AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Fiber: ಜಿಯೋ ಫೈಬರ್ ಪೋಸ್ಟ್​ಪೇಯ್ಡ್ ಅಡಿಯಲ್ಲಿ ಹೊಸ ಮನರಂಜನಾ ಪ್ಲಾನ್; ದರಗಳ ವಿವರ ಇಲ್ಲಿದೆ

ಜಿಯೋ ಪೈಬರ್ ಬ್ರಾಡ್​ಬ್ಯಾಂಡ್​ನಿಂದ ಹೊಸ ಪೋಸ್ಟ್​ ಪೇಯ್ಡ್​ ಪ್ಲಾನ್ ಆರಂಭಿಸಲಾಗಿದೆ. ಆ ಬಗ್ಗೆ ವಿವರಗಳು ಈ ಲೇಖನದಲ್ಲಿ ಇವೆ.

Jio Fiber: ಜಿಯೋ ಫೈಬರ್ ಪೋಸ್ಟ್​ಪೇಯ್ಡ್ ಅಡಿಯಲ್ಲಿ ಹೊಸ ಮನರಂಜನಾ ಪ್ಲಾನ್; ದರಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 20, 2022 | 12:22 PM

Share

ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರ ಆದ ಜಿಯೋದಿಂದ (Jio) ಮಂಗಳವಾರ ಜಿಯೋಫೈಬರ್ ಪೋಸ್ಟ್‌ಪೇಯ್ಡ್ ವರ್ಗದ ಅಡಿಯಲ್ಲಿ ಹೊಸ ಪೋಸ್ಟ್‌ಪೇಯ್ಡ್ ಮನರಂಜನಾ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಕಂಪೆನಿಯ ಪ್ರಕಾರ, ಹೊಸ ಯೋಜನೆಗಳು ಏಪ್ರಿಲ್ 22ರಿಂದ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿವೆ. “ಬಳಕೆದಾರರು ಜಿಯೋಫೈಬರ್ ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಆರಿಸಿದಾಗ ಶೂನ್ಯ ವೆಚ್ಚದಲ್ಲಿ ರೂ. 10,000 ಮೌಲ್ಯದ ಇಂಟರ್​ನೆಟ್ ಬಾಕ್ಸ್ (ಗೇಟ್‌ವೇ ರೂಟರ್), ಸೆಟ್-ಟಾಪ್ ಬಾಕ್ಸ್ ಮತ್ತು ಇನ್​ಸ್ಟಾಲೇಷನ್ ಪಡೆಯುತ್ತಾರೆ,” ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.

“ತಿಂಗಳಿಗೆ ರೂ. 399ರಿಂದ ಪ್ರಾರಂಭವಾಗುವ ಅನಿಯಮಿತ ಹೈ-ಸ್ಪೀಡ್ ಇಂಟರ್​ನೆಟ್ ಅನ್ನು ಪಡೆಯುವುದನ್ನು ಬಳಕೆದಾರರು ಮುಂದುವರಿಸುತ್ತಾರೆ. ಹೆಚ್ಚುವರಿಯಾಗಿ ತಿಂಗಳಿಗೆ ಕೇವಲ 100 ಅಥವಾ 200 ರೂಪಾಯಿಗಳನ್ನು ಪಾವತಿಸುವ ಮೂಲಕ ಈಗ 14 OTT (ಓವರ್​ ದ ಟಾಪ್) ಅಪ್ಲಿಕೇಷನ್‌ಗಳ ಸಂಗ್ರಹದ ಮೂಲಕ ತಮ್ಮ ಆಯ್ಕೆಯ ಕಂಟೆಂಟ್​ಗಳ ಸಂಪರ್ಕ ಪಡೆಯಬಹುದು,” ಎಂದು ಅದು ಸೇರಿಸಿದೆ.

ಜಿಯೋ ಹೇಳಿಕೆ ಪ್ರಕಾರ, ಬಳಕೆದಾರರು ದೊಡ್ಡ ಪರದೆಯಲ್ಲಿ ಮತ್ತು ಸಣ್ಣ ಪರದೆಯಲ್ಲಿ 14 ಪ್ರಮುಖ ಮನರಂಜನಾ ಅಪ್ಲಿಕೇಷನ್‌ಗಳಿಗೆ ಸಂಪರ್ಕವನ್ನು ಪಡೆಯುತ್ತಾರೆ (ಬಹು ಸಾಧನಗಳು ಒಳಗೊಂಡಿರುತ್ತವೆ). “ಆ ಮೂಲಕ ಬಳಕೆದಾರರಿಗೆ ಅವರ ನೆಚ್ಚಿನ ಚಲನಚಿತ್ರಗಳು, ಟಿವಿ ಚಾನೆಲ್‌ಗಳು, ಮೂಲಗಳು, ಸುದ್ದಿ, ಪ್ರದರ್ಶನಗಳು, ಕ್ರೀಡೆಗಳು ಮತ್ತು ಹೆಚ್ಚಿನವುಗಳಿಗೆ ಸಂಪರ್ಕವನ್ನು ನೀಡುತ್ತದೆ.” 14 ಅಪ್ಲಿಕೇಷನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ಝೀ5, Sonyliv, Voot, ಸನ್​ನೆಕ್ಸ್ಟ್​, ಡಿಸ್ಕವರಿ+, Hoichoi, ಆಲ್ಟ್​ಬಾಲಾಜಿ, Eros Now, Lionsgate, ShemarooMe, Universal+, Voot Kids ಮತ್ತು ಜಿಯೋಸಿನಿಮಾ ಸೇರಿವೆ.

ಇದನ್ನೂ ಓದಿ: IPL 2022: ಐಪಿಎಲ್ 2022 ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಜಿಯೋದಿಂದ ಬಂಪರ್ ಆಫರ್ ಘೋಷಣೆ

Follow Us
Web contact
Web contact

TV9 Kannada

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್