AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024-25ನೇ ಸಾಲಿನ 4ನೇ ತ್ರೈಮಾಸಿಕ ಪೇಟಿಎಂ ಆದಾಯದಲ್ಲಿ ಭರ್ಜರಿ ಏರಿಕೆ..!

ಯುಪಿಐನಿಂದ ಆರಂಭವಾಗಿ ಈಗ ದೊಡ್ಡ ಇ-ಕಾಮರ್ಸ್ ಮತ್ತು ಯುಟಿಲಿಟಿ ಸೇವೆಗಳವರೆಗೆ ಬಿಸಿನೆಸ್ ವಿಸ್ತರಿಸಿರುವ ಪೇಟಿಎಂ 2024-25ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿಉತ್ತಮ ಸಾಧನೆ ತೋರಿರುವುದು ಕಂಡು ಬಂದಿದೆ. ತೆರಿಗೆ ಪಾವತಿ ನಂತರವೂ ಇಎಸ್​ಒಪಿಗಿಂತ ( ESOP) ಇಬಿಐಟಿಡಿಎ ( EBITDA) ಲಾಭದಾಯವಾಗಿದೆ ಎಂದು ಘೋಷಣೆ ಮಾಡಿದೆ. ಈ ಸಂಬಂಧ ಪೇಟಿಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2024-25ನೇ ಸಾಲಿನ 4ನೇ ತ್ರೈಮಾಸಿಕ ಪೇಟಿಎಂ ಆದಾಯದಲ್ಲಿ ಭರ್ಜರಿ ಏರಿಕೆ..!
Paytm
ರಮೇಶ್ ಬಿ. ಜವಳಗೇರಾ
|

Updated on:May 06, 2025 | 10:08 PM

Share

2024-25ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಆದಾಯದ ವರದಿಯನ್ನು ಪೇಟಿಎಂ ಪ್ರಕಟ ಮಾಡಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ 81 ಕೋಟಿ ರೂ. ಲಾಭವಾಗಿದೆ ಎಂದು ಪ್ರಕಟಣೆ ಮೂಲಕ ಘೋಷಿಸಿಕೊಂಡಿದೆ. ತೆರಿಗೆ ಪಾವತಿ ನಂತರವೂ (PAT) 23 ಕೋಟಿ ರೂ. ಲಭಾವಾಗಿದೆ ಎಂದು ಪೇಟಿಎಂ ತಿಳಿಸಿದೆ. ಯುಪಿಐ ಸಹಾಯಧನವಾಗಿ 70 ಕೋಟಿ ರೂ.  ಸ್ವೀಕರಿಸಿದ್ದು,  ಒಟ್ಟು 12,809 ಕೋಟಿ ರೂ. ರೋಬಸ್ಟ್​ ಕ್ಯಾಶ್ ಬ್ಯಾಲೆನ್ಸ್ ಇದೆ ಎಂದು ತಿಳಿಸಿದೆ.  ಈ  ಮೂಲಕ ಇಎಸ್​ಒಪಿಗಿಂತ ( ESOP) ಇಬಿಐಟಿಡಿಎ ( EBITDA) ಲಾಭದಾಯವಾಗಿದೆ ಎಂದು ಘೋಷಣೆ ಮಾಡಿದೆ.

2025ರ  ಜನವರಿಯಿಂದ  ಮಾರ್ಚ್​ ವರೆಗಿನ ನಾಲ್ಕನೇ ತ್ರೈಮಾಸಿಕದಲ್ಲಿ  ಇಎಸ್​ಒಪಿಗಿಂತ ಇಬಿಐಟಿಡಿಎ  81 ಕೋಟಿ ರೂ. ಲಾಭದಾಯಕವಾಗಿದೆ. ಇದರಲ್ಲಿ ಯುಪಿಐ ಪ್ರೋತ್ಸಾಹ ಧನವು ಸಹ ಸೇರಿದ್ದು, ಇದರೊಂದಿಗೆ ಇಂದಿನ ತ್ರೈಮಾಕಗಿಂತ  51 ಕೋಟಿ ರೂ. ಹೆಚ್ಚಳವಾಗಿದೆ. ಈ ಮೂಲಕ ಅದು ಒಟ್ಟು 11 ಕೋಟಿ ರೂ.ಗೆ ತಲುಪಿದೆ.

ಈ ಅಸಾಧಾರಣ ವೆಚ್ಚಗಳನ್ನು ಕಡಿಮೆ ಮಾಡಿ ತೆರಿಗೆ ಪಾವತಿ ನಂತರದ ಲಾಭ (PAT) 23 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಯುಪಿಐ ಪ್ರೋತ್ಸಾಹಧನ ಹಾಗೂ ಶುಲ್ಕಗಳನ್ನು ಹೊರತುಪಡಿಸಿ, ತೆರಿಗೆ ಪಾವತಿಯಲ್ಲಿ 115 ಕೋಟಿ ರೂ.ಗಳಿಂದ 93 ಕೋಟಿ ರೂ.ಗಳಿಗೆ ತಲುಪಿದೆ. ಇನ್ನು. ಫಿನ್‌ಟೆಕ್ 12,809 ಕೋಟಿ ರೂ. ನಗದು ಬಾಕಿಯನ್ನು ಘೋಷಿಸಿಕೊಂಡಿದೆ.

2025 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪೇಟಿಎಂ ತನ್ನ ಆದಾಯದಲ್ಲಿ ಶೇ. 5 ರಷ್ಟು ಬೆಳವಣಿಗೆ ದಾಖಲಿಸಿದ್ದು,, 1,911 ಕೋಟಿ ರೂ.ಗೆ ತಲುಪಿದ್ದು, ಇದರ ಲಾಭ .1,071 ಕೋಟಿರೂ.ಗೆ ಏರಿಕೆಯಾಗಿದೆ. ಈ ಮೂಲಕ 12 ತ್ರೈಮಾಸಿಕದಲ್ಲಿ ಶೇ. 545 ರಷ್ಟು ಏರಿಕೆಯಾಗಿದೆ. ಹಣಕಾಸು ಸೇವೆಗಳಿಂದ ಕಂಪನಿಯ ಆದಾಯವು ಅನುಕ್ರಮವಾಗಿ ಶೆ.9ರಷ್ಟು ಏರಿಕೆಯಾಗಿದ್ದು, 545 ಕೋಟಿ ರೂ.ಗೆ ತಲುಪಿದೆ. ಆದರೆ ವ್ಯಾಪಾರಿ ಸಾಲ ವಿತರಣೆ 4,315 ಕೋಟಿ ರೂ.ಗಳಷ್ಟಿದೆ.

ಕಂಪನಿಯ ನಿವ್ವಳ ಪಾವತಿ ರೂ. 578 ಕೋಟಿಗಳಾಗಿರುವುದರಿಂದ ಪಾವತಿಗಳು ಸ್ಥಿರ ಆದಾಯವನ್ನು ಗಳಿಸುತ್ತಲೇ ಇದೆ. ಇದರಲ್ಲಿ ಯುಪಿಐಯ 70 ಕೋಟಿ ರೂ. ಸೇರಿದೆ. ಇದರೊಂದಿಗೆ ಲಾಭವು 508 ಕೋಟಿ ರೂ.ನಷ್ಟಿದ್ದು, ತ್ರೈಮಾಸಿಕದಿಂದ ಶೇ. 4 ರಷ್ಟು ಏರಿಕೆಯಾಗಿದೆ ಎಂದು ಪೇಟಿಎಂ ತಿಳಿಸಿದೆ.

ಫಿನ್‌ಟೆಕ್ ದೈತ್ಯ ಕಂಪನಿಯು ಏರಿಕೆ ಕಂಡಿದ್ದು,ನಾಲ್ಕರ ತ್ರೈಮಾಸಿಕದಲ್ಲಿ ಒಟ್ಟು ವ್ಯಾಪಾರ ಮೌಲ್ಯ 5.1 ಲಕ್ಷ ಕೋಟಿ ರೂ.ಗಳಿಗೆ ಮತ್ತು ಸರಾಸರಿ ಮಾಸಿಕ ವಹಿವಾಟು 7.2 ಕೋಟಿಗೆ ಏರಿದೆ. ಏತನ್ಮಧ್ಯೆ, ಪೇಟಿಯಂನ ಪಾವತಿ ಸಾಧನಗಳನ್ನು ಬಳಸುವ ವ್ಯಾಪಾರಿಗಳ ಸಂಖ್ಯೆ ತ್ರೈಮಾಸಿಕದಲ್ಲಿ 8 ಲಕ್ಷದಷ್ಟು ಏರಿಕೆಯಾಗಿದ್ದು, ಅದು ಒಟ್ಟು 1.24 ಕೋಟಿಗೆ ತಲುಪಿದೆ.

ಭಾರತದ ಮೊದಲ ಸೋಲಾರ್ ಸೌಂಡ್‌ಬಾಕ್ಸ್ ಮತ್ತು ಮಹಾಕುಂಭ ಸೌಂಡ್‌ಬಾಕ್ಸ್ ಅನ್ನು ಪ್ರಾರಂಭಿಸುವುದರೊಂದಿಗೆ ಕಂಪನಿ ಬಲವಾಗಿದೆ ಈ ಹೊಸ ಉತ್ಪನ್ನಗಳು ಸೌಂಡ್‌ಬಾಕ್ಸ್ ವಿಭಾಗದಲ್ಲಿ ಪೇಟಿಯಂನ ಪ್ರಾಬಲ್ಯವನ್ನು ಬಲಪಡಿಸುವುದಲ್ಲದೆ, ವ್ಯಾಪಾರಿಗಳಲ್ಲಿ ಹಣಕಾಸು ಸೇವೆಗಳ ವಿತರಣೆಯನ್ನು ವಿಸ್ತರಿಸುವಲ್ಲಿ ಸಹಾಯಕವಾಗಿದೆ.

Published On - 10:04 pm, Tue, 6 May 25

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!