AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಇಕಾಮರ್ಸ್ ಕಂಪನಿಗಳು; ಇದು ಖುಷಿಪಡುವ ಸಂಗತಿ ಅಲ್ಲ ಎಂತಾರೆ ಪೀಯುಶ್ ಗೋಯಲ್; ಅಮೇಜಾನ್​ಗೂ ತಿವಿದ ಸಚಿವ

Piyush Goyal not happy with e-commerce industry: ಇಕಾಮರ್ಸ್ ಉದ್ಯಮದ ಬೆಳವಣಿಗೆ ರೀತಿ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೇಜಾನ್, ಆ್ಯಪಲ್ ಸಂಸ್ಥೆಗಳ ಹೆಸರನ್ನು ಎತ್ತಿ, ಭಾರತದ ಸಣ್ಣ ವರ್ತಕರಿಗೆ ಆಗಿರುವ ಹಿನ್ನಡೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಒಟಿಟಿ ಪ್ಲಾಟ್​ಫಾರ್ಮ್​ಗಳು ಮತ್ತು ಇಕಾಮರ್ಸ್ ಕಂಪನಿಗಳಿಂದಾಗಿ ಜನರು ಮನೆಯಿಂದ ಹೊರಗೆ ಕಾಲಿಡುವುದು ಕಡಿಮೆ ಆಗಿದೆ ಎಂದಿದ್ದಾರೆ.

ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಇಕಾಮರ್ಸ್ ಕಂಪನಿಗಳು; ಇದು ಖುಷಿಪಡುವ ಸಂಗತಿ ಅಲ್ಲ ಎಂತಾರೆ ಪೀಯುಶ್ ಗೋಯಲ್; ಅಮೇಜಾನ್​ಗೂ ತಿವಿದ ಸಚಿವ
ಪಿಯೂಶ್ ಗೋಯಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 21, 2024 | 7:12 PM

Share

ನವದೆಹಲಿ, ಆಗಸ್ಟ್ 21: ಇಕಾಮರ್ಸ್ ಕಂಪನಿಗಳು ಬಂದ ಮೇಲೆ ಜನಸಾಮಾನ್ಯರಿಗೆ ಶಾಪಿಂಗ್ ಸುಲಭವಾಗಿದೆ. ಕೂತಲ್ಲೇ ಎಲ್ಲವನ್ನೂ ತರಿಸಿಕೊಳ್ಳಬಹುದು. ಅಮೇಜಾನ್, ಫ್ಲಿಪ್​ಕಾರ್ಟ್, ಜೆಪ್ಟೋ ಇತ್ಯಾದಿಗಳು ನಗರ ನಿವಾಸಿಗಳ ದೈನಂದಿನ ಟ್ಯಾಸ್ಕ್​ಗಳ ಭಾಗವಾಗಿ ಹೋಗಿವೆ. ಭಾರತದಲ್ಲಿ ಇಕಾಮರ್ಸ್ ಸಂಸ್ಥೆಗಳು ನಾಯಿಕೊಡೆಗಳಂತೆ ಒಂದೊಂದಾಗಿ ಆರಂಭವಾಗುತ್ತಿವೆ. ಆದರೆ, ಕೇಂದ್ರ ಸಚಿವ ಪೀಯುಶ್ ಗೋಯಲ್ ಇಕಾಮರ್ಸ್ ಕಂಪನಿಗಳ ಬೆಳವಣಿಗೆಯಿಂದ ವ್ಯಾಕುಲಗೊಂಡಿದ್ದಾರೆ. ಈ ಕ್ಷೇತ್ರದ ವಿಸ್ತರಣೆಯು ಖುಷಿಪಡುವ ವಿಚಾರವಲ್ಲ, ಆತಂಕ ತರುವ ಸಂಗತಿ ಎಂದಿದ್ದಾರೆ.

‘ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕ ಕಲ್ಯಾಣದ ಮೇಲೆ ಇಕಾಮರ್ಸ್​ನ ಪರಿಣಾಮ’ ಎಂಬ ವರದಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಇಕಾಮರ್ಸ್ ಬೆಳವಣಿಗೆಯಿಂದ ಸಾಮಾಜಿಕವಾಗಿ ಆಗುವ ವಿಚಲನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇಕಾಮರ್ಸ್ ಬಳಕೆ ಹೆಚ್ಚಳವಾಗುವುದರಿಂದ ಜನರ ಜೀವನಶೈಲಿ ಇನ್ನಷ್ಟು ಚಟುವಟಿಕೆ ಕಳೆದುಕೊಳ್ಳಬಹುದು. ಒಂದೆಡೆ ಒಟಿಟಿ ಪ್ಲಾಟ್​ಫಾರ್ಮ್​ಗಳ ಜನಪ್ರಿಯತೆ ಹೆಚ್ಚುತ್ತಿದೆ. ಇನ್ನೊಂದೆಡೆ ಆನ್ಲೈನ್ ಶಾಪಿಂಗ್ ಟ್ರೆಂಡ್ ಹೆಚ್ಚುತ್ತಿದೆ. ಈ ಎರಡೂ ಅಂಶಗಳು ಜನರನ್ನು ಮನೆಯಿಂದ ಹೊರಗೆ ಕಾಲಿಡುವ ಅಗತ್ಯತೆ ಬೀಳದಂತೆ ಮಾಡುತ್ತವೆ. ಜನರ ಸಾಮಾಜಿಕ ಸಂಪರ್ಕವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಪಿಯೂಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಐದು ವರ್ಷಕ್ಕೆ ಮಾತ್ರ ಹೂಡಿಕೆ ಮಾಡಬೇಕಾ? ಇಲ್ಲಿವೆ ಕೆಲ ಉತ್ತಮ ಆಯ್ಕೆಗಳು

ಅಮೇಜಾನ್​ನಿಂದ ಭಾರತದ ಆರ್ಥಿಕತೆಗೆ ಏನು ಲಾಭ?

ಭಾರತದ ಇಕಾಮರ್ಸ್ ಬಿಸಿನೆಸ್​ನಲ್ಲಿ ಭರ್ಜರಿ ಪಾಲು ಹೊಂದಿರುವ ಅಮೇಜಾನ್​ನ ಬಿಸಿನೆಸ್ ಸ್ಟ್ರಾಟಿಜಿಯನ್ನು ಸಚಿವ ಗೋಯಲ್ ಗುಮಾನಿಯಿಂದ ನೋಡಿದ್ದಾರೆ. ‘ಇಕಾಮರ್ಸ್ ಉದ್ಯಮ ಬೇಡ ಎನ್ನುತ್ತಿಲ್ಲ. ಅದು ಇರಬೇಕು. ಆದರೆ, ಆ ಉದ್ಯಮ ಸರಿಯಾದ ರೀತಿಯಲ್ಲಿ ರೂಪಿತವಾಗಬೇಕು’ ಎಂದಿದ್ದಾರೆ.

ಅಮೇಜಾನ್​ನಂತಹ ಕಂಪನಿಗಳು ತೀರಾ ಕಡಿಮೆ ಬೆಲೆಗೆ ವಸ್ತುಗಳನ್ನು ಆಫರ್ ಮಾಡುತ್ತವೆ. ಈ ರೀತಿಯ ಬೆಲೆ ತಂತ್ರ ಯಾರಿಗೆ ಉಪಯೋಗ? ಅಮೇಜಾನ್ ಸಾವಿರಾರು ಕೋಟಿ ರೂ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಖುಷಿ ಪಡುವುದು ಹೇಗೆ? ಅಮೇಜಾನ್​ನಂತಹ ಇಕಾಮರ್ಸ್ ಕಂಪನಿಗಳಿಂದಾಗಿ ಜನರು ಶಾಪಿಂಗ್ ಮಾಡಲು ಹೊರಗೆ ಹೋಗುವುದು ಕಡಿಮೆ ಆಗಿದೆ. ಸಣ್ಣ ಅಂಗಡಿಗಳು ತತ್ತರಿಸುತ್ತಿವೆ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ITCC for Travel Abroad: ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಎಲ್ಲರಿಗೂ ಬೇಕಿಲ್ಲ: ಮತ್ತೆ ಸ್ಪಷ್ಟನೆ ನೀಡಿದ ಸಿಬಿಡಿಟಿ

ಆ್ಯಪಲ್ ಉದಾಹರಣೆಯನ್ನೂ ಸಚಿವರು ನೀಡಿದ್ದಾರೆ. ‘ನೀವು ಈಗ ಎಷ್ಟು ಮೊಬೈಲ್ ಸ್ಟೋರ್​ಗಳನ್ನು ನೋಡುತ್ತಿದ್ದೀರಿ? ಹತ್ತು ವರ್ಷದ ಹಿಂದೆ ಎಷ್ಟು ಇತ್ತು? ಎಲ್ಲಿ ಹೋದವು ಅಷ್ಟು ಮೊಬೈಲ್ ಸ್ಟೋರ್​ಗಳು? ಆ್ಯಪಲ್ ಅಥವಾ ದೊಡ್ಡ ರೀಟೇಲ್ ಮಳಿಗೆಗಳು ಮಾತ್ರವೇ ಮೊಬೈಲ್ ಫೋನ್ ಇತ್ಯಾದಿಯನ್ನು ಮಾರಬೇಕಾ?’ ಎಂದು ಅವರು ಕೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ