AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಭದ್ರ ಸ್ಥಿತಿಯಲ್ಲಿ ಭಾರತೀಯ ಬ್ಯಾಂಕುಗಳು; ಎನ್​ಪಿಎ ಇನ್ನಷ್ಟು ಕಡಿಮೆ: ಆರ್​ಬಿಐ ವರದಿ

Banks' NPA has come down, says RBI Report: ಭಾರತದ ಕಮರ್ಷಿಯಲ್ ಬ್ಯಾಂಕುಗಳ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ ಎಂದು ಆರ್​ಬಿಐ ವರದಿಯೊಂದು ಹೇಳುತ್ತಿದೆ. ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್​​ಗಳ ಎನ್​ಪಿಎ ಶೇ. 2.8ಕ್ಕೆ ಇಳಿದಿದೆ. ನಿವ್ವಳ ಎನ್​ಪಿಎ ಶೇ. 0.6ಕ್ಕೆ ಇಳಿದಿದೆ. ಕಮರ್ಷಿಯಲ್ ಬ್ಯಾಂಕುಗಳ ಸಿಆರ್​​ಎಆರ್ ಅಥವಾ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಶೇ. 16ಕ್ಕಿಂತ ಹೆಚ್ಚಿದ್ದು, ಅನಿಶ್ಚಿತ ಸಂದರ್ಭಕ್ಕೆ ಇದು ಅವಶ್ಯದಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸುಭದ್ರ ಸ್ಥಿತಿಯಲ್ಲಿ ಭಾರತೀಯ ಬ್ಯಾಂಕುಗಳು; ಎನ್​ಪಿಎ ಇನ್ನಷ್ಟು ಕಡಿಮೆ: ಆರ್​ಬಿಐ ವರದಿ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2024 | 6:43 PM

Share

ನವದೆಹಲಿ, ಜೂನ್ 27: ಭಾರತದ ಅನುಸೂಚಿತ ವಾಣಿಜ್ಯ ಬ್ಯಾಂಕ್​ಗಳ (scheduled commercial bank) ಒಟ್ಟಾರೆ ಅನುತ್ಪಾದಕ ಸಾಲದ (NPA) ಪ್ರಮಾಣ ಶೇ. 2.8ಕ್ಕೆ ಇಳಿದಿದೆ. ಗ್ರಾಸ್ ಎನ್​ಪಿಎ ಪ್ರಮಾಣ ಈ ಮಟ್ಟಕ್ಕೆ ಇಳಿದಿರುವುದು ಹಲವು ವರ್ಷಗಳಲ್ಲಿ ಇದೇ ಮೊದಲು. ನಿವ್ವಳ ಎನ್​ಪಿಎಯಂತೂ ಶೇ. 0.6 ಮಾತ್ರ ಇದೆ ಎಂದು ಆರ್​ಬಿಐ ಜೂನ್ 27, ಇಂದು ಬಿಡುಗಡೆ ಮಾಡಿದ ಅದರ 29ನೇ ಹಣಕಾಸು ಸ್ಥಿರತೆಯ ವರದಿಯಲ್ಲಿ ತಿಳಿಸಿದೆ. ಇದರೊಂದಿಗೆ ಭಾರತದ ಬ್ಯಾಂಕುಗಳು ಸುಭದ್ರ ಸ್ಥಿತಿಯಲ್ಲಿ ಇರುವುದರ ಸೂಚನೆ ಇದಾಗಿದೆ.

ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ಪ್ರಮಾಣ ಕಡಿಮೆ ಆಗುವುದರ ಜೊತೆಗೆ ಅದರ ಆರ್​ಒಎ ಅಥವಾ ಆಸ್ತಿ ಮೇಲಿನ ಲಾಭ ಶೇ. 1.3ರಷ್ಟಿದೆ. ಆರ್​ಒಇ ಅಥವಾ ಈಕ್ವಿಟಿ ಮೇಲಿನ ಲಾಭ ಶೇ. 13.8ರಷ್ಟಿದೆ. ಇದು ದಶಕದಲ್ಲೇ ಗರಿಷ್ಠ ಮಟ್ಟ ಎನ್ನಲಾಗಿದೆ.

ಸಾಲಕ್ಕೆ ಬದಲಿಯಾಗಿ ಇರಿಸಲಾಗುವ ಮೀಸಲು ನಿಧಿಯ ಪ್ರಮಾಣವಾದ ಸಿಆರ್​ಎಆರ್ ಅಥವಾ ಕ್ಯಾಪಿಟಲ್ ಅಡಿಕ್ವಸಿ ರೇಶಿಯೋ ಈ ಕಮರ್ಷಿಯಲ್ ಬ್ಯಾಂಕ್​ಗಳಲ್ಲಿ ಸರಾಸರಿಯಾಗಿ ಶೇ. 16.8ರಷ್ಟಿದೆ. ಅನಿಶ್ಚಿತ ಸಂದರ್ಭವನ್ನು ಎದುರಿಸುವಷ್ಟು ಕ್ಯಾಷ್ ಮೊತ್ತ ಬ್ಯಾಂಕುಗಳ ಬಳಿ ಇದೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಆರ್​ಬಿಐನ ವರದಿ ಹೇಳುತ್ತಿದೆ.

ಇದನ್ನೂ ಓದಿ: Bank Holidays: ಜುಲೈ ತಿಂಗಳಲ್ಲಿ 12 ದಿನ ರಜೆಗಳಿವೆ; ನಿಮ್ಮ ಊರಲ್ಲಿ ಯಾವ್ಯಾವತ್ತು ರಜೆ? ಇಲ್ಲಿದೆ ಪಟ್ಟಿ

ಭಾರತದ್ದು ಮಾತ್ರವಲ್ಲ ಜಾಗತಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಆರ್​ಬಿಐ ವರದಿ ಆಶಾದಾಯಕವಾಗಿದೆ. ‘ಜಾಗತಿಕ ರಾಜಕೀಯ ಬಿಕ್ಕಟ್ಟು, ಸಾರ್ವಜನಿಕ ಸಾಲ ಹೆಚ್ಚಳ, ಹಣದುಬ್ಬರ ಇಳಿಕೆಯಲ್ಲಿನ ಮಂದಗತಿ ಇತ್ಯಾದಿ ಅಂಶಗಳು ಜಾಗತಿಕವಾಗಿ ಆರ್ಥಿಕತೆಗೆ ಹಿನ್ನಡೆಯಾಗಿವೆ. ಆದರೂ ಕೂಡ ಜಾಗತಿಕ ಹಣಕಾಸು ವ್ಯವಸ್ಥೆಯ ಪ್ರತಿರೋಧ ಶಕ್ತಿ ಉತ್ತಮವಾಗಿದೆ, ಸ್ಥಿರವಾಗಿದೆ,’ ಎಂದು ಭಾರತೀಯ ರಿಸರ್ವ್ ಬ್ಯಾಂಕ್​ನ ವರದಿಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು