Tax Exemption Limit: 7 ಲಕ್ಷ ಅಲ್ಲ 7.27 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

Finance Minister Nirmala Sitharaman: 7 ಲಕ್ಷ ರೂಗಿಂತ ಕೆಲ ಸಾವಿರ ರೂಗಳಷ್ಟು ಆದಾಯ ಹೊಂದಿರುವವರು ಟ್ಯಾಕ್ಸ್ ಎಕ್ಸೆಂಪ್ಷನ್​ನಿಂದ ವಂಚಿತವಾಗುವುದನ್ನು ತಪ್ಪಿಸಲು ತೆರಿಗೆ ವಿನಾಯಿತಿ ಮಿತಿಯನ್ನು 27,000 ರೂನಷ್ಟು ಹೆಚ್ಚಿಸಲಾಗಿದೆ.

Tax Exemption Limit: 7 ಲಕ್ಷ ಅಲ್ಲ 7.27 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
ನಿರ್ಮಲಾ ಸೀತಾರಾಮನ್

Updated on: Jul 16, 2023 | 1:35 PM

ನವದೆಹಲಿ: ಹೊಸ ಆದಾಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ 7.27 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ (Income Tax Exemption) ಇರುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಹೇಳಿದ್ದಾರೆ. ಇದರಿಂದ 7 ಲಕ್ಷ ರೂ ಆಸುಪಾಸಿನ ಮಧ್ಯಮ ಆದಾಯದ ವರ್ಗದ ಜನರಿಗೆ ಅನುಕೂಲ ಆಗಲಿದೆ. ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿಗೆ 7 ಲಕ್ಷ ಆದಾಯಮಿತಿ ಇದೆ. ಆದರೆ, 7 ಲಕ್ಷ ರೂಗಿಂತ ತುಸು ಹೆಚ್ಚು ಆದಾಯ ಹೊಂದಿರುವವರಿಗೆ ಟ್ಯಾಕ್ಸ್ ಎಕ್ಸೆಂಪ್ಷನ್ ಸೌಲಭ್ಯ ಸಿಗದೇ ಹೋಗುತ್ತದಲ್ಲಾ ಎಂದು ಕೆಲ ಗುಂಪುಗಳಿಂದ ಅಪಸ್ವರ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚುವರಿ 27,000 ರೂನಷ್ಟು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.

‘ಎಷ್ಟು ಹೆಚ್ಚುವರಿ ಹಣದವರೆಗೂ ತೆರಿಗೆ ವಿನಾಯಿತಿ ಕೊಡಬಹುದು ಎಂದು ನಾವು ಅವಲೋಕಿಸಿದೆವು. 7.27 ಲಕ್ಷ ರೂಗೆ ಮಿತಿ ಇರಿಸಿದೆವು. 7 ಲಕ್ಷ ರೂ ಮಿತಿಗಿಂತ ಹೆಚ್ಚುವರಿ 27,000 ರೂವರೆಗೂ ಮಿತಿ ಹೆಚ್ಚುತ್ತದೆ. ಅದಾದ ಬಳಿಕ ತೆರಿಗೆ ಪಾವತಿಸಲು ತೊಡಗುತ್ತೀರಿ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿIndia GDP: 2024-25ಕ್ಕೆ ಭಾರತದ ಜಿಡಿಪಿ 4 ಟ್ರಿಲಿಯನ್; ತಲಾದಾಯ 2,800 ಡಾಲರ್: ಪಿಎಚ್​ಡಿ ಚೇಂಬರ್ ಅಂದಾಜು

ಎಂಎಸ್​ಎಂಇ ವಲಯಕ್ಕೆ ಬಜೆಟ್ ಹೆಚ್ಚಳ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತಾ, ಎಂಎಸ್​ಎಂಇ ವಲಯಕ್ಕೆ ಸಿಕ್ಕಿರುವ ಪ್ರಾಧಾನ್ಯತೆಯನ್ನು ಪ್ರಸ್ತಾಪಿಸಿದ್ದಾರೆ. ಮಧ್ಯ, ಸಣ್ಣ ಮತ್ತು ಅತಿಸಣ್ಣ ಉದ್ದಿಮೆ (ಎಂಎಸ್​ಎಂಇ) ವಲಯಕ್ಕೆ 2013-14ರಲ್ಲಿ ಇದ್ದ ಒಟ್ಟು ಬಜೆಟ್ 3,185 ಕೋಟಿ ರೂ. ಈಗ ಅದು 2023-24ರಲ್ಲಿ 22,138 ಕೋಟಿ ರೂಗೆ ಹೆಚ್ಚಾಗಿದೆ. 9 ವರ್ಷದಲ್ಲಿ ಏಳು ಪಟ್ಟು ಹೆಚ್ಚಾಗಿದೆ. ಎಂಎಸ್​ಎಂಇ ವಲಯದ ಬಗ್ಗೆ ಸರ್ಕಾರಕ್ಕೆ ಇರುವ ಬದ್ಧತೆಗೆ ಇದು ಕೈಗನ್ನಡಿಯಾಗಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ.

ಇದನ್ನೂ ಓದಿIndian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

158 ಕೇಂದ್ರೀಯ ಸಾರ್ವಕಾಲಿಕ ವಲಯ ಉದ್ದಿಮೆಗಳು ಶೇ. 33ರಷ್ಟು ಖರೀದಿಯನ್ನು ಎಂಎಸ್​ಎಂಇಗಳಿಂದಲೇ ಮಾಡಿವೆ. ಇಷ್ಟು ಪ್ರಮಾಣದಲ್ಲಿ ಈ ಸರ್ಕಾರಿ ಉದ್ದಿಮೆಗಳು ಎಂಎಸ್​ಎಂಇ ವಲಯದಿಂದ ಖರೀದಿ ಮಾಡಿದ್ದು ಇದೇ ಮೊದಲು. ಸರ್ಕಾರ ಜಾರಿಗೆ ತಂದಿರುವ ಒಎನ್​ಡಿಸಿ ವ್ಯವಸ್ಥೆಯಿಂದಲೂ ಎಂಎಸ್​ಎಂಇ ವಲಯಕ್ಕೆ ಗ್ರಾಹಕರ ವ್ಯಾಪ್ತಿ ಹೆಚ್ಚಿಸುವ ಅವಕಾಶ ಒದಗಿಸಿದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us