Sign In

By signing in or creating an account, you agree with Associated Broadcasting Company's Terms & Conditions and Privacy Policy.

Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್​ಎಐಗೆ ಓಪನ್ ಚಾಲೆಂಜಾ?

xAI Corp: ಟ್ವಿಟ್ಟರ್ ಖರೀದಿಸಿದ ಬಳಿಕ ಇಲಾನ್ ಮಸ್ಕ್ ಇದೀಗ ಎಕ್ಸ್ ಎಐ ಕಾರ್ಪ್ ಎಂಬ ಹೊಸ ಕಂಪನಿ ಸ್ಥಾಪಿಸಿದ್ದು, ಪ್ರಪಂಚ ಅರಿಯುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾಡೆಲ್ ತಯಾರಿಸುವ ಗುರಿ ಹೊಂದಿದ್ದಾರಂತೆ.

Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್​ಎಐಗೆ ಓಪನ್ ಚಾಲೆಂಜಾ?
ಇಲಾನ್ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 13, 2023 | 1:18 PM

ನವದೆಹಲಿ: ವಿಶ್ವದ ಅತಿದೊಡ್ಡ ಶ್ರೀಮಂತ ಇಲಾನ್ ಮಸ್ಕ್ ಅವರು ಕೃತಕ ಬುದ್ಧಿಮತ್ತೆ (AI- Artificial Intelligence) ಕ್ಷೇತ್ರದಲ್ಲಿ ಗಂಭೀರವಾಗಿ ಹೆಜ್ಜೆಗಳನ್ನಿಡಲು ನಿರ್ಧರಿಸಿದ್ದಾರೆ. ಚ್ಯಾಟ್​ಜಿಪಿಟಿ ನಿರ್ಮಾತೃ ಓಪನ್ ಎಐ (OpenAI) ಸಂಸ್ಥೆಯ ಆರಂಭಿಕ ಹೂಡಿಕೆದಾರರಲ್ಲಿ ಒಬ್ಬರಾಗಿದ್ದ ಮಸ್ಕ್ ಅವರು ತಮ್ಮದೇ ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಎಕ್ಸ್​ಎಐ ಕಾರ್ಪ್ (xAI Corp) ಎಂಬ ಸಂಸ್ಥೆಯನ್ನು ಸ್ಥಾಪಿಸಿರುವುದಾಗಿ ಇಲಾನ್ ಮಸ್ಕ್ ಅವರೇ ಸ್ವತಃ ಹೇಳಿದ್ದಾರೆ. ಈ ವಿಶ್ವದ ನಿಜ ಸ್ವರೂಪ (Universe True Nature) ಅರಿಯುವುದು ಈ ಸ್ಟಾರ್ಟಪ್​ನ ಉದ್ದೇಶ ಎಂದು ಅದರ ವೆಬ್​ಸೈಟ್​ನಲ್ಲಿ ಘೋಷಿಸಲಾಗಿದೆ.

ಈ ಸ್ಟಾರ್ಟಪ್​ನಲ್ಲಿ ಹಲವು ಗಣ್ಯರ ಹೆಸರು ಕಾಣುತ್ತವೆ. ಗೂಗಲ್ ರಿಸರ್ಚ್, ಮೈಕ್ರೋಸಾಫ್ಟ್ ರಿಸರ್ಚ್, ಓಪನ್ ಎಐ, ಡೀಪ್​ಮೈಂಡ್, ಟ್ವಿಟ್ಟರ್, ಟೆಸ್ಲಾ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಮಾಡಿದ ಪರಿಣಿತರು ಇಲಾನ್ ಮಸ್ಕ್ ಅವರ ಹೊಸ ತಂಡದಲ್ಲಿ ಇದ್ದಾರೆನ್ನಲಾಗಿದೆ.

ಇದನ್ನೂ ಓದಿOnline Gaming: ಆನ್​ಲೈನ್ ಗೇಮಿಂಗ್​ಗೆ ಶೇ. 28ಜಿಎಸ್​ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ

ಎಐ ಸಹವಾಸ ಮಸ್ಕ್ ಅವರಿಗೆ ಹೊಸದೇನಲ್ಲ

ಆರಂಭದಲ್ಲೇ ಹೇಳಿದಂತೆ ಇಲಾನ್ ಮಸ್ಕ್ ಅವರು ಓಪನ್ ಎಐ ಕಂಪನಿಯನ್ನು ಬಹಿರಂಗವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಓಪನ್​ಎಐಗೆ ಬಂಡವಾಳ ಹಾಕಿದ ಮೊದಲಿಗರಲ್ಲಿ ಮಸ್ಕ್ ಅವರೂ ಒಬ್ಬರು. ಈಗ ಓಪನ್ ಎಐ ಜೊತೆ ಅವರು ಜೋಡಿತವಾಗಿಲ್ಲ. ಓಪನ್ ಎಐನಿಂದ ಜಿಪಿಟಿ-4 ಬಿಡುಗಡೆ ಆದಾಗ ಎಲಾನ್ ಮಸ್ಕ್ ಅವರು ತಾವೂ ಒಂದು ಎಐ ಮಾಡೆಲ್ ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ಏಪ್ರಿಲ್ ತಿಂಗಳಲ್ಲಿ ಹೇಳಿದ್ದರು. ಇದೀಗ ಅವರು ಎನ್​ವಿಡಿಯಾ ಕಾರ್ಪ್ ಸಂಸ್ತೆಯಿಂದ ಸಾವಿರಾರು ಗ್ರಾಫಿಕ್ಸ್ ಪ್ರೋಸಸಿಂಗ್ ಯೂನಿಟ್​ಗಳನ್ನು ಪಡೆದುಕೊಂಡಿದ್ದಾರೆ. ಹೊಸ ಎಲ್​ಎಲ್​ಎಂ ರೂಪಿಸಲು ಮಸ್ಕ್ ಅವರಿಗೆ ಈ ಯೂನಿಟ್​ಗಳು ಸಹಾಯಕ್ಕೆ ಬರಲಿವೆ. ಹಿಂದೊಮ್ಮೆ ಅವರು ಟ್ರೂತ್ ಜಿಪಿಟಿ ಎಂಬ ಹೊಸ ಎಐ ಸಾಧನ ತಯಾರಿಸುವುದಾಗಿ ಹೇಳಿದ್ದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಎಲ್​ಎಲ್​ಎಂಗಳಿಗೆ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಟ್ರೈನಿಂಗ್ ನೀಡಲು ಜಿಪಿಯುಗಳ ಅವಶ್ಯಕತೆ ಇರುತ್ತದೆ. ಹೀಗಾಗಿ, ಇಲಾನ್ ಮಸ್ಕ್ ಅವರು ಸರ್ವಸನ್ನದ್ಧರಾಗಿ ಎಐ ಜಗತ್ತಿಗೆ ಕಾಲಿಟ್ಟಿರುವ ಸಾಧ್ಯತೆ ಇದೆ. ಆದರೆ, ಭಾರೀ ಮೊತ್ತದ ಬಂಡವಾಳ ಹಾಕಿ ಈಗಾಗಲೇ ಎಐ ಜಗತ್ತಿನಲ್ಲಿ ಬಹಳ ಮುಂದಿರುವ ಗೂಗಲ್, ಓಪನ್​ಎಐ ಕಂಪನಿಗಳೊಂದಿಗೆ ಮಸ್ಕ್ ಅವರ ಎಕ್ಸ್ ಎಐ ಸರಿಸಮಾನವಾಗಿ ಸ್ಪರ್ಧಿಸಲಾಗದು ಎಂಬುದು ಕೆಲ ಉದ್ಯಮಿಗಳ ಅನಿಸಿಕೆ.

ಇದನ್ನೂ ಓದಿLithium Mining: ಲಿಥಿಯಂ ಮೈನಿಂಗ್ ಹರಾಜಿಗೆ ಕೇಂದ್ರ ಅನುಮೋದನೆ; ಆರು ಖನಿಜಗಳ ಗಣಿಗಾರಿಕೆಗೆ ಇದ್ದ ನಿಷೇಧ ಹಿಂತೆಗೆತ

ಓಪನ್​ಎಐ ಸ್ಥಾಪಕ ಸ್ಯಾಮ್ ಆಲ್ಟ್​ಮನ್ ಅವರು ಕಳೆದ ತಿಂಗಳು ಭಾರತಕ್ಕೆ ಬಂದಿದ್ದಾಗ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸ್ಯಾಮ್ ಆಲ್ಟ್​ಮನ್ ಜೊತೆಗಿನ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾರತದ ಉದ್ಯಮಿಯೊಬ್ಬರು ಕಡಿಮೆ ಬಂಡವಾಳದಲ್ಲಿ ಭಾರತೀಯ ಕಂಪನಿಗಳು ಎಐ ಮಾಡೆಲ್ ರೂಪಿಸಬಹುದೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಸ್ಯಾಮ್ ಆಲ್ಟ್​ಮನ್, ಅದು ವ್ಯರ್ಥ ಪ್ರಯತ್ನ ಆಗುತ್ತೆ ಎಂಬರ್ಥದಲ್ಲಿ ಉತ್ತರಿಸಿದ್ದರು. ಆದರೆ, ಸಾಕಷ್ಟು ಸಿರಿತನ ಹೊಂದಿರುವ ಹಾಗೂ ಮಂಗಳ ಗ್ರಹದಲ್ಲಿ ವಹಾಹತು ಸ್ಥಾಪಿಸುವ ದೊಡ್ಡ ಆಲೋಚನೆ ಹೊಂದಿರುವ ಇಲಾನ್ ಮಸ್ಕ್ ಏನು ಬೇಕಾದರೂ ಮಾಡಿಯಾರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್