AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Policyholders: ಐಪಿಒಗಾಗಿ ಪಾಲಿಸಿ ಜತೆಗೆ ಆಧಾರ್ ಜೋಡಣೆ ಮಾಡಲು ಪಾಲಿಸಿದಾರರಿಗೆ ಎಲ್​ಐಸಿ ಸೂಚನೆ

ಭಾರತೀಯ ಜೀವ ವಿಮಾ ನಿಗಮದ ಐಪಿಒಗೆ ಮೀಸಲು ಇಡುವ ಉದ್ದೇಶದಿಂದ ಪಾಲಿಸಿ ಜತೆಗೆ ಆಧಾರ್​ ಜೋಡಣೆ ಮಾಡುವಂತೆ ಪಾಲಿಸಿದಾರರಿಗೆ ಸೂಚಿಸಲಾಗಿದೆ.

LIC Policyholders: ಐಪಿಒಗಾಗಿ ಪಾಲಿಸಿ ಜತೆಗೆ ಆಧಾರ್ ಜೋಡಣೆ ಮಾಡಲು ಪಾಲಿಸಿದಾರರಿಗೆ ಎಲ್​ಐಸಿ ಸೂಚನೆ
ಆಧಾರ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Dec 03, 2021 | 1:54 PM

Share

ಇನ್ಷೂರೆನ್ಸ್ ಕಂಪೆನಿಯಾದ ಭಾರತೀಯ ಜೀವ ನಿಗಮದಿಂದ ಪಾಲಿಸಿದಾರರಿಗೆ ಸೂಚನೆಯೊಂದನ್ನು ನೀಡಿದ್ದು, ಯಾರ ಬಳಿ ಡಿಮ್ಯಾಟ್​ ಖಾತೆ ಇದೆಯೋ ಅಂಥವರು ತಮ್ಮ ಆದಾಯ ತೆರಿಗೆಯ ಪ್ಯಾನ್​ ಅನ್ನು ಪಾಲಿಸಿಯನ್ನು ಜೋಡಣೆ ಮಾಡುವಂತೆ ತಿಳಿಸಿದೆ. ಹಾಗೆ ಮಾಡುವ ಮೂಲಕವಾಗಿ ಮೀಸಲಿಟ್ಟ ವಿಭಾಗದಲ್ಲಿ ಐಪಿಒಗೆ ಅರ್ಜಿ ಸಲ್ಲಿಸಬಹುದು. ಈ ತನಕ ಯಾರ ಬಳಿ ಡಿಮ್ಯಾಟ್ ಖಾತೆ ಇಲ್ಲವೋ ಒಂದು ಖಾತೆ ತೆರೆದು, ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡಬಹುದು. ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಈ ವರ್ಗದಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಸರ್ಕಾರವು ಎಲ್​ಐಸಿಯಿಂದ ಬಂಡವಾಳ ಹಿಂತೆಗೆ​ತದಿಂದ 1 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುವುದಕ್ಕೆ ಗುರಿ ಇರಿಸಿಕೊಂಡಿದೆ. ಮುಂದಿನ ಕೆಲವು ತಿಂಗಳಲ್ಲಿ ಎಲ್ಐಸಿ ಐಪಿಒ ಬಂಡವಾಳ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ.

ಖಚಿತವಾಗಿಯೂ ಭಾರತೀಯ ಜೀವ ನಿಗಮದ ಈ ಐಪಿಒ ಭಾರತದಲ್ಲಿ ಅತಿದೊಡ್ಡ ಐಪಿಒ ಆಗಲಿದೆ. ಅಧಿಕೃತ ಮಾಹಿತಿ ಪ್ರಕಾರ, ಈಚೆಗೆ ಬಿಡುಗಡೆ ಮಾಡಿದ ಐಪಿಒದಲ್ಲಿ ಪೇಟಿಎಂನಿಂದ 18,300 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿತ್ತು. ಆ ಮೊತ್ತವನ್ನು ಮೀರಿಸಿ, ಎಲ್​ಐಸಿ ಐಪಿಒ ಬರಲಿದೆ.

ಐಪಿಒ ಸಂದರ್ಭದಲ್ಲಿ ಪಾಲಿಸಿದಾರರಿಗೆ ಮೀಸಲು ಇಡುವ ಉದ್ದೇಶಕ್ಕಾಗಿ ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರದಿಂದ LIC ಕಾಯ್ದೆ, 1956ಕ್ಕೆ ತಿದ್ದುಪಡಿ ತಂದಿದೆ. ಜಾಹೀರಾತು ಮೂಲಕವಾಗಿ ಪಾಲಿಸಿಯನ್ನು ಆಧಾರ್ ಜತೆಗೆ ಹೇಗೆ ಜೋಡಣೆ ಮಾಡಬೇಕು ಎಂಬುದರ ಬಗ್ಗೆ ಎಲ್​ಐಸಿಯಿಂದ ಪಾಲಿಸಿದಾರರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒದಿಂದ ಉದ್ಯೋಗ ನಷ್ಟ, ಸಾಮಾಜಿಕ ವೆಚ್ಚ ಎಂದು ಎಚ್ಚರಿಸಿದ ಕಾರ್ಮಿಕ ಒಕ್ಕೂಟ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ