AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಜಿಎಸ್​ಟಿ ದರ: ಚಿನ್ನ ಮೇಲೇನು ಪರಿಣಾಮ? ಇಲ್ಲಿದೆ ಚಿನ್ನಕ್ಕಿರುವ ವಿವಿಧ ತೆರಿಗೆ ದರ

GST rates on Gold and Silver: ಸರಕು ಮತ್ತು ಸೇವಾ ತೆರಿಗೆಯನ್ನು ಸರ್ಕಾರ ಸರಳೀಕರಿಸಿದೆ. ಬಹುತೇಕ ಸರಕುಗಳು ಶೇ. 5 ಮತ್ತು ಶೇ. 18ರ ಜಿಎಸ್​ಟಿ ಸ್ಲ್ಯಾಬ್​ಗಳಿಗೆ ಬರುತ್ತವೆ. ತಂಬಾಕು, ಆಲ್ಕೋಹಾಲ್ ಇತ್ಯಾದಿ ಅನಾರೋಗ್ಯಕಾರಕ ವಸ್ತುಗಳಿಗೆ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕಲಾಗುತ್ತದೆ. ಇದೇ ವೇಳೆ, ಚಿನ್ನದ ಮೇಲೆ ಜಿಎಸ್​ಟಿ ದರ ಎಷ್ಟಿದೆ? ಇದರಲ್ಲಿ ಕಡಿಮೆ ಆಗುತ್ತದಾ ಎನ್ನುವ ಮಾಹಿತಿ ಇಲ್ಲಿದೆ.

ಹೊಸ ಜಿಎಸ್​ಟಿ ದರ: ಚಿನ್ನ ಮೇಲೇನು ಪರಿಣಾಮ? ಇಲ್ಲಿದೆ ಚಿನ್ನಕ್ಕಿರುವ ವಿವಿಧ ತೆರಿಗೆ ದರ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 04, 2025 | 2:47 PM

Share

ನವದೆಹಲಿ, ಸೆಪ್ಟೆಂಬರ್ 4: ಸರ್ಕಾರ ಜಿಎಸ್​ಟಿ (GST rationalization) ಸಿಸ್ಟಂ ಅನ್ನು ಸರಳೀಕರಿಸಿದೆ. ನಾಲ್ಕು ಇದ್ದ ಟ್ಯಾಕ್ಸ್ ಸ್ಲ್ಯಾಬ್​ಗಳನ್ನು ಎರಡಕ್ಕೆ ಇಳಿಸಲಾಗಿದೆ. ಶೇ. 12 ಮತ್ತು ಶೇ. 28 ಸ್ಲ್ಯಾಬ್ ಅನ್ನು ಹಿಂಪಡೆಯಲಾಗಿದೆ. ಶೇ. 5 ಮತ್ತು ಶೇ. 18ರ ಸ್ಲಾಬ್ ರೇಟ್​ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಹೆಚ್ಚಿನ ಸರಕುಗಳ ಮೇಲೆ ಜಿಎಸ್​ಟಿ ದರ ಕಡಿಮೆಗೊಳ್ಳಲಿದೆ. ಸೆಪ್ಟೆಂಬರ್ 22ರಿಂದ ಹೊಸ ದರಗಳು ಜಾರಿಗೆ ಬರುತ್ತವೆ. ಇದೇ ವೇಳೆ, ಚಿನ್ನದ (Gold) ಮೇಲೆ ಜಿಎಸ್​​ಟಿ ದರದಲ್ಲಿ ಬದಲಾವಣೆ ಆಗುತ್ತಿದೆಯಾ?

ಚಿನ್ನಕ್ಕೆ ಜಿಎಸ್​ಟಿ ಸ್ಲ್ಯಾಬ್ ಅನ್ವಯ ಆಗುವುದಿಲ್ಲ. ಅದಕ್ಕೆ ಪ್ರತ್ಯೇಕ ಜಿಎಸ್​ಟಿ ದರ ಇದೆ. ಶೇ. 3ರಷ್ಟು ಜಿಎಸ್​ಟಿಯನ್ನು ಚಿನ್ನದ ಮೇಲೆ ವಿಧಿಸಲಾಗುತ್ತಿದೆ. ಹೊಸ ಜಿಎಸ್​ಟಿ ಸಿಸ್ಟಂನಲ್ಲೂ ಇದೇ ಸ್ಥಿತಿ ಇರಲಿದೆ. ಅಂದರೆ, ಶೇ. 3ರಷ್ಟು ಜಿಎಸ್​ಟಿ ದರವೇ ಮುಂದುವರಿಯುತ್ತದೆ.

ಚಿನ್ನ ಮಾತ್ರವಲ್ಲ, ಬೆಳ್ಳಿ ವಸ್ತುಗಳ ಮೇಲೂ ಶೇ. 3ರಷ್ಟು ಜಿಎಸ್​ಟಿ ಅನ್ವಯ ಆಗುತ್ತದೆ. ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳಿಗೆ ಇರುವ ಮೇಕಿಂಗ್ ಚಾರ್ಜ್​ಗಳ ಮೇಲೆ ಶೇ. 5ರಷ್ಟು ಜಿಎಸ್​ಟಿ ಅನ್ವಯ ಆಗುತ್ತದೆ.

ಇದನ್ನೂ ಓದಿ: ಸೆ. 22ರಿಂದ ಇನ್ಷೂರೆನ್ಸ್​ಗೆ ಜಿಎಸ್​ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?

ಉದಾಹರಣೆಗೆ, ನೀವು 10 ಗ್ರಾಮ್ ತೂಕದ ಚಿನ್ನದ ಒಡವೆ ಖರೀದಿಸುತ್ತೀರಿ. ಇವತ್ತಿನ 22 ಕ್ಯಾರಟ್ ಚಿನ್ನದ ಬೆಲೆ 9,795 ರೂ ಇದೆ. ಈ ಒಡವೆಗೆ ಮೇಕಿಂಗ್ ಚಾರ್ಜ್ ಶೇ. 10 ಇದೆ ಎಂದಿಟ್ಟುಕೊಂಡರೆ ನಿಮ್ಮ ಒಡವೆ ಖರೀದಿ ಬೆಲೆ ಇಂತಿರುತ್ತದೆ:

  • 10 ಗ್ರಾಮ್ ಚಿನ್ನದ ಬೆಲೆ: 97,950 ರೂ
  • ಶೇ. 3 ಜಿಎಸ್​ಟಿ: 2,937 ರೂ
  • ಮೇಕಿಂಗ್ ಚಾರ್ಜ್: 9,795 ರೂ
  • ಮೇಕಿಂಗ್ ಚಾರ್ಜ್ ಮೇಲೆ ಶೇ. 5 ಜಿಎಸ್​ಟಿ: 490 ರೂ

ಅಲ್ಲಿಗೆ ವೇಸ್ಟೇಜ್ ಚಾರ್ಜ್ ಹೊರತುಪಡಿಸಿ, ನಿಮ್ಮ ಆಭರಣದ ಖರೀದಿ ಬೆಲೆ 1,11,172 ರೂ ಆಗುತ್ತದೆ. ನೀವು ಆಭರಣ ತೆಗೆದುಕೊಂಡರೆ ಮೇಕಿಂಗ್ ಚಾರ್ಜ್ ಇರುತ್ತದೆ. ಒಂದು ವೇಳೆ, ಗೋಲ್ಡ್ ಬಿಸ್ಕತ್, ಗೋಲ್ಡ್ ಕಾಯಿನ್ ಇತ್ಯಾದಿ 24 ಕ್ಯಾರಟ್ ಚಿನ್ನ ಖರೀದಿಸಿದರೆ ಜಿಎಸ್​ಟಿ ದರ ಶೇ. 3 ಮಾತ್ರವೇ ಇರುತ್ತದೆ. ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಚಿನ್ನ ಕೊಂಡರೂ ಶೇ. 3 ಜಿಎಸ್​ಟಿ ಅನ್ವಯ ಆಗುತ್ತದೆ.

ಇದನ್ನೂ ಓದಿ: Gold Rate Today Bangalore: ಚಿನ್ನದ ಬೆಲೆಯಲ್ಲಿ 10 ರೂ ಇಳಿಕೆ; ಬೆಳ್ಳಿ ಬೆಲೆ ಯಥಾಸ್ಥಿತಿ

ಶೇ. 12ರಿಂದ ಶೇ. 5ಕ್ಕೆ ಜಿಎಸ್​ಟಿ ದರ ಇಳಿಯಲಿರುವ ವಸ್ತುಗಳು

ಹಾಲು, ಮೊಸರು, ತುಪ್ಪ, ಡ್ರೈಫ್ರೂಟ್ಸ್, ಜ್ಯೂಸ್, ಐಸ್​ಕ್ರೀಮ್, ಶಾಂಪೂ, ಟೂತ್​ಪೇಸ್ಟ್, ಸೋಪು, ವಿವಿಧ ವೈದ್ಯಕೀಯ ಉಪಕರಣಗಳು, ಬೊಂಬೆ, ಹ್ಯಾಂಡ್​ಬ್ಯಾಗ್, ಕಾರ್ಪೆಟ್, ಪಂಪ್​ಸೆಟ್, ಸ್ಪ್ರಿಂಕ್ಲರ್, ಸೋಲಾರ್ ಪೆನಲ್ ಹೀಗೆ ನಾನಾ ಗೃಹ ಬಳಕೆ, ಕೃಷಿ ಬಳಕೆ, ವೈದ್ಯಕೀಯ ಬಳಕೆ, ಕರಕುಶಲ ವಸ್ತುಗಳ ಮೇಲೆ ಜಿಎಸ್​ಟಿಯನ್ನು ಶೇ. 5ಕ್ಕೆ ಇಳಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ