RBI: ಗಮನಿಸಿ, ಜನವರಿ 22ರಂದು 2,000 ರೂ ನೋಟುಗಳ ವಿನಿಮಯ ಇರುವುದಿಲ್ಲ; ಆರ್​ಬಿಐ ಸ್ಪಷ್ಟನೆ

Rs 2000 Notes Exchange Facility on Jan 22nd: ಜನವರಿ 22ರಂದು ಆರ್​ಬಿಐನ ಇಷ್ಯೂ ಕಚೇರಿಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇರುವುದರಿಂದ ಆರ್​ಬಿಐ ಸೇರಿದಂತೆ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಇದೆ. 2,000 ರೂ ನೋಟು ಹೊಂದಿರುವವರು ಅಂಚೆ ಮೂಲಕ ನೋಟುಗಳನ್ನು ಆರ್​ಬಿಐ ಕಚೇರಿಗೆ ಕಳುಹಿಸಿ ತಮ್ಮ ಖಾತೆಗೆ ಡೆಪಾಸಿಟ್ ಮಾಡಬಹುದು.

RBI: ಗಮನಿಸಿ, ಜನವರಿ 22ರಂದು 2,000 ರೂ ನೋಟುಗಳ ವಿನಿಮಯ ಇರುವುದಿಲ್ಲ; ಆರ್​ಬಿಐ ಸ್ಪಷ್ಟನೆ
2000 ರೂ ನೋಟು

Updated on: Jan 19, 2024 | 6:16 PM

ನವದೆಹಲಿ, ಜನವರಿ 19: ಅಯೋಧ್ಯೆಯ ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ (Ram Mandir Consecration ceremony) ನಡೆಯಲಿದ್ದು ಅಂದು ಬಹಳಷ್ಟು ಕಡೆ ಪೂರ್ಣ ರಜೆ, ಅರೆ ರಜೆ, ಧಾರ್ಮಿಕ ಆಚರಣೆ ಇತ್ಯಾದಿಗಳಿವೆ. ಉತ್ತರಪ್ರದೇಶ, ಗೋವಾ, ಛತ್ತೀಸ್​ಗಡ, ಹರ್ಯಾಣ ರಾಜ್ಯಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಧ್ಯಾಹ್ನ 2:30ರವರೆಗೂ ರಜೆ ಇರುತ್ತದೆ. ಅಂತೆಯೇ ಬ್ಯಾಂಕುಗಳಿಗೂ ಅರ್ಧ ದಿನ ರಜೆ ಇರುತ್ತದೆ. ಹೀಗಾಗಿ, ಅಂದು 2,000 ರೂ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ಆರ್​ಬಿಐ ಈ ವಿಷಯವನ್ನು ಇಂದು ಶುಕ್ರವಾರ (ಜ. 19) ಸ್ಪಷ್ಟಪಡಿಸಿದೆ.

ಎರಡು ಸಾವಿರ ರೂ ನೋಟು ವಿನಿಮಯದ ಸೌಲಭ್ಯ ಜನವರಿ 22ರಂದು ಇರುವುದಿಲ್ಲ. ಜನವರಿ 23ರಂದು ಈ ಸೌಲಭ್ಯ ಮುಂದುವರಿಯುತ್ತದೆ ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Rameshwaram Cafe: ಹೈದರಾಬಾದ್​ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಹವಾ; ಸ್ಯಾಂಪಲ್ ತಿನಿಸಿಗೆ ಉಘೇ ಎಂದ ಜನರು; ಇಂದು ಅಧಿಕೃತ ಆರಂಭ

‘ಭಾರತ ಸರ್ಕಾರ ಅರ್ಧ ದಿನ ರಜೆ ಘೋಷಿಸಿರುವುದರಿಂದ ಆರ್​ಬಿಐನ ಯಾವುದೆ 19 ಇಷ್ಯೂ ಆಫೀಸ್​ಗಳಲ್ಲಿ 2,000 ರೂ ನೋಟು ವಿನಿಮಯ ಇರುವುದಿಲ್ಲ,’ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಆರ್​ಬಿಐ 2023ರ ಮೇ 19ರಂದು 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಣೆ ಮಾಡಿತು. ಮೊದಲಿಗೆ ಎಲ್ಲಾ ಬ್ಯಾಂಕುಗಳಲ್ಲೂ ನೋಟು ವಿನಿಮಯ ಮಾಡಲು ಅಥವಾ ಠೇವಣಿ ಇಡಲು ಅವಕಾಶ ಕೊಟ್ಟಿತ್ತು. ಇದೀಗ ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಮಾತ್ರವೇ ನೋಟು ವಿನಿಮಯಕ್ಕೆ ಅವಕಾಶ ಇದೆ.

ಇದನ್ನೂ ಓದಿ: TCS: ಯೂರೋಪ್​ನಲ್ಲಿ ಉದ್ಯೋಗಿಗಳು ಮೆಚ್ಚುವ ಕಂಪನಿಗಳಲ್ಲಿ ಟಿಸಿಎಸ್​ಗೆ ಮೊದಲ ಸ್ಥಾನ

ಬೆಂಗಳೂರನ ನೃಪತುಂಗ ರಸ್ತೆಯಲ್ಲಿರುವ ಆರ್​ಬಿಐ ಕಚೇರಿಯೂ ಅದರಲ್ಲಿ ಒಂದು. ಈ 19 ಕಚೇರಿಗಳಲ್ಲಿ ಯಾವುದರಲ್ಲಿಯಾದರೂ ನೀವು ಹೋಗಿ ನೋಟು ವಿನಿಮಯ ಮಾಡಿಕೊಳ್ಳಬಹುದು. ಅಥವಾ ಈ ಕಚೇರಿಗಳ ವಿಳಾಸಕ್ಕೆ ಅಂಚೆ ಮೂಲಕ ನೋಟನ್ನು ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us