AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ

Gautam Adani speaks at IIT-Kharagpur 75th foundation day: ಈ ಜಗತ್ತು ಸಾಂಪ್ರದಾಯಿಕ ಯುದ್ಧದಿಂದ ಟೆಕ್ನಾಲಜಿ ಪ್ರೇರಿತ ಯದ್ಧದತ್ತ ಹೊರಳಿದೆ. ಈ ಹೊಸ ಮಾದರಿ ಯುದ್ಧಕ್ಕೆ ನಾವು ಸಜ್ಜಾಗಬೇಕು ಎಂದು ಗೌತಮ್ ಅದಾನಿ ಹೇಳಿದ್ದಾರೆ. ಐಐಟಿ ಖರಗ್​ಪುರ್​ನ 75ನೇ ಸಂಸ್ಥಾಪನಾ ದಿನದಂದು ಅವರು ಮಾತನಾಡುತ್ತಿದ್ದರು. ಇವತ್ತಿನ ಯುದ್ಧ ಅಗೋಚರ ಆಗಿದೆ. ರಣಭೂಮಿಯಲ್ಲಿ ಯುದ್ಧ ನಡೆಯಲ್ಲ, ಸರ್ವರ್ ಫಾರ್ಮ್​ಗಳಲ್ಲಿ ಯುದ್ಧ ಇರುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ
ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
| Updated By: ಡಾ. ಭಾಸ್ಕರ ಹೆಗಡೆ|

Updated on:Aug 20, 2025 | 2:24 PM

Share

ಖರಗಪುರ್, ಪ.ಬಂಗಾಳ, ಆಗಸ್ಟ್ 20: ‘ನಾವು ಮುಖ್ಯ ಘಟ್ಟದಲ್ಲಿ ನಿಂತಿದ್ದೇವೆ. ವಿಶ್ವವು ಸಾಂಪ್ರದಾಯಿಕ ಯುದ್ಧದಿಂದ ತಂತ್ರಜ್ಞಾನ ಬಲದ ಯುದ್ಧದತ್ತ ಸಾಗುತ್ತಿದೆ. ಇದಕ್ಕೆ ನಾವು ಹೇಗೆ ಸಜ್ಜಾಗುತ್ತೇವೆ ಎಂಬುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ಉದ್ಯಮಿ ಗೌತಮ್ ಅದಾನಿ (Gautam Adani) ಹೇಳಿದ್ದಾರೆ. ಪಶ್ಚಿಮ ಬಂಗಾಳದ ಖರಗ್​ಪುರ್​ನ ಐಐಟಿ ಶಿಕ್ಷಣ ಸಂಸ್ಥೆಯ 75ನೇ ಸಂಸ್ಥಾಪನಾ ದಿನದ (IIT Kharagpur Foundation Day) ಅಂಗವಾಗಿ ಮೊನ್ನೆ (ಆ. 18) ನಡೆದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾರತಕ್ಕೆ ಎದುರಾಗಿರುವ ಅಪಾಯ ಎಂಥದ್ದು, ಯುದ್ಧದ ಸ್ವರೂಪ ಹೇಗೆ ಬದಲಾಗಿದೆ, ಡಿಜಿಟಲ್ ಆರ್ಥಿಕತೆ ಹೇಗೆ ಅಪಾಯದಲ್ಲಿದೆ, ನಿಜವಾದ ಸ್ವಾತಂತ್ರ್ಯ ಯಾವುದು ಎಂಬ ವಿಚಾರಗಳ ಬಗ್ಗೆ ಅದಾನಿ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾಟಾ ಸೆಂಟರ್​ಗಳ ಮೂಲಕ ಸಾಮ್ರಾಜ್ಯ ನಿರ್ಮಾಣ

‘ಇವತ್ತು ನಾವು ಮಾಡಬೇಕಾದ ಯುದ್ಧವು ಬಹುತೇಕ ಅಗೋಚರವಾಗಿರುತ್ತದೆ. ಈ ಯುದ್ಧವು ರಣಭೂಮಿಯಲ್ಲಲ್ಲ, ಸರ್ವರ್ ಫಾರ್ಮ್​ಗಳಲ್ಲಿ ನಡೆಯುತ್ತದೆ. ಗನ್​ಗಳಲ್ಲ, ಅಲ್ಗಾರಿದಂಗಳು ಶಸ್ತ್ರಗಳಾಗಿರುತ್ತವೆ. ಸಾಮ್ರಾಜ್ಯಗಳು ಭೂಮಿಯ ಮೇಲೆ ನಿರ್ಮಾಣ ಆಗುವುದಿಲ್ಲ. ಬದಲಾಗಿ ಅವು ಡಾಟಾ ಸೆಂಟರ್​ಗಳಲ್ಲಿ ನಿರ್ಮಾಣ ಆಗುತ್ತವೆ. ಸೇನೆಗಳೆಂದರೆ ತುಕಡಿಗಳಲ್ಲ, ಬೋಟ್ ನೆಟ್​ಗಳಾಗಿರುತ್ತವೆ’ ಎಂದು ಅದಾನಿ ಗ್ರೂಪ್ ಸಂಸ್ಥಾಪಕರಾದ ಅವರು ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ ಅತ್ಯಾಧುನಿಕ ಪೋಸ್ಟಲ್ ಟೆಕ್ನಾಲಜಿ; ವಿಶ್ವದ ದರ್ಜೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಮಾರ್ಪಾಡಾಗಲಿದೆ ಇಂಡಿಯಾ ಪೋಸ್ಟ್

‘ಇಲ್ಲಿ ಕಹಿ ಸತ್ಯ ಅಡಗಿದೆ. ತಂತ್ರಜ್ಞಾನ ಅವಲಂಬನೆ ವಿಷಯಕ್ಕೆ ಬಂದರೆ, ಶೇ. 90ರಷ್ಟು ಸೆಮಿಕಂಡಕ್ಟರ್​ಗಳು ಆಮದುಗೊಳ್ಳುತ್ತವೆ. ಒಂದೇ ಒಂದು ಅಡೆತಡೆ ಅಥವಾ ನಿಷೇಧ ನಿರ್ಮಾಣ ಆದರೆ ನಮ್ಮ ಡಿಜಿಟಲ್ ಆರ್ಥಿಕತೆಯೇ ಸ್ಥಗಿತಗೊಳ್ಳಬಹುದು. ಭಾರತದ ಗಡಿಯಲ್ಲಿನ ಒಂದೊಂದು ಸಣ್ಣ ಡಾಟಾ ಕೂಡ ವಿದೇಶೀ ಅಲ್ಗಾರಿದಂಗಳಿಗೆ ಕಚ್ಛಾ ಸಾಮಗ್ರಿಯಾಗಬಹುದು. ವಿದೇಶೀ ಸಂಪತ್ತು ಸೃಷ್ಟಿಯಾಗಬಹುದು. ವಿದೇಶೀ ಪ್ರಾಬಲ್ಯ ಮತ್ತಷ್ಟು ಗಟ್ಟಿಗೊಳ್ಳಬಹುದು’ ಎಂದು ಡಿಜಿಟಲ್ ಅವಲಂಬನೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ನಿಜವಾದ ಸ್ವಾತಂತ್ರ್ಯ ಬೇಕು…

ಶೇ. 85ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಒಂದು ಜಾಗತಿಕ ರಾಜಕೀಯ ವಿಚಲನೆ ಸಂಭವಿಸಿದಲ್ಲಿ ನಮ್ಮ ಪ್ರಗತಿಯೇ ಕುಂಠಿತಗೊಳ್ಳಬಹುದು. ಮಿಲಿಟರಿ ವಿಚಾರ ಹೇಳುವುದಾದರೆ, ಹಲವು ಪ್ರಮುಖ ಸಿಸ್ಟಂಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಬೇರೆ ದೇಶಗಳ ರಾಜಕೀಯ ಇಚ್ಚೆಗಳಿಗೆ ನಮ್ಮ ರಾಷ್ಟ್ರೀಯ ಭದ್ರತೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಬೇರೆ ದೇಶಗಳ ಸಪ್ಲೈ ಚೈನ್ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಈ ಅವಲಂಬನೆಯಿಂದ ಬಿಡುಗಡೆ ಹೊಂದುವ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಬೇಕಾಗಿದೆ. ನಿಜವಾಗಿಯೂ ಸ್ವತಂತ್ರರಾಗಬೇಕಾದರೆ ಸ್ವಾವಲಂಬನೆಯ ಸ್ವಾತಂತ್ರ್ಯ ಪಡೆಯಬೇಕು ಎಂದು ಗೌತಮ್ ಅದಾನಿ ಕಿವಿಮಾತು ಹೇಳಿದರು.

ಇದನ್ನೂ ಓದಿ: ಚ್ಯಾಟ್​ಜಿಪಿಟಿ ಗೋ ಪ್ಲಾನ್ ಬಿಡುಗಡೆ: ತಿಂಗಳಿಗೆ 399 ರೂ; ಇದರ ವಿಶೇಷತೆ ತಿಳಿದಿರಿ

ಹೋರಾಟ ಮುಂದುವರಿದಿದೆ, ಶಸ್ತ್ರಾಸ್ತ್ರ ಬದಲಾಗಿದೆ

‘80 ವರ್ಷದ ಹಿಂದೆ ಈ ದೇಶದ ಯುವಕರು, ಯುವತಿಯರು ನಮ್ಮ ನೆಲವನ್ನು ಆಳುವ ಹಕ್ಕಿಗಾಗಿ ಹೋರಾಟ ಮಾಡಿದ್ದರು. ಈಗ ಅದೇ ಹೋರಾಟ ಮುಂದುವರಿದಿದೆ. ಆದರೆ, ಶಸ್ತ್​ರಾಸ್ತ್ರಗಳು ಬದಲಾಗಿವೆ. ಈ ಸತ್ಯವನ್ನು ಇಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಅರ್ಥ ಮಾಡಿಕೊಳ್ಳಬೇಕು. ನೀವು ಮುಂದಿನ ತಲೆಮಾರಿನ ಸ್ವಾತಂತ್ರ್ಯ ಹೋರಾಟಗಾರರಾಗಿರುತ್ತೀರಿ’ ಎಂದು ಐಐಟಿ ಖರಗ್​ಪುರ್​ನ ವಿದ್ಯಾರ್ಥಿಗಳಿಗೆ ಅದಾನಿ ಕರೆ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Wed, 20 August 25

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ