AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್ ಯುದ್ಧಭೀತಿ: ಅದಾನಿ ಪೋರ್ಟ್ಸ್ ಕಂಪನಿಯತ್ತ ಷೇರುದಾರರ ಚಿತ್ತ ಯಾಕೆ? ಇಲ್ಲಿದೆ ಅದಾನಿ ಇಸ್ರೇಲ್ ನಂಟು

Israel and Adani Group link: ಇಸ್ರೇಲ್​ನಲ್ಲಿ ಯುದ್ಧ ವಾತಾವರಣ ನೆಲಸಿರುವ ಮಧ್ಯೆಯೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಪೋರ್ಟ್ಸ್ ಷೇರಿನ ಮೇಲೆ ಬಹಳಷ್ಟು ಜನರ ಚಿತ್ತ ನೆಟ್ಟಿದೆ. ಇಸ್ರೇಲ್​ನ ಹೈಫಾ ಬಂದರನ್ನು ಅದಾನಿ ಪೋರ್ಟ್ಸ್ ನಿರ್ವಹಿಸುತ್ತಿದೆ. ಈಗ ಇಸ್ರೇಲ್​ನಲ್ಲಿ ಯುದ್ಧಭೀತಿ ಹೆಚ್ಚಾದರೆ ಈ ಪೋರ್ಟ್ ಕಾರ್ಯಸ್ಥಗಿತಗೊಳ್ಳಬಹುದು. ಈ ಕಾರಣಕ್ಕೆ ಅದಾನಿ ಪೋರ್ಟ್ಸ್ ಷೇರುದಾರರಿಗೆ ಗೊಂದಲವಾಗಿದೆ. ತಜ್ಞರ ಪ್ರಕಾರ ಅದಾನಿ ಪೋರ್ಟ್ಸ್​ನ ಒಟ್ಟು ಬಿಸಿನೆಸ್​ನಲ್ಲಿ ಹೈಫಾ ಪೋರ್ಟ್ ವಹಿವಾಟಿನ ಪಾಲು ಬಹಳ ಕಡಿಮೆ. ದೂರ ದೃಷ್ಟಿಯಲ್ಲಿ ಇಸ್ರೇಲ್ ಯುದ್ಧದಿಂದ ಅದಾನಿ ಪೋರ್ಟ್ಸ್​ಗೆ ಹೆಚ್ಚೇನೂ ಹಾನಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಇಸ್ರೇಲ್ ಯುದ್ಧಭೀತಿ: ಅದಾನಿ ಪೋರ್ಟ್ಸ್ ಕಂಪನಿಯತ್ತ ಷೇರುದಾರರ ಚಿತ್ತ ಯಾಕೆ? ಇಲ್ಲಿದೆ ಅದಾನಿ ಇಸ್ರೇಲ್ ನಂಟು
ಹೈಫಾ ಪೋರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 18, 2024 | 12:52 PM

Share

ನವದೆಹಲಿ, ಏಪ್ರಿಲ್ 18: ಇಸ್ರೇಲ್ ಇರಾನ್ ಮಧ್ಯೆ ಯುದ್ಧ ಭೀತಿ ನೆಲಸಿರುವ ನಡುವೆಯೇ ಲೆಬನಾನ್​ನ ಹಿಜ್ಬೋಲ್ಲಾ ಉಗ್ರ ಪಡೆಗಳು (Hezbolla militants) ಇಸ್ರೇಲ್ ಮೇಲೆ ಮಿಸೈಲ್ ಮತ್ತು ಡ್ರೋನ್​ಗಳಿಂದ ದಾಳಿ ಮಾಡಿವೆ. ಉತ್ತರ ಇಸ್ರೇಲ್​ನಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಸಂಭವಿಸಿದ ಈ ಘಟನೆಯಲ್ಲಿ 14 ಮಂದಿ ಯೋಧರಿಗೆ ಗಾಯವಾಗಿರುವುದು ತಿಳಿದುಬಂದಿದೆ. ಇಸ್ರೇಲ್ ಬಿಕ್ಕಟ್ಟಿನ (Israel war crisis) ಪರಿಣಾಮವಾಗಿ ಸೋಮವಾರ ಮತ್ತು ಮಂಗಳವಾರ ಷೇರು ಮಾರುಕಟ್ಟೆ ಕುಸಿದಿತ್ತು. ಇವತ್ತು ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು (stock market) ಹಸಿರು ಬಣ್ಣದಲ್ಲಿವೆ. ಈ ಮಧ್ಯೆ ಬಹಳ ಜನರ ಚಿತ್ತ ಅದಾನಿ ಪೋರ್ಟ್ಸ್ ಕಂಪನಿಯತ್ತ ನೆಟ್ಟಿದೆ. ಇದಕ್ಕೆ ಕಾರಣ ಇಸ್ರೆಲ್​ನ ಹೈಫಾ ಪೋರ್ಟ್.

ಹಿಜ್ಬೊಲ್ಲಾ ಉಗ್ರರು ದಾಳಿ ನಡೆಸಿದ ಉತ್ತರ ಇಸ್ರೇಲ್​ನಲ್ಲಿ ಹೈಫಾ ಬಂದರು ಇರುವುದು. ಈ ಪೋರ್ಟ್​ನಲ್ಲಿ ಅದಾನಿ ಕಂಪನಿಯ ಪಾಲು ಸಾಕಷ್ಟು ಇದೆ. ಈಗ ಇಸ್ರೇಲ್​ನಲ್ಲಿ ಯುದ್ಧ ಮುಂದುವರಿದರೆ ಅದಾನಿ ಪೋರ್ಟ್ಸ್​ನ ಕಾರ್ಯಾಚರಣೆಗೆ ಧಕ್ಕೆ ಆಗುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅದಾನಿ ಪೋರ್ಟ್ಸ್​ನ ಷೇರಿನ ಮೇಲೆ ಅನೇಕರ ಚಿತ್ತ ನೆಟ್ಟಿರುವುದು.

ಇದನ್ನೂ ಓದಿ: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ್ದ ಏರ್​ ಇಂಡಿಯಾ ವಿಮಾನಗಳು

ಇವತ್ತು ಬೆಳಗಿನ ವಹಿವಾಟಿನಲ್ಲಿ ಅದಾನಿ ಪೋರ್ಟ್ಸ್ ಷೇರು ಅಚ್ಚರಿ ರೀತಿಯಲ್ಲಿ ಪಾಸಿಟಿವ್ ಆಗಿದೆ. ಶೇ. 2.40ರಷ್ಟು ಷೇರುಬೆಲೆ ಹೆಚ್ಚಳವಾಗಿ 1,336 ರೂ ಮಟ್ಟಕ್ಕೆ ಏರಿದೆ. ಆದರೆ, ಕೆಲ ಷೇರುಪೇಟೆ ತಜ್ಞರು ಅದಾನಿ ಪೋರ್ಟ್ಸ್ ಷೇರು ಕುಸಿತ ಕಾಣಬಹುದು ಎಂದು ನಿರೀಕ್ಷಿಸಿದ್ದಾರೆ. ಅವರ ಪ್ರಕಾರ ಸ್ಟಾಪ್ ಲಾಸ್ ಆಗಿ 1,280 ರೂ ಅನ್ನು ನಿಗದಿ ಮಾಡಿದ್ದಾರೆ. ಅಂದರೆ, ಅದಾನಿ ಪೋರ್ಟ್ಸ್ ಷೇರು ಬೆಲೆ 1,280 ರೂಗಿಂತ ಕೆಳಗೆ ಕುಸಿಯಲು ಆರಂಭಿಸಿದರೆ ಅದನ್ನು ಮಾರಿಬಿಡುವಂತೆ ಸಲಹೆ ನೀಡಿದ್ದಾರೆ.

ಹೈಫಾ ಪೋರ್ಟ್​ನ ಬಿಸಿನೆಸ್ ಅದಾನಿ ಕಂಪನಿಗೆ ಬಿಗ್ ಡೀಲ್ ಅಲ್ಲ

ಅದಾನಿ ಗ್ರೂಪ್ ಕಂಪನಿ ವಿಶ್ವಾದ್ಯಂತ ಹಲವೆಡೆ ಬಂದರುಗಳನ್ನು ನಿರ್ವಹಿಸುತ್ತಿದೆ. ಹೈಫಾ ಪೋರ್ಟ್​ನಿಂದ ಬರುವ ಆದಾಯ ಅದಾನಿ ಪೋರ್ಟ್ಸ್​ನ ಒಟ್ಟು ಆದಾಯದ ಶೇ. 3 ಮಾತ್ರ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಇಸ್ರೇಲ್​ನಲ್ಲಿ ಯುದ್ಧ ಮುಂದುವರಿದು ಹೈಫಾದಲ್ಲಿನ ಸರಕು ಸಾಗಣೆ ವಹಿವಾಟು ನಿಂತು ಹೋದರೂ ಅದಾನಿ ಪೋರ್ಟ್ಸ್​ನ ಬಿಸಿನೆಸ್​ಗೆ ದೊಡ್ಡ ಪೆಟ್ಟೇನೂ ಬೀಳುವುದಿಲ್ಲ.

ಇದನ್ನೂ ಓದಿ: ಭಾರತಕ್ಕೆ ರಾಜತಾಂತ್ರಿಕ ಜಯ: ಭಾರತೀಯರನ್ನು ಬಂಧಿಸಿಲ್ಲ, ಯಾವಾಗಬೇಕಾದರೂ ಭಾರತಕ್ಕೆ ಹೋಗಬಹುದು

ಈ ಕಾರಣಕ್ಕೆ ಒಂದು ವೇಳೆ ಅದಾನಿ ಪೋರ್ಟ್ಸ್​ನ ಷೇರುಬೆಲೆ ಕುಸಿತ ಕಂಡಿದ್ದೇ ಆದಲ್ಲಿ ಅದನ್ನು ಖರೀದಿಸುವುದು ಜಾಣತನ ಎಂದು ಕೆಲ ತಜ್ಞರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ