AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

Returns on investments from 1985 to 2025: ದೀರ್ಘಾವಧಿ ಹೂಡಿಕೆಗೆ ಯಾವುದು ಸರಿ? ಚಿನ್ನ, ಎಫ್​ಡಿ ಮತ್ತು ಷೇರು ಈ ಪೈಕಿ ಯಾವುದು ಬೆಸ್ಟ್? 1985ರಿಂದ 2025ರವರೆಗೆ ಈ 40 ವರ್ಷದಲ್ಲಿ ಈ ಮೂರು ಹೂಡಿಕೆಗಳಲ್ಲಿ ಉತ್ತಮ ರಿಟರ್ನ್ ಕೊಟ್ಟಿರುವುದು ಯಾವುದು? ವೈಟ್​ಓಕ್ ಕ್ಯಾಪಿಟಲ್ ಸಂಸ್ಥೆ ಈ 40 ವರ್ಷದಲ್ಲಿ ಹಣದುಬ್ಬರವನ್ನೂ ಸೇರಿಸಿ ಒಂದು ತುಲನೆ ಮಾಡಿದೆ.

ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2025 | 6:55 PM

Share

ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಹೇಗೆ ಹೂಡಿಕೆ ಮಾಡಬೇಕು ಎಂಬುದು ಹೆಚ್ಚಿನವರಿಗೆ ಇರುವ ಗೊಂದಲ. ಅಲ್ಪಾವಧಿಗೆ ಹೂಡಿಕೆ ಮಾಡಲು ಠೇವಣಿ ಪ್ಲಾನ್​ಗಳು ಸೂಕ್ತ. ಆದರೆ, ದೀರ್ಘಾವಧಿ ಹೂಡಿಕೆ (Long term investment) ಮಾಡಲು ಯಾವುವು ಸೂಕ್ತ? ಚಿನ್ನದ ಬೆಲೆ ಇತ್ತೀಚೆಗೆ ನಾಗಾಲೋಟ ನಡೆಸಿರುವುದು ಬಹಳ ಜನರ ಗಮನ ಸೆಳೆದಿದೆ. ಚಿನ್ನ, ಷೇರು ಮತ್ತು ಎಫ್​ಡಿಗಳು ಜನಸಾಮಾನ್ಯರ ಪ್ರಿಯವಾದ ಹೂಡಿಕೆ ಯಂತ್ರಗಳಾಗಿವೆ. ಈ ಮೂರರಲ್ಲಿ ದೀರ್ಘಾವಧಿಯಲ್ಲಿ ಅತಿಹೆಚ್ಚು ಲಾಭ ತಂದಿರುವುದು ಯಾವುದು?

ವೈಟ್​ಓಕ್ ಕ್ಯಾಪಿಟಲ್ ಸಂಸ್ಥೆ ಕುತೂಹಲಕಾರಿ ಎನಿಸುವ ಒಂದು ತುಲನೆ ಹೆಕ್ಕಿ ತೆಗೆದಿದೆ. 1985ರಿಂದ 2015ರವರೆಗೆ 40 ವರ್ಷದಲ್ಲಿ ಚಿನ್ನ, ಸೆನ್ಸೆಕ್ಸ್ ಮತ್ತು ಎಫ್​ಡಿಗಳು ಎಷ್ಟು ರಿಟರ್ನ್ ಕೊಟ್ಟಿವೆ ಎನ್ನುವುದನ್ನು ಅವಲೋಕಿಸಿದೆ. ಹಾಗೆಯೇ, ಹಣದ ಮೌಲ್ಯ ಈ ಅವಧಿಯಲ್ಲಿ ಎಷ್ಟು ಕಡಿಮೆ ಆಗಿದೆ ಎನ್ನುವ ಅಂಶವನ್ನೂ ಅದು ಗಣನೆಗೆ ತೆಗೆದುಕೊಂಡಿದೆ. ಕುತೂಹಲಕಾರಿ ಎನಿಸುತ್ತದೆ ಆ ಮಾಹಿತಿ.

ಇದನ್ನೂ ಓದಿ: ಶೇ. 80 ವಿತ್​ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್​ಪಿಎಸ್

1985ರಲ್ಲಿ 100 ರೂ ಅನ್ನು ಚಿನ್ನ, ಸೆನ್ಸೆಕ್ಸ್, ಎಫ್​ಡಿಯಲ್ಲಿ ಹಾಕಿದ್ದರೆ ಎಷ್ಟು ಲಾಭ?

ನೀವು 1985ರಲ್ಲಿ 100 ರೂ ಹಣವನ್ನು ಬ್ಯಾಂಕ್ ಎಫ್​ಡಿ, ಅಥವಾ ಸೆನ್ಸೆಕ್ಸ್, ಅಥವಾ ಚಿನ್ನದ ಮೇಲೆ ಹಾಕಿದ್ದರೆ ಇವತ್ತು ಆ ಹೂಡಿಕೆ ಮೌಲ್ಯ ಎಷ್ಟಾಗುತ್ತಿತ್ತು? ಈ ಅವಧಿಯಲ್ಲಿ ಹಣದ ಮೌಲ್ಯ ಎಷ್ಟು ಕಡಿಮೆ ಆಗಿದೆ ಎಂಬುದನ್ನು ವೈಟ್​ಓಕ್ ಕ್ಯಾಪಿಟಲ್ ತನ್ನ ವರದಿಯಲ್ಲಿ ತೋರಿಸಿದೆ.

1985ರಲ್ಲಿ ಮಾಡಿದ 100 ರೂ ಹೂಡಿಕೆಯ ಇವತ್ತಿನ (2025ರ ಮಾರ್ಚ್) ಮೌಲ್ಯ

  • ಚಿನ್ನ: 6,518 ರೂ
  • ಬ್ಯಾಂಕ್ ಡೆಪಾಸಿಟ್: 2,100 ರೂ
  • ಸೆನ್ಸೆಕ್ಸ್: 13,484 ರೂ
  • ಹಣದುಬ್ಬರ: 1,478 ರೂ

1985ರಲ್ಲಿ ಇದ್ದ ಒಂದು ರುಪಾಯಿಯು ಈಗ ಮೌಲ್ಯದಲ್ಲಿ 14-15 ರೂಗೆ ಸಮ ಎಂಬಂತಾಗಿದೆ. 100 ರೂ ಹಣದ ಮೌಲ್ಯ ಇವತ್ತು 1,478 ರೂ ಆಗಿದೆ. ಇದು ಹಣದುಬ್ಬರದ ಎಫೆಕ್ಟ್. ಈ ಹಣದುಬ್ಬರಕ್ಕಿಂತ ಬಹಳ ಹೆಚ್ಚಿನ ಮಟ್ಟದ ಲಾಭ ತಂದುಕೊಡಬಲ್ಲ ಹೂಡಿಕೆಯು ದೀರ್ಘಾವಧಿ ಹೂಡಿಕೆಗೆ ಪ್ರಶಸ್ತವಾಗಿರುತ್ತದೆ.

ಇದನ್ನೂ ಓದಿ: ಪ್ರತ್ಯೇಕ ಇಪಿಎಫ್ ಅಕೌಂಟ್​ಗಳಿವೆಯಾ? ಎಲ್ಲವನ್ನೂ ಒಂದಕ್ಕೇ ವಿಲೀನ ಮಾಡದಿದ್ದರೆ ಏನಾಗುತ್ತೆ?

ಮೇಲೆ ತಿಳಿಸಿದ ಮಾಹಿತಿ ಪ್ರಕಾರ ಬ್ಯಾಂಕ್ ಡೆಪಾಸಿಟ್​ಗಳು ಹಣದುಬ್ಬರಕ್ಕಿಂತ ತುಸು ಹೆಚ್ಚು ಮಾತ್ರವೇ ಲಾಭ ತಂದಿವೆ. ಸೆನ್ಸೆಕ್ಸ್ ಸಾಕಷ್ಟು ಏರಿಕೆ ತಂದಿದೆಯಾದರೂ ಮಧ್ಯದಲ್ಲಿ ಕೆಲ ವರ್ಷ ಕುಸಿತವನ್ನೂ ಕಂಡಿದ್ದಿದೆ. ಇದಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಸ್ಥಿರವಾಗಿ ಏರುತ್ತಾ ಬಂದಿದೆ. ಈ 40 ವರ್ಷದಲ್ಲಿ ಅದು ಶೇ. 10-12 ಸಿಎಜಿಆರ್​ನಲ್ಲಿ ಬೆಳೆದಿರುವುದನ್ನು ಗುರುತಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!