AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿವಾಸಿ ಭಾರತೀಯರ ಎಫ್​ಸಿಎನ್​ಆರ್ ಠೇವಣಿಗಳು: ಗಡುವನ್ನು ಒಂದು ತಿಂಗಳು ಹಿಂದೂಡಿದ ಆರ್​ಬಿಐ

FCNRB deposit swapping facility special window, new date of closure August 31st: ಭಾರತೀಯ ಬ್ಯಾಂಕುಗಳಿಗೆ ಅನಿವಾಸಿ ಭಾರತೀಯರಿಂದ ಎಫ್​ಸಿಎನ್​ಆರ್​ಬಿ ಡೆಪಾಸಿಟ್​ಗಳನ್ನು ಪಡೆಯಲು ಅವಕಾಶ ಕೊಟ್ಟಿದ್ದ ಆರ್​ಬಿಐ, ಗಡುವನ್ನು ಒಂದು ತಿಂಗಳು ಹಿಂದೂಡಿದೆ. ಡೆಪಾಸಿಟ್​ಗಳಿಗೆ ಸೆಪ್ಟೆಂಬರ್ 30ರವರೆಗೂ ಕಾಲಾವಕಾಶ ಇತ್ತು. ಅದನ್ನು ಆಗಸ್ಟ್ 31ಕ್ಕೆ ಹಿಂದೂಡಲಾಗಿದೆ. ಈ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗೆ ಉತ್ತಮ ಸ್ಪಂದನೆ ಸಿಕ್ಕು ನಿರೀಕ್ಷಿತ ಪ್ರಮಾಣದಲ್ಲಿ ಠೇವಣಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅನಿವಾಸಿ ಭಾರತೀಯರ ಎಫ್​ಸಿಎನ್​ಆರ್ ಠೇವಣಿಗಳು: ಗಡುವನ್ನು ಒಂದು ತಿಂಗಳು ಹಿಂದೂಡಿದ ಆರ್​ಬಿಐ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 17, 2026 | 3:21 PM

Share

ನವದೆಹಲಿ, ಆಗಸ್ಟ್ 17: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 8 ರಂದು ಪ್ರಾರಂಭಿಸಿದ್ದ ಎಫ್‌ಸಿಎನ್‌ಆರ್‌ಬಿ – Foreign Currency Non-Resident (Bank) ವಿಶೇಷ ಫೊರೆಕ್ಸ್ ಸ್ವ್ಯಾಪ್ ಸೌಲಭ್ಯದ ಮುಕ್ತಾಯದ ದಿನಾಂಕವನ್ನು ಸೆಪ್ಟೆಂಬರ್ 30 ರಿಂದ ಆಗಸ್ಟ್ 31 ಕ್ಕೆ ಹಿಂದೂಡಲಾಗಿದೆ. ಈ ರಿಯಾಯಿತಿ ಸ್ವ್ಯಾಪ್ ಸೌಲಭ್ಯಕ್ಕೆ ಬ್ಯಾಂಕುಗಳು ಮತ್ತು ಅನಿವಾಸಿ ಭಾರತೀಯರಿಂದ (NRI) ಅತ್ಯದ್ಭುತ ಸ್ಪಂದನೆ ದೊರೆತಿದ್ದು, ಬೃಹತ್ ಪ್ರಮಾಣದ ವಿದೇಶಿ ವಿನಿಮಯ (Forex) ಭಾರತಕ್ಕೆ ಹರಿದುಬಂದಿದೆ. ಈ ಕಾರಣಕ್ಕೆ ಈ ವಿಂಡೋವನ್ನು ಒಂದು ತಿಂಗಳು ಬೇಗನೇ ಅಂತ್ಯಗೊಳಿಸಲು ಆರ್ಬಿಐ ನಿರ್ಧರಿಸಿದೆ ಎನ್ನಲಾಗಿದೆ.

ಏನದು ಎಫ್​ಸಿಎನ್​ಆರ್​ಬಿ ಸ್ಕೀಮ್?

ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ ಡೆಪಾಸಿಟ್ ಎಂದರೆ, ಅನಿವಾಸಿ ಭಾರತೀಯರ ಕರೆನ್ಸಿ ಠೇವಣಿ ಯೋಜನೆ. ಅನಿವಾಸಿ ಭಾರತೀಯರು ಅವರ ಹಾಲಿ ದೇಶಗಳ ಕರೆನ್ಸಿ ಹಣವನ್ನೇ ಭಾರತೀಯ ಬ್ಯಾಂಕುಗಳಲ್ಲಿ ಠೇವಣಿ ಇಡುವ ಅವಕಾಶ ಇದು. ಅವರ ದೇಶಗಳ ಬ್ಯಾಂಕುಗಳಿಗಿಂತ ಬಹಳ ಹೆಚ್ಚಾದ ಬಡ್ಡಿದರವನ್ನು ಭಾರತೀಯ ಬ್ಯಾಂಕುಗಳು ಆಫರ್ ಮಾಡುತ್ತಿವೆ. ಈ ಸ್ಕೀಮ್​ನಿಂದ ಆರ್​ಬಿಐಗೆ ಆಗುವ ದೊಡ್ಡ ಅನುಕೂಲವೆಂದರೆ, ವಿದೇಶೀ ಕರೆನ್ಸಿಗಳ ಹರಿವು.

ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ

ಎನ್​ಆರ್​ಐಗಳಿಂದ ಬಂದ ಕರೆನ್ಸಿಗಳನ್ನು ಬ್ಯಾಂಕುಗಳು ಆರ್​ಬಿಐಗೆ ಮಾರುತ್ತವೆ. ನಿರ್ದಿಷ್ಟ ಅವಧಿ ಬಳಿಕ ಪೂರ್ವನಿಗದಿತ ದರಕ್ಕೆ ಈ ಬ್ಯಾಂಕುಗಳು ಮತ್ತೆ ಆ ಕರೆನ್ಸಿಗಳನ್ನು ಖರೀದಿಸಬೇಕು. ಇದು ಕರೆನ್ಸಿ ಸ್ವಾಪಿಂಗ್ ಕ್ರಿಯೆ. ಆರ್​ಬಿಐ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಡೆಪಾಸಿಟ್​ಗು ಬಂದಿದ್ದರಿಂದ ಕರೆನ್ಸಿ ಸ್ವಾಪಿಂಗ್ ವಿಂಡೋ ಮುಚ್ಚಲು ನಿರ್ಧರಿಸಿದೆ.

ನಿಧಿ ಸಂಗ್ರಹಣೆ ವಿವರ (ಆಗಸ್ಟ್ 13 ರವರೆಗೆ)

ಆರ್‌ಬಿಐ ಜಾರಿಗೊಳಿಸಿದ ವಿಶೇಷ ಯೋಜನೆಗಳ ಮೂಲಕ ಒಟ್ಟು $56.85 ಬಿಲಿಯನ್ ಹರಿದುಬಂದಿದೆ. 2013ರಲ್ಲಿ ಆರ್‌ಬಿಐ ನಡೆಸಿದ್ದ ಇಂಥದ್ದೇ ಪ್ರಯತ್ನದಲ್ಲಿ ಸಿಕ್ಕಿದ್ದ ಹಣಕ್ಕಿಂತ ಎರಡಕ್ಕೂ ಹೆಚ್ಚು ಪಟ್ಟು ಅಧಿಕವಾಗಿದೆ.

ಪ್ರಮುಖ ನಿಯಮಗಳು ಮತ್ತು ದಿನಾಂಕಗಳು

  • ಹೊಸ ಠೇವಣಿ ಸಂಗ್ರಹಣೆ ಗಡುವು: ಆಗಸ್ಟ್ 31
  • ಬ್ಯಾಂಕುಗಳು ಆರ್‌ಬಿಐ ಜೊತೆ ಸ್ವ್ಯಾಪ್ ಮಾಡುವ ಕೊನೆಯ ದಿನ: ಸೆಪ್ಟೆಂಬರ್ 11
  • ECB ಮತ್ತು OFCB ಸ್ವ್ಯಾಪ್ ಯೋಜನೆಗಳು: ಡಿಸೆಂಬರ್ 31 ರವರೆಗೆ ಯಥಾವತ್ತಾಗಿ ಮುಂದುವರಿಯಲಿವೆ.

ಇದನ್ನೂ ಓದಿ: ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು

ಎನ್ಆರ್‌ಐ ಮತ್ತು ಬ್ಯಾಂಕುಗಳ ಮೇಲೆ ಬೀರುವ ಪರಿಣಾಮ

FCNR(B) ಯೋಜನೆ ನಿಲ್ಲುತ್ತಿಲ್ಲ: ಆರ್‌ಬಿಐ ಮುಚ್ಚುತ್ತಿರುವುದು ತನ್ನ ವಿಶೇಷ ಸ್ವ್ಯಾಪ್ ರಿಯಾಯಿತಿ ಸೌಲಭ್ಯವನ್ನು ಮಾತ್ರ, FCNR(B) ಠೇವಣಿ ಖಾತೆಗಳನ್ನಲ್ಲ. ಆಗಸ್ಟ್ 31ರ ನಂತರವೂ ಎನ್‌ಆರ್‌ಐಗಳು ಸಾಮಾನ್ಯ ನಿಯಮಗಳ ಅಡಿಯಲ್ಲಿ ಎಫ್‌ಸಿಎನ್‌ಆರ್‌ಬಿ ಠೇವಣಿಗಳನ್ನು ಮಾಡಬಹುದು.

ಬ್ಯಾಂಕುಗಳಿಗೆ ಸೌಲಭ್ಯ: ಆರ್‌ಬಿಐ ಬ್ಯಾಂಕುಗಳಿಗೆ ನೀಡುತ್ತಿದ್ದ ಹೆಡ್ಜಿಂಗ್ (Hedging) ವೆಚ್ಚದ ಬೆಂಬಲ ಹಾಗೂ ವಿನಾಯಿತಿಗಳಿಂದಾಗಿ ಬ್ಯಾಂಕುಗಳು ಎನ್‌ಆರ್‌ಐಗಳಿಗೆ ಶೇ. 7% ವರೆಗೆ ಆಕರ್ಷಕ ಬಡ್ಡಿ ದರಗಳನ್ನು ನೀಡಲು ಸಾಧ್ಯವಾಗಿತ್ತು. ಆಗಸ್ಟ್ 31ರ ನಂತರ ಆರ್‌ಬಿಐನ ಈ ವಿಶೇಷ ಸ್ವ್ಯಾಪ್ ಬೆಂಬಲ ಸಿಗದ ಕಾರಣ, ಬ್ಯಾಂಕುಗಳು ನೀಡುವ FCNR ಬಡ್ಡಿ ದರಗಳು ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ.

ರೂಪಾಯಿ ಮತ್ತು ಫೊರೆಕ್ಸ್ ಮೀಸಲು: ಈ ಭಾರಿ ಡಾಲರ್ ಹರಿವಿನಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹಣೆ (Forex Reserves) $707 ಬಿಲಿಯನ್ ದಾಟಿ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಲು ನೆರವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!