AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infosys: ಇನ್ಫೋಸಿಸ್ ಹೂಡಿಕೆದಾರರ 48,000 ಕೋಟಿ ರೂಪಾಯಿ ಸಂಪತ್ತು ನಿಮಿಷಗಳಲ್ಲಿ ಉಡೀಸ್

2022ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿರಾಶಾದಾಯಕ ಫಲಿತಾಂಶವನ್ನು ಪ್ರಕಟಿಸಿದ ಬೆನ್ನಿಗೆ ಇನ್ಫೋಸಿಸ್​ನ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಸೋಮವಾರ ಬೆಳಗ್ಗೆ ಕೆಲವೇ ನಿಮಿಷದಲ್ಲಿ ಹೂಡಿಕೆದಾರರು 48 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.

Infosys: ಇನ್ಫೋಸಿಸ್ ಹೂಡಿಕೆದಾರರ 48,000 ಕೋಟಿ ರೂಪಾಯಿ ಸಂಪತ್ತು ನಿಮಿಷಗಳಲ್ಲಿ ಉಡೀಸ್
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 18, 2022 | 3:16 PM

Share

2022ರ ಜನವರಿಯಿಂದ ಮಾರ್ಚ್ ತನಕದ ನಾಲ್ಕನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ದುರ್ಬಲವಾದ ಗಳಿಕೆಗಳ ಆಧಾರದ ಮೇಲೆ ಹಲವು ವಿಶ್ಲೇಷಕರು ಅದರ ಮಾರ್ಜಿನ್ ಅಂದಾಜು ಕಡಿತಗೊಳಿಸಿದ ನಂತರ ಇನ್ಫೋಸಿಸ್ ಲಿಮಿಟೆಡ್‌ನ (Infosys) ಷೇರುಗಳು ಸೋಮವಾರ ಶೇಕಡಾ 9ಕ್ಕಿಂತ ಹೆಚ್ಚು ಕುಸಿದಿದ್ದು, ಮಾರುಕಟ್ಟೆ ಬಂಡವಾಳದಲ್ಲಿ ರೂ. 48,000 ಕೋಟಿ ಕೊಚ್ಚಿಹೋಯಿತು. ಶೇ 9ರಷ್ಟು ಇಳಿಕೆ ಕಂಡ ಇನ್ಫೋಸಿಸ್ ಮಾರ್ಚ್ 23, 2020ರ ನಂತರ ಅತಿದೊಡ್ಡ ಕುಸಿತವನ್ನು ಕಂಡಿದೆ. ಸೋಮವಾರ ಷೇರುಗಳ ಬೆಲೆಯು ದಿನದ ಕನಿಷ್ಠ ಮಟ್ಟ 1590 ರೂಪಾಯಿಯನ್ನು ಮುಟ್ಟಿದೆ. ಈ ವರದಿ ಸಿದ್ಧವಾಗುವ ಹೊತ್ತಿಗೆ ಎನ್​ಎಸ್​ಇಯಲ್ಲಿ ಶೇ 7.07ರಷ್ಟು ಕುಸಿತ ಕಂಡು, 1625 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.

ಜೆಫರೀಸ್ ಇಂಡಿಯಾ ತನ್ನ ಮಾರ್ಜಿನ್ ಅಂದಾಜುಗಳನ್ನು 100ರಿಂದ 170 ಬೇಸಿಸ್ ಪಾಯಿಂಟ್‌ಗಳು ಕಡಿತಗೊಳಿಸಿದೆ ಮತ್ತು FY22ರಲ್ಲಿ ಶೇ 21.9ರಷ್ಟು ಮಾರ್ಜಿನ್ ಅನ್ನು ನಿರೀಕ್ಷಿಸಿದೆ. ಬ್ರೋಕರೇಜ್ ಸಂಸ್ಥೆ ನೊಮುರಾ ರೀಸರ್ಚ್, FY23F EBIT ಮಾರ್ಜಿನ್ ವರ್ಷದಿಂದ ವರ್ಷಕ್ಕೆ 100 ಬೇಸಿಸ್​ ಪಾಯಿಂಟ್​ ಇಳಿಸಿ ಶೇ 22ಕ್ಕೆ ಬರುತ್ತದೆ ಎಂದಿದೆ ಮತ್ತು FY22-24 ಗಳಿಕೆಯನ್ನು ಪ್ರತಿ ಷೇರಿಗೆ ಶೇ 5ರಿಂದ 7ರಷ್ಟು ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸುತ್ತದೆ.

ಬಿ ಅಂಡ್ ಕೆ ಸೆಕ್ಯೂರಿಟೀಸ್ FY23/24ಕ್ಕೆ ಶೇ 22.7/23.7 ಮಾರ್ಜಿನ್‌ಗಳನ್ನು ಅಂದಾಜಿಸುತ್ತದೆ ಮತ್ತು ಆದ್ದರಿಂದ ಪ್ರತಿ ವರ್ಷ ತನ್ನ ಇಪಿಎಸ್ ಅಂದಾಜುಗಳನ್ನು ಶೇ 5ರಿಂದ ಪ್ರತಿ ಷೇರಿಗೆ ಕ್ರಮವಾಗಿ ರೂ. 63/78 ಆಗಬಹುದು ಎಂದಿದೆ. ಒಪ್ಪಂದದ ಗ್ರಾಹಕರ ನಿಬಂಧನೆಗಳ ಪ್ರಭಾವ ಮತ್ತು ಕಡಿಮೆ ಸಂಖ್ಯೆಯ ಕ್ಯಾಲೆಂಡರ್ ಕೆಲಸದ ದಿನಗಳಿಂದ ಇನ್ಫೋಸಿಸ್ ಸ್ಥಿರ ಕರೆನ್ಸಿ ನಿಯಮಗಳಲ್ಲಿ ಶೇ 1.2 ಪ್ರತಿಶತದಷ್ಟು ಆದಾಯದ ಬೆಳವಣಿಗೆಯನ್ನು ವರದಿ ಮಾಡಿದೆ.

ಇದನ್ನೂ ಓದಿ: Infosys: ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್​ಗೆ ಮುಜುಗರ ತಪ್ಪಿಸಲು ರಷ್ಯಾದಲ್ಲಿ ಕಾರ್ಯಾಚರಣೆ ನಿಲ್ಲಿಸಲಿದೆ ಇನ್ಫೋಸಿಸ್

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ