AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್

ಅಕ್ಟೋಬರ್ 4ನೇ ತಾರೀಕಿನ ಸೋಮವಾರ ಸುಮಾರು ಆರು ಗಂಟೆಗಳ ಕಾಲ ಫೇಸ್​ಬುಕ್​, ವಾಟ್ಸಾಪ್, ಇನ್​ಸ್ಟಾಗ್ರಾಮ್ ಡೌನ್ ಆಗಿತ್ತು. ಬಳಕೆದಾರರಿಗೆ ಬಳಸಲು ಸಾಧ್ಯವಾಗಲೇ ಇಲ್ಲ. ಇದರಿಂದ ಫೇಸ್​ಬುಕ್​ ಸಿಇಒ ಮಾರ್ಕ್​ ಝುಕರ್​ಬರ್ಗ್​ಗೆ ಆದ ನಷ್ಟ ಎಷ್ಟು ಗೊತ್ತೆ?

Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್
ಮಾರ್ಕ್ ಝಕರ್​ಬರ್ಗ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 05, 2021 | 11:23 AM

Share

ಈ ಹಿಂದೆಂದೂ ಕಾಣದ ಜಾಗತಿಕ ವ್ಯತ್ಯಯವು ಫೇಸ್​ಬುಕ್​, ಇನ್​ಸ್ಟಾಗ್ರಾಮ್ ಮತ್ತು ವಾಟ್ಸಾಪ್​ ಅನ್ನು ಅಕ್ಟೋಬರ್​ 4ನೇ ತಾರೀಕಿನ ಸಂಜೆಯಿಂದ ಡೌನ್ ಆಗುವಂತೆ ಮಾಡಿತು. ಇದರಿಂದಾಗಿ ಫೇಸ್​ಬುಕ್​ನ ಸ್ಥಾಪಕ ಮಾರ್ಕ್​ ಝುಕರ್​ಬರ್ಗ್​ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 44,713 ಕೋಟಿ ಖಲ್ಲಾಸ್. ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್​ಬುಕ್​ನ ಸಿಇಒ ಆದ ಝಕರ್​ಬರ್ಗ್ ಆಸ್ತಿಯು 122 ಬಿಲಿಯನ್ ಅಮೆರಿಕನ್ ಡಾಲರ್​ಗೆ ಕುಸಿದಿದೆ. ಒಂದು ದಿನ- ಕೆಲವು ಗಂಟೆಗಳ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯು ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಝುಕರ್​ಬರ್ಗ್​​ರನ್ನು ಬಿಲ್​ಗೇಟ್ಸ್​ಗೂ ಕೆಳಗೆ ಐದನೇ ಸ್ಥಾನಕ್ಕೆ ತಳ್ಳಿದೆ. ಸೆಪ್ಟೆಂಬರ್ 13ರಿಂದ ಈಚೆಗೆ ಒಟ್ಟಾರೆಯಾಗಿ 1900 ಕೋಟಿ ಅಮೆರಿಕನ್ ಡಾಲರ್​ನಷ್ಟು ಆಸ್ತಿ ಕರಗಿಹೋಗಿದೆ. ಆ ದಿನಕ್ಕೆ ಝುಕರ್​ಬರ್ಗ್​ ಆಸ್ತಿ ಮೌಲ್ಯ 140 ಬಿಲಿಯನ್ ಅಮೆರಿಕನ್ ಡಾಲರ್​ ಇತ್ತು. ಅಂದರೆ ಕಳೆದುಕೊಂಡ ಆಸ್ತಿಯ ಮೊತ್ತ ಭಾರತದ ರೂಪಾಯಿ ಲೆಕ್ಕದಲ್ಲಿ 1,41,591 ಕೋಟಿ ಆಗುತ್ತದೆ. ಅಕ್ಟೋಬರ್ 4ನೇ ತಾರೀಕಿನಂದು ಫೇಸ್​ಬುಕ್​ ಸ್ಟಾಕ್​​ನಲ್ಲಿ ಭಾರೀ ಮಾರಾಟ ಒತ್ತಡ ಕಂಡುಬಂತು. ಒಂದೇ ದಿನದಲ್ಲಿ ಶೇ 5ರಷ್ಟು ಕುಸಿದಿದ್ದು, ಸೆಪ್ಟೆಂಬರ್ ಮಧ್ಯದಿಂದ ಈಚೆಗೆ ಈ ಸ್ಟಾಕ್ ಶೇ 15ರಷ್ಟು ಇಳಿಕೆ ಕಂಡಿದೆ.

ತನ್ನ ರೂಟರ್ಸ್​ನಲ್ಲಿ ತಪ್ಪಾದ ಕಾನ್ಫಿಗರೇಷನ್ ಬದಲಾವಣೆ ಮಾಡಿದ್ದರಿಂದ ಆರು ಗಂಟೆಗಳ ಕಾಲ ವ್ಯತ್ಯಯ ಎದುರಿಸಬೇಕಾಯಿತು. ಇದರಿಂದಾಗಿ ಫೇಸ್​ಬುಕ್ ಮತ್ತು ಅದರ ಮೆಸೇಜಿಂಗ್ ಸರ್ವೀಸಸ್​ಗಳಾದ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಮೆಸೆಂಜರ್ ಬಳಸುವ 350 ಕೋಟಿ ಬಳಕೆದಾರರಿಗೆ ಸಂಪರ್ಕವೇ ಸಿಗಲಿಲ್ಲ. ರೂಟರ್ಸ್​ನಲ್ಲಿ ಕಾನ್ಫಿಗರೇಷನ್​ ಬದಲಾವಣೆಯೇ ಈ ಸಮಸ್ಯೆಗೆ ಕಾರಣ ಎಂದು ನಮ್ಮ ಎಂಜಿನಿಯರಿಂಗ್ ತಂಡ ಕಂಡುಕೊಂಡಿದೆ. ಈ ರೂಟರ್ಸ್​ ನಮ್ಮ ಡೇಟಾ ಸೆಂಟರ್​ಗಳು ನೆಟ್​ವರ್ಕ್ ಟ್ರಾಫಿಕ್ ಮಧ್ಯೆ ಕೋ ಆರ್ಡಿನೇಟ್ ಮಾಡುತ್ತದೆ. ಈ ಸಂವಹನಕ್ಕೆ ತಡೆಯಾಗಿದ್ದರಿಂದ ಸಮಸ್ಯೆ ಎದುರಾಯಿತು. ನೆಟ್​ವರ್ಕ್​ನ ದಟ್ಟಣೆಯ ಈ ತಡೆಯು ಡೇಟಾ ಸೆಂಟರ್ ಸಂವಹನದ ಮೇಲೆ ಪರಿಣಾಮ ಬೀರುವಂತೆ ಮಾಡಿ, ನಮ್ಮ ಸೇವೆ ನಿಂತುಹೋಯಿತು ಎಂದು ಫೇಸ್​ಬುಕ್ ಬ್ಲಾಗ್​ಪೋಸ್ಟ್​ನಲ್ಲಿ ಹೇಳಿದೆ.

ಅಂದಹಾಗೆ ಫೇಸ್​ಬುಕ್ ಈಗ ವಿಷಲ್​ಬ್ಲೋವರ್ ಸವಾಲನ್ನು ಕೂಡ ಎದುರಿಸುತ್ತಿದೆ. ಬಹಳ ಕಾಲದಿಂದ ಫೇಸ್​ಬುಕ್​ ನಡೆಸುತ್ತಿದ್ದ ಸಂಶೋಧನೆ ವಿರುದ್ಧ ವಿಮರ್ಶೆ ಹಾಗೂ ಆತಂಕ ಕೇಳಿಬರುತ್ತಿತ್ತು. ಕಂಪೆನಿಯ ಮಾಜಿ ಸಿಬ್ಬಂದಿಯಾದ ಫ್ರಾನ್ಸಸ್ ಹಾಗನ್ ಅಧಿಕಾರಿಗಳು ಮತ್ತು ವಾಲ್​ಸ್ಟ್ರೀಟ್​ ಜರ್ನಲ್ ಬಳಿ ಈ ಕುರಿತು ದೂರು ನೀಡಿದ್ದಾರೆ. 37 ವರ್ಷದ ಹಾಗನ್ ಲೋವಾದ ಡೇಟಾ ವಿಜ್ಞಾನಿ. ಗೂಗಲ್ ಮತ್ತು ಪಿಂಟ್​ರಸ್ಟ್​ನಂಥ ಕಂಪೆನಿಗಳಿಗೆ ಕೆಲಸ ಮಾಡಿದ್ದಾರೆ. ಸಿಬಿಎಸ್​ ನ್ಯೂಸ್ ಜತೆಗೆ ಮಾತನಾಡುತ್ತಾ, ನಾನು ಇದುವರೆಗೆ ನೋಡಿದ್ದರ ಪೈಕಿ ಫೇಸ್​ಬುಕ್ ಎಲ್ಲದ್ದಕ್ಕಿಂತ ಬಹಳ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಫೇಸ್​ಬುಕ್ ಉದ್ದೇಶಪೂರ್ವಕವಾಗಿ ಆಲ್ಗರಿದಂ ಬದಲಿಸಿ, ದ್ವೇಷ ಭಾಷಣಗಳನ್ನು ಉತ್ತೇಜಿಸುತ್ತದೆ. ನಮ್ಮ ಸುರಕ್ಷತೆ ಅಡ ಇಟ್ಟು ಅದು ಲಾಭವನ್ನು ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್, ಇನ್​ಸ್ಟಾಗ್ರಾಂ, ಫೇಸ್​ಬುಕ್ ಡೌನ್; ಸೋಷಿಯಲ್ ಮೀಡಿಯಾ ಬಳಕೆದಾರರ ಪರದಾಟ

WhatsApp, Facebook, Instagram Down: ವಿಶ್ವದ ಹಲವು ಭಾಗಗಳಲ್ಲಿ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಕೆಲಸ ಮಾಡ್ತಿಲ್ಲ!

Published On - 11:17 am, Tue, 5 October 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು