AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ವಜಾ ಆಗಿದ್ದು ಯಾಕೆ? ಸಾಲುಸಾಲು ರಾಜೀನಾಮೆ ಭೀತಿ; ಸಂಸ್ಥೆಯ ಮಂಡಳಿಯ ಮೇಲೆ ಹೂಡಿಕೆದಾರರ ಒತ್ತಡ

OpenAI vs Sam Altman: ಓಪನ್ ಎಐ ಸಂಸ್ಥೆ ಮೊನ್ನೆ ದಿಢೀರನೇ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ಸಿಇಒ ಮತ್ತು ನಿರ್ದೇಶಕ ಎರಡೂ ಸ್ಥಾನಗಳಿಂದಲೂ ತೆಗೆದುಹಾಕಲಾಗಿದೆ. ಈಗ ಹೊಸ ಅಚ್ಚರಿಯ ಬೆಳವಣಿಗೆಯಲ್ಲಿ, ಓಪನ್​ಎಐ ಮಂಡಳಿ ಸ್ಯಾಮ್ ಆಲ್ಟ್​​ಮ್ಯಾನ್ ಅವರನ್ನು ಮರಳಿ ಗದ್ದುಗೆಗೆ ಕೂರಿಸುವ ಆಲೋಚನೆಯಲ್ಲಿದೆಯಂತೆ.

ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ವಜಾ ಆಗಿದ್ದು ಯಾಕೆ? ಸಾಲುಸಾಲು ರಾಜೀನಾಮೆ ಭೀತಿ; ಸಂಸ್ಥೆಯ ಮಂಡಳಿಯ ಮೇಲೆ ಹೂಡಿಕೆದಾರರ ಒತ್ತಡ
ಸ್ಯಾಮ್ ಆಲ್ಟ್​ಮ್ಯಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 19, 2023 | 9:33 AM

Share

ಸ್ಯಾನ್​ಫ್ರಾನ್ಸಿಸ್ಕೋ, ನವೆಂಬರ್ 19: ಚ್ಯಾಟ್​ಜಿಪಿಟಿ ಎಂಬ ಎಐ ಆಧಾರಿತ ಸರ್ವಿಸ್ ಕೊಡುವ ಒಂದು ಆ್ಯಪ್ ಬಿಡುಗಡೆಗೊಳಿಸಿ ವಿಶ್ವಾದ್ಯಂತ ಅಚ್ಚರಿ ಮೂಡಿಸಿದ್ದ ಓಪನ್ ಎಐ ಸಂಸ್ಥೆ (OpenAI) ಮೊನ್ನೆ ದಿಢೀರನೇ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು (Sam Altman) ಸಿಇಒ ಮತ್ತು ನಿರ್ದೇಶಕ ಎರಡೂ ಸ್ಥಾನಗಳಿಂದಲೂ ತೆಗೆದುಹಾಕಲಾಗಿದೆ. ಈಗ ಹೊಸ ಅಚ್ಚರಿಯ ಬೆಳವಣಿಗೆಯಲ್ಲಿ, ಓಪನ್​ಎಐ ಮಂಡಳಿ ಸ್ಯಾಮ್ ಆಲ್ಟ್​​ಮ್ಯಾನ್ ಅವರನ್ನು ಮರಳಿ ಗದ್ದುಗೆಗೆ ಕೂರಿಸುವ ಆಲೋಚನೆಯಲ್ಲಿದೆಯಂತೆ.

ಮೈಕ್ರೋಸಾಫ್ಟ್ ಮೊದಲಾದ ದಿಗ್ಗಜ ಸಂಸ್ಥೆಗಳು ಓಪನ್​ಎಐನಲ್ಲಿ ಪಾಲು ಹೊಂದಿವೆ. ಥ್ರೈವ್ ಗ್ಲೋಬಲ್ (Thrive Global) ಮೊದಲಾದ ಹಣಕಾಸು ಸಂಸ್ಥೆಗಳು ಅದರಲ್ಲಿ ಹೂಡಿಕೆ ಮಾಡಿವೆ. ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದು ಸ್ವತಃ ಸಿಇಒ ಮಾತ್ರವಲ್ಲ ಎಲ್ಲಾ ಸಾಂಸ್ಥಿಕ ಹೂಡಿಕೆದಾರರಿಗೂ ಅನಿರೀಕ್ಷಿತ ಆಘಾತ ಉಂಟುಮಾಡಿದೆ. ಹೂಡಿಕೆದಾರರು ಇದೀಗ ಸ್ಯಾಮ್ ಪರವಾಗಿ ನಿಂತಿದ್ದು, ಅವರನ್ನು ಮತ್ತೆ ಸಿಇಒ ಸ್ಥಾನಕ್ಕೆ ಕೂರಿಸಬೇಕೆಂದು ಬೋರ್ಡ್ ಮೇಲೆ ಒತ್ತಡ ತರುತ್ತಿರುವುದು ತಿಳಿದುಬಂದಿದೆ. ಅದಕ್ಕಾಗಿ ಮೈಕ್ರೋಸಾಫ್ಟ್ ಜೊತೆ ಥ್ರೈವ್ ಗ್ಲೋಬಲ್ ಮೊದಲಾದ ಸಂಸ್ಥೆಗಳು ಮಾತನಾಡುತ್ತಿವೆ ಎಂದು ಬ್ಲೂಮ್​ಬರ್ಗ್ ನ್ಯೂಸ್ ವರದಿ ಹೇಳುತ್ತಿದೆ.

ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ವೈಯಕ್ತಿಕವಾಗಿ ಸ್ಯಾಮ್ ಆಲ್ಟ್​ಮ್ಯಾನ್ ನಿರ್ಗಮನಕ್ಕೆ ಶಾಕ್ ವ್ಯಕ್ತಪಡಿಸಿದ್ದಾರೆ. ಸ್ಯಾಮ್ ಅವರ ಎಲ್ಲಾ ಭವಿಷ್ಯ ಹೆಜ್ಜೆಗಳಿಗೂ ಬೆಂಬಲ ಕೊಡುತ್ತೇವೆಂದು ಸತ್ಯ ಹೇಳಿದ್ದಾರೆ.

ಇದನ್ನೂ ಓದಿ: ChatGPT ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್ ವಜಾ; OpenAI ಹಂಗಾಮಿ ಸಿಇಒ ಆಗಿ ಮೀರಾ ಮುರಾಟಿ ನೇಮಕ

ಇನ್ನು, ಓಪನ್​ಎಐನಿಂದ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿರುವುದು ಅಲ್ಲಿಯ ಉನ್ನತ ಸ್ತರದ ಇತರ ಅಧಿಕಾರಿಗಳಿಗೂ ಘಾಸಿಯಾದಂತಿದೆ. ಓಪನ್​ಎಐ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್​ಮ್ಯಾನ್ ಅವರೂ ಕೂಡ ತಾನು ನಿರ್ಗಮಿಸುತ್ತಿರುವುದಾಗಿ ಎಕ್ಸ್ ಪೋಸ್ಟ್​ನಲ್ಲಿ ಪ್ರಕಟಿಸಿದ್ದಾರೆ. ವರದಿಗಳ ಪ್ರಕಾರ ಇನ್ನೂ ಕೆಲ ಉನ್ನತ ಅಧಿಕಾರಿಗಳು ಓಪನ್​ಎಐಗೆ ಗುಡ್​ಬೈ ಹೇಳುವ ಸಾಧ್ಯತೆ ಇದೆ.

ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ್ದು ಯಾಕೆ?

ಓಪನ್​ಎಐ ಬೋರ್ಡ್ ನೀಡಿರುವ ಮಾಹಿತಿ ಪ್ರಕಾರ, ಸ್ಯಾಮ್ ಆಲ್ಟ್​ಮ್ಯಾನ್ ಅವರು ಸಂಸ್ಥೆಯನ್ನು ಮುನ್ನಡೆಸಬಲ್ಲರು ಎಂಬ ವಿಶ್ವಾಸ ಮಂಡಳಿಗೆ ಇಲ್ಲ. ಸ್ಯಾಮ್ ಆಲ್ಟ್​ಮ್ಯಾನ್ ಅವರು ತಮ್ಮ ನಿರ್ಧಾರ, ವ್ಯವಹಾರ ಮತ್ತು ಸಂವಹನ ವಿಚಾರದಲ್ಲಿ ಕಂಪನಿ ಬೋರ್ಡ್ ಸದಸ್ಯರ ಜೊತೆ ಪಾರದರ್ಶಕತೆ ಹೊಂದಿರಲಿಲ್ಲ. ಇದು ಅವರನ್ನು ವಜಾಗೊಳಿಸಲು ಕಾರಣ ಎನ್ನಲಾಗಿದೆ.

ಒಂದು ವೇಳೆ, ಮೈಕ್ರೋಸಾಫ್ಟ್ ಮತ್ತು ಹೂಡಿಕೆದಾರರ ಒತ್ತಡದ ನೆರವಿನಿಂದ ಸ್ಯಾಮ್ ಆಲ್ಟ್​ಮ್ಯಾನ್ ಅವರು ಮರಳಿ ಸಿಇಒ ಸ್ಥಾನಕ್ಕೆ ಬಂದರೆ ಈಗಿರುವ ಬೋರ್ಡ್ ಸದಸ್ಯರು ನಿರ್ಗಮಿಸಬಹುದು.

ಇದನ್ನೂ ಓದಿ: Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್​ಎಐಗೆ ಓಪನ್ ಚಾಲೆಂಜಾ?

ಒಂದು ವೇಳೆ, ಸ್ಯಾಮ್ ಅವರು ಮರಳಿ ಬಾರದೇ ಹೋದರೆ, ಅವರು ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ ಸ್ಥಾಪಿಸಬಹುದು. ಓಪನ್​ಎಐನ ಈಗಿನ ಕೆಲ ಉದ್ಯೋಗಿಗಳು ಸ್ಯಾಮ್ ಹಿಂದೆ ಹೋಗಬಹುದು. ಮೈಕ್ರೋಸಾಫ್ಟ್ ಕೂಡ ಸ್ಯಾಮ್ ಅವರ ಹೊಸ ಕಂಪನಿಗೆ ನೆರವು ನೀಡಬಹುದು ಎನ್ನಲಾಗಿದೆ.

ಅತ್ತ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿದ ಬಳಿಕ ಮೀರಾ ಮುರಾತಿ (Mira Murati) ಎಂಬಾಕೆ ಹಂಗಾಮಿ ಸಿಇಒ ಆಗಿ ನೇಮಕವಾಗಿದ್ದಾರೆ. ಅವರು ಚ್ಯಾಟ್​ಜಿಪಿಟಿ ರೂವಾರಿಗಳಲ್ಲಿ ಒಬ್ಬರೆನ್ನಲಾಗಿದ್ದು, ಸಿಟಿಒ ಆಗಿ ಕೆಲಸ ಮಾಡಿದ್ದಾರೆ. ಹೊಸ ಸಿಇಒ ಬರುವವರೆಗೂ ಅವರು ಆ ಸ್ಥಾನವನ್ನು ತಾತ್ಕಾಲಿಕವಾಗಿ ನಿಭಾಯಿಸಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ