AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neeraj Chopra: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ ಈ ಏರ್​ಲೈನ್ಸ್​ನಿಂದ ಅನ್​ಲಿಮಿಟೆಡ್​ ಉಚಿತ ಟಿಕೆಟ್

ಟೋಕಿಯೋ ಒಲಿಂಪಿಕ್ಸ್ 2020ರ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಇಂಡಿಗೋ ವಿಮಾನ ಯಾನ ಸಂಸ್ಥೆ ನೀಡಿರುವ ಆಫರ್ ಇದು.

Neeraj Chopra: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ ಈ ಏರ್​ಲೈನ್ಸ್​ನಿಂದ ಅನ್​ಲಿಮಿಟೆಡ್​ ಉಚಿತ ಟಿಕೆಟ್
ಇಂಡಿಗೋ ಸಂಸ್ಥೆಯ ವಿಮಾನ
TV9 Web
| Edited By: |

Updated on: Aug 07, 2021 | 11:58 PM

Share

ಭಾರತೀಯ ವಿಮಾನ ಯಾನ ಸಂಸ್ಥೆ ಇಂಡಿಗೋ (IndiGo) ಶನಿವಾರದಂದು ಘೋಷಣೆ ಮಾಡಿರುವ ಪ್ರಕಾರ, ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾಗೆ ಒಂದು ವರ್ಷ ಕಾಲ ಅನಿಯಮಿತವಾಗಿ ಉಚಿತ ಪ್ರಯಾಣಕ್ಕೆ ಟಿಕೆಟ್​ ಆಫರ್ ಮಾಡಿದೆ. ಟೋಕಿಯೋ ಒಲಿಂಪಿಕ್ಸ್​ 2020ರ ಪುರುಷರ ಜಾವೆಲಿನ್ ಎಸೆತದ ಫೈನಲ್ ಪಂದ್ಯಾವಳಿಯಲ್ಲಿ ನೀರಜ್​ ಚೋಪ್ರಾ ಚಿನ್ನದ ಪದಕವನ್ನು ಗೆದ್ದಿರುವುದನ್ನು ಗುರುತಿಸಿ, ಈ ಘೋಷಣೆಯನ್ನು ಮಾಡಲಾಗಿದೆ. ಆಗಸ್ಟ್ 8, 2021ರಿಂದ ಆಗಸ್ಟ್ 7, 2022ರ ತನಕ ಈ ಆಫರ್ ಅನ್ವಯ ಆಗುತ್ತದೆ.

ಇಂಡಿಗೋದ ಪೂರ್ಣಾವಧಿ ನಿರ್ದೇಶಕ ಹಾಗೂ ಸಿಇಒ ರೊನೊಜಾಯ್ ದತ್ತಾ ಮಾತನಾಡಿ, ನಿಮ್ಮ ದಾಖಲೆಯಿಂದ ನಮಗೆ ಸಂತೋಷವಾಗಿದೆ. ನೀವು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದೀರಿ. ನಮ್ಮ ವಿಮಾನಕ್ಕೆ ನಿಮ್ಮನ್ನು ಸ್ವಾಗತಿಸುವುನ್ನು ಇಂಡಿಗೋದ ಸಿಬ್ಬಂದಿ ಗೌರವ ಎಂದು ಭಾವಿಸುತ್ತಾರೆ. ಎಲ್ಲ ಗೌರವದೊಂದಿಗೆ ನಿಮಗೆ ಇಂಡಿಗೋ ವಿಮಾನದಲ್ಲಿ ಒಂದು ವರ್ಷ ಉಚಿತ ಸೇವೆ ಆಫರ್ ಮಾಡಲು ಬಯಸುತ್ತೇವೆ. ಪರಿಶ್ರಮ, ಪ್ಯಾಷನ್ ಹಾಗೂ ತಡೆಗಳನ್ನು ಎದುರಿಸಿ ನಿಲ್ಲುವುದರಿಂದ ಏನು ಸಾಧಿಸಬಹುದು ಅಂತ ನಮಗೆ ತೋರಿಸಿದ್ದೀರಿ. ಭವಿಷ್ಯದ ಭಾರತೀಯ ಅಥ್ಲೀಟ್​ಗಳಿಗೆ ನೀವು ದಾರಿದೀಪ ಆಗಲಿದ್ದೀರಿ. ವೆಲ್​ ಡನ್, ನೀರಜ್ ಎಂದಿದ್ದಾರೆ.

ಅಂದಹಾಗೆ, ಒಲಿಂಪಿಕ್ಸ್​ನಲ್ಲಿ ವಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ನೀರಜ್ ಚೋಪ್ರಾ. 23 ವರ್ಷದ ಚೋಪ್ರಾ ಅವರ ತಂದೆ ಹರ್ಯಾಣದ ಪಾಣಿಪತ್ ಬಳಿ ಇರುವ ಖಾಂಡ್ರಾ ಎಂಬ ಹಳ್ಳಿಯಲ್ಲಿ ಕೃಷಿಕರು. 100 ವರ್ಷಗಳಿಂದ ಭಾರತವು ಟ್ರ್ಯಾಕ್ ಅಂಡ್ ಫೀಲ್ಡ್​ನಲ್ಲಿ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿನ ಇಂಥದ್ದೊಂದು ಸಾಧನೆಗೆ ಎದುರು ನೋಡುತ್ತಿತ್ತು. ಇನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯಿಂದ SUV ಆದ XUV700 ಘೋಷಣೆ ಮಾಡಲಾಗಿದೆ. ಭಾರತದಲ್ಲಿ ಈ ಎಸ್​ಯುವು ಬಿಡುಗಡೆ ಆಘಬೇಕು. ತನ್ನ ಮೊದಲ ಯೂನಿಟ್​ ಅನ್ನು ಒಲಿಂಪಿಕ್ ಚಾಂಪಿಯನ್​ಗೆ ನೀಡಲಿದೆ.

ಇದನ್ನೂ ಓದಿ: Neeraj Chopra: ಚಿನ್ನದ ಹುಡುಗ ‘ಸುಬೇದಾರ್ ನೀರಜ್ ಚೋಪ್ರಾ’ ಬಗ್ಗೆ ನಿಮಗೆಷ್ಟು ಗೊತ್ತು?

(IndiGo Airline Offers 1 Year Unlimited Free Air Tickets To Tokyo 2020 Olympic Gold Medalist Neeraj Chopra)

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ