AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India GDP: 2024-25ಕ್ಕೆ ಭಾರತದ ಜಿಡಿಪಿ 4 ಟ್ರಿಲಿಯನ್; ತಲಾದಾಯ 2,800 ಡಾಲರ್: ಪಿಎಚ್​ಡಿ ಚೇಂಬರ್ ಅಂದಾಜು

PHDCCI Report: ಭಾರತದ ಆರ್ಥಿಕತೆ 2024-25ರ ಹಣಕಾಸು ವರ್ಷಕ್ಕೆ 4 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ. ನಾಮಿನಲ್ ಜಿಡಿಪಿಯ ತಲಾದಾಯ 2,800 ಡಾಲರ್​ಗೆ ಏರಲಿದೆ ಎಂದು ಪಿಎಚ್​ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥೆ ಹೇಳಿದೆ.

India GDP: 2024-25ಕ್ಕೆ ಭಾರತದ ಜಿಡಿಪಿ 4 ಟ್ರಿಲಿಯನ್; ತಲಾದಾಯ 2,800 ಡಾಲರ್: ಪಿಎಚ್​ಡಿ ಚೇಂಬರ್ ಅಂದಾಜು
ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 16, 2023 | 12:53 PM

ನವದೆಹಲಿ: ಎರಡು ವರ್ಷದ ಹಿಂದೆ ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ್ದ ಭಾರತದ ಜಿಡಿಪಿ ಇನ್ನೆರಡು ವರ್ಷದಲ್ಲಿ 4 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ ಎಂದು ಉದ್ಯಮ ಸಂಘಟನೆ ಪಿಎಚ್​ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿ (PHDCCI- Progress, Harmony, Development Chamber of Commerce and Industry) ಭವಿಷ್ಯ ನುಡಿದಿದೆ. 2024-25ರ ಹಣಕಾಸು ವರ್ಷದಷ್ಟರಲ್ಲಿ ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲಿದೆ. ಅಲ್ಲದೇ ಜಿಡಿಪಿ ತಲಾದಾಯ ಪ್ರಮಾಣವು (Per Capita Income for Nominal GDP) 2,800 ಡಾಲರ್​ಗೆ ಏರಬಹುದು ಎಂದು ಅಂದಾಜು ಮಾಡಲಾಗಿದೆ. ಅಂದರೆ ಸರಾಸರಿ ತಲಾದಾಯವು 2.29 ಲಕ್ಷ ರುಪಾಯಿ ಆಗಲಿದೆ. 2022ರ ಮಾರ್ಚ್​ನಲ್ಲಿ ತಲಾದಾಯ 2,301 ಡಾಲರ್ ಇದೆ. ಪಿಎಚ್​ಡಿ ಚೇಂಬರ್ ಇತ್ತೀಚೆಗೆ (ಜುಲೈ 13) ನಡೆಸಿದ ಸೆಮಿನಾರ್​ವೊಂದರಲ್ಲಿ ಈ ಬಗ್ಗೆ ವರದಿಯೊಂದನ್ನು ಮಂಡಿಸಿತ್ತು.

ಕಳೆದ 3 ವರ್ಷಗಳಲ್ಲಿ ಸರಕಾರ ತೆಗೆದುಕೊಂಡ ಹಲವು ರಚನಾತ್ಮಕ ಸುಧಾರಣೆಗಳ ದೆಸೆಯಿಂದಾಗಿ ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಲಿದೆ ಎಂದು ಪ್ರೋಗ್ರೆಸ್, ಹಾರ್ಮೋನಿ, ಡೆವಲಪ್ಮೆಂಟ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥೆ ಹೇಳಿದೆ.

ಇದನ್ನೂ ಓದಿIndian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

‘ಖರೀದಿ ವೆಚ್ಚ ಅಧಿಕವಾಗಿದೆ, ಕಚ್ಛಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದರಿದ ಬೆಲೆ ಹೆಚ್ಚಳವಾಗಿದೆ. ಉತ್ಪಾಕರ ವೆಚ್ಚ ಅಂತರವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನತ್ತ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಸುಲಭ ಕಾನೂನು ಹೊಂದಿಕೆ, ಏಕ ಕವಾಕ್ಷಿ ವ್ಯವಸ್ಥೆ ಇತ್ಯಾದಿ ವ್ಯವಹಾರ ವೆಚ್ಚ ಇಳಿಕೆಯಿಂದ ಭಾರತದಲ್ಲಿ ಸರಾಗ ವ್ಯವಹಾರಕ್ಕೆ ಪುಷ್ಟಿ ಕೊಡುತ್ತದೆ,’ ಎಂದು ಪಿಎಚ್​ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹೇಳಿದೆ.

ಇತ್ತೀಚಿನ ಕೆಲ ಜಾಗತಿಕ ವಿದ್ಯಮಾನಗಳಿಂದ ಭಾರತದ ಆರ್ಥಿಕತೆಗೆ ಹಿನ್ನಡೆಯಾಗಿದೆ. ಕಚ್ಛಾ ತೈಲ ಆಮದು, ರುಪಾಯಿ ಮೌಲ್ಯ ಕುಸಿತ, ಹಣದುಬ್ಬರ ಇತ್ಯಾದಿಗಳು ಇತ್ತೀಚಿನ ವರ್ಷಗಳಲ್ಲಿ ಪರಿಣಾಮ ಬೀರಿದ್ದವು. ಆದರೆ, ರಷ್ಯಾ ಮತ್ತು ಉಕ್ರೇನ್​ಗೆ ಭಾರತದ ರಫ್ತು ಪ್ರಮಾಣ ಗಮನಾರ್ಹವಿಲ್ಲವಾದ್ದರಿಂದ ರಫ್ತು ಮತ್ತು ಹಣಕಾಸು ವಲಯಕ್ಕೆ ಹೆಚ್ಚಿನ ಧಕ್ಕೆಯಾಗಿಲ್ಲ. ಫಾರೆಕ್ಸ್ ಮೀಸಲು ನಿಧಿ ಉತ್ತಮ ಪ್ರಮಾಣದಲ್ಲಿ ಇದೆ ಎಂದು ಪಿಎಚ್​ಡಿಸಿಸಿಐನ ಸೆಮಿನಾರ್​ನಲ್ಲಿ ಪಾಲ್ಗೊಂಡಿದ್ದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿTrade Deficit: ಹಣದುಬ್ಬರ ಬಳಿಕ, ಈಗ ವ್ಯಾಪಾರ ಕೊರತೆಯೂ ಜೂನ್​ನಲ್ಲಿ ಕಡಿಮೆ

ಇಂಟರ್ನ್ಯಾಷನಲ್ ಗ್ರೋತ್ ಸೆಂಟರ್​ನ ಪ್ರಣಬ್ ಸೇನ್, ಇಂದಿರಾ ಗಾಂಧಿ ಇನ್ಸ್​ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್​ನ ಪ್ರೊಫೆಸರ್ ಅಶಿಮಾ ಗೋಯಲ್, ಆರ್​ಬಿಐನ ಆರ್ಥಿಕತೆ ಮತ್ತು ನೀತಿ ಸಂಶೋಧನಾ ವಿಭಾಗದ ನಿರ್ದೇಶಕ ರಾಜ್ಮಲ್, ಭಾರ್ತಿ ವಿದ್ಯಾಪೀಠದ ಡೈರೆಕ್ಟರ್ ಯಾಮಿನಿ ಅಗರ್ವಾಲ್, ಗ್ಲೋಬಲ್ ಇನ್​ಫ್ರಾಸ್ಟ್ರಕ್ಚರ್ ಹಬ್​ನ ಹಿರಿಯ ಆರ್ಥಿಕ ತಜ್ಞ ಮನಪ್ರೀತ್ ಜುನೇಜಾ, ಪಿಎಚ್​ಡಿಸಿಸಿಐನ ಸಿಇಒ ಸೌರಭ್ ಸಾನ್ಯಾಲ್, ಚೀಫ್ ಎಕನಾಮಿಸ್ಟ್ ಎಸ್ ಪಿ ಶರ್ಮಾ ಮೊದಲಾದವರು ಈ ಸೆಮಿನಾರ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ