AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fixed Deposit

Fixed Deposit

ಫಿಕ್ಸೆಡ್ ಡೆಪಾಸಿಟ್
ಫಿಕ್ಸೆಡ್ ಡೆಪಾಸಿಟ್ ಅಥವಾ ನಿಶ್ಚಿತ ಠೇವಣಿ ಎಂಬುದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೊಂದು ಮುಂದಿಡುವ ಒಂದು ಹೂಡಿಕೆ ಯೋಜನೆ. ಗ್ರಾಹಕರು ಈ ಪ್ಲಾನ್​ನಲ್ಲಿ ಲಂಪ್ಸಮ್ ಆಗಿ ನಿಗದಿತ ಅವಧಿಯವರೆಗೆ ಹಣ ಇಡಬಹುದು. ಬ್ಯಾಂಕ್​ನಿಂದ ಈ ಠೇವಣಿಗೆ ನಿಗದಿತ ಬಡ್ಡಿ ನೀಡಲಾಗುತ್ತದೆ. ಇದರಲ್ಲಿ ಹೂಡಿಕೆ ಅವಧಿ ಮತ್ತು ಬಡ್ಡಿದರ ಎರಡೂ ನಿಶ್ಚಿತವಾಗಿರುವುದರಿಂದ ಫಿಕ್ಸೆಡ್ ಡೆಪಾಸಿಟ್ ಎಂದು ಕರೆಯಲಾಗುತ್ತದೆ. ಪ್ರತೀ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ತಮ್ಮದೇ ಪ್ರತ್ಯೇಕ ಎಫ್​ಡಿ ಪ್ಲಾನ್​ಗಳನ್ನು ಹೊಂದಿರಬಹುದು. ಸಾಮಾನ್ಯವಾಗಿ 15 ದಿನದಿಂದ ಹಿಡಿದು 10 ವರ್ಷದವರೆಗೆ ಬೇರೆ ಬೇರೆ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿದ್ದು, ಬಡ್ಡಿದರವೂ ವ್ಯತ್ಯಾಸ ಇರಬಹುದು. ಬ್ಯಾಂಕುಗಳಿಗೆ ಸಾಲವೇ ಪ್ರಮುಖ ಆದಾಯ ಮೂಲ. ಗ್ರಾಹಕರಿಗೆ ಸಾಲ ನೀಡಲು ಬೇಕಾದ ಫಂಡಿಂಗ್ ಅನ್ನು ಫಿಕ್ಸೆಡ್ ಡೆಪಾಸಿಟ್​ಗಳ ಮೂಲಕ ಬ್ಯಾಂಕು ಪಡೆಯುತ್ತದೆ

ಇನ್ನೂ ಹೆಚ್ಚು ಓದಿ

ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

TDS on Fixed Deposit interest income: ಫಿಕ್ಸೆಡ್ ಡೆಪಾಸಿಟ್ ಮೇಲೆ ತೆರಿಗೆ ಇರುವುದಿಲ್ಲವಾದರೂ ಅದರಿಂದ ಸಿಗುವ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ. ವಾರ್ಷಿಕ ಬಡ್ಡಿ ಆದಾಯ 40,000 ರೂಗಿಂತ ಹೆಚ್ಚಾಗಿದ್ದರೆ ಶೇ. 10ರಷ್ಟು ಟಿಡಿಎಸ್ ಅನ್ನು ಬ್ಯಾಂಕ್​​ನವರು ಕಡಿತಗೊಳಿಸುತ್ತಾರೆ. ಟಿಡಿಎಸ್ ಮುರಿದುಕೊಳ್ಳಬಾರದೆಂದಿದ್ದರೆ ಫಾರ್ಮ್ 15ಜಿ ಅಥವಾ 15ಎಚ್ ಅನ್ನು ಸಲ್ಲಿಸಬಹುದು. ನಿಮ್ಮ ಒಟ್ಟಾರೆ ಆದಾಯವು ಟ್ಯಾಕ್ಸಬಲ್ ಇನ್ಕಮ್ ಮಿತಿಯೊಳಗೆ ಇರಬೇಕು.

ಶೇ. 8.4 ಬಡ್ಡಿ ನೀಡುವ ಎಫ್​​ಡಿ ಪ್ಲಾನ್; ಶ್ರೀರಾಮ್ ಫೈನಾನ್ಸ್​​ನಲ್ಲಿ ಭರ್ಜರಿ ಆಫರ್

Shriram Finance Ltd offers great FD rates: ಶ್ರೀರಾಮ್ ಫೈನಾನ್ಸ್ ಸಂಸ್ಥೆ ತನ್ನ ವಿವಿಧ ಎಫ್​​ಡಿ ದರಗಳನ್ನು ಪರಿಷ್ಕರಿಸಿದೆ. ಗರಿಷ್ಠ ಶೇ. 8.4ದವರೆಗೆ ವಾರ್ಷಿಕ ಬಡ್ಡಿ ನೀಡಲಾಗುತ್ತದೆ. ತಿಂಗಳಿಗೊಮ್ಮೆ ಬಡ್ಡಿಗೆ ಚಕ್ರಬಡ್ಡಿ ಜಮಾವಣೆಗೊಂಡು ಅಂತಿಮವಾಗಿ ಗರಿಷ್ಠ ಯೀಲ್ಡ್ ಶೇ. 9.93ರಷ್ಟಾಗುತ್ತದೆ. 60 ತಿಂಗಳ ಡೆಪಾಸಿಟ್ ಪ್ಲಾನ್​​ನಲ್ಲಿ ಗರಿಷ್ಠ ಯೀಲ್ಡ್ ದೊರಕುತ್ತದೆ.

FD rates: ಆರ್​​ಬಿಐ ಬಡ್ಡಿದರ ಕಡಿತದ ಬಳಿಕ ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್​​ಡಿ ದರಗಳಿವು

Fixed Deposit rates in SBI, HDFC and ICICI banks: ಆರ್​​ಬಿಐ ಏಪ್ರಿಲ್ ಮೊದಲ ವಾರದಲ್ಲಿ ರಿಪೋ ದರವನ್ನು 25 ಮೂಲಾಂಕಗಳಷ್ಟು ಕಡಿಮೆಗೊಳಿಸಿದೆ. ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಸೇರಿ ಹಲವು ಬ್ಯಾಂಕುಗಳು ಬಡ್ಡಿದರವನ್ನು ಪರಿಷ್ಕರಿಸಿವೆ. 3 ಕೋಟಿ ರೂ ಒಳಗಿನ ಠೇವಣಿಗಳಿಗೆ ಮೂರು ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿ ಎಷ್ಟು ನೀಡಲಾಗುತ್ತದೆ, ಈ ಮಾಹಿತಿ ಇಲ್ಲಿದೆ...

ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್​ಗಳು, ಮಾರ್ಚ್ 31ರವರೆಗೆ ಲಭ್ಯ

Special FD plans: ಶೇ. 8.05ರವರೆಗೆ ಬಡ್ಡಿ ನೀಡುವಂತಹ ಕೆಲ ಬ್ಯಾಂಕುಗಳ ಸ್ಪೆಷನ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​​ಗಳು ಮಾರ್ಚ್ 31ರವರೆಗೂ ಲಭ್ಯ ಇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಮತ್ತು ಅಮೃತ್ ವೃಷ್ಟಿ ಪ್ಲಾನ್​ಗಳಿವೆ. ಇಂಡಿಯನ್ ಬ್ಯಾಂಕ್​​ನ ಸುಪ್ರೀಂ ಎಫ್​ಡಿ ಪ್ಲಾನ್ ಇದೆ. ಹಾಗೆಯೇ, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಎಚ್​​ಡಿಎಫ್​ಸಿ ಬ್ಯಾಂಕ್​​ನ ಎಫ್​​ಡಿ ಪ್ಲಾನ್​​ಗಳಿವೆ.

ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು

Banking laws amendment bill 2024: ಬ್ಯಾಂಕ್ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮಗಳಲ್ಲಿ ಸರ್ಕಾರ ಬದಲಾವಣೆ ಮಾಡುತ್ತಿದೆ. ಕ್ಲೈಮ್ ಆಗದೇ ಬ್ಯಾಂಕ್ ಅಕೌಂಟ್ ಮತ್ತು ಎಫ್​ಡಿಯಲ್ಲಿ ಹಣ ಉಳಿಯುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ ರೂಪಿಸಲಾಗಿದ್ದು ಈ ಅಧಿವೇಶನದಲ್ಲಿ ಸಂಸತ್​ನಲ್ಲಿ ಅನುಮೋದನೆಗೆ ಬರಲಿದೆ.

ಒಂದು ವರ್ಷದ ಠೇವಣಿಗೆ ಶೇ 8ಕ್ಕಿಂತಲೂ ಹೆಚ್ಚು ರಿಟರ್ನ್; ಅಧಿಕ ಬಡ್ಡಿ ನೀಡುತ್ತಿವೆ ಈ 7 ಬ್ಯಾಂಕುಗಳು

Highest deposit rates in small finance banks: ಸುರಕ್ಷಿತ ಎನಿಸುವ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ ಬಡ್ಡಿ ತುಸು ಕಡಿಮೆ. ತುಸು ಹೆಚ್ಚು ರಿಸ್ಕಿ ಎನಿಸಿದ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ದರ ಅಧಿಕ ಇರುತ್ತದೆ. ರಿಸ್ಕ್ ಕಡಿಮೆ ಇರುವ ಮತ್ತು ಹೆಚ್ಚು ಬಡ್ಡಿ ನೀಡುವ ಇನ್ನೊಂದು ಆಯ್ಕೆ ಎಂದರೆ ಅದು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು. ಅತಿಹೆಚ್ಚು ಠೇವಣಿ ದರ ಹೊಂದಿರುವ 7 ಎಸ್​ಎಫ್​ಬಿಗಳ ಪಟ್ಟಿ ಇಲ್ಲಿದೆ.

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ