AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITC: ಇನ್ಫೋಸಿಸ್ ಹಿಂದಿಕ್ಕಿದ ಐಟಿಸಿ; ಷೇರು ಸಂಪತ್ತಿನಲ್ಲಿ 6ನೇ ಸ್ಥಾನ; ಎಷ್ಟಿದೆ ಅದರ ಷೇರುಮೊತ್ತ? ಅಗ್ರಸ್ಥಾನದಲ್ಲಿರುವುದು ಯಾರು?

Companies with most Market Cap: ಷೇರುಮಾರುಕಟ್ಟೆಯಲ್ಲಿ ಅತಿಹೆಚ್ಚು ಷೇರುಮೊತ್ತ ಇರುವ ಕಂಪನಿಗಳ ಪಟ್ಟಿಯಲ್ಲಿ ಐಟಿಸಿ 6ನೇ ಸ್ಥಾನಕ್ಕೇರಿದೆ. ಭಾರತದ ಐಟಿ ದೈತ್ಯ ಇನ್ಫೋಸಿಸ್ ಅನ್ನು ಹಿಂದಿಕ್ಕಿ ಅದು ಮೇಲೇರಿದೆ. ಒಂದು ಸಮಯದಲ್ಲಿ 4ನೇ ಅತಿ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿದ್ದ ಇನ್ಫೋಸಿಸ್ ಇದೀಗ 9ನೇ ಸ್ಥಾನಕ್ಕೆ ಕುಸಿದಿದೆ.

ITC: ಇನ್ಫೋಸಿಸ್ ಹಿಂದಿಕ್ಕಿದ ಐಟಿಸಿ; ಷೇರು ಸಂಪತ್ತಿನಲ್ಲಿ 6ನೇ ಸ್ಥಾನ; ಎಷ್ಟಿದೆ ಅದರ ಷೇರುಮೊತ್ತ? ಅಗ್ರಸ್ಥಾನದಲ್ಲಿರುವುದು ಯಾರು?
ಷೇರುಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2023 | 5:15 PM

Share

ನವದೆಹಲಿ: ಐಟಿಸಿ ಕಂಪನಿಯ ಷೇರಿನ ಓಟ ಅಡೆತಡೆ ಇಲ್ಲದೇ ಸಾಗಿದೆ. ಸಿಗರೇಟು ಉತ್ಪನ್ನಗಳಿಗಷ್ಟೇ ಸೀಮಿತವಾಗದೇ ಜನಬಳಕೆಯ ಎಫ್​ಎಂಸಿಜಿ ವಲಯದಲ್ಲಿ ಬೇರೂರಿರುವ ಐಟಿಸಿ ಸಂಸ್ಥೆ (ITC) ಒಳ್ಳೆಯ ಲಾಭದಲ್ಲಿದೆ. ಹಾಗೆಯೇ ಷೇರುಪೇಟೆಯಲ್ಲಿ ಉತ್ತಮ ಬೆಲೆಹೆಚ್ಚಳ ಕಾಣುತ್ತಿದೆ. ಇದರ ಪರಿಣಾಮವಾಗಿ ಷೇರುಮಾರುಕಟ್ಟೆಯಲ್ಲಿ ಅತಿಹೆಚ್ಚು ಷೇರುಮೊತ್ತ (Market Capitalization) ಇರುವ ಕಂಪನಿಗಳ ಪಟ್ಟಿಯಲ್ಲಿ ಐಟಿಸಿ 6ನೇ ಸ್ಥಾನಕ್ಕೇರಿದೆ. ಭಾರತದ ಐಟಿ ದೈತ್ಯ ಇನ್ಫೋಸಿಸ್ ಅನ್ನು ಹಿಂದಿಕ್ಕಿ ಅದು ಮೇಲೇರಿದೆ. ಒಂದು ಸಮಯದಲ್ಲಿ 4ನೇ ಅತಿ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿದ್ದ ಇನ್ಫೋಸಿಸ್ (Infosys) ಇದೀಗ 9ನೇ ಸ್ಥಾನಕ್ಕೆ ಕುಸಿದಿದೆ. ಇನ್ಫೋಸಿಸ್​ನ ಒಟ್ಟು ಷೇರುಮೊತ್ತ 5 ಲಕ್ಷ ಕೋಟಿ ರುಪಾಯಿ ಇದೆ. ಐಟಿಸಿ ಸಂಸ್ಥೆ 5.16 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್​ವೊಂದಿಗೆ 6ನೇ ಸ್ಥಾನದಲ್ಲಿದೆ.

ಐಂಡಿಯನ್ ಟೊಬ್ಯಾಕೋ ಕಂಪನಿ ಎಂದು ಹಿಂದೆ ಹೆಸರು ಹೊಂದಿದ್ದ ಐಟಿಸಿ ಷೇರು ಬೆಲೆ ಇಂದು ಏಪ್ರಿಲ್ 26 ಸಂಜೆ 411.75 ರೂ ಇತ್ತು. ಇವತ್ತಿನ ಟ್ರೇಡಿಂಗ್​ನ ಒಂದು ಹಂತದಲ್ಲಿ ಐಟಿಸಿ ಷೇರು ಬೆಲೆ 413.45 ರುಪಾಯಿ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಇದು ಐಟಿಸಿಯ ಸಾರ್ವಕಾಲಿಕ ದಾಖಲೆ ಬೆಲೆ. ಕೋವಿಡ್ ಬಳಿಕ ಐಟಿಸಿ ಒಂದು ರೀತಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಬೆಳೆದುಹೋಗಿದೆ. 2020 ಮೇ ತಿಂಗಳಲ್ಲಿ ಐಟಿಸಿ ಷೇರು ಬೆಲೆ ಕೇವಲ 155 ರೂ ಇತ್ತು. ಹತ್ತಿರಹತ್ತಿರ 3 ವರ್ಷದಲ್ಲಿ ಎರಡೂವರೆ ಪಟ್ಟು ಹೆಚ್ಚು ಬೆಳೆದಿದೆ. ಈ ವರ್ಷವೇ ಐಟಿಸಿ ಷೇರು ಬೆಲೆ ಶೇ. 25ರಷ್ಟು ಹೆಚ್ಚಾಗಿದೆ. ಕಳೆದ 12 ತಿಂಗಳನ್ನು ಪರಿಗಣಿಸಿದರೆ ಬೆಲೆ ಶೇ. 60ರಷ್ಟು ಉಬ್ಬಿದೆ.

ಇದನ್ನೂ ಓದಿBig Rise: ಬೆಂಗಳೂರು, ಹೈದರಾಬಾದ್​ನ ಈ ಪುಟ್ಟ ಮೆಷೀನ್ ಟೂಲ್ ಕಂಪನಿಗೆ ಹಣ ಹಾಕಿದವರೇ ಸಿರಿವಂತರು; 3 ವರ್ಷದಲ್ಲಿ 7 ಪಟ್ಟು ಬೆಳೆದಿದೆ ಷೇರು

ಐಟಿಸಿಯ ಹಣಕಾಸು ವರದಿ ಇನ್ನೂ ಪ್ರಕಟವಾಗಿಲ್ಲ. ಆದರೆ, ನಿರೀಕ್ಷೆಗಳು ಬಹಳ ಇವೆ. ಕಳೆದ ಹಣಕಾಸು ವರ್ಷದಲ್ಲಿ ಐಟಿಸಿ ವ್ಯವಹಾರ 17 ಸಾವಿರ ಕೋಟಿ ರೂ ಇದ್ದಿರಬಹುದು. ನಿವ್ವಳ ಲಾಭ 5 ಸಾವಿರ ಕೋಟಿ ರೂ ತೋರಿಸಬಹುದು ಎಂದು ಪ್ರಭುದಾಸ್ ಲೀಲಾಧರ್ ಎಂಬ ಬ್ರೋಕರೇಜ್ ಸಂಸ್ಥೆ ಅಂದಾಜು ಮಾಡಿದೆ. ಎಚ್​ಡಿಎಫ್​ಸಿ ಸೆಕ್ಯೂರಿಟೀಸ್, ಮೋತಿಲಾಲ್ ಓಸ್ವಾಲ್ ಮೊದಲಾದ ಬ್ರೋಕರೇಜ್ ಕಂಪನಿಗಳೂ ಕೂಡ ಐಟಿಸಿ ಲಾಭದ ಬಗ್ಗೆ ಮಾಡಿರುವ ಅಂದಾಜು ಸಕಾರಾತ್ಮಕವಾಗಿ ಇದೆ.

ಇದನ್ನೂ ಓದಿFirst Republic Bank: ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್​ಗೆ ಆಘಾತಗಳ ಮೇಲೆ ಆಘಾತ; ಠೇವಣಿ ಹೋಯ್ತು, ಷೇರೂ ಬಿತ್ತು; ಈ ಪರಿಸ್ಥಿತಿಗೆ ಏನು ಕಾರಣ?

ಭಾರತದ ಅತಿದೊಡ್ಡ ಷೇರುಸಂಪತ್ತಿರುವ ಕಂಪನಿಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 16 ಲಕ್ಷ ಕೋಟಿ ರೂ
  2. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್: 11.7 ಲಕ್ಷ ಕೋಟಿ ರೂ
  3. ಎಚ್​ಡಿಎಫ್​ಸಿ ಬ್ಯಾಂಕ್: 10.6 ಲಕ್ಷ ಕೋಟಿ ರೂ
  4. ಐಸಿಐಸಿಐ ಬ್ಯಾಂಕ್: 6.36 ಲಕ್ಷ ಕೋಟಿ ರೂ
  5. ಹಿಂದೂಸ್ತಾನ್ ಯುನಿಲಿವರ್ ಲಿ: 5.95 ಲಕ್ಷ ಕೋಟಿ ರೂ
  6. ಐಟಿಸಿ: 5.16 ಲಕ್ಷ ಕೋಟಿ ರೂ
  7. ಎಚ್​ಡಿಎಫ್​ಸಿ: 5.15 ಲಕ್ಷ ಕೋಟಿ ರೂ
  8. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 5.09 ಲಕ್ಷ ಕೋಟಿ ರೂ
  9. ಇನ್ಫೋಸಿಸ್: 5 ಲಕ್ಷ ಕೋಟಿ ರೂ
  10. ಭಾರ್ತಿ ಏರ್​ಟೆಲ್: 4.65 ಲಕ್ಷ ಕೋಟಿ ರೂ
  11. ಕೋಟಕ್ ಮಹೀಂದ್ರ ಬ್ಯಾಂಕ್: 3.77 ಲಕ್ಷ ಕೋಟಿ ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ