AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tower Chips: ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್​ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ಸ್ಥಾಪನೆ ಸಾಧ್ಯತೆ

Israel's Tower Semiconductor To Make Huge Investment In India: ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯ ಕ್ಷೇತ್ರ ಬೆಳೆಸುವ ಭಾರತ ಸರ್ಕಾರದ ಪ್ರಯತ್ನಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಇಸ್ರೇಲ್​ನ ಪ್ರಮುಖ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎನಿಸಿದ ಟವರ್ ಸೆಮಿಕಂಡಕ್ಟರ್ ಭಾರತದಲ್ಲಿ 8 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾಗಿದೆ. ಭಾರತದಲ್ಲಿ 65ಎನ್​ಎಂ ಮತ್ತು 40 ಎನ್​ಎಂ ಚಿಪ್​ಗಳನ್ನು ತಯಾರಿಸಲು ಹೊರಟಿರುವ ಟವರ್ ಸೆಮಿಕಂಡಕ್ಟರ್ ಈಗ ಇನ್ವೆಸ್ಟ್​ಮೆಂಟ್ ಪಾರ್ಟ್ನರ್​ಗಾಗಿ ಹುಡುಕುತ್ತಿದೆ.

Tower Chips: ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್​ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ಸ್ಥಾಪನೆ ಸಾಧ್ಯತೆ
ಸೆಮಿಕಂಡಕ್ಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 13, 2024 | 11:38 AM

Share

ನವದೆಹಲಿ, ಫೆಬ್ರುವರಿ 13: ವಿಶ್ವದ ಸೆಮಿಕಂಡಕ್ಟರ್ ಚಿಪ್ ಅಡ್ಡೆಗಳಲ್ಲಿ ಒಂದಾಗಿರಬೇಕೆನ್ನುವ ಭಾರತದ ಕನಸು ಹೆಚ್ಚು ಗಟ್ಟಿಗೊಳ್ಳುತ್ತಿದೆ. ಭಾರತದಲ್ಲಿ ಚಿಪ್ ಫ್ಯಾಕ್ಟರಿ (chip manufacturing) ಸ್ಥಾಪಿಸಲು ಹಲವು ಜಾಗತಿಕ ದೈತ್ಯ ಕಂಪನಿಗಳು ಆಸಕ್ತಿ ತೋರಿವೆ. ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್ (Tower Semiconductor) ಸಂಸ್ಥೆ ಭಾರತದಲ್ಲಿ ಚಿಪ್ ತಯಾರಿಕೆಯ ಘಟಕ ಸ್ಥಾಪಿಸಲು ಉತ್ಸುಕವಾಗಿದೆ. ಇಂಡಿಯನ್ ಎಕ್ಸ್​ಪ್ರೆಸ್ ವರದಿ ಪ್ರಕಾರ ಇಸ್ರೇಲೀ ಕಂಪನಿ ಭಾರತದಲ್ಲಿ ಎಂಟು ಬಿಲಿಯನ್ ಡಾಲರ್ ಹೂಡಿಕೆ ಮಾಡಬಹುದು ಎನ್ನಲಾಗಿದೆ. ಈ ಯೋಜನೆ ನನಸಾದಲ್ಲಿ ಟವರ್ ಸೆಮಿಕಂಡಕ್ಟರ್​ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ತಲೆ ಎತ್ತಲಿದೆ. ಈ ಇಸ್ರೇಲೀ ಕಂಪನಿ ಇಷ್ಟೊಂದು ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಹೊರಟಿರುವುದು ಇದೇ ಮೊದಲು.

ಟವರ್ ಸೆಮಿಕಂಡಕ್ಟರ್ ಸಂಸ್ಥೆ ಭಾರತದಲ್ಲಿ 65 ನ್ಯಾನೋಮೀಟರ್ ಮತ್ತು 40 ನ್ಯಾನೋಮೀಟರ್ ಚಿಪ್​ಗಳನ್ನು ತಯಾರಿಸಲು ಯೋಜಿಸಿದೆ. ಸೆಮಿಕಂಡಕ್ಟರ್ ಉತ್ಪಾದನೆಗೆಂದು ಭಾರತ ಸರ್ಕಾರ ನಡೆಸುತ್ತಿರುವ 10 ಬಿಲಿಯನ್ ಡಾಲರ್ ಮೊತ್ತದ ಪಿಎಲ್​ಐ ಸ್ಕೀಮ್ ಮೂಲಕ ತಮಗೆ ನೆರವು ಸಿಗಬೇಕೆಂದು ಇಸ್ರೇಲೀ ಕಂಪನಿ ಮನವಿ ಮಾಡಿದೆ. ಒಂದು ವೇಳೆ ಈ ನಿಟ್ಟಿನಲ್ಲಿ ಭರವಸೆ ಸಿಕ್ಕಲ್ಲಿ ಟವರ್ ಸೆಮಿಕಂಡಕ್ಟರ್ ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಈ ಯೋಜನೆಗಾಗಿ ಅದು ಇನ್ವೆಸ್ಟ್​ಮೆಂಟ್ ಪಾರ್ಟ್ನರ್ ಅನ್ನು ಹುಡುಕುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಮಾಡೋ ಮೊದಲ ಕೆಲಸ ಇದು…

ಟವರ್ ಸೆಮಿಕಂಡಕ್ಟರ್ ಈ ಹಿಂದೆಯೂ ಭಾರತದಲ್ಲಿ ಹೆಜ್ಜೆ ಊರಲು ಆಸಕ್ತಿ ತೋರಿದ್ದಿದೆ. 2007ರಲ್ಲಿ ಇಂಟರ್ನ್ಯಾಷನಲ್ ಸೆಮಿಕಂಡ್ಟರ್ ಕನ್ಸಾರ್ಟಿಯಮ್​ನ ಭಾಗವಾಗಿ ಅದು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಸ್ಥಾಪಿಸಲು ಯತ್ನಿಸಿತ್ತು. ಅದು ಸಾಧ್ಯವಾಗಿರಲಿಲ್ಲ. 2022ರಲ್ಲೂ ಇನ್ನೊಂದು ಯತ್ನವಾಗಿತ್ತು. ಆದರೆ, ಟವರ್ ಸೆಮಿಕಂಡಕ್ಟರ್ ಅನ್ನು ಇಂಟೆಲ್ ಖರೀದಿಸಲು ಮಾತುಕತೆ ನಡೆಯುತ್ತಿದ್ದರಿಂದ ಆ ಪ್ರಯತ್ನ ಕೈಗೂಡಲಿಲ್ಲ. ಈಗ ಇಂಟೆಲ್ ಹಿಂದಕ್ಕೆ ಸರಿದಿದೆ. ಭಾರತದಲ್ಲಿ ಚಿಪ್ ಫ್ಯಾಕ್ಟರಿ ಸ್ಥಾಪನೆಯಿಂದಲೂ ಇಂಟೆಲ್ ಹಿಂದಕ್ಕೆ ಸರಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಟವರ್ ಸೆಮಿಕಂಡಕ್ಟರ್ ಕಂಪನಿಗೆ ಆಹ್ವಾನ ಕೊಟ್ಟಿದೆ.

ಟವರ್ ಸೆಮಿಕಂಡಕ್ಟರ್ ಸಂಸ್ಥೆ ಜಪಾನ್, ಇಟಲಿ ಮತ್ತು ಅಮೆರಿಕದಲ್ಲಿ ಕಳೆದ ಎಂಟು ವರ್ಷದಲ್ಲಿ ಚಿಪ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಿದೆ. ಆದರೆ, ಭಾರತದಲ್ಲಿ ಮಾಡಲಿರುವ ಅದರ ಹೂಡಿಕೆಯು ಎಲ್ಲಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: ಪೇಟಿಎಂ ಜೊತೆ ಕೆಲಸ ಮಾಡಲು ಸಿದ್ಧ ಎಂದ ಎಕ್ಸಿಸ್ ಬ್ಯಾಂಕ್; ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ದೇಶಕಿ ರಾಜೀನಾಮೆ

ಇನ್ನೊಂದು ಪ್ರಮುಖ ಸಂಗತಿ ಎಂದರೆ ಟವರ್ ಸೆಮಿಕಂಡಕ್ಟರ್ ಸ್ಥಾಪನೆ ಮಾಡಲಿರುವುದು 65 ಎನ್​ಎಂ ಚಿಪ್​ಗಳನ್ನು. ಇದು ಬಹಳ ಮಹತ್ವದ ವಿಚಾರ. ಮುಂದಿನ ತಲೆಮಾರುಗಳ ಟೆಕ್ನಾಲಜಿಗಳಿಗೆ ಸುಲಭವಾಗಿ ಅಪ್​ಗ್ರೇಡ್ ಆಗಲು ಇದು ಸಹಾಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ