Masala Chai: ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳು; ಭಾರತದ ಮಸಾಲ ಚಾಯ್ ಎರಡನೇ ಸ್ಥಾನದಲ್ಲಿ; ಅಗ್ರಸ್ಥಾನ ಯಾವುದಕ್ಕೆ?

World's Best Non-alcoholic Beverages: ಟೇಸ್ಟ್ ಅಟ್ಲಾಸ್ ಎಂಬ ಫುಡ್ ಮತ್ತು ಟ್ರಾವಲ್ ಇನ್ಸ್​ಟಾಗ್ರಾಮ್ ಪೇಜ್​ನಲ್ಲಿ ಜಗತ್ತಿನ ಅತ್ಯುತ್ತಮ ಪಾನೀಯಗಳ ಪಟ್ಟಿ ಪ್ರಕಟವಾಗಿದೆ. ಭಾರತದ ಮಸಾಲ ಚಾಯ್ ಎರಡನೇ ಅತ್ಯುತ್ತಮ ಪಾನೀಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಮೆಕ್ಸಿಕೋದ ಆಗ್ವಸ್ ಫ್ರೆಸ್ಕಾಸ್ ಎಂಬ ಪಾನೀಯ ಮೊದಲ ಸ್ಥಾನ ಪಡೆದಿದೆ.

Masala Chai: ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳು; ಭಾರತದ ಮಸಾಲ ಚಾಯ್ ಎರಡನೇ ಸ್ಥಾನದಲ್ಲಿ; ಅಗ್ರಸ್ಥಾನ ಯಾವುದಕ್ಕೆ?
ಚಹಾ
Follow us
|

Updated on: Jan 19, 2024 | 3:50 PM

ನವದೆಹಲಿ, ಜನವರಿ 19: ಬಹಳಷ್ಟು ಭಾರತೀಯರಿಗೆ ಚಹಾ ಫೇವರಿಟ್ ಪಾನೀಯ. ಯಾರೇ ಅತಿಥಿ ಬಂದರೂ ಚಹಾ ಅಥವಾ ಕಾಫಿ ಸರ್ವ್ ಆಗದೇ ಸತ್ಕಾರಕ್ಕೆ ಅರ್ಥ ಇರೋದಿಲ್ಲ. ಚಹಾದಲ್ಲೂ ವೈವಿಧ್ಯತೆ ಇದೆ. ಬ್ಲ್ಯಾಕ್ ಟೀ, ಗ್ರೀನ್ ಟೀ, ಮಸಾಲೆ ಟೀ, ಜಿಂಜರ್ ಟೀ, ಹೀಗೆ ನಾನಾ ರೀತಿಯ ಟೀ ಇದೆ. ಸ್ವಾದಿಷ್ಟಕರವಾದ ಈ ಪಾನೀಯ ಈಗ ವಿಶ್ವದ ಅತ್ಯುತ್ತಮ ಪಾನೀಯಗಳ ಪಟ್ಟಿಗೆ ಸೇರಿದೆ. ಆಲ್ಕೋಹಾಲ್ ಅಲ್ಲದ ಅತ್ಯಂತ ಜನಪ್ರಿಯ ಪಾನೀಯಗಳ ಪಟ್ಟಿಯಲ್ಲಿ (Most popular non-alcoholic beverages) ಮಸಾಲ ಚಾಯ್ ಎರಡನೇ ಸ್ಥಾನ ಗಿಟ್ಟಿಸಿದೆ.

ಟೇಸ್ಟ್ ಅಟ್ಲಾಸ್ (TasteAtlas) ಎಂಬ ಫುಡ್ ಮತ್ತು ಟ್ರಾವಲ್ ಬ್ಲಾಗರ್​ನ ಇನ್ಸ್​ಟಾಗ್ರಾಮ್ ಪೇಜ್​ನಲ್ಲಿ ಈ ಪಟ್ಟಿ ಪ್ರಕಟವಾಗಿದೆ. ಮಸಲಾ ಟೀ ವಿಶ್ವದ ಎರಡನೇ ಅತ್ಯುತ್ತಮ ಪಾನೀಯವೆಂಬ ಗೌರವಕ್ಕೆ ಪಾತ್ರವಾಗಿದೆ.

ಇದನ್ನೂ ಓದಿ: Rameshwaram Cafe: ಹೈದರಾಬಾದ್​ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಹವಾ; ಸ್ಯಾಂಪಲ್ ತಿನಿಸಿಗೆ ಉಘೇ ಎಂದ ಜನರು; ಇಂದು ಅಧಿಕೃತ ಆರಂಭ

ಮಸಾಲ ಟೀ ಹೇಗೆ?

ಸಾಂಪ್ರದಾಯಿಕ ಚಹಾಗೆ ಶುಂಠಿ, ಲವಂಗ, ಏಲಕ್ಕಿ ಮೊದಲಾದ ಮಸಾಲ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಕೆಲ ಪ್ರದೇಶಗಳಲ್ಲಿ ಒಂದೇ ಮಸಾಲೆ ಬೆರೆಸಬಹುದು, ಕೆಲವೆಡೆ ಹೆಚ್ಚು ಮಸಾಲೆ ಪದಾರ್ಥ ಬೆರೆಸಬಹುದು. ಆದರೆ, ಸಾಂಪ್ರದಾಯಿಕ ಚಹಾದ ರುಚಿಯ ಸ್ವಾದವನ್ನು ಈ ಮಸಾಲೆ ಇನ್ನಷ್ಟು ಹೆಚ್ಚಿಸುತ್ತದೆ.

19ನೇ ಶತಮಾನದಲ್ಲಿ ಭಾರತಕ್ಕೆ ಬಂದ ಮಸಾಲ ಟೀ

ಚಹಾ ಮೂಲತಃ ಚೀನಾದಲ್ಲಿ ಶುರುವಾಗಿದ್ದು. ಬ್ರಿಟಿಷರು 19ನೇ ಶತಮಾನದಲ್ಲಿ ಮಸಾಲ ಟೀ ಅನ್ನು ಭಾರತದಲ್ಲಿ ಜನಪ್ರಿಯಗೊಳಿಸಿದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ

ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿರುವ ಪಾನೀಯ ಯಾವುದು?

ಟೇಸ್ಟ್ ಅಟ್ಲಾಸ್ ಪ್ರಕಟಿಸಿದ ಅತ್ಯುತ್ತಮ ಪಾನೀಯಗಳ ಪಟ್ಟಿಯಲ್ಲಿ ಮಸಾಲ ಚಾಯ್ ಎರಡನೇ ಸ್ಥಾನದಲ್ಲಿದೆ. ಮೆಕ್ಸಿಕೋದ ಆಗ್ವಸ್ ಫ್ರೆಸ್ಕಾಸ್ ಎಂಬ ಪಾನೀಯ ಮೊದಲನೆಯ ಸ್ಥಾನದಲ್ಲಿದೆ. ಹಣ್ಣು, ಹೂವು, ಬೀಜ, ಕಾಳು, ಸೌತೆ ಕಾಯಿಯ ರಸಕ್ಕೆ ನೀರು ಮತ್ತು ಸಕ್ಕರೆ ಬೆರೆಸಿ ಮಾಡಲಾಗುವ ವಿಶೇಷ ಪಾನೀಯ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?