AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಲು ಭಾರತಕ್ಕೆ ಆಗಲ್ಲವಾ? ಅಚ್ಚರಿ ಹುಟ್ಟಿಸಲಿದೆಯಾ ಭಾರತದ ನಡೆ?

Swaminathan Aiyar speaks on India vs Pakistan conflict: ಪಾಕಿಸ್ತಾನ ಒಂಟಿಯಲ್ಲ, ಅದರ ನೆರವಿಗೆ ಬರುವ ದೇಶಗಳಿವೆ. ಹೀಗಾಗಿ, ಪಾಕಿಸ್ತಾನವನ್ನು ಮಿಲಿಟರಿ ಮಾರ್ಗದಲ್ಲಿ ಮಣಿಸಲು ಆಗುವುದಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಸ್ವಾಮಿನಾಥನ್ ಅಯ್ಯರ್. ಆದರೆ, ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಡೆಯಲಿ ಎಂದು ಕೆಲ ಜಾಗತಿಕ ಪ್ರಬಲ ಶಕ್ತಿಗಳು ಕಾಯುತ್ತಿವೆ. ಭಾರತಕ್ಕೆ ಇದರ ಅರಿವು ಇದೆ. ಹೀಗಾಗಿ, ಜಾಣತನದ ಹೆಜ್ಜೆ ಇಡುತ್ತಿದೆ ಎಂದು ಮತ್ತೊಬ್ಬ ವಿಶ್ಲೇಷಕ ವಿಧುಶೇಖರ್ ಹೇಳುತ್ತಾರೆ.

ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಲು ಭಾರತಕ್ಕೆ ಆಗಲ್ಲವಾ? ಅಚ್ಚರಿ ಹುಟ್ಟಿಸಲಿದೆಯಾ ಭಾರತದ ನಡೆ?
ಪಾಕಿಸ್ತಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 09, 2025 | 9:41 PM

ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರ ಸಂಘರ್ಷ (Operation Sindoor) ಮುಂದುವರಿಯುತ್ತಿದೆ. ಭಾರತ ಮನಸು ಮಾಡಿದರೆ ಪಾಕಿಸ್ತಾನವನ್ನು ಕ್ಷಣಮಾತ್ರದಲ್ಲಿ ಹೊಸಕಿ ಹಾಕಬಹುದು ಎನ್ನುವ ಮಾತುಗಳು ಕೇವಲ ಮಾತಿಗಷ್ಟೇ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಉಗ್ರ ರಾಷ್ಟ್ರವನ್ನು ಮಣಿಸುವುದು ಸುಲಭದ ಮಾತಲ್ಲ. ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಕರಾದ ಸ್ವಾಮಿನಾಥನ್ ಅಯ್ಯರ್ (Swaminathan Aiyar) ಪ್ರಕಾರ, ಪಾಕಿಸ್ತಾನವನ್ನು ಸೋಲಿಸಲು ಭಾರತಕ್ಕೆ ಕಷ್ಟದ ಸಂಗತಿ. ಅಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ಕೊನೆಗಾಣಿಸಲು ಮಿಲಿಟರಿ ಮೂಲಕ ಸಾಧ್ಯವಿಲ್ಲ, ರಾಜಕೀಯ ನಿರ್ಣಯದಿಂದ ಪರಿಹಾರ ಸಾಧ್ಯ ಎನ್ನುತ್ತಾರೆ. ಆದರೆ, ಪಾಕಿಸ್ತಾನ ತನ್ನ ಜನರನ್ನು ಮೆಚ್ಚಿಸಲು ಮತ್ತು ಭಾರತದಲ್ಲಿ ಜನಸಾಮಾನ್ಯರನ್ನು ಗಾಬರಿಗೊಳಿಸಲು ಮೇಲ್ನೋಟಕ್ಕೆ ಆರ್ಭಟಿಸುತ್ತಿದೆ. ಭಾರತ ಇನ್ನೂ ದೊಡ್ಡ ಪ್ರಹಾರ ಕೊಟ್ಟಿಲ್ಲ ಅಷ್ಟೇ ಎಂಬುದು ಮತ್ತೊಂದು ಪ್ರತಿವಾದ ಇದೆ.

ಐಎಂಎಫ್ ಸಾಲ ಸಿಗದಂತೆ ತಡೆಯಲು ಭಾರತಕ್ಕೆ ಆಗುತ್ತಾ?

ಪಾಕಿಸ್ತಾನಕ್ಕೆ ಸಾಲ ನೀಡುವ ಸಂಬಂಧ ಇವತ್ತು ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಮೀಟಿಂಗ್ ಇದೆ. ಭಾರತವೂ ವೋಟಿಂಗ್​​​ನಲ್ಲಿ ಪಾಲ್ಗೊಳ್ಳಲಿದೆ. ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ ಎಂದು ಐಎಂಎಫ್​​ಗೆ ಭಾರತ ಮನವಿ ಮಾಡಿದೆ. ಆದರೆ, ಸ್ವಾಮಿನಾಥನ್ ಅಯ್ಯರ್ ಪ್ರಕಾರ, ಪಾಕಿಸ್ತಾನಕ್ಕೆ ಐಎಂಎಫ್ ಸಾಲ ಸಿಗುವಂತೆ ತಡೆಯಲು ಭಾರತಕ್ಕೆ ಆಗದೇ ಹೋಗಬಹುದು. ಯಾಕೆಂದರೆ, ಐಎಂಎಫ್​ನ ಬೋರ್ಡ್​​ಗೆ ಒಂದು ನಿರ್ಣಯ ಹೋಗಿದೆ ಎಂದರೆ ಅದಕ್ಕೆ ಸಹಮತ ಇದ್ದೇ ಹೋಗಿರುತ್ತದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ನೆರವು ನೀಡಲು ಚೀನಾ ಇದ್ದೇ ಇದೆ ಎನ್ನುತ್ತಾರೆ ಸ್ವಾಮಿನಾಥನ್ ಅಯ್ಯರ್.

ಇದನ್ನೂ ಓದಿ: ಪಾಕಿಸ್ತಾನಕ್ಕೆ ತಪ್ಪದ ಆರ್ಥಿಕ ಸಂಕಷ್ಟ; ಫಾರೆಕ್ಸ್ ರಿಸರ್ವ್ಸ್ ಕೇವಲ 15 ಬಿಲಿಯನ್ ಡಾಲರ್

ಇದನ್ನೂ ಓದಿ
Image
ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ 15 ಬಿಲಿಯನ್ ಡಾಲರ್​​​ಗೆ ಕುಸಿತ
Image
ಟರ್ಕಿಶ್ ಏರ್​​ಲೈನ್ಸ್ ಜೊತೆ ಸಹಭಾಗಿತ್ವ ಕಡಿದ ಭಾರತೀಯ ಕಂಪನಿ
Image
ಇವತ್ತಿನ ಷೇರುಬಜಾರು ಭಾರತಕ್ಕೆ ಹೊಡೆತ
Image
ಪಾಕಿಸ್ತಾನಕ್ಕೆ 110552678340 ರೂ ಐಎಂಎಫ್ ಸಾಲಕ್ಕೆ ಭಾರತದಿಂದ ಅಡ್ಡಗಾಲು?

ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವನ್ನು ಸೋಲಿಸಲು ಆಗುತ್ತಾ?

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಇಷ್ಟು ದೂರ ಹೋಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಎರಡೂ ದೇಶಕ್ಕೂ ಯುದ್ಧವನ್ನು ಗೆಲ್ಲಲು ಆಗುವುದಿಲ್ಲ. ಕೆಲ ನಗರಗಳ ಮೇಲೆ ದಾಳಿ ಮಾಡಬಹುದು. ಯಾರಿಗೂ ಗೆಲುವು ದಕ್ಕುವುದಿಲ್ಲ. ನೀವು ದಾಳಿ ಹೆಚ್ಚಿಸಿದರೆ ಅಷ್ಟೇ ಪ್ರತಿದಾಳಿ ಬರುತ್ತದೆ. ನೀವೆಷ್ಟು ದೊಡ್ಡ ಸೇನೆ ಎಂಬುದು ಮುಖ್ಯವಲ್ಲ. ವಾಸ್ತವ ಎಂದರೆ ಪಾಕಿಸ್ತಾನ ಒಂಟಿಯಾಗಿಲ್ಲ. ಪಾಕಿಸ್ತಾನಕ್ಕೆ ಗಂಭೀರ ಅಪಾಯ ಎದುರಾದರೆ ಚೀನಾ ಬರುತ್ತದೆ. ಲಡಾಖ್ ಮತ್ತು ಅರುಣಾಚಲಪ್ರದೇಶದ ಮೇಲೆ ಅದು ಆಕ್ರಮಣ ಮಾಡಬಹುದು ಎಂದು ಸ್ವಾಮಿನಾಥನ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಮತ್ತೊಬ್ಬ ಆರ್ಥಿಕ ತಜ್ಞ ಡಾ. ವಿಧುಶೇಖರ್ ಅವರ ಪ್ರಕಾರ, ಪಾಕಿಸ್ತಾನದ ನೆರವಿಗೆ ಚೀನಾ ನೇರವಾಗಿ ಬರುವ ಸಾಧ್ಯತೆ ಇಲ್ಲ. ತಾನು ಈ ಸಂಘರ್ಷದಲ್ಲಿ ಪಾಕಿಸ್ತಾನದ ಪರ ನಿಂತರೆ ಭಾರತವು ಅಮೆರಿಕದ ಜೊತೆ ಸೇರಿಬಿಡಬಹುದು ಎನ್ನುವ ಭಯ ಮತ್ತು ಗೊಂದಲ ಚೀನಾಗೆ ಇದ್ದೇ ಇದೆ. ಹೀಗಾಗಿ, ಅದು ಅಷ್ಟು ಸುಲಭಕ್ಕೆ ಭಾರತದ ವಿರುದ್ಧ ಯುದ್ಧಕ್ಕೆ ಬರುವುದಿಲ್ಲ ಎನ್ನುತ್ತಾರೆ ಅವರು.

ಇದನ್ನೂ ಓದಿ: ಟರ್ಕಿ ಏರ್​​ಲೈನ್ಸ್ ಜೊತೆ ಪಾರ್ಟ್ನರ್​ಶಿಪ್ ಮುರಿದುಕೊಂಡಿದ್ದೇವೆ: ಭಾರತದ ಗೋ ಹೋಮ್​​ಸ್ಟೇಸ್ ಘೋಷಣೆ

ಪಾಕಿಸ್ತಾನಕ್ಕೆ ಯುದ್ಧ ಅನಿವಾರ್ಯ… ಆದರೆ, ಕಾಯಿಸಿ ಸಾಯಿಸಲಿದೆ ಭಾರತ…

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಆಗಲಿ ಎಂದು ಅನೇಕ ಪ್ರಬಲ ದೇಶಗಳು ಬಯಸುತ್ತಿವೆ. ಪಾಕಿಸ್ತಾನಕ್ಕೆ ಯುದ್ಧ ಅನಿವಾರ್ಯ ಎಂಬಂತಾಗಿದೆ. ಅದರಲ್ಲೂ ಈಗಲೇ ಯುದ್ಧ ಆಗಲಿ ಎಂದು ಬಯಸುತ್ತಿದೆ. ಹೀಗಾಗಿ, ಕೆಣಕುತ್ತಲೇ ಇದೆ. ಭಾರತ ಯುದ್ಧಕ್ಕೆ ಎರಗಿದರೆ ಕೆಲ ಪ್ರಬಲ ದೇಶಗಳಿಂದ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಬರುತ್ತದೆ. ಇದಕ್ಕಾಗಿ ಈ ಉಗ್ರ ದೇಶ ಈ ಕಿತಾಪತಿ ಮಾಡುತ್ತಿದೆ ಎಂಬುದು ವಿಧುಶೇಖರ್ ಅವರ ಅನಿಸಿಕೆ.

ಯಾವುದೇ ಸೇನೆಯನ್ನು ಸದಾ ಕಾಲ ಜಾಗೃತಿಯಲ್ಲಿ ಇಡುವುದು ಆರ್ಥಿಕ ದೃಷ್ಟಿಯಿಂದ ಮತ್ತು ಮಾನಸಿಕ ದೃಷ್ಟಿಯಿಂದ ಬಹಳ ಶಕ್ತಿ ವ್ಯಯವಾಗುತ್ತದೆ. ಭಾರತವು ಮುನ್ನುಗ್ಗಿದ ಸ್ಥಿತಿಯಲ್ಲೇ ಇದ್ದು ಹೆಚ್ಚೇನೂ ಪ್ರಹಾರ ಮಾಡುತ್ತಿಲ್ಲ ಎಂದರೆ ಪಾಕಿಸ್ತಾನದ ಶಕ್ತಿಯನ್ನು ಬಸಿಯುವುದು ಉದ್ದೇಶವಾಗಿದೆ. ಇದು ಪಾಕಿಸ್ತಾನಕ್ಕೂ, ಅದನ್ನು ಪ್ರಾಯೋಜಿಸುತ್ತಿರುವ ದೇಶಗಳಿಗೂ ಹತಾಶೆಗೊಳಿಸುವಂತಹ ನಡೆ ಎನ್ನುತ್ತಾರೆ ವಿಧುಶೇಖರ್.

​​ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Fri, 9 May 25

ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ