AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rich Rangareddy: ತಲಾದಾಯದಲ್ಲಿ ತೆಲಂಗಾಣ ಯಾಕೆ ನಂ. 1? ಅದಕ್ಕೆ ಕಾರಣ ಹೈದರಾಬಾದ್ ಅಲ್ಲ, ರಂಗಾರೆಡ್ಡಿ ಜಿಲ್ಲೆಯಾ?

Per Capita Income: ಭಾರತದ ರಾಜ್ಯಗಳ ಪೈಕಿ ತಲಾದಾಯದಲ್ಲಿ ತೆಲಂಗಾಣ ಅಗ್ರಸ್ಥಾನದಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳನ್ನು ಹಿಂದಿಕ್ಕಿದೆ. ತೆಲಂಗಾಣದಲ್ಲಿ ಅದರ ರಾಜಧಾನಿ ನಗರಿ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ. ರಂಗಾರೆಡ್ಡಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿಗಿಂತ ರಂಗಾರೆಡ್ಡಿ ತಲಾದಾಯ ಹೆಚ್ಚಿದೆ. ಹೈದರಾಬಾದ್​ಗಿಂತ ರಂಗಾರೆಡ್ಡಿ ತಲಾದಾಯ ಎರಡು ಪಟ್ಟು ಹೆಚ್ಚಿದೆ.

Rich Rangareddy: ತಲಾದಾಯದಲ್ಲಿ ತೆಲಂಗಾಣ ಯಾಕೆ ನಂ. 1? ಅದಕ್ಕೆ ಕಾರಣ ಹೈದರಾಬಾದ್ ಅಲ್ಲ, ರಂಗಾರೆಡ್ಡಿ ಜಿಲ್ಲೆಯಾ?
ತೆಲಂಗಾಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 24, 2024 | 12:40 PM

Share

ಹೈದರಾಬಾದ್, ಜನವರಿ 24: ಇತ್ತೀಚಿನ ಆರ್ಥಿಕ ಸಮೀಕ್ಷೆ ಪ್ರಕಾರ ತೆಲಂಗಾಣವು ಭಾರತದಲ್ಲಿ ಅತಿಹೆಚ್ಚು ತಲಾದಾಯ (per capita income) ಹೊಂದಿರುವ ರಾಜ್ಯವಾಗಿದೆ. ಕೇಂದ್ರಾಡಳಿತ ಪ್ರದೇಶಗಳನ್ನು ಬಿಟ್ಟರೆ ರಾಜ್ಯಗಳ ಪೈಕಿ ತೆಲಂಗಾಣ ನಂಬರ್ ಒನ್ ಎನಿಸಿದೆ. ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮೊದಲಾದ ಸಿರಿವಂತ ರಾಜ್ಯಗಳನ್ನು ತಲಾದಾಯದಲ್ಲಿ ಹಿಂದಿಕ್ಕಿದೆ ತೆಲಂಗಾಣ. ಪ್ರತಿಯೊಂದು ರಾಜ್ಯದಲ್ಲೂ ಅದರ ರಾಜಧಾನಿ ನಗರವು ಹೆಚ್ಚು ಆದಾಯ ಸೃಷ್ಟಿ ತರುತ್ತದೆ. ತೆಲಂಗಾಣ ರಾಜಧಾನಿ ಹೈದರಾಬಾದ್ ಎರಡನೇ ಐಟಿ ನಗರವಾಗಿ ಹೊರಹೊಮ್ಮುತ್ತಿದ್ದು, ಅದರಿಂದಾಗಿ ತೆಲಂಗಾಣ ರಾಜ್ಯದ ತಲಾದಾಯ ಹೆಚ್ಚಲು ಕಾರಣ ಎಂದು ಭಾವಿಸಿದ್ದರೆ ಅದು ತಪ್ಪು.

ಅಚ್ಚರಿಯಾದರೂ ಇದು ಸತ್ಯ. ತೆಲಂಗಾಣದಲ್ಲಿ ಅತಿಹೆಚ್ಚು ತಲಾದಾಯ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ಹೈದರಾಬಾದ್ ಎರಡನೆ ಸ್ಥಾನದಲ್ಲಿದೆ. ರಂಗಾರೆಡ್ಡಿ ಜಿಲ್ಲೆ (Rangareddy district) ಮೊದಲ ಸ್ಥಾನದಲ್ಲಿದೆ. ಇನ್ನೂ ಅಚ್ಚರಿ ಎಂದರೆ ಹೈದರಾಬಾದ್​ನ ತಲಾದಾಯಕ್ಕಿಂತ ರಂಗಾರೆಡ್ಡಿಯದ್ದು ಎರಡು ಪಟ್ಟು ಹೆಚ್ಚು.

ಹೈದರಾಬಾದ್ ಜಿಲ್ಲೆಯ ವಾರ್ಷಿಕ ತಲಾದಾಯ 4.03 ಲಕ್ಷ ರೂ ಇದೆ. ಅದೇ ತೆಲಂಗಾಣದ ತಲಾದಾಯ ಬರೋಬ್ಬರಿ 8.15 ಲಕ್ಷ ರೂ ಇದೆ. ತಲಾದಾಯದಲ್ಲಿ ಮಾತ್ರವಲ್ಲ ಜಿಲ್ಲಾವಾರು ಜಿಡಿಡಿಪಿಯಲ್ಲೂ ಹೈದರಾಬಾದ್ ಅನ್ನು ರಂಗಾರೆಡ್ಡಿ ಎರಡನೇ ಸ್ಥಾನಕ್ಕೆ ತಳ್ಳಿದೆ.

ಇದನ್ನೂ ಓದಿ: UP Economy: ರಾಮಮಂದಿರದಿಂದಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 25,000 ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತದಾ?

ತೆಲಂಗಾಣದಲ್ಲಿ ಅತಿಹೆಚ್ಚು ತಲಾದಾಯ ಇರುವ ಜಿಲ್ಲೆಗಳು

  1. ರಂಗಾರೆಡ್ಡಿ: 8,15,996 ರೂ
  2. ಹೈದರಾಬಾದ್: 4,03,214 ರೂ
  3. ಸಂಗಾರೆಡ್ಡಿ: 3,08,166 ರೂ
  4. ಮೇದಚಲ್ ಮಲ್ಕಾಜಗಿರಿ: 2,58,040 ರೂ
  5. ಯಾದಾದ್ರಿ ಭುವನಗಿರಿ: 2,47,184 ರೂ
  6. ನಲ್ಗೊಂಡಾ: 2,42,103 ರೂ
  7. ಮೆಹಬೂಬನಗರ್: 2,40,900 ರೂ
  8. ಮೇಡಕ್: 2,32,384 ರೂ
  9. ಭದ್ರಾದ್ರಿ ಕೊತ್ತಗುಡಮ್: 2,28,582 ರೂ
  10. ಜಯಶಂಕರ್: 2,23,481 ರೂ

ರಂಗಾರೆಡ್ಡಿ ಜಿಲ್ಲೆಯ ಬೆಳವಣಿಗೆಗೆ ಏನು ಕಾರಣ?

ರಂಗಾರೆಡ್ಡಿ ಜಿಲ್ಲೆ ಹೈದರಾಬಾದ್​ನ ದಕ್ಷಿಣ ಭಾಗದಲ್ಲಿ ಹೊಂದಿಕೊಂಡಂತೆ ಇದೆ. ಕಲಬುರ್ಗಿಗೆ ರಂಗಾರೆಡ್ಡಿ ಗಡಿ ಜಿಲ್ಲೆ. ಬೆಂಗಳೂರಿನ ಪಕ್ಕದಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳು ಇದ್ದಂತೆ ಹೈದರಾಬಾದ್ ಪಕ್ಕ ರಂಗಾರೆಡ್ಡಿ ಜಿಲ್ಲೆ ಇದೆ. ಹಲವು ಐಟಿ ಕಂಪನಿಗಳು ಹೈದರಾಬಾದ್ ಬದಲು ರಂಗಾರೆಡ್ಡಿ ಕಡೆ ವಾಲುತ್ತಿವೆ. ತೆಲಂಗಾಣದ ಐಟಿ ಹಬ್ ಆಗಿ ಹೈದರಾಬಾದ್ ಸ್ಥಾನವನ್ನು ರಂಗಾರೆಡ್ಡಿ ತುಂಬಿದೆ.

ಇದನ್ನೂ ಓದಿ: Stock Market: ಇತಿಹಾಸದಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಅನ್ನು ಹಿಂದಿಕ್ಕಿದೆ ಭಾರತದ ಷೇರುಪೇಟೆ; ಚೀನಾ ಸಮೀಪ ದೌಡು

ರಂಗಾರೆಡ್ಡಿ ಜಿಲ್ಲೆ ಕರ್ನಾಟಕಕ್ಕೂ ಪಾಠವಾಗಬಹುದು

ಬೆಂಗಳೂರು ಭಾರತದ ಸಿಲಿಕಾನ್ ಸಿಟಿಯಾಗಿದೆ. ಇದರ ತಲಾದಾಯ 6,21,131 ರೂ ಇದೆ. ದಕ್ಷಿಣ ಕನ್ನಡ ಜಿಲ್ಲೆ 4,43,057 ರೂನೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದು ಬಿಟ್ಟರೆ ಬೇರಾವ ಜಿಲ್ಲೆಯೂ 4 ಲಕ್ಷ ರೂ ತಲಾದಾಯ ಮಟ್ಟ ಮುಟ್ಟಿಲ್ಲ. ಬೆಂಗಳೂರಿನ ಸುತ್ತಲಿನ ಜಿಲ್ಲೆಗಳು ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತಿಲ್ಲ. ಇದು ಬೆಂಗಳೂರಿನ ಮೇಲೆ ಹೆಚ್ಚು ಒತ್ತಡ ಹಾಕುತ್ತಿರಬಹುದು. ಇಲ್ಲಿಯ ಇನ್​ಫ್ರಾಸ್ಟ್ರಕ್ಚರ್ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ.

ಹೈದರಾಬಾದ್ ಪಕ್ಕದಲ್ಲಿ ರಂಗಾರೆಡ್ಡಿ ಹುಲುಸಾಗಿ ಬೆಳೆದ ರೀತಿಯಲ್ಲಿ ಬೆಂಗಳೂರಿನ ಪಕ್ಕದ ಜಿಲ್ಲೆಗಳು ಬೆಳೆದಲ್ಲಿ ಹೆಚ್ಚು ಕಂಪನಿಗಳು ಬೆಂಗಳೂರಿನಿಂದ ಹೊರಗೆ ವಲಸೆ ಹೋಗುವುದನ್ನು ತಪ್ಪಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ