AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ ಗೊತ್ತೇ!

ಈಗ ಎಲ್ಲ ಕ್ಷೇತ್ರಗಳಲ್ಲೂ ಕೃತಕಬುದ್ಧಿಮತ್ತೆಯದ್ದಾ ಹವಾ. ಏನು ಬೇಕಿದ್ದರೂ ಎಐ ಮಾಡಿಕೊಡುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಥದ್ದರಲ್ಲಿ ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರ ‘ಎಐ ರೂಮ್​ಮೇಟ್’ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ. ಅಡುಗೆಯಾತ ಹಣ್ಣು, ತರಕಾರಿ ಕಳ್ಳತನ ಮಾಡುತ್ತಿದ್ದುದನ್ನು ‘ಎಐ ರೂಮ್​ಮೇಟ್’ ಪತ್ತೆ ಮಾಡಿದೆ. ಹಾಗಾದರೆ, ಎಐ ರೂಮ್​ಮೇಟ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ಮಾಹಿತಿ.

ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ ಗೊತ್ತೇ!
ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ?Image Credit source: X/@the2ndfloorguy
ಗಣಪತಿ ಶರ್ಮಾ
|

Updated on: Mar 02, 2026 | 11:06 AM

Share

ಬೆಂಗಳೂರು, ಮಾರ್ಚ್​ 2: ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿರುವುದನ್ನು ಎಐ ರೂಮ್​ಮೇಟ್ (AI Roommate) ಪತ್ತೆಹಚ್ಚಿ ತಿಳಿಸಿದ್ದು, ಟೆಕ್ಕಿಯೊಬ್ಬರು ಆತನನ್ನು ಕೆಲಸದಿಂದಲೇ ತೆಗೆದುಹಾಕಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ ಎಂದು ವರದಿಯಾಗಿದೆ. ನಗರದ ಟೆಕ್ಕಿ ಪಂಕಜ್ (ಸಾಮಾಜಿಕ ಜಾಲತಾಣ ಪೋಸ್ಟ್​ನಲ್ಲಿರುವಂತೆ) ಮನೆಯ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸಲು ‘AI ರೂಮ್​ಮೇಟ್’ ಎನ್ನುವ ವ್ಯವಸ್ಥೆಯನ್ನು ಬಳಸುತ್ತಿದ್ದರು. ಅಡುಗೆಯಾತ ಫ್ರಿಡ್ಜ್‌ನಿಂದ ಸೇಬು, ಬಾಳೆಹಣ್ಣು ಮತ್ತು ಬೆರಿಹಣ್ಣುಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಅನುಮಾನ ಅವರಲ್ಲಿ ಮೂಡಿತ್ತು. ಕನಿಷ್ಠ ಮೂರು ವಿಭಿನ್ನ ಸಂದರ್ಭಗಳಲ್ಲಿ ಹಣ್ಣುಗಳನ್ನು ಕದಿಯುತ್ತಿರುವುದನ್ನು AI ರೂಮ್​ಮೇಟ್ ಪತ್ತೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪಂಕಜ್, ‘ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿದ್ದ. ಹೀಗಾಗಿ ಅಡುಗೆ ಮನೆಯಲ್ಲಿ AI ರೂಮ್‌ಮೇಟ್ ನಿಯೋಜಿಸಿದ್ದೆ. ಅದು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ವಾರ ಎರಡು ಬಾರಿ ಹಿಡಿದಿದ್ದೇನೆ. ಹೀಗಾಗಿ ಕೆಲಸದಿಂದ ತೆಗೆದುಹಾಕಿದೆ ಎಂದು ಬರೆದಿದ್ದಾರೆ.

ಪಂಕಜ್ ಎಕ್ಸ್ ಪೋಸ್ಟ್

AI ರೂಮ್‌ಮೇಟ್ ಎಂದರೇನು?

ಪಂಕಜ್ ಉಲ್ಲೇಖಿಸಿರುವ AI ರೂಮ್‌ಮೇಟ್ ಎಂದರೆ AI ಚಾಟ್‌ಬಾಟ್ ಹೊಂದಿರುವ ಕಣ್ಗಾವಲು ಕ್ಯಾಮರಾ ವ್ಯವಸ್ಥೆ. ಅಡುಗೆಯಾತ ಕೆಲಸದಲ್ಲಿರುವ ಸಮಯದಲ್ಲಿ ಈ ವ್ಯವಸ್ಥೆ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸುತ್ತದೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಲೀಕರಿಗೆ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ.

AI ಚಾಟ್‌ಬಾಟ್‌ನೊಂದಿಗೆ ಪಂಕಜ್ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಅಡುಗೆಯಾತ ಯಾವ ಸಮಯಕ್ಕೆ ಮನೆಗೆ ಬಂದ, ಎಷ್ಟು ಬಾರಿ ಫ್ರಿಡ್ಜ್ ತೆರೆದ, ಏನು ತೆಗೆದುಕೊಂಡ ಎಂಬುದರ ಜೊತೆಗೆ ಅಡುಗೆ ಮಾಡುವ ಮೊದಲು ಎಷ್ಟು ಬಾರಿ ಕೈ ತೊಳೆದ, ಅಡುಗೆಮನೆಯನ್ನು ಎಷ್ಟು ಸ್ವಚ್ಛಗೊಳಿಸಿದ ಎಂಬುದನ್ನೂ ಟ್ರ್ಯಾಕ್ ಮಾಡಲಾಗಿದೆ.

AI ರೂಮ್‌ಮೇಟ್ ಹೇಳಿದ್ದೇನು?

ಒಂದು ಸಂದರ್ಭದಲ್ಲಂತೂ AI ರೂಮ್‌ಮೇಟ್, ಆತ ಸಂಜೆ 7:12ಕ್ಕೆ ಬಂದ. ಮೊದಲಿಗೆ ಫ್ರಿಡ್ಜ್ ತೆರೆದು ಎರಡು ಸೇಬುಗಳನ್ನು ತೆಗೆದು ತನ್ನ ಚೀಲದಲ್ಲಿ ಇಟ್ಟ. ಬಳಿಕ ಅಡುಗೆ ಪ್ರಾರಂಭಿಸಿದ ಎಂದು ಸಂದೇಶ ಕಳುಹಿಸಿರುವುದನ್ನು ಪಂಕಜ್ ಹಂಚಿಕೊಂಡಿದ್ದಾರೆ.

ಇನ್ನೊಂದು ಬಾರಿ, ಈ ವಾರ ಅಡುಗೆ ಮಾಡುವ ಮೊದಲು ನಾಲ್ಕು ಬಾರಿ ಫ್ರಿಡ್ಜ್ ತೆರೆಯಲಾಗಿದೆ. ಮೂರು ಸೇಬುಗಳು ಕಾಣೆಯಾಗಿವೆ. ಮಂಗಳವಾರದ ಬಾಳೆಹಣ್ಣು ಇಲ್ಲ. ಗುರುವಾರ ಬ್ಲೂಬೆರ್ರಿ ತಿನ್ನುತ್ತಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಖಾಸಗಿತನ ಕಾಪಾಡುತ್ತಾ AI ರೂಮ್‌ಮೇಟ್?

AI ರೂಮ್‌ಮೇಟ್ ಸಿಸಿಟಿವಿ ಕ್ಯಾಮರಾ ಮೂಲಕ ಕೊಠಡಿಯನ್ನು ನಿರಂತರವಾಗಿ ಗಮನಿಸುತ್ತದೆ. ಬಳಕೆದಾರರ ಗೌಪ್ಯತೆಯನ್ನು ಕೂಡ ರಕ್ಷಿಸುತ್ತದೆ. ಅಂದರೆ, ಮೊದಲು ಮುಖಗಳನ್ನು ರೆಕಾರ್ಡ್ ಮಾಡಿಕೊಂಡು ನಂತರ ಬ್ಲರ್ ಮಾಡುತ್ತದೆ. ಬಳಿಕ ಮಸುಕಾದ ವೀಡಿಯೊವನ್ನು ವಿಶ್ಲೇಷಣೆಗಾಗಿ ವಿಷನ್ AI ಮಾದರಿಗೆ ಕಳುಹಿಸುತ್ತದೆ. ಆ ವಿಶ್ಲೇಷಣೆಯ ಆಧಾರದ ಮೇಲೆ ಟೆಕ್ಷ್ಟ್ ರೂಪದಲ್ಲಿ ಸಂದೇಶ ಕಳುಹಿಸುತ್ತದೆ.

ಇದನ್ನೂ ಓದಿ: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ

ಸದ್ಯ ಬೆಂಗಳೂರು ಟೆಕ್ಕಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಂತ್ರಜ್ಞಾನ ಬಳಕೆ ಮೂಲಕ ಕಳ್ಳತನ ಪತ್ತೆಹಚ್ಚಿದುದನ್ನು ಸಮರ್ಥಿಸುತ್ತಿದ್ದರೆ, ಇನ್ನು ಕೆಲವರು ಮನೆ ಕೆಲಸಗಾರರ ಮೇಲಿನ ಇಂತಹ AI ಕಣ್ಗಾವಲು ಗೌಪ್ಯತೆ ಮತ್ತು ನೈತಿಕತೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ
ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ
ಡಾ. ರಾಜ್​ಕುಮಾರ್ ಇಲ್ಲದೇ 20 ವರ್ಷ ಆಗಿದೆ ಅಂತ ನಂಬೋಕೆ ಆಗಲ್ಲ: ರಾಘಣ್ಣ
ಡಾ. ರಾಜ್​ಕುಮಾರ್ ಇಲ್ಲದೇ 20 ವರ್ಷ ಆಗಿದೆ ಅಂತ ನಂಬೋಕೆ ಆಗಲ್ಲ: ರಾಘಣ್ಣ
ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್
ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್
ನವಜಾತ ಶಿಶುವಿನ ಜತೆ ಹೈಕೋರ್ಟ್​ನ 5ನೇ ಮಹಡಿಯಿಂದ ಹಾರಲು ಮಹಿಳೆ ಯತ್ನ
ನವಜಾತ ಶಿಶುವಿನ ಜತೆ ಹೈಕೋರ್ಟ್​ನ 5ನೇ ಮಹಡಿಯಿಂದ ಹಾರಲು ಮಹಿಳೆ ಯತ್ನ
ಬಾಲಕಿ ಸಾವಿನ ಬಳಿಕವೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಪ್ರವಾಸಿಗರ ಹುಚ್ಚಾಟ
ಬಾಲಕಿ ಸಾವಿನ ಬಳಿಕವೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಪ್ರವಾಸಿಗರ ಹುಚ್ಚಾಟ
ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ
ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ
ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು
ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು
ವಕೀಲನ ಶೂಟೌಟ್, ಪರಾರಿಯಾಗಲು ಯತ್ನಿಸಿದ ಹಂತಕನಿಗೆ ಕೈಕೊಟ್ಟ ಬೈಕ್
ವಕೀಲನ ಶೂಟೌಟ್, ಪರಾರಿಯಾಗಲು ಯತ್ನಿಸಿದ ಹಂತಕನಿಗೆ ಕೈಕೊಟ್ಟ ಬೈಕ್