠ 125 ದಿನಗಳ ಕೆಲಸ ಕೊಡಬೇಕು. ಸಾಮರ್ಥ್ಯ ಇದ್ದರೆ ಅವು ಹೆಚ್ಚು ದಿನ ನೀಡಬಹುದು. 15 ದಿನಗಳಲ್ಲಿ ಕೆಲಸ ಸಿಗದಿದ್ದರೆ, ಭತ್ಯೆ ಕೊಡುತ್ತಾರೆ. ಈ ಕಾಯ್ದೆಯ ಮೂಲಕ ಕಾರ್ಮಿಕರು ಮತ್ತಷ್ಟು ಬಲಿಷ್ಠರಾಗಿದ್ದಾರೆ.

ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ

ಕೆಲಸಗಾರನು ಕೆಲಸ ಕೇಳಿದರೂ ನಿಗದಿತ ಅವಧಿಯಲ್ಲಿ ಕೆಲಸ ಸಿಗದಿದ್ದರೆ, ಅವನಿಗೆ ನಿರುದ್ಯೋಗ ಭತ್ಯೆ ಸಿಗುತ್ತದೆ. ಒಂದು ರಾಜ್ಯವು ನಿರ್ದಿಷ್ಟ ಹಂಚಿಕೆಗೆ ಮೀರಿ ಕೆಲಸ ನೀಡಿದರೆ, ಅದು ಆ ರಾಜ್ಯದ ನೀತಿ ಆಯ್ಕೆಯಾಗಿರುತ್ತದೆ, ಹಾಗಂತ ಯಾವುದೇ ಕಾನೂನು ಒತ್ತಾಯವಿಲ್ಲ. ಹಾಗೆ ಮಾಡಿದರೂ ಕಾರ್ಮಿಕರ ಹಕ್ಕುಗಳಿಗೆ ಯಾವುದೇ ಚ್ಯುತಿ ಬರದಂತೆ ಕಾಪಾಡಲಾಗುತ್ತದೆ.

ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಅಡಿಯಲ್ಲಿ ಕೆಲಸ ಹಂಚಿಕೆ ಹೆಚ್ಚು ವ್ಯವಸ್ಥಿತವಾಗಿದೆ. ಡೇಟಾ ಆಧಾರಿತ ಹಂಚಿಕೆ ವಂಚನೆ ಮತ್ತು ಸ್ಥಳೀಯ ಭ್ರಷ್ಟಾಚಾರಕ್ಕೆ ಅವಕಾಶ ಕಡಿಮೆ ಮಾಡುತ್ತದೆ. ಇದರಿಂದ ಯೋಜನೆ ಹೆಚ್ಚು ಪಾರದರ್ಶಕವಾಗಿ ಹಾಗೂ ನಿಯಂತ್ರಿತವಾಗಿ ನಡೆಯುತ್ತದೆ.

ಇದನ್ನೂ ಓದಿ: ಜಲಶಕ್ತಿ ಸುಜಲಾಂ ಭಾರತ್: ನೀರಿನ ಸಮಸ್ಯೆ, ಸಂರಕ್ಷಣೆ ಮತ್ತು ಸಮುದಾಯ ಸಹಭಾಗಿತ್ವ

ಬಯೋಮೆಟ್ರಿಕ್ ಹಾಜರಾತಿಯಿಂದ ಏನು ಉಪಯೋಗ?

ಗ್ರಾಮೀಣ ಬಡತನ 2011-12ರಲ್ಲಿ ಶೇ 25.7 ರಷ್ಟಿತ್ತು. 2023-24ಕ್ಕೆ ಅದು ಶೇ. 4.86 ಕ್ಕೆ ಇಳಿದಿದೆ. ಹೀಗಾಗಿ ಉದ್ಯೋಗ ವ್ಯವಸ್ಥೆಯನ್ನು ಪುನರ್‌ರಚನೆ ಮಾಡಬೇಕಾಗುತ್ತಿದೆ. ಸಾವು, ವಲಸೆ ಇತ್ಯಾದಿ ಕಾರಣದಿಂದ ಹಲವಾರು ಫಲಾನುಭವಿಗಳ ಜಾಬ್ ಕಾರ್ಡ್​ಗಳು ನಿಷ್ಕ್ರಿಯವಾಗುತ್ತಿವೆ. ಇವನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಹೀಗಾಗಿ, ಕೆಲಸದ ಸ್ಥಳದಲ್ಲಿ ಬಯೋಮೆಟ್ರಿಕ್ ಹಾಜರಾತಿ ನಿಯಮಗಳನ್ನು ಜಾರಿ ಮಾಡಲಾಗುತ್ತದೆ. ಇದರಿಂದ ಫಂಡ್ ಹಣ ಪೋಲಾಗುವುದು ತಪ್ಪುತ್ತದೆ.

ಗಾಂಧೀಜಿ ಹೆಸರು ಇಲ್ಲವೆಂದಾಕ್ಷಣ ಕಾಯ್ದೆ ಬದಲಾಗಿಲ್ಲ…

ಈ ಕಾಯ್ದೆಯಲ್ಲಿ ಹೆಸರು ಮಾತ್ರವೇ ಬದಲಾಗಿದೆ. ಉದ್ಯೋಗ ಖಾತರಿ, ಕಾರ್ಮಿಕರ ಹಕ್ಕುಗಳು, ಕುಂದುಕೊರತೆ ಪರಿಹಾರ ಅಥವಾ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದರಿಂದ ನೈತಿಕ ಅಧಿಕಾರ ದುರ್ಬಲಗೊಳ್ಳುತ್ತದೆ ಎಂದು ಕೇಳಿಬರುತ್ತಿರುವ ಟೀಕೆಗಳು ಗಂಭೀರ ಎನಿಸುವುದಿಲ್ಲ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೆ ಹೊಸ ಕಾಯಿದೆ

ಹಿಂದೆ ಈ ವ್ಯವಸ್ಥೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು. ಫಲಾನುಭವಿಗಳಿಗೆ ಬಂದ ಹಣವನ್ನು ಮಧ್ಯವರ್ತಿಗಳೇ ನುಂಗಿ ಹಾಕುತ್ತಿದ್ದರು. ಕೇವಲ 76 ಲಕ್ಷ ಕಾರ್ಮಿಕರ ಆಧಾರ್ ಸೀಡಿಂಗ್‌ ಮಾಡಲಾಗಿತ್ತು. ಈಗ ವ್ಯವಸ್ಥೆ ಸುಧಾರಣೆಯಾಗಿದೆ. ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ನಿರ್ವಹಣಾ ವ್ಯವಸ್ಥೆ 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬಂದಿದೆ. ಈಗ ವೇತನ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹೋಗುತ್ತದೆ.

ಇದನ್ನೂ ಓದಿ: ನೈಸರ್ಗಿಕ ಕೃಷಿಗಾರಿಕೆ ಭಾರತದ ಕೃಷಿ ಕ್ಷೇತ್ರದ ಭವಿಷ್ಯದ ಹಾದಿ: ನರೇಂದ್ರ ಮೋದಿ

ವೇತನ ಮೇಲೇರದೇ ವಿಧಿಯಿಲ್ಲ…

ವೇತನದ ದರವು ಪ್ರಸ್ತುತ ದರಕ್ಕಿಂತ ಕಡಿಮೆ ಇರಲು ಸಾಧ್ಯವಿಲ್ಲ. ಹೀಗಾಗಿ, ವೇತನ ದರ ಮೇಲೇರಬೇಕೆ ಹೊರತು ಕಡಿಮೆ ಆಗಲು ಸಾಧ್ಯವಾಗದಂತೆ ಮಾಡಿದೆ ಈ ಪರಿಷ್ಕೃತ ಕಾಯ್ದೆ. ಹಾಗಾಗಿ, ಕಾರ್ಮಿಕರಿಗೆ ವೇತನ ಕಡಿಮೆ ಆಗುವ ಆತಂಕವಿಲ್ಲ. ವೇತನ ದರವನ್ನು ಸಮರ್ಪಕವಾಗಿ ನಿಗದಿ ಮಾಡಲು ಕೇಂದ್ರ ಸರ್ಕಾರ ಹೆಚ್ಚು ನಿಖರವಾದ ಹಣದುಬ್ಬರ ಸೂಚ್ಯಂಕಗಳನ್ನು ಬಳಸಬಹುದು. ಹೀಗೆ ಮಾಡಲು ಪದೇ ಪದೇ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇರುವುದಿಲ್ಲ.

ಉದ್ಯೋಗ ಖಾತರಿ ದಿನಗಳ ಸಂಖ್ಯೆ ಹೆಚ್ಚಳ

ಕಾಯಿದೆಯು ಉದ್ಯೋಗ ಖಾತರಿಯನ್ನು ವಾರ್ಷಿಕವಾಗಿ 100 ರಿಂದ 125 ದಿನಗಳಿಗೆ ಹೆಚ್ಚಿಸುತ್ತದೆ, ಗ್ರಾಮೀಣ ಜೀವನೋಪಾಯ ಭದ್ರತೆಯನ್ನು ಬಲಪಡಿಸುತ್ತದೆ.

ಕಾಯಿದೆಯಡಿಯಲ್ಲಿನ ಪ್ರಸ್ತುತ ಬದಲಾವಣೆ ಜವಾಬ್ದಾರಿಯುತ ಬಳಕೆ, ಹಣಕಾಸಿನ ಶಿಸ್ತು ಮತ್ತು ಫಲಿತಾಂಶ ಆಧಾರಿತ ಖರ್ಚನ್ನು ಉತ್ತೇಜಿಸುತ್ತದೆ. ರಾಜ್ಯ, ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಲಸಗಳ ಉತ್ತಮ ಯೋಜನೆ ಮತ್ತು ಅನುಕ್ರಮವನ್ನು ಸಕ್ರಿಯಗೊಳಿಸುತ್ತದೆ. ಸಾರ್ವಜನಿಕ ಹಣವನ್ನು ಉತ್ಪಾದಕವಾಗಿ, ಪಾರದರ್ಶಕವಾಗಿ ಮತ್ತು ಬಾಳಿಕೆ ಬರುವ ಕಾರ್ಯಕ್ರಮ ರೂಪಿಸಲು ಬಳಸುವುದನ್ನು ಖಚಿತಪಡಿಸುತ್ತದೆ. ಕಾಯಿದೆಯಡಿ ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ಏಕೀಕರಣವು ಸ್ಥಳೀಯ ಅಭಿವೃದ್ಧಿಯ ಸಮಗ್ರ ಮತ್ತು ಸಮಗ್ರ ನೋಟವನ್ನು ಖಚಿತಪಡಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ