ಬೆಂಗಳೂರಿನಲ್ಲಿ ಇವಿ ಟೆಸ್ಟಿಂಗ್ ಲ್ಯಾಬ್; ದಕ್ಷಿಣ ಭಾರತದಲ್ಲಿ ಎನ್​ಟಿಎಚ್​ನ ಮೊದಲ ಪರೀಕ್ಷಾ ಕೇಂದ್ರ

EV testing lab at Jakkur: ಬೆಂಗಳೂರಿನ ಜಕ್ಕೂರಿನ ಆರ್​ಆರ್​ಎಸ್​ಎಲ್ ಕ್ಯಾಂಪ್​ನಲ್ಲಿರುವ ನ್ಯಾಷನಲ್ ಟೆಸ್ಟ್ ಹೌಸ್​ನಿಂದ ಇವಿ ಟೆಸ್ಟಿಂಗ್ ಲ್ಯಾಬ್ ನಿರ್ಮಾಣವಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಇಂದು ಲ್ಯಾಬ್ ಉದ್ಘಾಟನೆ ಮಾಡುತ್ತಿದ್ದಾರೆ. ದೇಶದ ವಿವಿಧೆಡೆ ಇವಿ ಪರೀಕ್ಷಾ ಲ್ಯಾಬ್​ಗಳನ್ನು ಹೊಂದಿರುವ ಎನ್​ಟಿಎಚ್ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅದನ್ನು ಸ್ಥಾಪಿಸಿದೆ.

ಬೆಂಗಳೂರಿನಲ್ಲಿ ಇವಿ ಟೆಸ್ಟಿಂಗ್ ಲ್ಯಾಬ್; ದಕ್ಷಿಣ ಭಾರತದಲ್ಲಿ ಎನ್​ಟಿಎಚ್​ನ ಮೊದಲ ಪರೀಕ್ಷಾ ಕೇಂದ್ರ
ಪ್ರಹ್ಲಾದ್ ಜೋಷಿ
Follow us
|

Updated on: Aug 22, 2024 | 10:39 AM

ಬೆಂಗಳೂರು, ಆಗಸ್ಟ್ 22: ಸಿಲಿಕಾನ್ ಸಿಟಿಯಲ್ಲಿ ಉತ್ಕೃಷ್ಟ ಇವಿ ಪರೀಕ್ಷಾ ಕೇಂದ್ರ ಆರಂಭವಾಗುತ್ತಿದೆ. ಜಕ್ಕೂರಿನ ಆರ್​ಆರ್​ಎಸ್​ಎಲ್ ಕ್ಯಾಂಪ್​ನ ನ್ಯಾಷನಲ್ ಟೆಸ್ಟ್ ಹೌಸ್​ನ ಇವಿ ಪರೀಕ್ಷಾ ಕೇಂದ್ರವನ್ನು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟನೆ ಮಾಡುತ್ತಿದ್ದಾರೆ. ಎನ್​ಟಿಎಚ್​ನ ಇವಿ ಟೆಸ್ಟಿಂಗ್ ಫೆಸಿಲಿಟಿ ಈಗ ದಕ್ಷಿಣ ಭಾರತದಲ್ಲೂ ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನ ಉದ್ಯಮದ ಬೆಳವಣಿಗೆಗೆ ಈ ಟೆಸ್ಟಿಂಗ್ ಸರ್ವಿಸ್ ಬಹಳ ಅಗತ್ಯ.

ಜಕ್ಕೂರಿನ ರೀಜನಲ್ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೊರೇಟರಿಯ ಕ್ಯಾಂಪ್​ನಲ್ಲಿ ನಿರ್ಮಾಣವಾಗಿರುವ ಟೆಸ್ಟಿಂಗ್ ಲ್ಯಾಬೊರೇಟರಿಯಲ್ಲಿ ಇವಿ ಬ್ಯಾಟರಿ ಟೆಸ್ಟ್ ಮಾಡುವ ಉಪಕರಣ ಇರುತ್ತದೆ. ಎಲೆಕ್ಟ್ರಿಕಲ್ ಸೇಫ್ಟಿ, ಇಎಂಸಿ, ಇಎಂಎಫ್, ಎಫ್​ಸಿಸಿ, ಐಎಸ್​ಇಡಿ, ಫಂಕ್ಷನಲ್ ಸೇಫ್ಟಿ, ಡ್ಯೂರಬಿಲಿ ಇತ್ಯಾದಿ ನಾನಾ ರೀತಿಯ ಪರೀಕ್ಷೆಗಳನ್ನು ಈ ಉಪಕರಣ ಮಾಡಬಲ್ಲುದು.

ಇದನ್ನೂ ಓದಿ: ಉತ್ತಮ ಆಡಳಿತಕ್ಕಾಗಿ ಪೇಟಿಎಂ ಮಹತ್ವದ ನಿರ್ಧಾರ; ಮಂಡಳಿಯ ಸದಸ್ಯರ ಸಂಬಳ ಕಡಿಮೆ ಮಾಡಲು ಪ್ರಸ್ತಾಪ

ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟಕ್ಕೆ ಇಡಲಾಗುವ ಮುನ್ನ ಈ ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒಳಗಾಗುತ್ತವೆ. ಸರ್ಕಾರ ನಿಗದಿ ಮಾಡಿದ ಗುಣಮಟ್ಟ ಮಾನದಂಡಗಳನ್ನು ಈ ವಾಹನಗಳು ಪೂರೈಸುತ್ತವಾ ಇಲ್ಲವಾ ಎಂಬುದನ್ನು ಇಲ್ಲಿ ದೃಢಪಡಿಸಲಾಗುತ್ತದೆ. ಈ ಹೊಸ ಇವಿ ಟೆಸ್ಟಿಂಗ್ ಸೌಲಭ್ಯ ದಕ್ಷಿಣ ಭಾರತದಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಉದ್ಯಮಕ್ಕೆ ಪುಷ್ಟಿ ನೀಡಿ, ಅದರ ಬೆಳವಣಿಗೆಗೆ ಸಹಕಾರ ನೀಡುತ್ತದೆ.

ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಗೆ ಸೇರಿದ ನ್ಯಾಷನಲ್ ಟೆಸ್ಟ್ ಹೌಸ್ ದೇಶಾದ್ಯಂತ ಇವಿ ಟೆಸ್ಟಿಂಗ್ ಲ್ಯಾಬ್​ಗಳನ್ನು ಹೊಂದಿದೆ. ಕೋಲ್ಕತಾ, ಮುಂಬೈ, ಚೆನ್ನೈ, ಘಾಜಿಯಾಬಾದ್, ಗುವಾಹತಿ, ಜೈಪುರ್ ಮತ್ತು ವಾರಾಣಸಿಯಲ್ಲಿ ಲ್ಯಾಬ್​ಗಳಿವೆ. ಬೆಂಗಳೂರಿನಲ್ಲಿ ಇಂದು ಉದ್ಘಾಟನೆಯಾಗುತ್ತಿರುವುದು ಎನ್​ಟಿಎಚ್​ನ ದಕ್ಷಿಣ ಭಾರತದ ಮೊದಲ ಲ್ಯಾಬ್ ಆಗಿದೆ.

ಇದನ್ನೂ ಓದಿ: ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಇಕಾಮರ್ಸ್ ಕಂಪನಿಗಳು; ಇದು ಖುಷಿಪಡುವ ಸಂಗತಿ ಅಲ್ಲ ಎಂತಾರೆ ಪೀಯುಶ್ ಗೋಯಲ್; ಅಮೇಜಾನ್​ಗೂ ತಿವಿದ ಸಚಿವ

ಜಕ್ಕೂರಿನಲ್ಲಿರುವ ಈ ಲ್ಯಾಬ್ ಅನ್ನು ಇಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟಿಸುತ್ತಿದ್ದಾರೆ. ಇಲಾಖೆಯ ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ, ಹೆಚ್ಚುವರಿ ಕಾರ್ಯದರ್ಶಿ ಭರತ್ ಖೇರಾ, ಲೀಗಲ್ ಮೆಟ್ರೋಲಜಿಯ ನಿರ್ದೇಶಕ ಆಶುತೋಷ್ ಅಗರ್ವಾಲ್, ನ್ಯಾಷನಲ್ ಟೆಸ್ಟ್ ಹೌಸ್​ನ ಮಹಾನಿರ್ದೇಶಕ ಡಾ. ಅಲೋಕ್ ಕುಮಾರ್ ಶ್ರೀವಾಸ್ತವ ಮೊದಲಾದವರು ಈ ಸಂದರ್ಭದಲ್ಲಿ ಇರಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?